Categories: ಕೋಲಾರ

ಸ್ವಾತಂತ್ರ್ಯವಾಗಿ ಬದುಕುವ ದಾರಿಯನ್ನ ಸರ್ಕಾರಿ ಶಾಲೆಗಳು ಕಲಿಸುತ್ತವೆ-ಶಿಕ್ಷಕ ಇಂದ್ರ ಕುಮಾರ್

ಕೋಲಾರ : ಸ್ವಾತಂತ್ರ್ಯವಾಗಿ ಬದುಕುವ ದಾರಿಯನ್ನ, ಹೆಣ್ಣು ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರವನ್ನ ಸರ್ಕಾರಿ ಶಾಲೆಗಳು ಕಲಿಸುತ್ತವೆ ಎಂದು ಶಿಕ್ಷಕ ಇಂದ್ರ ಕುಮಾರ್ ಹೇಳಿದರು.

ನಗರದ ಸರ್ಕಾರಿ ಪ್ರೌಢಶಾಲೆ ಅಣ್ಣಿಹಳ್ಳಿಯಲ್ಲಿ 2006-07ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳು ಎಲ್ಲರಿಗೂ ಉಚಿತವಾಗಿ ಶಿಕ್ಷಣ ನೀಡುವುದರಿಂದ ಬಡ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಲು ಸಹಕಾರಿಯಾಗಲಿದೆ. ನನಗೆ ಕೆಲಸ ಸಿಕ್ಕಾಗಲು ಇಷ್ಟೊಂದು ಖುಷಿಯಾಗಲಿಲ್ಲ, ಈ ದಿನ ಅದಕ್ಕೆಲ್ಲ ಮೀರಿದ ಖುಷಿ ಸಿಕ್ಕಿದೆ ಎಂದು ಹರ್ಷವನ್ನು ವ್ಯಕ್ತಪಡಿಸಿದ್ದರು.

ಶಾಲೆಯ ಅಂದಿನ ಮುಖ್ಯ ಶಿಕ್ಷಕರಾದ ನರಸಿಂಹಯ್ಯ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಜಯವನ್ನು ಸಾಧಿಸಲು ಶಿಸ್ತು ಮುಖ್ಯ. ಓದಿರುವೆ ಎಂಬುದು ಮುಖ್ಯ ಅಲ್ಲ, ಸತ್ಪ್ರಜೆಗಳಾಗಿ ಬದುಕುವುದು ಮುಖ್ಯ. ಸುಮಾರು 17 ವರ್ಷಗಳ ಹಿಂದೆ ಓದಿದ ನೀವುಗಳು ಎಲ್ಲಾ ಗುರುಗಳನ್ನು ಸ್ಮರಿಸಿ, ಈಗಲೂ ಒಗ್ಗಟ್ಟಿನಿಂದ, ಕೆಲ ವಿದ್ಯಾರ್ಥಿಗಳು ವಿವಾಹ ವಾಗಿದ್ದರೂ ಸಹ ಸ್ನೇಹಿತರೊಂದಿಗೆ ಸೇರಿರುವುದು, ಒಂದೇ ಸರದಿಂದ ಕಳಚಿ ಹೋದ ಮಣಿಗಳನ್ನು ಮತ್ತೆ ಹುಡುಕಾಡಿ ಪೋಣಿಸುವ ಕಾರ್ಯಕ್ಕೆ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಅಂದು ಧರಿಸಿದ ಶಾಲಾ ಸಮವಸ್ತ್ರವನ್ನ ಇಂದಿಗೂ ಇಟ್ಟಿದ್ದು ಕಾರ್ಯಕ್ರಮದಲ್ಲಿ ಪ್ರದರ್ಶಿಸಿ ವಿದ್ಯಾರ್ಥಿ ಶಾನುಭೋಗನಹಳ್ಳಿಯ ರವೀಂದ್ರ ಮಾತನಾಡಿ, ಗಿಡವಾಗಿದ್ದ ನಮ್ಮನ್ನ ಪೋಷಣೆ ನೀಡಿ ಉತ್ತಮ ಮಟ್ಟದಲ್ಲಿ ಮರವಾಗಿ ನಿಲ್ಲಲು ಕಾರಣವಾದವರು ನಮ್ಮ ಗುರುಗಳು. ಅದಕ್ಕಾಗಿ ಪ್ರತಿಯೊಬ್ಬರೂ ಅಂದಿಗೂ ಎಂದಿಗೂ ಗುರುಗಳನ್ನು ನೆನಯಲೇ ಬೇಕು. ಒಂದು ಅಕ್ಷರ ಕಲಿಸಿದವರು ಸಹ ಗುರುಗಳೇ, ನಾವು ಎಷ್ಟು ಎತ್ತರಕ್ಕೆ ಬೆಳೆದರೂ, ಬೆಳೆದು ಬಂದ ದಾರಿಯನ್ನ ಮರೆಯಬಾರದು ಆದ್ದರಿಂದ ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿ, ಶಾಲೆಗೆ ದ್ವನಿವರ್ಧಕವನ್ನು ನೀಡುವುದಾಗಿ ಭರವಸೆ ನೀಡಿದರು.

