Categories: ಕೋಲಾರ

ಪಿಎಲ್ಡಿ ಬ್ಯಾಂಕ್ ಸರ್ವ ಸದಸ್ಯರ ವಾರ್ಷಿಕ ಸಭೆ: ರೈತರಿಂದ ಬರಬೇಕಾದ ಹೊರಬಾಕಿ ಸಾಲದಿಂದ ಬ್ಯಾಂಕ್ ನಷ್ಟದಲ್ಲಿ – ಶಿವಕುಮಾರ್

ಕೋಲಾರ: ರೈತರಿಂದ ಸುಮಾರು 7.57 ಕೋಟಿಯಷ್ಟು ಹೊರಬಾಕಿ ಸಾಲವನ್ನು ಬಾಕಿ ಉಳಿಸಿಕೊಂಡಿದ್ದರಿಂದ ಬ್ಯಾಂಕ್‌ ಪ್ರಸಕ್ತ ಸಾಲಿನಲ್ಲಿ ನಷ್ಟದಲ್ಲಿ ನಡೆಯಬೇಕಾಗಿದೆ ಕೂಡಲೇ ರೈತರು ಸಾಲ ಮರುಪಾವತಿಗೆ ಮುಂದಾಗಿ ಬೇರೆ ರೈತರಿಗೆ ಹೊಸದಾಗಿ ಸಾಲ ನೀಡಲು ಸಹಕರಿಸಬೇಕಾಗಿದೆ ಎಂದು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ಡಿ) ಬ್ಯಾಂಕ್‌ನ ಅಧ್ಯಕ್ಷ ಕೆಂದಟ್ಟಿ ಎ.ಶಿವಕುಮಾರ್ ತಿಳಿಸಿದರು

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ನಡೆದ ಬ್ಯಾಂಕ್‌ನ 2024–25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಹೊರಬಾಕಿಯು ಪಿಎಲ್ಡಿ ಬ್ಯಾಂಕ್ ಮತ್ತು ರಾಜ್ಯ ಬ್ಯಾಂಕ್ ಮಧ್ಯೆ ಸುಮಾರು 4.22 ಕೋಟಿ ಇದೆ ರೈತರು ಹೊರ ಬಾಕಿ ಸಾಲವನ್ನು ಕಟ್ಟಿದರೆ ಮಾತ್ರವೇ ಸರಿದೂಗಿಸಲು ಸಾಧ್ಯವಾಗುತ್ತದೆ ಅದರ ಮಧ್ಯೆ ಸುಮಾರು 1.15 ಕೋಟಿ ಸಾಲವನ್ನು ರೈತರಿಗೆ ನೀಡಲು ಬ್ಯಾಂಕ್ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.

ಹಿರಿಯ ಸಹಕಾರಿ ಧುರೀಣರ ಆದರ್ಶ ಮತ್ತು ಮಾರ್ಗದರ್ಶನದಲ್ಲಿ ಬ್ಯಾಂಕ್‌ ಆಡಳಿತ ನಡೆಸುತ್ತಿದೆ ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ರೈತರ ಮನೆ ಬಾಗಿಲಿಗೆ ತಲುಪುವಂತೆ ಮಾಡುವುದಕ್ಕೆ ಎಲ್ಲರ ಸಹಕಾರ ಅಗತ್ಯ ರೈತರು ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಸಮರ್ಪಕವಾಗಿ ಮರುಪಾವತಿಸಿದರೆ ಮಾತ್ರ ಬ್ಯಾಂಕ್‌ನ ಅಭಿವೃದ್ಧಿ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಕಸ್ಕಾರ್ಡ್ ಬ್ಯಾಂಕ್ ರಾಜ್ಯ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ ಬ್ಯಾಂಕ್ ನಲ್ಲಿ ಸುಮಾರು 8 ಸಾವಿರ
ಷೇರುದಾರರು ಇದ್ದು ವಹಿವಾಟು ಸರಿಯಾಗಿ ನಡೆಯಬೇಕೆಂದರೆ ಒಂದು ಚಕ್ರ ಸಿಬ್ಬಂದಿ ಮತ್ತೊಂದು ಚಕ್ರ ರೈತರು ಎರಡು ಚಕ್ರಗಳು ಸರಿಯಾಗಿ ಹೋದರೆ ಸಂಸ್ಥೆ ಚೆನ್ನಾಗಿ ಬೆಳೆಯುತ್ತದೆ ಲೆಕ್ಕಪತ್ರಗಳು ಮುಕ್ತವಾಗಿವೆ ಅವುಗಳನ್ನು ಯಾವುದೇ ಸಮಯದಲ್ಲಾದರೂ ಬಂದು ಬ್ಯಾಂಕ್ ನಲ್ಲಿ ಮಾಹಿತಿಯನ್ನು ಪಡೆಯಬಹುದು ರೈತರು ಸಾಲ ಪಡೆದು ಸರಿಯಾಗಿ ಮರುಪಾವತಿ ಮಾಡುತ್ತಿಲ್ಲ ಬಡ್ಡಿ ಮನ್ನಾ ಆಗುತ್ತೆ ಅಂತ ಹೇಳಿ ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಬ್ಯಾಂಕ್ ಉತ್ತಮ ವಹಿವಾಟು ಮಾಡಲು ಚೆನ್ನಾಗಿರುವ ರೈತರು ಪಿಗ್ಮಿ, ಡಿಪಾಸಿಟ್ ಕೊಡುವಂತೆ ಮನವಿ ಮಾಡಿದರು

