Categories: ಕೋಲಾರ

ರಿಯಾಲಿಟಿ ಶೋ ಮೂಲಕ ಈ ನೆಲದ ಸಂಸ್ಕೃತಿ ನಾಶವಾಗಿದೆ-ಗೊಲ್ಲಹಳ್ಳಿ ಶಿವಪ್ರಸಾದ್ ವಿಷಾದ

ಕೋಲಾರ: ಸಮಾಜದಲ್ಲಿ ರಿಯಾಲಿಟಿ ಶೋಗಳ ಮೂಲಕ ಜನಮಾನಸದಲ್ಲಿ ವಿಷಕಾರಿಯಾಗಿಬಿಟ್ಟಿದೆ ಜನಪದವು ಈ ನೆಲದ ಸಂಬಂಧಗಳನ್ನು ಬೆಸೆಯುವ ಸಂಸ್ಕೃತವನ್ನು ಹೊಸದಾಗಿ ಕಟ್ಟಿ ಮುಂದಿನ ಯುವ ಪೀಳಿಗೆಗೆ ತೋರಿಸಬೇಕಾದ ಅನಿವಾರ್ಯತೆ ಬಂದಿದೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ವಿಷಾದ ವ್ಯಕ್ತಪಡಿಸಿದರು,

ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ರಾಜ್ಯ ಮಟ್ಟದ ಜನಪರ ಉತ್ಸವದ ಸಮಾರೋಪ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದ ಅವರು ಪೂರ್ವಜರು ಮಾತಿನ ಮೂಲಕವೇ ಮನಸ್ಸಿಗೆ ಹತ್ತಿರವಾದ ಸಂಬಂಧಗಳನ್ನು ಕಟ್ಟಿದ್ದಾರೆ ಇವತ್ತು ನಮ್ಮ ನಡುವಿನ ಪೂರ್ವಜರು ಗೊತ್ತಿಲ್ಲ ಅದೇ ಸಿನಿಮಾ ನಟರು ಮಾತ್ರ ಎಲ್ಲರಿಗೂ ಗೊತ್ತಿದೆ ಮುಂದೊಂದು ದಿನ ನಮಗೆಲ್ಲ ಅಪಾಯಕಾರಿಯಾಗುತ್ತದೆ ಜನಪದ ಮೂಲಕ ಕಲಾವಿದರು ನಾಳೆಗೆ ಬಳ್ಳಿಯ ಮೂಲಕ ಹೊಸ ಭರವಸೆಯನ್ನು ಮೂಡಿಸಿ ಮುಂದಿನ ಪೀಳಿಗೆಗೆ ಕೊಡಬೇಕಾಗಿದೆ ಎಂದರು.

ಇವತ್ತಿನ ಕಲಾವಿದರು ಮಕ್ಕಳಂತೆ ಮುಗ್ಧತೆಯಿಂದ ಇರಬೇಕು‌ ಸಮಾಜವನ್ನು ಕಟ್ಟುವ ಕಡೆಗೆ ಕಲಾವಿದರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎರಡು ದಿನಗಳ ಜಾನಪದ ಸಂಭ್ರಮದಲ್ಲಿ ಸಂಸ್ಕೃತಿಯ ನೈಜತೆಯ ಸಮಾಜವನ್ನು ಕಟ್ಟುವ ಜವಾಬ್ದಾರಿಯು ಇವತ್ತಿನ ಕಲಾವಿದರು ಕೈಯಲ್ಲಿದೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕಾಗಿದೆ ಕಲಾವಿದರು ಹಾಡು, ನಾಟಕ, ಹರಿಕಥೆ ಭಜನೆ ಮೂಲಕ ಸಮಾಜದಲ್ಲಿ ಉತ್ತಮ ಸಂದೇಶಗಳನ್ನು ನೀಡಬೇಕು ಎಂದರು.