ಎಲ್ಲಾ ಗುರುವೃಂದದವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ವಿದ್ಯಾರ್ಥಿಗಳ ನೀಡಿದ ಕಿರುಕಾಣಿಕೆ ಸ್ವೀಕರಿಸಿ, ಗುರು ಶಿಷ್ಯರ ಬಾಂಧವ್ಯ ಶಾಶ್ವತ ಎಂಬುದು ಸಾಬೀತುಪಡಿಸಲಾಯಿತು.

ಕಾರ್ಯಕ್ರಮದಲ್ಲಿ 2006-07ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿದ ವಿಜ್ಞಾನ ಶಿಕ್ಷಕರಾದ ಅಪ್ರೋಚ್ ಸುಲ್ತಾನ್ ಮೇಡಂ(AS), ಗಣಿತ ಶಿಕ್ಷಕರಾದ ಸುಜಾತ, ಸಮಾಜ ವಿಜ್ಞಾನ ಶಿಕ್ಷಕರಾದ ಅನ್ನಪೂರ್ಣ, ಕನ್ನಡ ಶಿಕ್ಷಕರಾದ ಬಿ.ಎಂ.ಪುಷ್ಪಲತಾ, ಹಿಂದಿ ಭಾಷಾ ಶಿಕ್ಷಕರಾದ, ಕೆ.ವೆಂಕಟೇಶ್, ದೈಹಿಕ ಶಿಕ್ಷಣ ಶಿಕ್ಷಕರಾದ ಅನಿತಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Ramesh Babu

Journalist

Recent Posts

ದ್ವಿಚಕ್ರ ವಾಹನ ಹಾಗೂ ಪಂಪ್ ಸೆಟ್ ಗೆ ಅಳವಡಿಸಿದ್ದ ಮೋಟಾರ್ ಗಳ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ರಾಮನಗರ ಗ್ರಾಮಾಂತರ ಹಾಗೂ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಜಮೀನಿನಲ್ಲಿ ಪಂಪ್ ಸೆಟ್ ಗಳಿಗೆ ಅಳವಡಿಸಿದ್ದ…

6 hours ago

ಬಿಸಿಲಿನ ಬೇಗೆ: ಬಾಯಾರಿದ ಕೋತಿ ನೀರಿಗಾಗಿ ಪರದಾಟ: ವಾಟರ್ ಬಾಟಲ್ ನೀರು ಕುಡಿಯಲು ಹರಸಾಹಸ

ಬಿರುಬಿಸಿಲಿಗೆ ಬಾಯಾರಿಕೆಯಿಂದ ಕೋತಿಯೊಂದು ನೀರಿಗಾಗಿ ವಾಟರ್ ಬಾಟಲ್ ಹಿಡಿದು ಒಂದೊಂದು ಹನಿಗೂ ಪರದಾಡಿದ ದೃಶ್ಯ ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ…

7 hours ago

ಪಾಲನಜೋಗಿಹಳ್ಳಿ ಬಳಿ ಅಪಘಾತ: ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು…

12 hours ago

ಚಿಂತಕರು ಸ್ವಾಮಿ ನಾವು ಚಿಂತಕರು….

ಚಿಂತನೆ ಮತ್ತು ಚಿಂತಕರು....... " ಹೃದಯಾಂತರಾಳದಿಂದ ಬರುವ ಮಾತುಗಳು ಹೃದಯವನ್ನು ‌ತಾಕುತ್ತವೆ " ರೂಮಿ........... ಕೃತಕತೆ ಮತ್ತು ಸಹಜತೆಯ ನಡುವಿನ…

13 hours ago

ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರಾಗಿ ನರಸಿಂಹ ಮೂರ್ತಿ ನೇಮಕ

ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರನ್ನಾಗಿ ನರಸಿಂಹ ಮೂರ್ತಿ ಅವರನ್ನು ಅಧಿಕೃತವಾಗಿ ನೇಮಕ ಮಾಡಿದ್ದೇವೆ. ಅವರು ಪಕ್ಷಕ್ಕಾಗಿ ಹಗಲಿರುಳು…

1 day ago

ಪ್ರತಿಯೊಬ್ಬ ಭಾರತೀಯನ ತಲೆ ಮೇಲೆ ರೂ. 4.8 ಲಕ್ಷದಷ್ಟು ಸಾಲದ ಹೊರೆ ಇದೆ- ಸಿಎಂ‌ ಸಿದ್ದರಾಮಯ್ಯ

ಕನ್ನಡಿಗರು ತಮ್ಮ ಬೆವರ ಗಳಿಕೆಯಿಂದ ನೀಡುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಹದಿನೈದು ಪೈಸೆ ಮಾತ್ರ ವಾಪಸ್ಸು…

1 day ago