ಬರ್ತಡೇ ಪಾರ್ಟಿ ಕಂಟಿನ್ಯೂ ಮಾಡಲು ಶಾರ್ಟೇಜ್ ಆಫ್ ಅಮೌಂಟ್: ಮತ್ತಿಗಾಗಿ ಮಧ್ಯರಾತ್ರಿ ರಾಬರಿಗೆ ಇಳಿದ ಪುಂಡರು: ಹೊಡೆದು ಬಡಿದು ದುಡ್ಡು ಕಿತ್ತು ಕಂಠ ಪೂರ್ತಿ ಕುಡಿದು ಎಂಜಾಯ್ ಮಾಡ್ತಿದ್ದ ಪೊರ್ಕಿಗಳು ಅಂದರ್

ಅಂದು ಫ್ರೆಂಡ್ ಬರ್ತಡೇ ಇತ್ತು. ಒಂದೇ ಊರಿನ ಐದು ಮಂದಿ, ಒಬ್ಬ ಕೋಲಾರದ ಮಾಲೂರು ಮೂಲದವನು ಸೇರಿ ಬರ್ತಡೇ ಬಾಯ್ ಗೆ ಕೇಕ್ ಕಟ್ ಮಾಡಿ, ಬರ್ತಡೇ ಪಾರ್ಟಿ ಮಾಡಲು ಮಾ.10 ರಾತ್ರಿ ಸುಮಾರು 11 ಗಂಟೆಗೆ ಬಾರ್ ನಿಂದ ಎಣ್ಣೆ ತಂದು ಕುಡಿಯಕ್ಕೆ ಗೀತಂ ಕಾಲೇಜು ಹಿಂಭಾಗ ಕುಳಿತುಕೊಳ್ಳುತ್ತಾರೆ. ಒಂದೇ ರೌಂಡ್ ಗೆ ತಂದಿರೋ ಎಲ್ಲಾ ಎಣ್ಣೆಯನ್ನ ಮುಗಿಸುತ್ತಾರೆ. ಅದು ಆ ಕುಡುಕರಿಗೆ ಸಾಕಾಗೋದಿಲ್ಲ. ಆ ಎಣ್ಣೆಯಲ್ಲಿ ಕಿಕ್ ಬರೋದಿಲ್ಲ. ಇನ್ನೂ ಕಿಕ್ ಬೇಕೆಂದರೆ ಮತ್ತೆ ಎಣ್ಣೆ ಬೇಕು. ಆದ್ರೆ, ಯಾರ ಜೇಬಲ್ಲಿ ದುಡ್ಡು ಇರೋದಿಲ್ಲ. ಏನಾದ್ರು ಮಾಡಿ ಕುಡಿಲೇ ಬೇಕು ಎಂದು ತೀರ್ಮಾನಿಸಿ ಗೀತಂ ಕಾಲೇಜು ರೋಡ್ ಹಿಡಿತಾರೆ…

ಮಾ. 11ರ ಮುಂಜಾನೆ ಸುಮಾರು 12:40ರ ಸಮಯದಲ್ಲಿ ಈ ಪೊರ್ಕಿಗಳಿಗೆ ಸಿಕ್ಕಿದ್ದು ಗೀತಂ ಕಾಲೇಜಿನ ವಿದ್ಯಾರ್ಥಿಗಳು, ಅನ್ಯ ಕೆಲಸದ ಮೇರೆಗೆ ಪಿಜಿಯಿಂದ ಹೊರಬಂದಿದ್ದಾಗ ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗಳ ಮೇಲೆ ಅಟ್ಯಾಕ್ ಮಾಡುತ್ತಾರೆ. ಹೊಡೆದು ಬಡೆದು ಮೊಬೈಲ್ ಹಾಗೂ ಜೇಬುಗಳಲ್ಲಿ ಇದ್ದ ಹಣವನ್ನು ಕಸಿದುಕೊಳ್ಳುತ್ತಾರೆ. ನಂತರ ಬಲವಂತವಾಗಿ ಮೊಬೈಲ್ ಪಾಸ್ ವರ್ಡ್ ಪಡೆದು ಆನ್ ಲೈನ್ ಮೂಲಕ ಹಣವನ್ನು ದೋಚುತ್ತಾರೆ… ಹೀಗೆ ಇಬ್ಬರ ಬಳಿ ಸಾವಿರಾರು ರೂಪಾಯಿ ಹಣವನ್ನು ರಾಬರಿ ಮಾಡಿ ಕುಡಿದು ಎಂಜಾಯ್ ಮಾಡುತ್ತಾರೆ.

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾ.11ರಂದು ದೂರು ದಾಖಲಾಗುತ್ತದೆ. ದೂರು ದಾಖಲಾಗುತ್ತಿದ್ದಂತೆ ಪೋಕರಿಗಳು ಮಂಗ ಮಾಯವಾಗುತ್ತಾರೆ. ಆದರೆ, ಪೊಲೀಸರು ಪೊರ್ಕಿಗಳ ಬೆನ್ನತ್ತಿ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಐವರನ್ನ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ… ಓರ್ವ ತಲೆಮರೆಸಿಕೊಂಡಿದ್ದಾನೆ. ಅವನ ಸೆರೆಗೂ ಪೊಲೀಸರು ಬಲೆ ಬೀಸಿದ್ದಾರೆ….

