ಅಂದು ಫ್ರೆಂಡ್ ಬರ್ತಡೇ ಇತ್ತು. ಒಂದೇ ಊರಿನ ಐದು ಮಂದಿ, ಒಬ್ಬ ಕೋಲಾರದ ಮಾಲೂರು ಮೂಲದವನು ಸೇರಿ ಬರ್ತಡೇ ಬಾಯ್ ಗೆ ಕೇಕ್ ಕಟ್ ಮಾಡಿ, ಬರ್ತಡೇ ಪಾರ್ಟಿ ಮಾಡಲು ಮಾ.10 ರಾತ್ರಿ ಸುಮಾರು 11 ಗಂಟೆಗೆ ಬಾರ್ ನಿಂದ ಎಣ್ಣೆ ತಂದು ಕುಡಿಯಕ್ಕೆ ಗೀತಂ ಕಾಲೇಜು ಹಿಂಭಾಗ ಕುಳಿತುಕೊಳ್ಳುತ್ತಾರೆ. ಒಂದೇ ರೌಂಡ್ ಗೆ ತಂದಿರೋ ಎಲ್ಲಾ ಎಣ್ಣೆಯನ್ನ ಮುಗಿಸುತ್ತಾರೆ. ಅದು ಆ ಕುಡುಕರಿಗೆ ಸಾಕಾಗೋದಿಲ್ಲ. ಆ ಎಣ್ಣೆಯಲ್ಲಿ ಕಿಕ್ ಬರೋದಿಲ್ಲ. ಇನ್ನೂ ಕಿಕ್ ಬೇಕೆಂದರೆ ಮತ್ತೆ ಎಣ್ಣೆ ಬೇಕು. ಆದ್ರೆ, ಯಾರ ಜೇಬಲ್ಲಿ ದುಡ್ಡು ಇರೋದಿಲ್ಲ. ಏನಾದ್ರು ಮಾಡಿ ಕುಡಿಲೇ ಬೇಕು ಎಂದು ತೀರ್ಮಾನಿಸಿ ಗೀತಂ ಕಾಲೇಜು ರೋಡ್ ಹಿಡಿತಾರೆ…
ಮಾ. 11ರ ಮುಂಜಾನೆ ಸುಮಾರು 12:40ರ ಸಮಯದಲ್ಲಿ ಈ ಪೊರ್ಕಿಗಳಿಗೆ ಸಿಕ್ಕಿದ್ದು ಗೀತಂ ಕಾಲೇಜಿನ ವಿದ್ಯಾರ್ಥಿಗಳು, ಅನ್ಯ ಕೆಲಸದ ಮೇರೆಗೆ ಪಿಜಿಯಿಂದ ಹೊರಬಂದಿದ್ದಾಗ ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗಳ ಮೇಲೆ ಅಟ್ಯಾಕ್ ಮಾಡುತ್ತಾರೆ. ಹೊಡೆದು ಬಡೆದು ಮೊಬೈಲ್ ಹಾಗೂ ಜೇಬುಗಳಲ್ಲಿ ಇದ್ದ ಹಣವನ್ನು ಕಸಿದುಕೊಳ್ಳುತ್ತಾರೆ. ನಂತರ ಬಲವಂತವಾಗಿ ಮೊಬೈಲ್ ಪಾಸ್ ವರ್ಡ್ ಪಡೆದು ಆನ್ ಲೈನ್ ಮೂಲಕ ಹಣವನ್ನು ದೋಚುತ್ತಾರೆ… ಹೀಗೆ ಇಬ್ಬರ ಬಳಿ ಸಾವಿರಾರು ರೂಪಾಯಿ ಹಣವನ್ನು ರಾಬರಿ ಮಾಡಿ ಕುಡಿದು ಎಂಜಾಯ್ ಮಾಡುತ್ತಾರೆ.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾ.11ರಂದು ದೂರು ದಾಖಲಾಗುತ್ತದೆ. ದೂರು ದಾಖಲಾಗುತ್ತಿದ್ದಂತೆ ಪೋಕರಿಗಳು ಮಂಗ ಮಾಯವಾಗುತ್ತಾರೆ. ಆದರೆ, ಪೊಲೀಸರು ಪೊರ್ಕಿಗಳ ಬೆನ್ನತ್ತಿ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಐವರನ್ನ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ… ಓರ್ವ ತಲೆಮರೆಸಿಕೊಂಡಿದ್ದಾನೆ. ಅವನ ಸೆರೆಗೂ ಪೊಲೀಸರು ಬಲೆ ಬೀಸಿದ್ದಾರೆ….
ಬಂಧಿತ ಆರೋಪಿಗಳ ವಿವರ
ಸೊಣ್ಣಪ್ಪನಹಳ್ಳಿ ಗ್ರಾಮದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಎ1 ಆನಂದ್ ಕುಮಾರ್ (25), ಎ2 ಡ್ರೈವರ್ ತಿಲಕ್ (19) ಎ3 ಗಾರೆ ಕೆಲಸಗಾರ ಆಕಾಶ್ (21), ಎ4 ಡ್ರೈವರ್ ಮುನೇಗೌಡ (21), ಎ5 ಕೋಲಾರದ ಮಾಲೂರು ಮೂಲದ ಅಕ್ಷಯ್ ಕುಮಾರ್, ಸದ್ಯ ತಲೆಮರೆಸಿಕೊಂಡಿದ್ದಾನೆ. ಎ6 ಗೌತಮ್ ಬಂಧಿತ ಆರೋಪಿಗಳು….
ಈ ಖದೀಮರಿಗೆ ಯುವಕರು ಸಿಕ್ಕಿದ್ದಕ್ಕೆ ಹಣ ಮಾತ್ರ ದೋಚಿ ಸುಮ್ಮನಾದ್ರು, ಒಂದು ವೇಳೆ ಯುವತಿಯರು ಸಿಕ್ಕಿದ್ರೆ ಏನು ಗತಿ….? ಈ ಪುಂಡರಿಗೆ ತಕ್ಕ ಪಾಠವಾಗಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ….
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…
ಬಾಣಸವಾಡಿ ರೈಲ್ವೆ ನಿಲ್ದಾಣದ ಸಮೀಪ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಸಹಕರಿಸಿ, ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಕೇಂದ್ರ ಸರ್ಕಾರದ…
ದೇವನಹಳ್ಳಿ: ತೈಲ ಬೆಲೆ ಏರಿಕೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ…
ದೊಡ್ಡಬಳ್ಳಾಪುರ: ಆಂಧ್ರ ಪ್ರದೇಶದಿಂದ ಒಣ ಗಾಂಜಾವನ್ನು ತಂದು ಸ್ಥಳೀಯವಾಗಿ ಮಾರಾಟ ಮಾಡಲು ಯತ್ನಿಸಿದ್ದ ವ್ಯಕ್ತಿಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿ,…
ಬೆಂಗಳೂರು ಗ್ರಾಮಾಂತರ: ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಸಿಎಂ ಕುರ್ಚಿ ಕಾದಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ ಸ್ಪರ್ಶ ನೀಡುವ ಲಕ್ಷಣಗಳು…
ದೊಡ್ಡಬಳ್ಳಾಪುರ: ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತವೆ ಎಂದು ಶಾಸಕ ಧೀರಜ್ ಮುನಿರಾಜು…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿವಿಧ ವಿಷಯಗಳ ಕುರಿತು…