Categories: ಕೋಲಾರ

ರಿಯಾಲಿಟಿ ಶೋ ಮೂಲಕ ಈ ನೆಲದ ಸಂಸ್ಕೃತಿ ನಾಶವಾಗಿದೆ-ಗೊಲ್ಲಹಳ್ಳಿ ಶಿವಪ್ರಸಾದ್ ವಿಷಾದ

ಕೋಲಾರ: ಸಮಾಜದಲ್ಲಿ ರಿಯಾಲಿಟಿ ಶೋಗಳ ಮೂಲಕ ಜನಮಾನಸದಲ್ಲಿ ವಿಷಕಾರಿಯಾಗಿಬಿಟ್ಟಿದೆ ಜನಪದವು ಈ ನೆಲದ ಸಂಬಂಧಗಳನ್ನು ಬೆಸೆಯುವ ಸಂಸ್ಕೃತವನ್ನು ಹೊಸದಾಗಿ ಕಟ್ಟಿ ಮುಂದಿನ ಯುವ ಪೀಳಿಗೆಗೆ ತೋರಿಸಬೇಕಾದ ಅನಿವಾರ್ಯತೆ ಬಂದಿದೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ವಿಷಾದ ವ್ಯಕ್ತಪಡಿಸಿದರು,

ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ರಾಜ್ಯ ಮಟ್ಟದ ಜನಪರ ಉತ್ಸವದ ಸಮಾರೋಪ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದ ಅವರು ಪೂರ್ವಜರು ಮಾತಿನ ಮೂಲಕವೇ ಮನಸ್ಸಿಗೆ ಹತ್ತಿರವಾದ ಸಂಬಂಧಗಳನ್ನು ಕಟ್ಟಿದ್ದಾರೆ ಇವತ್ತು ನಮ್ಮ ನಡುವಿನ ಪೂರ್ವಜರು ಗೊತ್ತಿಲ್ಲ ಅದೇ ಸಿನಿಮಾ ನಟರು ಮಾತ್ರ ಎಲ್ಲರಿಗೂ ಗೊತ್ತಿದೆ ಮುಂದೊಂದು ದಿನ ನಮಗೆಲ್ಲ ಅಪಾಯಕಾರಿಯಾಗುತ್ತದೆ ಜನಪದ ಮೂಲಕ ಕಲಾವಿದರು ನಾಳೆಗೆ ಬಳ್ಳಿಯ ಮೂಲಕ ಹೊಸ ಭರವಸೆಯನ್ನು ಮೂಡಿಸಿ ಮುಂದಿನ ಪೀಳಿಗೆಗೆ ಕೊಡಬೇಕಾಗಿದೆ ಎಂದರು.

ಇವತ್ತಿನ ಕಲಾವಿದರು ಮಕ್ಕಳಂತೆ ಮುಗ್ಧತೆಯಿಂದ ಇರಬೇಕು‌ ಸಮಾಜವನ್ನು ಕಟ್ಟುವ ಕಡೆಗೆ ಕಲಾವಿದರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎರಡು ದಿನಗಳ ಜಾನಪದ ಸಂಭ್ರಮದಲ್ಲಿ ಸಂಸ್ಕೃತಿಯ ನೈಜತೆಯ ಸಮಾಜವನ್ನು ಕಟ್ಟುವ ಜವಾಬ್ದಾರಿಯು ಇವತ್ತಿನ ಕಲಾವಿದರು ಕೈಯಲ್ಲಿದೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕಾಗಿದೆ ಕಲಾವಿದರು ಹಾಡು, ನಾಟಕ, ಹರಿಕಥೆ ಭಜನೆ ಮೂಲಕ ಸಮಾಜದಲ್ಲಿ ಉತ್ತಮ ಸಂದೇಶಗಳನ್ನು ನೀಡಬೇಕು ಎಂದರು.

