Categories: ಕೋಲಾರ

ತಹಶೀಲ್ದಾರ್‌ ಕಚೇರಿಗೆ ಶಾಸಕ ಕೊತ್ತೂರು ಮಂಜುನಾಥ್‌ ದಿಢೀರ್‌ ಭೇಟಿ: ಅಧಿಕಾರಿಗಳಿಗೆ ತರಾಟೆ, ತ್ವರಿತವಾಗಿ ಕಡತ ವಿಲೇವಾರಿಗೆ ಸೂಚನೆ

ಕೋಲಾರ: ಶಾಸಕ ಕೊತ್ತೂರು ಮಂಜುನಾಥ್‌ ಮಂಗಳವಾರ ಬೆಳಿಗ್ಗೆ ತಹಶೀಲ್ದಾರ್‌ ಕಚೇರಿಗೆ ದಿಢೀರನೇ ಭೇಟಿ ನೀಡಿ ಕಡತ ಪರಿಶೀಲಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ತಿಂಗಳುಗಟ್ಟಲೆ, ವರ್ಷಗಟ್ಟಲೆ ಕಡತ ಇಟ್ಟುಕೊಂಡು ಏಕೆ‌ ಜನಸಾಮಾನ್ಯರನ್ನು, ರೈತರನ್ನು ಸತಾಯಿಸುತ್ತೀರಿ ಎಂದು ಪ್ರಶ್ನಿಸಿದರು.

ಕಾನೂನು ಪ್ರಕಾರವೇ ಕಡತ ವಿಲೇವಾರಿ ಮಾಡಿ. ಆದರೆ, ವರ್ಷಗಟ್ಟಲೇ ತಮ್ಮ ಬಳಿ ಕಡತಗಳನ್ನು ಇಟ್ಟುಕೊಳ್ಳುವ ಉದ್ದೇಶವಾದರೂ ಏನು? ಎಷ್ಟು ಕಡತಗಳು ತಮ್ಮ ಬಳಿ ವಿಲೇವಾರಿ ಆಗಲು ಬಾಕಿ ಇವೆ ಎಂದು ಕೇಳಿದ ಅವರು, ಮುಂದಿನ ಬುಧವಾರ ಮತ್ತೆ ಇಲ್ಲಿಗೆ ಭೇಟಿ ನೀಡುತ್ತೇನೆ. ಅಷ್ಟರಲ್ಲಿ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡಿರಬೇಕು ಇದು ಮನವಿ ಅಲ್ಲ ಗಡುವು ಎಂದರು.

ತಮಗೆ ಎಷ್ಟು ಹಣ ಬೇಕು ಹೇಳಿ, ನಾನೇ ಕೊಡುತ್ತೇನೆ?‌ ಆದರೆ, ಬಡಜನರ‌ನ್ನು ಪದೇಪದೇ ‌ ಕಚೇರಿಗೆ ಅಲೆಸದೆ ಕೆಲಸ ಮಾಡಿಕೊಡಿ. ನನ್ನ ಸ್ವಂತ ಕೆಲಸಕ್ಕೆಂದು ನಾನು ಯಾವತ್ತೂ ತಹಶೀಲ್ದಾರ್ ಕಚೇರಿಗೆ ‌ಬಂದಿಲ್ಲ ಪೋನು ಸಹ ಮಾಡಿಲ್ಲ ಆದರೆ ಸಾರ್ವಜನಿಕರ ಕೆಲಸ ವಿಳಂಬ ಮಾಡುತ್ತಿರುವ ಬಗ್ಗೆ ನನಗೆ ವಿಪರೀತ ದೂರುಗಳು ಬರುತ್ತಿವೆ. ರೈತರನ್ನು ಏಕೆ ಪದೇಪದೇ ಕಚೇರಿಗೆ ಅಲೆಸುತ್ತೀರಿ? ತಮ್ಮ ಟೇಬಲ್‌ಗೆ ಬರುವ ‌ಕಡತ‌ ಅಲ್ಲಿಂದ ಮುಂದೆ ಸಾಕಲು ಏಕೆ ವಿಳಂಬ ಮಾಡುತ್ತೀರಿ ಎಂದು ರೈತರು ಸಾಯಬೇಕು ಅವತ್ತು ಮಾಡಿಕೊಡತ್ತೀರ ಹೇಳಿ ಎಂದು ಅಧಿಕಾರಿಗಳ ವಿರುದ್ದ ಗರಂ ಆದರು.

