Categories: ಕೋಲಾರ

ತಹಶೀಲ್ದಾರ್‌ ಕಚೇರಿಗೆ ಶಾಸಕ ಕೊತ್ತೂರು ಮಂಜುನಾಥ್‌ ದಿಢೀರ್‌ ಭೇಟಿ: ಅಧಿಕಾರಿಗಳಿಗೆ ತರಾಟೆ, ತ್ವರಿತವಾಗಿ ಕಡತ ವಿಲೇವಾರಿಗೆ ಸೂಚನೆ

ಕೋಲಾರ: ಶಾಸಕ ಕೊತ್ತೂರು ಮಂಜುನಾಥ್‌ ಮಂಗಳವಾರ ಬೆಳಿಗ್ಗೆ ತಹಶೀಲ್ದಾರ್‌ ಕಚೇರಿಗೆ ದಿಢೀರನೇ ಭೇಟಿ ನೀಡಿ ಕಡತ ಪರಿಶೀಲಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ತಿಂಗಳುಗಟ್ಟಲೆ, ವರ್ಷಗಟ್ಟಲೆ ಕಡತ ಇಟ್ಟುಕೊಂಡು ಏಕೆ‌ ಜನಸಾಮಾನ್ಯರನ್ನು, ರೈತರನ್ನು ಸತಾಯಿಸುತ್ತೀರಿ ಎಂದು ಪ್ರಶ್ನಿಸಿದರು.

ಕಾನೂನು ಪ್ರಕಾರವೇ ಕಡತ ವಿಲೇವಾರಿ ಮಾಡಿ. ಆದರೆ, ವರ್ಷಗಟ್ಟಲೇ ತಮ್ಮ ಬಳಿ ಕಡತಗಳನ್ನು ಇಟ್ಟುಕೊಳ್ಳುವ ಉದ್ದೇಶವಾದರೂ ಏನು? ಎಷ್ಟು ಕಡತಗಳು ತಮ್ಮ ಬಳಿ ವಿಲೇವಾರಿ ಆಗಲು ಬಾಕಿ ಇವೆ ಎಂದು ಕೇಳಿದ ಅವರು, ಮುಂದಿನ ಬುಧವಾರ ಮತ್ತೆ ಇಲ್ಲಿಗೆ ಭೇಟಿ ನೀಡುತ್ತೇನೆ. ಅಷ್ಟರಲ್ಲಿ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡಿರಬೇಕು ಇದು ಮನವಿ ಅಲ್ಲ ಗಡುವು ಎಂದರು.

ತಮಗೆ ಎಷ್ಟು ಹಣ ಬೇಕು ಹೇಳಿ, ನಾನೇ ಕೊಡುತ್ತೇನೆ?‌ ಆದರೆ, ಬಡಜನರ‌ನ್ನು ಪದೇಪದೇ ‌ ಕಚೇರಿಗೆ ಅಲೆಸದೆ ಕೆಲಸ ಮಾಡಿಕೊಡಿ. ನನ್ನ ಸ್ವಂತ ಕೆಲಸಕ್ಕೆಂದು ನಾನು ಯಾವತ್ತೂ ತಹಶೀಲ್ದಾರ್ ಕಚೇರಿಗೆ ‌ಬಂದಿಲ್ಲ ಪೋನು ಸಹ ಮಾಡಿಲ್ಲ ಆದರೆ ಸಾರ್ವಜನಿಕರ ಕೆಲಸ ವಿಳಂಬ ಮಾಡುತ್ತಿರುವ ಬಗ್ಗೆ ನನಗೆ ವಿಪರೀತ ದೂರುಗಳು ಬರುತ್ತಿವೆ. ರೈತರನ್ನು ಏಕೆ ಪದೇಪದೇ ಕಚೇರಿಗೆ ಅಲೆಸುತ್ತೀರಿ? ತಮ್ಮ ಟೇಬಲ್‌ಗೆ ಬರುವ ‌ಕಡತ‌ ಅಲ್ಲಿಂದ ಮುಂದೆ ಸಾಕಲು ಏಕೆ ವಿಳಂಬ ಮಾಡುತ್ತೀರಿ ಎಂದು ರೈತರು ಸಾಯಬೇಕು ಅವತ್ತು ಮಾಡಿಕೊಡತ್ತೀರ ಹೇಳಿ ಎಂದು ಅಧಿಕಾರಿಗಳ ವಿರುದ್ದ ಗರಂ ಆದರು.

