Categories: ಕೋಲಾರ

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಒತ್ತುವರಿ ಮಾಡಿದ ಅರಣ್ಯ ಭೂಮಿ ವಶಕ್ಕೆ ಪಡೆಯಲು ರೈತ ಸಂಘ ಮನವಿ

ಕೋಲಾರ: ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್‌ರವರ ಜಿಗಲಕುಂಟೆ ಅರಣ್ಯ ಸರ್ವೇ ನಂ.1 ಮತ್ತು 2 ರಲ್ಲಿ 61 ಎಕರೆ ಸರ್ವೇ ಜಮೀನನ್ನು ಒತ್ತುವರಿಯಾಗಿರುವುದನ್ನು ತೆರೆವುಗೊಳಿಸಿ ಕಾನೂನಿನಲ್ಲಿ ಜನಸಾಮಾನ್ಯರಿಗೂ ರಾಜಕಾರಣಿಗಳಿಗೂ ಒಂದೇ ಕಾನೂನು ಎಂಬುದನ್ನು ಸಾಬೀತು ಪಡಿಸಬೇಕೆಂದು ರೈತ ಸಂಘದಿಂದ ವಲಯ ಅರಣ್ಯಾಧಿಕಾರಿ ರವಿಕೀರ್ತಿ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‌ಗೌಡ ಮಾತನಾಡಿ ಅರಣ್ಯ ಭೂಮಿಯನ್ನು ಉಳಿಸಲು ಮುಂದಾಗಿರುವ ಅರಣ್ಯ ಅಧಿಕಾರಿಗಳಿಗೆ ಅರಣ್ಯ ಸಚಿವರು ಹೆಚ್ಚಿನ ಭದ್ರತೆ ನೀಡಿ ಒತ್ತುವರಿ ಕಾರ್ಯಾಚರಣೆ ಮುಂದುವರೆಸಲು ಆದೇಶ ಮಾಡುವ ಜೊತೆಗೆ ತಾಂತ್ರಿಕ ದೋಷದ ನೆಪದಲ್ಲಿ ಸರ್ವೇ ಸ್ಥಗಿತಗೊಳಿಸುವ ಮೂಲಕ ಸಾರ್ವಜನಿಕರ ಬಡ ರೈತರು ಶಾಪ ಹಾಕುವ ಮೊದಲು ಬಲಾಡ್ಯರ ಭೂ ಒತ್ತುವರಿ ತೆರೆವುಗೊಳಿಸಬೇಕೆಂದು ಸಲಹೆ ನೀಡಿದರು.

ಹತ್ತಾರು ವರ್ಷಗಳ ಹಿಂದೆ ರಾಜಕೀಯ ಬಲದಿಂದ ಕಾನೂನು ಬಾಹಿರವಾಗಿ ಒಂದೊಂದು ಕುಟುಂಬಕ್ಕೆ 5 ರಿಂದ 100 ಎಕರೆ ವರೆಗೂ ಅರಣ್ಯ ಭೂಮಿಯನ್ನು ಮಂಜೂರು ಮಾಡುವ ಮುಖಾಂತರ ಕೋಟಿ ಕೋಟಿ ಲಂಚದ ವಹಿವಾಟು ನಡೆಯುವ ಜೊತೆಗೆ ಅರಣ್ಯ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ನೂರಾರು ಕೋಟಿ ಬ್ಯಾಂಕ್ ಸಾಲ ಪಡೆದಿರುವ ಭೂಗಳ್ಳರ ವಿರುದ್ದ ಅರಣ್ಯ ಅಧಿಕಾರಿಗಳ ದೈರ್ಯತೋರಿ ಸಿಂಹಸ್ವಪ್ನವಾಗಿ ಭೂಗಳ್ಳರ ನಿದ್ದೆಗೆಡಿಸುವಂತೆ ಪ್ರಭಾವಿ ರಾಜಕಾರಣಿಗಳ ಒತ್ತುವರಿ ಅರಣ್ಯ ಭೂಮಿಯನ್ನು ತೆರೆವುಗೊಳಿಸಬೇಕೆಂದು ಒತ್ತಾಯಿಸಿದರು.