ಕಲಾವಿದರು ಶರಣರು ಸಂತರ ಕಾಲದಿಂದಲೂ ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ ದಾರ್ಶನಿಕರ ನೆಲದಲ್ಲಿ ಜನಪದ ಇದೆ ಅದು ಮಾಯಾಲೋಕದಲ್ಲಿ ಸಿಲುಕಿ ಅಪಾಯಗಳನ್ನು ಎದುರಿಸಬೇಕಾಯಿತು ಜನಪದದ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಜನಪರ ಜೀವಪರ ಮನುಷ್ಯ ಪರವಾದ ಹಾಡುಗಳನ್ನು ಕೊಟ್ಟಿದ್ದಾರೆ ಕಲಾವಿದರಲ್ಲಿ ಮಗುವಾಗಿ ಮುಗ್ಧ ಪ್ರೀತಿ ಬರಬೇಕು ಕೇವಲ ಕೆಲವು ಗೂಟಕ್ಕೆ ಸೀಮಿತವಾಗಬಾರದು ಕಲಾವಿದರು ಇಲ್ಲದೇ ಜೀವಪರವಾರವಾಗಿರಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ಕಲಾವಿದರು ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ ಕಲೆ ಎಂಬುದು ನಮ್ಮ ಆಸ್ತಿಯಾಗಿದೆ ಅದನ್ನು ತೋರಿಸುವುದು ನಮ್ಮಂತವರ ಜವಾಬ್ದಾರಿಯಾಗಿದೆ ಜಿಲ್ಲೆಯಲ್ಲಿ ಇರುವ ಕಲಾವಿದರನ್ನು ಮತ್ತು ಕಲೆಯನ್ನು ಉಳಿಸಿ ಅಭಿವೃದ್ಧಿ ಮಾಡಬೇಕು ಕೋಲಾರ ಬಯಲುಸೀಮೆ ಪ್ರದೇಶವಾಗಿದೆ ಇಲ್ಲಿ ಕಲೆಗಳನ್ನು ಮರೆಯಬಾರದು ಮುಂದೆ ಕೆರೆ ಮತ್ತು ರಾಜಕಾಲುವೆ ಮರೆಯುವ ಪರಿಸ್ಥಿತಿ ಬರುತ್ತದೆ ಅಂತಹ ಸಂದರ್ಭ ಬರಬಾರದು ಕಲೆಯ ಉಳಿವಿಗೆ
ರಂಗಮಂದಿರದಲ್ಲಿ ವಾರಕ್ಕೊಮ್ಮೆ ಕಾರ್ಯಕ್ರಮ ಮಾಡಲಿ‌ ಜೊತೆಗೆ ಇದ್ದು ಪೋತ್ಸಾಹಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಎಂ ಮಲ್ಲೇಶ್ ಬಾಬು ಮಾತನಾಡಿ ಕಲೆ ಎಂಬುದು ಎಲ್ಲರಿಗೂ ಬರುವುದಿಲ್ಲ ಕಲಾವಿದರನ್ನು ಪೋತ್ಸಾಹಿಸುವುದು ಕೂಡ ನಮ್ಮ ಜವಾಬ್ದಾರಿಯಾಗಬೇಕು ಜಿಲ್ಲೆಯ ಕಲಾವಿದರನ್ನು ಗುರುತಿಸಿ ಪೋತ್ಸಾಹಿಸಲು ಜಿಲ್ಲಾ ಕೇಂದ್ರದಲ್ಲಿ ಜಾನಪದ ಅಕಾಡೆಮಿಯ ಶಾಖೆಯನ್ನು ಪ್ರಾರಂಭ ಮಾಡುವಂತೆ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದರು ಮೊಬೈಲ್ ಮಾಯಾಲೋಕದಲ್ಲಿ ಕಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮರೆಯಾಗಬಾರದು ಪ್ರತಿ ವರ್ಷ ಇಂತಹ ಆಚರಣೆ ನಡೆಯುವಂತಾಗಬೇಕು ಎಂದರು.