ದ್ವಿತೀಯ ದರ್ಜೆ ಸಹಾಯಕಿಯರಾದ ಸುಜಾತಾ ಮತ್ತು ಚಾಮುಂಡೇಶ್ವರಿದೇವಿ ಬಳಿ ತೆರಳಿ ಹಳೆ ದಾಖಲೆಗಳನ್ನು ಜಾಲಾಡಿದರು. ಟೇಬಲ್‌ ಮೇಲೆ ರಾಶಿ ಕಡತ ಇಟ್ಟುಕೊಂಡು ಏನು ಮಾಡುತ್ತೀರಿ ಎಂದು ಕೇಳಿದರು. ಕೆಲವೊಂದು ದಾಖಲೆಗಳನ್ನು ಹುಡುಕಿ ಕೊಡಲು ಸಿಬ್ಬಂದಿ ಪರದಾಡಿದರು.

ಸರ್ವೆ ವಿಭಾಗ, ಟಪಾಲು ವಿಭಾಗ, ಡಿಜಿಟಲ್‌ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದ ಶಾಸಕರು ನಂತರ ಸಭಾಂಗಣದಲ್ಲಿ ತಹಶೀಲ್ದಾರ್‌ ಡಾ.ನಯನಾ ಹಾಗೂ ಇತರ ಅಧಿಕಾರಿಗಳ ಸಭೆ ನಡೆಸಿದರು.

ಪ್ರಮುಖವಾಗಿ ಸುಜಾತಾ ಹಾಗೂ ಸುಲೋಚನಾ ಅವರ ಮೇಲೆ ಹೆಚ್ಚು ದೂರುಗಳು ಬರುತ್ತಿವೆ. ಅವರನ್ನು ಮುಳಬಾಗಿಲಿಗೂ, ಶ್ರೀನಿವಾಸಪುರಕ್ಕೋ ವರ್ಗಾಯಿಸಲು ಜಿಲ್ಲಾಧಿಕಾರಿಗೆ ಹೇಳುತ್ತೇನೆ. ಸರ್ವೆ ವಿಭಾಗದ ಮೇಲೆ ಇರುವಷ್ಟು ದೂರು ಬೇರೆ ಎಲ್ಲೂ. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಇಲ್ಲಿಂದ ಹೊರಟುಬಿಡಿ. ಕೆಲಸ ಮಾಡದವರ ಹೆಸರು ಕೊಡಿ ಎಂದರು.

ಆಗ ತಹಶೀಲ್ದಾರ್‌ ನಯನಾ ಮಾತನಾಡಿ, ಸುಜಾತಾ ಅವರ ಕೆಲಸ ನಿಧಾನ. ಸುಲೋಚನಾ ಅವರ ಸಂಬಂಧ ಯಾವುದೇ ಭ್ರಷ್ಟಾಚಾರದ ದೂರುಗಳು ಇಲ್ಲ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು ಹಾಗಾದರೆ ಯಾಕೆ ದೂರುಗಳು ಜಾಸ್ತಿ ಬರತ್ತೇವೆ ಹೇಳಿ ಎಂದು ಮರು ಪ್ರಶ್ನೆ ಹಾಕಿದರು.

‌ಸರ್ವೆ ಸಿಬ್ಬಂದಿ‌ ಕೊರತೆ ಇದ್ದು, ಕನಿಷ್ಠ ಇಬ್ಬರು ಸಿಬ್ಬಂದಿ ಬೇಕು ಎಂದು ಸರ್ವೆ ವಿಭಾಗದವರ ಆಗ್ರಹಿಸಿದರು.

ಡಾ.ನಯನಾ ವಿರುದ್ಧವೂ ದೂರುಗಳು ಬರುತ್ತಿರುವುದನ್ನು ಕೊತ್ತೂರು ಮಂಜುನಾಥ್‌ ಪ್ರಸ್ತಾಪಿಸಿದರು.

ಬೆಳಿಗ್ಗೆ ತಹಶೀಲ್ದಾರ್ ಬರುವುದೇ ಇಲ್ಲ,‌ ದೂರದ ಹಳ್ಳಿಗರ ಜನರಿಗೆ ತೊಂದರೆ ಆಗುತ್ತಿದೆ. ಸಂಜೆ‌ ಆರು ಗಂಟೆ ಮೇಲೆ ಬರುತ್ತಾರೆ ಎಂಬ ದೂರುಗಳು ಇವೆ. ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಆಗ ಡಾ.ನಯನಾ, ನಿತ್ಯ ಒಂದಿಲ್ಲೊಂದು ಸಭೆಗಳು ಇರುತ್ತವೆ. ಮುಖ್ಯಕಚೇರಿಯಲ್ಲಿ ಸಭೆ ಇರುತ್ತವೆ. ನ್ಯಾಯಾಲಯ ಪ್ರಕರಣಗಳಿರುತ್ತವೆ. ಅದಕ್ಕೆ ಹೋಗಬೇಕಾಗುತ್ತದೆ ಎಂದು ಸಮರ್ಥಿಸಿಕೊಳ್ಳಲು ಮುಂದಾದರು.