ದ್ವಿತೀಯ ದರ್ಜೆ ಸಹಾಯಕಿಯರಾದ ಸುಜಾತಾ ಮತ್ತು ಚಾಮುಂಡೇಶ್ವರಿದೇವಿ ಬಳಿ ತೆರಳಿ ಹಳೆ ದಾಖಲೆಗಳನ್ನು ಜಾಲಾಡಿದರು. ಟೇಬಲ್‌ ಮೇಲೆ ರಾಶಿ ಕಡತ ಇಟ್ಟುಕೊಂಡು ಏನು ಮಾಡುತ್ತೀರಿ ಎಂದು ಕೇಳಿದರು. ಕೆಲವೊಂದು ದಾಖಲೆಗಳನ್ನು ಹುಡುಕಿ ಕೊಡಲು ಸಿಬ್ಬಂದಿ ಪರದಾಡಿದರು.

ಸರ್ವೆ ವಿಭಾಗ, ಟಪಾಲು ವಿಭಾಗ, ಡಿಜಿಟಲ್‌ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದ ಶಾಸಕರು ನಂತರ ಸಭಾಂಗಣದಲ್ಲಿ ತಹಶೀಲ್ದಾರ್‌ ಡಾ.ನಯನಾ ಹಾಗೂ ಇತರ ಅಧಿಕಾರಿಗಳ ಸಭೆ ನಡೆಸಿದರು.

ಪ್ರಮುಖವಾಗಿ ಸುಜಾತಾ ಹಾಗೂ ಸುಲೋಚನಾ ಅವರ ಮೇಲೆ ಹೆಚ್ಚು ದೂರುಗಳು ಬರುತ್ತಿವೆ. ಅವರನ್ನು ಮುಳಬಾಗಿಲಿಗೂ, ಶ್ರೀನಿವಾಸಪುರಕ್ಕೋ ವರ್ಗಾಯಿಸಲು ಜಿಲ್ಲಾಧಿಕಾರಿಗೆ ಹೇಳುತ್ತೇನೆ. ಸರ್ವೆ ವಿಭಾಗದ ಮೇಲೆ ಇರುವಷ್ಟು ದೂರು ಬೇರೆ ಎಲ್ಲೂ. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಇಲ್ಲಿಂದ ಹೊರಟುಬಿಡಿ. ಕೆಲಸ ಮಾಡದವರ ಹೆಸರು ಕೊಡಿ ಎಂದರು.

ಆಗ ತಹಶೀಲ್ದಾರ್‌ ನಯನಾ ಮಾತನಾಡಿ, ಸುಜಾತಾ ಅವರ ಕೆಲಸ ನಿಧಾನ. ಸುಲೋಚನಾ ಅವರ ಸಂಬಂಧ ಯಾವುದೇ ಭ್ರಷ್ಟಾಚಾರದ ದೂರುಗಳು ಇಲ್ಲ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು ಹಾಗಾದರೆ ಯಾಕೆ ದೂರುಗಳು ಜಾಸ್ತಿ ಬರತ್ತೇವೆ ಹೇಳಿ ಎಂದು ಮರು ಪ್ರಶ್ನೆ ಹಾಕಿದರು.

‌ಸರ್ವೆ ಸಿಬ್ಬಂದಿ‌ ಕೊರತೆ ಇದ್ದು, ಕನಿಷ್ಠ ಇಬ್ಬರು ಸಿಬ್ಬಂದಿ ಬೇಕು ಎಂದು ಸರ್ವೆ ವಿಭಾಗದವರ ಆಗ್ರಹಿಸಿದರು.

ಡಾ.ನಯನಾ ವಿರುದ್ಧವೂ ದೂರುಗಳು ಬರುತ್ತಿರುವುದನ್ನು ಕೊತ್ತೂರು ಮಂಜುನಾಥ್‌ ಪ್ರಸ್ತಾಪಿಸಿದರು.

ಬೆಳಿಗ್ಗೆ ತಹಶೀಲ್ದಾರ್ ಬರುವುದೇ ಇಲ್ಲ,‌ ದೂರದ ಹಳ್ಳಿಗರ ಜನರಿಗೆ ತೊಂದರೆ ಆಗುತ್ತಿದೆ. ಸಂಜೆ‌ ಆರು ಗಂಟೆ ಮೇಲೆ ಬರುತ್ತಾರೆ ಎಂಬ ದೂರುಗಳು ಇವೆ. ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಆಗ ಡಾ.ನಯನಾ, ನಿತ್ಯ ಒಂದಿಲ್ಲೊಂದು ಸಭೆಗಳು ಇರುತ್ತವೆ. ಮುಖ್ಯಕಚೇರಿಯಲ್ಲಿ ಸಭೆ ಇರುತ್ತವೆ. ನ್ಯಾಯಾಲಯ ಪ್ರಕರಣಗಳಿರುತ್ತವೆ. ಅದಕ್ಕೆ ಹೋಗಬೇಕಾಗುತ್ತದೆ ಎಂದು ಸಮರ್ಥಿಸಿಕೊಳ್ಳಲು ಮುಂದಾದರು.