ಮಾಲೂರು ಕ್ಷೇತ್ರದ ಶಾಸಕ ಕೆ‌.ವೈ ನಂಜೇಗೌಡ ಮಾತನಾಡಿ ಜನಪರ ಉತ್ಸವ ಜಿಲ್ಲೆಗೆ ಕೊಟ್ಟ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಲಾಗಿದೆ ಜನಪದ ಕಲೆ ಮರೆಯುವ ಸಂದರ್ಭದಲ್ಲಿ ಸರ್ಕಾರ ಅವಕಾಶ ಕೊಟ್ಟಿದೆ ಇಂತಹ ಕಲೆಗಳು ಹಿಂದಿನ ಕಾಲದಲ್ಲಿ ನೋಡಿದ್ದೇವೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಇತ್ತು ಇವತ್ತಿನ ಮಕ್ಕಳಿಗೆ ವೇದಿಕೆ ಮಾಡಿ ತೋರಿಸಬೇಕಾಗಿದೆ ಜಿಲ್ಲೆಯಲ್ಲಿ ಜನಪದ ಕಲಾವಿದರು ಹೆಚ್ಚು ಇದ್ದು ಜಿಲ್ಲೆಗೆ ಹೆಸರು ತಂದಿದ್ದಾರೆ ಪ್ರತಿ ಹಂತದಲ್ಲಿ ಕಲಾವಿದರಿಗೆ ಸಹಕಾರ ಕೊಡತ್ತೇನೆ ಎಂದರು.

ವೇದಿಕೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ, ಜಿಪಂ ಸಿಇಒ ಡಾ ಪ್ರವೀಣ್ ಬಾಗೇವಾಡಿ, ಎಸ್ಪಿ ಬಿ.ನಿಖಿಲ್, ಜಿಪಂ ಕಾರ್ಯದರ್ಶಿ ಶಿವಕುಮಾರ್, ಎಡಿಸಿ ಮಂಗಳಾ, ಎಸಿ ಡಾ ಮೈತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಛಲವಾದಿ, ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಮುಂತಾದವರು ಇದ್ದರು.

Ramesh Babu

Journalist

Recent Posts

ಈ ಬಾರಿಯ ದಸರಾ ಉದ್ಘಾಟನೆ ಯಾರು ಮಾಡಿದರೆ ಉತ್ತಮ…..

ಇತ್ತೀಚೆಗೆ ಹೊಸದಾಗಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ, ಡಾಕ್ಟರ್ ರಾಮ್ ಮನೋಹರ್ ಲೋಹಿಯಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಳವಳ್ಳಿ ಶಿವಣ್ಣ…

5 hours ago

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಗೂಡ್ಸ್ ವಾಹನ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲದಿಂದ ದೊಡ್ಡಬಳ್ಳಾಪುರದತ್ತ ಬರುತ್ತಿದ್ದ ಗೂಡ್ಸ್ ವಾಹನವು ಅರಳುಮಲ್ಲಿಗೆ ಗ್ರಾಮದ ಬಳಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…

17 hours ago

ಮದ್ಯಪಾನ, ಡ್ರಗ್ಸ್ ದುಶ್ಚಟಗಳಿಗೆ ಬಲಿಯಾಗದೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ- ಸಚಿವ ಕೆ.ಎಚ್ ಮುನಿಯಪ್ಪ

ಮದ್ಯಪಾನ, ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗದೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ…

18 hours ago

ಅನ್ನದಾಸೋಹ ಮಾಡುವ ಮೂಲಕ ಸಂದೀಪ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

ದೊಡ್ಡಬಳ್ಳಾಪುರ : ಉದ್ಯಮಿಗಳು ಮತ್ತು ಸಮಾಜ ಸೇವಕರಾದ ಗಂಟಿಗಾನಹಳ್ಳಿ ಸಂದೀಪ್ ರವರ ಹುಟ್ಟುಹಬ್ಬವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್, ಸಿಹಿ,…

21 hours ago

ರೈಲ್ವೆ ನಿಲ್ದಾಣದ ಬಳಿ ನವಜಾತ ಶಿಶುವಿನ ಮೃತದೇಹ ಪತ್ತೆ; ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ದೊಡ್ಡಬಳ್ಳಾಪುರ: ನಗರದ ರೈಲ್ವೆ ನಿಲ್ದಾಣದ ಸಮೀಪದ ಆಂಜನೇಯ ದೇವಾಲಯದ ಪಕ್ಕದಲ್ಲಿ ಹೂತುಹಾಕಲಾಗಿದ್ದ ನವಜಾತ ಶಿಶುವಿನ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ…

21 hours ago

ರಾಹುಲ್ ಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆ ಖಂಡನೆ: ಶಾಸಕ ಯಶ್ ಪಾಲ್ ಆನಂದ್ ಸುವರ್ಣ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ಯಶ್ಪಾಲ್…

1 day ago