ತಹಶೀಲ್ದಾರ್ ಕಚೇರಿಯಲ್ಲಿ ವಾಸ್ತು ಸಮಸ್ಯೆ ಇದೆ. ಶೌಚಾಲಯ ಬದಲಾಯಿಸಿ. ಸಮಸ್ಯೆ ಸರಿ ಹೋಗಬಹುದು ಎಂದು ಶಾಸಕರು ಸಲಹೆ ನೀಡಿದರು.

ಸಭೆಯಲ್ಲಿ ಕಂದಾಯ ನಿರೀಕ್ಷಕ ರಾಜೇಂದ್ರ ಕುಮಾರ್, ವಿವಿಧ ವಿಭಾಗಗಳ ಸಿಬ್ಬಂದಿ ಹಾಗೂ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.

Ramesh Babu

Journalist

Recent Posts

ಬಸ್-ನೀರಿನ ಟ್ಯಾಂಕರ್ ಟ್ರ್ಯಾಕ್ಟರ್ ನಡುವೆ ಅಪಘಾತ: ಫುಲ್ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ

ದೊಡ್ಡಬಳ್ಳಾಪುರ ತಾಲೂಕಿನ ಪಾಲನಜೋಗಹಳ್ಳಿ ಸಮೀಪ ಹಿಂದೂಪುರ–ಯಲಹಂಕ ರಾಜ್ಯ ಹೆದ್ದಾರಿಯಲ್ಲಿ ಬಸ್ ಹಾಗೂ ನೀರಿನ ಟ್ಯಾಂಕರ್ ಹೊತ್ತ ಟ್ರ್ಯಾಕ್ಟರ್ ನಡುವೆ ಸಂಭವಿಸಿದ…

12 hours ago

ಶಾಸಕ ಪ್ರದೀಪ್ ಈಶ್ವರ್ ಕಾರಿಗೆ ಮುತ್ತಿಗೆ; ಚಪ್ಪಲಿ ಎಸೆತ, ಉದ್ವಿಗ್ನ ವಾತಾವರಣ

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಅವರ ಕಾರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬೆಂಬಲಿಗರು ಮುತ್ತಿಗೆ ಹಾಕಿದ ಘಟನೆ ಶನಿವಾರ…

16 hours ago

ಹೆಚ್‌ಡಿಕೆಗೆ ಶಾಸಕ ಪ್ರದೀಪ್ ಈಶ್ವರ್ ಟಾಂಗ್: “32 ಎಕರೆ ಆಸ್ತಿ ದಾಖಲೆ ನನ್ನ ಮುಖದ ಮೇಲೆ ಬಿಸಾಕಿ”

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ…

18 hours ago

ಕೆಂಪೇಗೌಡರ ಹೆಸರನ್ನು ಶಾಶ್ವತಗೊಳಿಸಲು ಹೊಸ ಯೋಜನೆಗಳು: ಟೌನ್ ಪ್ಲಾನಿಂಗ್, ಕಾಲೇಜು, ಅಭಿವೃದ್ಧಿ ಕೇಂದ್ರ ಸ್ಥಾಪನೆ – ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು: ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಅಂಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

19 hours ago

517ನೇ ಕೆಂಪೇಗೌಡ ಜಯಂತಿ: ವಿಮಾನ ನಿಲ್ದಾಣದಲ್ಲಿ ನಾಡಪ್ರಭುವಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುಷ್ಪನಮನ

ದೇವನಹಳ್ಳಿ: 517ನೇ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ…

21 hours ago

“ರೆಕಾರ್ಡ್ ಮಾಡಲು ನೀಡಿದ ಒಪ್ಪಿಗೆಯು ಪ್ರಸಾರ ಮಾಡಲು ನೀಡಿದ ಒಪ್ಪಿಗೆಯಲ್ಲ” – ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಪ್ರತೀಕಾರಾತ್ಮಕ ಅಶ್ಲೀಲತೆ , ಸೆಕ್ಸ್‌ಟಾರ್ಷನ್ ಹಾಗೂ ಬ್ಲ್ಯಾಕ್‌ಮೇಲ್ ವಿಡಿಯೋಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸುವಂತೆ ಗೃಹ ಇಲಾಖೆಗೆ ಸೂಚನೆ…

2 days ago