Categories: ಕೋಲಾರ

ಸುಗಟೂರು ಸೊಸೈಟಿಗೆ 12.31 ಲಕ್ಷ ನಿವ್ವಳ ಲಾಭ:ಸಹಕಾರಿ ಬ್ಯಾಂಕುಗಳಲ್ಲಿಯೇ ಠೇವಣಿಗೆ ಭಾಸ್ಕರ್ ಮನವಿ

ಕೋಲಾರ: ರೈತರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಸಹಕಾರಿ ಸಂಘಗಳು ಸಹಕಾರಿಯಾಗಿದ್ದು ರೈತರು ಹೆಚ್ಚಿನ ಠೇವಣಿ ಇಟ್ಟರೆ ಡಿಸಿಸಿ ಬ್ಯಾಂಕ್ ವತಿಯಿಂದ ಹೆಚ್ಚಿನ ಸಾಲ ನೀಡಲು ಸಾಧ್ಯವಾಗುತ್ತದೆ ಎಂದು ಸುಗಟೂರು ವಿವಿಧ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಅಂಕತಟ್ಟಿ ಎ.ಸಿ ಭಾಸ್ಕರ್ ಮನವಿ ಮಾಡಿದರು.

ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಶನಿವಾರ ನಡೆದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಡಿಸಿಸಿ ಬ್ಯಾಂಕ್‌ ಸಹಕಾರ ಸಂಘಗಳ ಮೂಲಕ ಆರ್ಥಿಕ ನೆರವು ಕಲ್ಪಿಸುತ್ತಿದೆ. ಆದರೆ, ಜನರು ಸೌಲಭ್ಯ ಪಡೆದುಕೊಂಡು ತಮ್ಮ ಉಳಿತಾಯದ ಹಣವನ್ನು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಇಟ್ಟಿದ್ದಾರೆ ಸಹಕಾರಿ ವ್ಯವಸ್ಥೆಯ ಉಳಿವಿಗಾಗಿ ಸಹಕಾರಿ ಬ್ಯಾಂಕ್ ಗಳಲ್ಲಿ ಠೇವಣಿ ಇಡುವಂತೆ ಮನವಿ ಮಾಡಿದರು.

ನಾಲ್ಕು ವರ್ಷಗಳ ಹಿಂದೆ ರೈತರಿಗೆ ಒಂದು ಎಕರೆಗೆ 50 ಸಾವಿರ ಶೂನ್ಯ ಬಡ್ಡಿಯಲ್ಲಿ ನೀಡುತ್ತಿರುವ ಸಾಲ ಇಂದಿನ ಬೆಲೆ ಏರಿಕೆ ಕಾಲದಲ್ಲಿ ಯಾವುದಕ್ಕೂ ಸಾಕಾಗುವುದಿಲ್ಲ ಎಕರೆಗೆ ಶೂನ್ಯ ಬಡ್ಡಿಯಲ್ಲಿ ಒಂದು ಲಕ್ಷ ನೀಡಲಾಗುತ್ತದೆ ಜೊತೆಗೆ ಹೊಸಬರಿಗೆ ಒಂದು ಲಕ್ಷ ನೀಡಲಾಗುತ್ತದೆ ಜೊತೆಗೆ ಡಿಸಿಸಿ ಬ್ಯಾಂಕ್ ವತಿಯಿಂದ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ ಮುಕ್ತವಾಗಿ ಹೊಸ ಷೇರುದಾರರನ್ನು ಸಂಘಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ರೈತರು ಹೆಚ್ಚಿನ ಸದಸ್ಯರು ಆಗುವಂತೆ ಮನವಿ ಮಾಡಿದರು,

ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಮೂಲಕ ವಿವಿಧ ಕಂಪನಿಗಳ ಮೂಲಕ 52 ಲಕ್ಷದಷ್ಟು ಗೊಬ್ಬರ ಮಾರಾಟ ಮಾಡಲಾಗಿದೆ ಕೆಸಿಸಿ ಸಾಲವಾಗಿ 540 ರೈತರಿಗೆ 7 ಕೋಟಿ, ರೇಷ್ಮೆ ಹುಳುಮನೆಗೆ 11 ರೈತರಿಗೆ 79.70 ಲಕ್ಷ ಜೊತೆಗೆ 372 ಸ್ತ್ರೀಶಕ್ತಿ ಸಂಘಗಳಿಗೆ 18.60 ಕೋಟಿ ವ್ಯವಹರಿಸಲಾಗಿದೆ ಇದರಲ್ಲಿ 6.50 ಕೋಟಿ ವಸೂಲಿಯಾಗಿದ್ದು ಉಳಿದ ಹಣವನ್ನು ಪಾವತಿಸಲು ಮನವಿ ಮಾಡಿದರು,