ಕಲಾವಿದರು ಶರಣರು ಸಂತರ ಕಾಲದಿಂದಲೂ ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ ದಾರ್ಶನಿಕರ ನೆಲದಲ್ಲಿ ಜನಪದ ಇದೆ ಅದು ಮಾಯಾಲೋಕದಲ್ಲಿ ಸಿಲುಕಿ ಅಪಾಯಗಳನ್ನು ಎದುರಿಸಬೇಕಾಯಿತು ಜನಪದದ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಜನಪರ ಜೀವಪರ ಮನುಷ್ಯ ಪರವಾದ ಹಾಡುಗಳನ್ನು ಕೊಟ್ಟಿದ್ದಾರೆ ಕಲಾವಿದರಲ್ಲಿ ಮಗುವಾಗಿ ಮುಗ್ಧ ಪ್ರೀತಿ ಬರಬೇಕು ಕೇವಲ ಕೆಲವು ಗೂಟಕ್ಕೆ ಸೀಮಿತವಾಗಬಾರದು ಕಲಾವಿದರು ಇಲ್ಲದೇ ಜೀವಪರವಾರವಾಗಿರಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ಕಲಾವಿದರು ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ ಕಲೆ ಎಂಬುದು ನಮ್ಮ ಆಸ್ತಿಯಾಗಿದೆ ಅದನ್ನು ತೋರಿಸುವುದು ನಮ್ಮಂತವರ ಜವಾಬ್ದಾರಿಯಾಗಿದೆ ಜಿಲ್ಲೆಯಲ್ಲಿ ಇರುವ ಕಲಾವಿದರನ್ನು ಮತ್ತು ಕಲೆಯನ್ನು ಉಳಿಸಿ ಅಭಿವೃದ್ಧಿ ಮಾಡಬೇಕು ಕೋಲಾರ ಬಯಲುಸೀಮೆ ಪ್ರದೇಶವಾಗಿದೆ ಇಲ್ಲಿ ಕಲೆಗಳನ್ನು ಮರೆಯಬಾರದು ಮುಂದೆ ಕೆರೆ ಮತ್ತು ರಾಜಕಾಲುವೆ ಮರೆಯುವ ಪರಿಸ್ಥಿತಿ ಬರುತ್ತದೆ ಅಂತಹ ಸಂದರ್ಭ ಬರಬಾರದು ಕಲೆಯ ಉಳಿವಿಗೆ
ರಂಗಮಂದಿರದಲ್ಲಿ ವಾರಕ್ಕೊಮ್ಮೆ ಕಾರ್ಯಕ್ರಮ ಮಾಡಲಿ‌ ಜೊತೆಗೆ ಇದ್ದು ಪೋತ್ಸಾಹಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಎಂ ಮಲ್ಲೇಶ್ ಬಾಬು ಮಾತನಾಡಿ ಕಲೆ ಎಂಬುದು ಎಲ್ಲರಿಗೂ ಬರುವುದಿಲ್ಲ ಕಲಾವಿದರನ್ನು ಪೋತ್ಸಾಹಿಸುವುದು ಕೂಡ ನಮ್ಮ ಜವಾಬ್ದಾರಿಯಾಗಬೇಕು ಜಿಲ್ಲೆಯ ಕಲಾವಿದರನ್ನು ಗುರುತಿಸಿ ಪೋತ್ಸಾಹಿಸಲು ಜಿಲ್ಲಾ ಕೇಂದ್ರದಲ್ಲಿ ಜಾನಪದ ಅಕಾಡೆಮಿಯ ಶಾಖೆಯನ್ನು ಪ್ರಾರಂಭ ಮಾಡುವಂತೆ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದರು ಮೊಬೈಲ್ ಮಾಯಾಲೋಕದಲ್ಲಿ ಕಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮರೆಯಾಗಬಾರದು ಪ್ರತಿ ವರ್ಷ ಇಂತಹ ಆಚರಣೆ ನಡೆಯುವಂತಾಗಬೇಕು ಎಂದರು.

ಮಾಲೂರು ಕ್ಷೇತ್ರದ ಶಾಸಕ ಕೆ‌.ವೈ ನಂಜೇಗೌಡ ಮಾತನಾಡಿ ಜನಪರ ಉತ್ಸವ ಜಿಲ್ಲೆಗೆ ಕೊಟ್ಟ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಲಾಗಿದೆ ಜನಪದ ಕಲೆ ಮರೆಯುವ ಸಂದರ್ಭದಲ್ಲಿ ಸರ್ಕಾರ ಅವಕಾಶ ಕೊಟ್ಟಿದೆ ಇಂತಹ ಕಲೆಗಳು ಹಿಂದಿನ ಕಾಲದಲ್ಲಿ ನೋಡಿದ್ದೇವೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಇತ್ತು ಇವತ್ತಿನ ಮಕ್ಕಳಿಗೆ ವೇದಿಕೆ ಮಾಡಿ ತೋರಿಸಬೇಕಾಗಿದೆ ಜಿಲ್ಲೆಯಲ್ಲಿ ಜನಪದ ಕಲಾವಿದರು ಹೆಚ್ಚು ಇದ್ದು ಜಿಲ್ಲೆಗೆ ಹೆಸರು ತಂದಿದ್ದಾರೆ ಪ್ರತಿ ಹಂತದಲ್ಲಿ ಕಲಾವಿದರಿಗೆ ಸಹಕಾರ ಕೊಡತ್ತೇನೆ ಎಂದರು.

ವೇದಿಕೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ, ಜಿಪಂ ಸಿಇಒ ಡಾ ಪ್ರವೀಣ್ ಬಾಗೇವಾಡಿ, ಎಸ್ಪಿ ಬಿ.ನಿಖಿಲ್, ಜಿಪಂ ಕಾರ್ಯದರ್ಶಿ ಶಿವಕುಮಾರ್, ಎಡಿಸಿ ಮಂಗಳಾ, ಎಸಿ ಡಾ ಮೈತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಛಲವಾದಿ, ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಮುಂತಾದವರು ಇದ್ದರು.

Ramesh Babu

Journalist

Recent Posts

ಮಳೆ ಕೈಕೊಟ್ಟಿತು, ರಾಗಿ ಕೈಬಿಟ್ಟಿತು: ಬೆಳೆಗೇ ಟ್ರ್ಯಾಕ್ಟರ್ ಹರಿಸಿದ ರೈತ: ದೊಡ್ಡಬಳ್ಳಾಪುರವನ್ನೂ ಬರಪೀಡಿತ ತಾಲೂಕು ಎಂದು ಘೋಷಿಸಲು ಆಗ್ರಹ: 3.5 ಎಕರೆ ರಾಗಿ ಬೆಳೆ ನಾಶ

ದೊಡ್ಡಬಳ್ಳಾಪುರ: ಮಳೆ ಕೈಕೊಟ್ಟ ಪರಿಣಾಮ ಬಿತ್ತಿದ್ದ ರಾಗಿ ಬೆಳೆ ಒಣಗಿ, ಕೈಗೆ ಬಾರದ ಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ಬೇಸರಗೊಂಡ ರೈತರೊಬ್ಬರು…

3 hours ago

ಚಿಕ್ಕನಹಳ್ಳಿ ಡೇರಿಗೆ 2.07 ಲಕ್ಷ ನಿವ್ವಳ ಲಾಭ: ಹೈನುಗಾರಿಕೆ ರೈತರ ಆರ್ಥಿಕ ಮೂಲ- ಸಿ.ಅಮರೇಶ್

ಕೋಲಾರ: ತಾಲೂಕಿನ ವಕ್ಕಲೇರಿ ಹೋಬಳಿಯ ಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು 2025–26ನೇ ಸಾಲಿನಲ್ಲಿ ₹2.07 ಲಕ್ಷ ನಿವ್ವಳ ಲಾಭ…

8 hours ago

ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಬೆಂಗಳೂರು ಗ್ರಾಮಾಂತರ: ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ…

1 day ago

ಬೆಸ್ಕಾಂ ವಿರುದ್ಧ ರೈತರ ಆಕ್ರೋಶ: 10 ತಾಸು ಗುಣಮಟ್ಟದ ವಿದ್ಯುತ್‌ಗೆ ಆಗ್ರಹ: ನಷ್ಟ ಬೆಳೆ, ಮೆಣಸಿನಕಾಯಿ ಹಾಗೂ ಜಾನುವಾರುಗಳ ಸಮೇತ ಪ್ರತಿಭಟನೆ

ಕೋಲಾರ: ಬರದಿಂದ ತತ್ತರಿಸಿರುವ ರೈತರ ಬೆಳೆಗಳನ್ನು ರಕ್ಷಿಸಲು ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ 10 ತಾಸು ಗುಣಮಟ್ಟದ ವಿದ್ಯುತ್ ಪೂರೈಸಬೇಕು. ಬೆಸ್ಕಾಂ…

1 day ago

ಘಾಟಿ ತೇರಿನಬೀದಿ ಒತ್ತುವರಿ ತೆರವು; ವ್ಯಾಪಾರಸ್ಥರಲ್ಲಿ ಆತಂಕ

ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದ ತೇರಿನಬೀದಿಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅಂಗಡಿ ಮಳಿಗೆಗಳನ್ನು ಒತ್ತುವರಿ…

2 days ago

ಹೃದಯ ವೈಶಾಲ್ಯತೆ ಮತ್ತು ಶುದ್ಧತೆ…

" ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ " ಸ್ವಾಮಿ ವಿವೇಕಾನಂದ....... ಜೊತೆಗೆ ಹೃದಯ ಅಥವಾ ಮನಸ್ಸು…

2 days ago