ಬರ್ತಡೇ ಪಾರ್ಟಿ ಕಂಟಿನ್ಯೂ ಮಾಡಲು ಶಾರ್ಟೇಜ್ ಆಫ್ ಅಮೌಂಟ್: ಮತ್ತಿಗಾಗಿ ಮಧ್ಯರಾತ್ರಿ ರಾಬರಿಗೆ ಇಳಿದ ಪುಂಡರು: ಹೊಡೆದು ಬಡಿದು ದುಡ್ಡು ಕಿತ್ತು ಕಂಠ ಪೂರ್ತಿ ಕುಡಿದು ಎಂಜಾಯ್ ಮಾಡ್ತಿದ್ದ ಪೊರ್ಕಿಗಳು ಅಂದರ್

ಅಂದು ಫ್ರೆಂಡ್ ಬರ್ತಡೇ ಇತ್ತು. ಒಂದೇ ಊರಿನ ಐದು ಮಂದಿ, ಒಬ್ಬ ಕೋಲಾರದ ಮಾಲೂರು ಮೂಲದವನು ಸೇರಿ ಬರ್ತಡೇ ಬಾಯ್ ಗೆ ಕೇಕ್ ಕಟ್ ಮಾಡಿ, ಬರ್ತಡೇ ಪಾರ್ಟಿ ಮಾಡಲು ಮಾ.10 ರಾತ್ರಿ ಸುಮಾರು 11 ಗಂಟೆಗೆ ಬಾರ್ ನಿಂದ ಎಣ್ಣೆ ತಂದು ಕುಡಿಯಕ್ಕೆ ಗೀತಂ ಕಾಲೇಜು ಹಿಂಭಾಗ ಕುಳಿತುಕೊಳ್ಳುತ್ತಾರೆ. ಒಂದೇ ರೌಂಡ್ ಗೆ ತಂದಿರೋ ಎಲ್ಲಾ ಎಣ್ಣೆಯನ್ನ ಮುಗಿಸುತ್ತಾರೆ. ಅದು ಆ ಕುಡುಕರಿಗೆ ಸಾಕಾಗೋದಿಲ್ಲ. ಆ ಎಣ್ಣೆಯಲ್ಲಿ ಕಿಕ್ ಬರೋದಿಲ್ಲ. ಇನ್ನೂ ಕಿಕ್ ಬೇಕೆಂದರೆ ಮತ್ತೆ ಎಣ್ಣೆ ಬೇಕು. ಆದ್ರೆ, ಯಾರ ಜೇಬಲ್ಲಿ ದುಡ್ಡು ಇರೋದಿಲ್ಲ. ಏನಾದ್ರು ಮಾಡಿ ಕುಡಿಲೇ ಬೇಕು ಎಂದು ತೀರ್ಮಾನಿಸಿ ಗೀತಂ ಕಾಲೇಜು ರೋಡ್ ಹಿಡಿತಾರೆ…

ಮಾ. 11ರ ಮುಂಜಾನೆ ಸುಮಾರು 12:40ರ ಸಮಯದಲ್ಲಿ ಈ ಪೊರ್ಕಿಗಳಿಗೆ ಸಿಕ್ಕಿದ್ದು ಗೀತಂ ಕಾಲೇಜಿನ ವಿದ್ಯಾರ್ಥಿಗಳು, ಅನ್ಯ ಕೆಲಸದ ಮೇರೆಗೆ ಪಿಜಿಯಿಂದ ಹೊರಬಂದಿದ್ದಾಗ ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗಳ ಮೇಲೆ ಅಟ್ಯಾಕ್ ಮಾಡುತ್ತಾರೆ. ಹೊಡೆದು ಬಡೆದು ಮೊಬೈಲ್ ಹಾಗೂ ಜೇಬುಗಳಲ್ಲಿ ಇದ್ದ ಹಣವನ್ನು ಕಸಿದುಕೊಳ್ಳುತ್ತಾರೆ. ನಂತರ ಬಲವಂತವಾಗಿ ಮೊಬೈಲ್ ಪಾಸ್ ವರ್ಡ್ ಪಡೆದು ಆನ್ ಲೈನ್ ಮೂಲಕ ಹಣವನ್ನು ದೋಚುತ್ತಾರೆ… ಹೀಗೆ ಇಬ್ಬರ ಬಳಿ ಸಾವಿರಾರು ರೂಪಾಯಿ ಹಣವನ್ನು ರಾಬರಿ ಮಾಡಿ ಕುಡಿದು ಎಂಜಾಯ್ ಮಾಡುತ್ತಾರೆ.

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾ.11ರಂದು ದೂರು ದಾಖಲಾಗುತ್ತದೆ. ದೂರು ದಾಖಲಾಗುತ್ತಿದ್ದಂತೆ ಪೋಕರಿಗಳು ಮಂಗ ಮಾಯವಾಗುತ್ತಾರೆ. ಆದರೆ, ಪೊಲೀಸರು ಪೊರ್ಕಿಗಳ ಬೆನ್ನತ್ತಿ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಐವರನ್ನ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ… ಓರ್ವ ತಲೆಮರೆಸಿಕೊಂಡಿದ್ದಾನೆ. ಅವನ ಸೆರೆಗೂ ಪೊಲೀಸರು ಬಲೆ ಬೀಸಿದ್ದಾರೆ….