ಬಂಧಿತ ಆರೋಪಿಗಳ ವಿವರ

ಸೊಣ್ಣಪ್ಪನಹಳ್ಳಿ ಗ್ರಾಮದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಎ1 ಆನಂದ್ ಕುಮಾರ್ (25), ಎ2 ಡ್ರೈವರ್ ತಿಲಕ್ (19) ಎ3 ಗಾರೆ ಕೆಲಸಗಾರ ಆಕಾಶ್ (21), ಎ4 ಡ್ರೈವರ್ ಮುನೇಗೌಡ (21), ಎ5 ಕೋಲಾರದ ಮಾಲೂರು ಮೂಲದ ಅಕ್ಷಯ್ ಕುಮಾರ್, ಸದ್ಯ ತಲೆಮರೆಸಿಕೊಂಡಿದ್ದಾನೆ. ಎ6 ಗೌತಮ್ ಬಂಧಿತ ಆರೋಪಿಗಳು….

ಈ ಖದೀಮರಿಗೆ ಯುವಕರು ಸಿಕ್ಕಿದ್ದಕ್ಕೆ ಹಣ ಮಾತ್ರ ದೋಚಿ ಸುಮ್ಮನಾದ್ರು, ಒಂದು ವೇಳೆ ಯುವತಿಯರು ಸಿಕ್ಕಿದ್ರೆ ಏನು ಗತಿ….? ಈ ಪುಂಡರಿಗೆ ತಕ್ಕ ಪಾಠವಾಗಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ….

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…

Ramesh Babu

Journalist

Recent Posts

ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಬೆಂಗಳೂರು ಗ್ರಾಮಾಂತರ: ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ…

9 hours ago

ಬೆಸ್ಕಾಂ ವಿರುದ್ಧ ರೈತರ ಆಕ್ರೋಶ: 10 ತಾಸು ಗುಣಮಟ್ಟದ ವಿದ್ಯುತ್‌ಗೆ ಆಗ್ರಹ: ನಷ್ಟ ಬೆಳೆ, ಮೆಣಸಿನಕಾಯಿ ಹಾಗೂ ಜಾನುವಾರುಗಳ ಸಮೇತ ಪ್ರತಿಭಟನೆ

ಕೋಲಾರ: ಬರದಿಂದ ತತ್ತರಿಸಿರುವ ರೈತರ ಬೆಳೆಗಳನ್ನು ರಕ್ಷಿಸಲು ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ 10 ತಾಸು ಗುಣಮಟ್ಟದ ವಿದ್ಯುತ್ ಪೂರೈಸಬೇಕು. ಬೆಸ್ಕಾಂ…

12 hours ago

ಘಾಟಿ ತೇರಿನಬೀದಿ ಒತ್ತುವರಿ ತೆರವು; ವ್ಯಾಪಾರಸ್ಥರಲ್ಲಿ ಆತಂಕ

ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದ ತೇರಿನಬೀದಿಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅಂಗಡಿ ಮಳಿಗೆಗಳನ್ನು ಒತ್ತುವರಿ…

18 hours ago

ಹೃದಯ ವೈಶಾಲ್ಯತೆ ಮತ್ತು ಶುದ್ಧತೆ…

" ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ " ಸ್ವಾಮಿ ವಿವೇಕಾನಂದ....... ಜೊತೆಗೆ ಹೃದಯ ಅಥವಾ ಮನಸ್ಸು…

19 hours ago

ರೈತರ ಸಾರ್ಥಕ ಜೀವನಕ್ಕೆ ವಿಬಿ- ಜಿ ರಾಮ್ ಜಿ ನಾಂದಿ: ಪಿಡಿಒ ಗೌರಮ್ಮ

ಚಿಕ್ಕನಾಯಕನಹಳ್ಳಿ ಸೆ.07: ರೈತರ ಸಾರ್ಥಕ ಜೀವನಕ್ಕೆ ವಿಬಿ- ಜಿ ರಾಮ್ ಜಿ ನಾಂದಿ ಹಾಗಾಗಿ ಅರ್ಹ ರೈತರು ಸರ್ಕಾರದ ಮಹಾತ್ವಾಕಾಂಕ್ಷಿ…

1 day ago

ಅರ್ಹ ರೈತರು ಸೌಲಭ್ಯಗಳನ್ನು ಪಡೆದುಕೊಳ್ಳಿ : ಪಿಡಿಒ ರಂಜಿತ

ಚಿಕ್ಕನಾಯಕನಹಳ್ಳಿ ಸೆ.08: ಅರ್ಹ ರೈತರು ಸರ್ಕಾರದ ಮಹಾತ್ವಾಕಾಂಶಿ ಯೋಜನೆಯಾದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್…

1 day ago