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ರುಕ್ಕಮ್ಮ, ನಿರ್ದೇಶಕರಾದ ವೆಂಕಟರಾಮರೆಡ್ಡಿ, ಅಮರನಾರಾಯಣಸ್ವಾಮಿ, ವೆಂಕಟರಾಮಪ್ಪ, ಎಂ.ಎಸ್.ರಮಣಾರೆಡ್ಡಿ, ಡಿ.ಗೋಪಾಲಪ್ಪ, ವೆಂಕಟಮ್ಮ, ಸವಿತಾ ಎನ್. ಶೆಟ್ಟಿ, ವೃತ್ತಿಪರ ನಿರ್ದೇಶಕ ಎ.ಎಂ.ಹನುಮೇಗೌಡ, ಸೈಯದ್ ಸಿರಾಜ್. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಪುಟ್ಟರಾಜು, ಹಿರಿಯ ಮಾರಾಟ ಗುಮಾಸ್ತರಾದ ಎಸ್.ವಿ.ರವಿಚಂದ್ರ,ಎಸ್. ನಾಗೇಶ್, ಆರ್. ಸುಶ್ಮಿತ, ಮಹೀದ್ದುಲ್ಲಾ ಷರೀಫ್ ಷೇರುದಾರರಾದ ಚಂದ್ರೇಗೌಡ, ಟಿ.ಎಂ.ವೆಂಕಟೇಶ್, ಟಿ.ಎನ್.ರವಿ, ಗೋಪಾಲಗೌಡ, ವಿ.ನಾರಾಯಣರೆಡ್ಡಿ, ನಾಗಪ್ಪ, ರಾಘವೇಂದ್ರ ಮುಂತಾದವರು ಇದ್ದರು

Ramesh Babu

Journalist

Recent Posts

ಶ್ರೀ ಅಭಯ ಚೌಡೇಶ್ವರಿ ದೇವಿಯ ಜ್ಯೋತಿ, ಪಲ್ಲಕ್ಕಿ ಉತ್ಸವ

ದೊಡ್ಡಬಳ್ಳಾಪುರ: ಶ್ರೀ ತೊಗಟವೀರ ಕ್ಷತ್ರಿಯ ಸಮಾಜ ಸೇವಾ ಸಂಘದ ವತಿಯಿಂದ ನಗರದ ಶ್ರೀ ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿರುವ ಶ್ರೀ ಅಭಯ…

8 minutes ago

ಗಂಗಸಂದ್ರದಲ್ಲಿ ಮೇ.6,7ರಂದು ಶ್ರೀ ಅಶ್ವತ್ಥ ಕಟ್ಟೆ ನಾಗ ದೇವರ ಪ್ರತಿಷ್ಠಾಪನಾ ಮಹೋತ್ಸವ

ಶ್ರೀ ರಾಮಾಂಜನೇಯ ಸ್ವಾಮಿ ಸೇವಾ ಸಮಿತಿ ಅಭಿವೃದ್ಧಿ ಟ್ರಸ್ಟ್ ವತಿಯಿಂದ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಗಂಗಸಂದ್ರ ಗ್ರಾಮದಲ್ಲಿ ಮೇ.6,…

4 hours ago

ಬುದ್ದ ಹುಣ್ಣಿಮೆಯಲ್ಲಿ ಜ್ಞಾನವನ್ನು ಹುಡುಕುತ್ತಾ……

ಸಿಗ್ಮಂಡ್ ಫ್ರಾಯ್ಡ್ ಎಂಬುವವನನ್ನು ಪ್ರಖ್ಯಾತ ಮನಶಾಸ್ತ್ರಜ್ಞ ಎಂದು ಕರೆಯಲಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಹಿನ್ನಲೆಯ ಆತನ ವಿಚಾರಗಳು ವಿಶ್ವವ್ಯಾಪಿ ಮನ್ನಣೆ ಪಡೆದಿವೆ.....…

10 hours ago

ರಸ್ತೆಯಲ್ಲಿ ಮ್ಯಾನ್ ಹೋಲ್ ಗೆ ಅಗೆದ ಮಣ್ಣಿನ ರಾಶಿ: ರಾಜಕಾಲುವೆಗೆ ಇಲ್ಲ ತಡೆಗೋಡೆ, ಕಿರಿದಾದ ಮೋರಿ: ವಾಹನ ಸವಾರರ ಪರದಾಟ: ಜೀವ ಭಯದಲ್ಲಿ ಜನ

ದೊಡ್ಡಬಳ್ಳಾಪುರ ನಗರದ ಕೋರ್ಟ್ ಎದುರಿನ ಕಾರ್ಮಲ್ ಜ್ಯೋತಿ ರಸ್ತೆಯಲ್ಲಿ ಕಳೆದ ಒಂದು ತಿಂಗಳ ಹಿಂದೆಯೇ ಒಳಚರಂಡಿಯ ಹೊಸ ಮ್ಯಾನ್ ಹೋಲ್…

20 hours ago

ಜ್ಞಾನದ ಬೆಳಕನ್ನು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ಭಗವಾನ್ ಬುದ್ಧ- ಎಡಿಸಿ ಸೈಯಿದಾ ಆಯಿಷಾ

ಜ್ಞಾನದ ಬೆಳಕನ್ನು ಜಗತ್ತಿಗೇ ಸಾರಿದಂತಹ ಮಹಾನ್ ಪುರುಷ ಭಗವಾನ್ ಬುದ್ಧರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ಸಮಾಜ ನಿರ್ಮಿಸಲು…

1 day ago

ಗಂಟಿಗಾನಹಳ್ಳಿಯಲ್ಲಿ ಮೇ.3ರಂದು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ: ರಂಗೋಲಿ ಸ್ಪರ್ಧೆ, ವಾಲಿಬಾಲ್ ಪಂದ್ಯಾವಳಿ, ಆರ್ಕೆಸ್ಟ್ರಾ ಆಯೋಜನೆ

ಕಾಲೇಜು ಶಿಕ್ಷಣ ಇಲಾಖೆ, ಡಾ|| ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಮಲ್ಲೇಶ್ವರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ…

1 day ago