ಬಂಧಿತ ಆರೋಪಿಗಳ ವಿವರ

ಸೊಣ್ಣಪ್ಪನಹಳ್ಳಿ ಗ್ರಾಮದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಎ1 ಆನಂದ್ ಕುಮಾರ್ (25), ಎ2 ಡ್ರೈವರ್ ತಿಲಕ್ (19) ಎ3 ಗಾರೆ ಕೆಲಸಗಾರ ಆಕಾಶ್ (21), ಎ4 ಡ್ರೈವರ್ ಮುನೇಗೌಡ (21), ಎ5 ಕೋಲಾರದ ಮಾಲೂರು ಮೂಲದ ಅಕ್ಷಯ್ ಕುಮಾರ್, ಸದ್ಯ ತಲೆಮರೆಸಿಕೊಂಡಿದ್ದಾನೆ. ಎ6 ಗೌತಮ್ ಬಂಧಿತ ಆರೋಪಿಗಳು….

ಈ ಖದೀಮರಿಗೆ ಯುವಕರು ಸಿಕ್ಕಿದ್ದಕ್ಕೆ ಹಣ ಮಾತ್ರ ದೋಚಿ ಸುಮ್ಮನಾದ್ರು, ಒಂದು ವೇಳೆ ಯುವತಿಯರು ಸಿಕ್ಕಿದ್ರೆ ಏನು ಗತಿ….? ಈ ಪುಂಡರಿಗೆ ತಕ್ಕ ಪಾಠವಾಗಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ….

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…

Ramesh Babu

Journalist

Recent Posts

ಹಾಲಿನ ಖರೀದಿ ದರ ಹೆಚ್ಚಳಕ್ಕೆ ರೈತರ ಬೃಹತ್ ಪ್ರತಿಭಟನೆ

ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ ರೂ. 10 ಹೆಚ್ಚಿಸಬೇಕು ಹಾಗೂ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಹೆಚ್ಚಿಸಬೇಕು ಎಂದು…

8 hours ago

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರ ಉನ್ನತೀಕರಣಕ್ಕೆ ಗುದ್ದಲಿ ಪೂಜೆ

ದೊಡ್ಡಬಳ್ಳಾಪುರ: ತಾಲೂಕಿನ ಅನಿಬೆಸೆಂಟ್ ಪಾರ್ಕ್‌ನಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರವನ್ನು ಉನ್ನತೀಕರಿಸುವ ಕಾಮಗಾರಿಗೆ ಶಾಸಕ ಧೀರಜ್ ಮುನಿರಾಜ್…

8 hours ago

ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್ ವಿಲ್ಲಾಸ್‌ನಲ್ಲಿ ಕರಡಿಗಳ ಪ್ರತ್ಯಕ್ಷ: ನಂದಿಬೆಟ್ಟ ಸಮೀಪ ವನ್ಯಜೀವಿಗಳ ಓಡಾಟದಿಂದ ಆತಂಕ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಸಮೀಪದ ಪ್ರಖ್ಯಾತ ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್ ವಿಲ್ಲಾಸ್ ಆವರಣದಲ್ಲಿ…

8 hours ago

ಪೆಟ್ರೋಲ್ ಟ್ಯಾಂಕರ್-ಹಾಲಿನ ಟ್ಯಾಂಕರ್ ನಡುವೆ ಅಪಘಾತ: ಬೆಂಕಿಗಾಹುತಿಯಾದ ಎರಡು ಟ್ಯಾಂಕರ್ ಗಳು

ದೊಡ್ಡಬಳ್ಳಾಪುರ: ತಾಲೂಕಿನ ಮಧುರೆ ಹೋಬಳಿಯ 11ನೇ ಮೈಲಿ (ಮಲ್ಲೋಹಳ್ಳಿ ಸಮೀಪ) ಪೆಟ್ರೋಲ್ ಟ್ಯಾಂಕರ್ ಹಾಗೂ ಹಾಲಿನ ಟ್ಯಾಂಕರ್ ನಡುವೆ ಸಂಭವಿಸಿದ…

17 hours ago

ಲಾರಿ-ಕ್ರೂಸರ್ ನಡುವೆ ಭೀಕರ ಅಪಘಾತ; ಗೋಕರ್ಣಕ್ಕೆ ತೆರಳುತ್ತಿದ್ದ 6 ಮಂದಿ ಸಾವು: ಹಲವರಿಗೆ ಗಾಯ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆರತಿಬೈಲು ಗ್ರಾಮದ ಬಳಗಾರ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ–52ರಲ್ಲಿ ಗುರುವಾರ (ಜುಲೈ…

19 hours ago

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇಗೌಡರಿಗೆ ಹುಟ್ಟುಹಬ್ಬದ ಸಂಭ್ರಮ: ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ MMS ಗ್ರೂಪ್ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಹುಟ್ಟುಹಬ್ಬ…

1 day ago