ತಹಶೀಲ್ದಾರ್ ಕಚೇರಿಯಲ್ಲಿ ವಾಸ್ತು ಸಮಸ್ಯೆ ಇದೆ. ಶೌಚಾಲಯ ಬದಲಾಯಿಸಿ. ಸಮಸ್ಯೆ ಸರಿ ಹೋಗಬಹುದು ಎಂದು ಶಾಸಕರು ಸಲಹೆ ನೀಡಿದರು.

ಸಭೆಯಲ್ಲಿ ಕಂದಾಯ ನಿರೀಕ್ಷಕ ರಾಜೇಂದ್ರ ಕುಮಾರ್, ವಿವಿಧ ವಿಭಾಗಗಳ ಸಿಬ್ಬಂದಿ ಹಾಗೂ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.

Ramesh Babu

Journalist

Recent Posts

ದೊಡ್ಡಬಳ್ಳಾಪುರದಲ್ಲಿ ಕಾರ್ಮಿಕ–ರೈತರ ಆಕ್ರೋಶ; ಎಸಿ ಕಚೇರಿಗೆ ಮುತ್ತಿಗೆ: ನಾಲ್ಕು ಕಾರ್ಮಿಕ ಸಂಹಿತೆ ರದ್ದು, ವಿದ್ಯುತ್ ಖಾಸಗೀಕರಣ ಕೈಬಿಡಲು ಆಗ್ರಹ

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಹಾಗೂ ವಿದ್ಯುತ್ ಖಾಸಗೀಕರಣ ಕೈಬಿಡಬೇಕು ಸೇರಿದಂತೆ ವಿವಿಧ…

1 hour ago

ಕಾರು–ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರ ಸಾವು

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ದಾಬಸ್‌ಪೇಟೆ–ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ 648ರಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ…

1 hour ago

ಕೆಐಎಎಲ್ ಏರ್‌ಪೋರ್ಟ್ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಬೆಚ್ಚಿಬೀಳಿಸುವ ಘಟನೆ:

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಇಬ್ಬರು ಬಾಲಕಿಯರು ಶಂಕಾಸ್ಪದವಾಗಿ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ…

13 hours ago

ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಿಸಿ ಅರ್ಜುನ್ ವಿರಾಟ್ ಜನ್ಮದಿನ ಆಚರಣೆ

ದೊಡ್ಡಬಳ್ಳಾಪುರ: ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಅರ್ಜುನ್ ವಿರಾಟ್ ಅವರ ಜನ್ಮದಿನದ ಹಿನ್ನೆಲೆ, ಅವರ ಸ್ನೇಹಿತರು ಹಾಗೂ ಒಡನಾಡಿಗಳು…

18 hours ago

ಸೈಕಲ್ ಗೋಡಾನ್ ಗೆ ಆಕಸ್ಮಿಕ ಬೆಂಕಿ; ಬೆಲೆಬಾಳುವ ಸೈಕಲ್‌ಗಳು ಸುಟ್ಟು ಕರಕಲು

ದೊಡ್ಡಬಳ್ಳಾಪುರ: ನಗರದ ಸೈಕಲ್ ಗೋಡೌನ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಗೋಡೌನ್‌ನಲ್ಲಿದ್ದ ಅಪಾರ ಪ್ರಮಾಣದ ಬೆಲೆಬಾಳುವ ಸೈಕಲ್‌ಗಳು ಸುಟ್ಟು ಕರಕಲಾದ…

19 hours ago

ಲಾರಿ–ಕಾರು ನಡುವೆ ಅಪಘಾತ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ–ನೆಲಮಂಗಲ ಮುಖ್ಯ ರಸ್ತೆಯ ಮಧುರೆ ಹೋಬಳಿಯ ಚೆನ್ನದೇವಿ ಅಗ್ರಹಾರದ ಪೆಟ್ರೋಲ್ ಬಂಕ್ ಬಳಿ ಲಾರಿ ಹಾಗೂ ಕಾರು ನಡುವೆ…

1 day ago