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಎನ್ ಜಿ ಬ್ಯಾಟಪ್ಪ ಮಾತನಾಡಿ ಸಹಕಾರಿ ಸಂಸ್ಥೆಯನ್ನು ನಮ್ಮ ಧೀಮಂತ ನಾಯಕರಾದ ಬೈರೇಗೌಡರು, ವೆಂಕಟಗಿರಿಯಪ್ಪ ಶ್ರೀನಿವಾಸಗೌಡ ಬೆಳೆಸಿದ್ದಾರೆ ಸಂಸ್ಥೆ ಉಳಿಯಬೇಕು ರೈತರ ಅಭಿವೃದ್ಧಿಗೆ ಒತ್ತು ಕೊಡಿ ರೈತರಿಗೆ ಕಡಿಮೆ ಬಡ್ಡಿಗೆ ಸಾಲ ಕೊಡತ್ತಾ ಇದ್ದು ಅದನ್ನು ರೈತರು ತೆಗೆದುಕೊಂಡು ಸದುಪಯೋಗಪಡಿಸಿಕೊಂಡು ಸರಿಯಾಗಿ ಹಣ ಪಾವತಿ ಮಾಡಿ ಸಂಸ್ಥೆ ಉಳಿಸಿ ಹಳೇ ಸುಸ್ತಿದಾರರ ಪಟ್ಟಿಯನ್ನು ಜಿಬಿಎಂನಲ್ಲಿ ಪ್ರಕಟಿಸಬೇಕು ಅವರ ಸಂಬಂಧಿಕರು ಬಂದಿರುತ್ತಾರೆ ಅವರಿಗೆ ವಿಷಯ ತಿಳಿಸಿ ಲೋನ್ ಮರುಪಾವತಿ ಮಾಡಲು ಸಹಾಯ ಆಗುತ್ತೆ ಬೇರೆಯವರಿಗೆ ಹೊಸ ಸಾಲ ಕೊಡಲು ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಎಂ.ವೆಂಕಟರಾಮ್, ನಿರ್ದೇಶಕರಾದ ಡೇರಿ ವೆಂಕಟೇಶ್, ವಿ.ಎ ಶಶಿಧರ್, ಬೈರೇಗೌಡ, ಮಂಜುನಾಥ್, ಕೆ.ಎಂ ವೆಂಕಟೇಶಪ್ಪ, ನರೇಶ್ ಬಾಬು, ಲಕ್ಷ್ಮಮ್ಮ, ಅಂಬಿಕಾ, ವೆಂಕಟರಾಮಪ್ಪ, ಮುನಿರತ್ನಮ್ಮ, ವೆಂಕಟಲಕ್ಷ್ಮಮ್ಮ, ಸುರೇಶ್ ಬಾಬು, ಸಿಇಒ ಶ್ರೀನಿವಾಸ್ ಸೇರಿದಂತೆ ರೈತರು ಸಿಬ್ಬಂದಿ ಇದ್ದರು.

Ramesh Babu

Journalist

Recent Posts

ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ತೂಬಗೆರೆಯಲ್ಲೂ ಕಳೆಗಟ್ಟಿದ ಗೌರಿ ಗಣೇಶ ಹಬ್ಬದ ಆಚರಣೆ: 20 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…

8 minutes ago

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

6 hours ago

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

20 hours ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

21 hours ago

ಮನೆ ಮಾಲೀಕರ ಮುಂದೆಯೇ ಮನೆ ದೋಚಿ ಪರಾರಿಯಾಗಿದ್ದ ಕಳ್ಳ ಲಾಕ್‌!

ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…

22 hours ago

ಕೋಳಿಫಾರ್ಮ್‌ಗೆ ಚಿರತೆ ದಾಳಿ ಶಂಕೆ: 950ಕ್ಕೂ ಅಧಿಕ ಕೋಳಿಮರಿಗಳು ಬಲಿ!

  ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…

22 hours ago