ತಾಲ್ಲೂಕಾದ್ಯಕ್ಷ ತರ‍್ನಹಳ್ಳಿ ಆಂಜಿನಪ್ಪ ಮಾತನಾಡಿ ಬಡವರ ಬದುಕನ್ನು ಬೀದಿಗೆ ತಳ್ಳಿ 10 ಸಾವಿರ ಕೋಟಿ ಅರಣ್ಯ ಆಸ್ತಿ ಉಳಿಸಿದ್ದೇವೆ ಎಂದು ಹೇಳುವುದು ಸಾಧನೆ ಅಲ್ಲ ನೂರಾರು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಬಲಾಡ್ಯ ಭೂಗಳ್ಳರ ಒತ್ತುವರಿ ತೆರೆವುಗೊಳಿಸಿದಾಗ ಮಾತ್ರ ಅರಣ್ಯಧಿಕಾರಿಗಳ ಸಾಧನೆ ಎಂದು ತೋರಿಸಬಹುದೆಂದು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಒಂದು ಎಕರೆಯಿಂದ 4 ಎಕರೆಯವರೆಗೆ ಕಾನೂನು ಬದ್ದವಾಗಿ ಮಂಜೂರಾಗಿದ್ದರೆ ಅಂತಹವರನ್ನು ರೈತರು ಎಂದು ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ತನಿಖೆ ಮಾಡಿ ನ್ಯಾಯ ಕೊಡಿಸಿಕೊಳ್ಳಲು ನಮ್ಮ ಬೆಂಬಲವಿದೆ. ಆದರೆ ಒಂದೇ ಕುಟುಂಬಕ್ಕೆ 10 ರಿಂದ 80 ಎಕರೆ ಯವರೆಗೆ ಮಂಜೂರಾತಿ ನಕಲಿ ಸಾಗುವಳಿಗಳನ್ನು ಸೃಷ್ಠಿಸಿಕೊಂಡು ಅರಣ್ಯ ಭೂಮಿಗೆ ಬ್ಯಾಂಕ್‌ಗಳಲ್ಲಿ ನೂರಾರು ಕೋಟಿ ಕೋಳಿ ಪಾರಂ ಮತ್ತಿತರ ಸಾಲಗಳನ್ನು ಪಡೆದುಕೊಂಡಿರುವವರು ಸಣ್ಣ ರೈತರೇ ಅಮಾಯಕ ರೈತರ ಹೆಸರಿನಲ್ಲಿ ಅರಣ್ಯ ಭೂಮಿಯನ್ನು ಕಬಳಿಕೆ ಮಾಡಿರುವ ಶ್ರೀಮಂತ ಭೂಗಳ್ಳರಲ್ಲ ಜಮೀನನ್ನು ಕೂಡಲೇ ವಶಕ್ಕೆ ಪಡೆಯದ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಸರ್ವೇ ಮಾಡಿಸಬೇಕು. ಜೊತೆಗೆ ಒತ್ತುವರಿದಾರರಿಗೆ ಸಹಕರಿಸಿರುವ ಕಂದಾಯ, ಸರ್ವೇ, ವಿರುದ್ಧ ಕಾನೂನು ಕ್ರಮಕೈಗೊಂಡು ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ದಾಖಲು ಮಾಡಿ ಮಾಜಿ ಶಾಸಕರು ಪ್ರಭಾವಿ ರಾಜಕಾರಣಿಗಳಾದ ಕೆ.ಆರ್ ರಮೇಶ್ ಕುಮಾರ್‌ರವರ ಜಿಗಲಕುಂಟೆ ಅರಣ್ಯ ಸರ್ವೇ ನಂ.1 ಮತ್ತು 2 ರಲ್ಲಿ 61 ಎಕರೆ ಸರ್ವೇ ಮಾಡಿ ಒತ್ತುವರಿ ತೆರೆವುಗೊಳಿಸಿ ಕಾನೂನಿನಲ್ಲಿ ಜನಸಾಮಾನ್ಯರಿಗೂ ರಾಜಕಾರಣಿಗಳಿಗೂ ಒಂದೇ ಕಾನೂನು ಎಂಬುದನ್ನು ಸಾಭೀತುಪಡಿಸಿ ಅರಣ್ಯ ಜಮೀನನ್ನು ಉಳಿಸಬೇಕು ಇಲ್ಲವೇ ಬಡ ರೈತರ ಭೂಮಿಯನ್ನು ವಾಪಸ್ ನೀಡುವ ಹೋರಾಟಕ್ಕೆ ಚಾಲನೆ ನೀಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ವಲಯ ಅರಣ್ಯಾಧಿಕಾರಿ ರವಿಕೀರ್ತಿ ಅರಣ್ಯ ಭೂಮಿಯನ್ನು ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಶೀಘ್ರದಲ್ಲಿಯೇ ಮಾಜಿ ಶಾಸಕರ ಅರಣ್ಯ ಒತ್ತುವರಿ ತೆರೆವುಗೊಳಿಸುವ ಭರವಸೆಯನ್ನು ನೀಡಿದರು.

ಮನವಿ ನೀಡುವಾಗ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟಿ ಶಿವ, ದ್ಯಾವಂಡಹಳ್ಳಿ ರಾಜೇಂದ್ರ ರೆಡ್ಡಿ, ಸಹದೇವಣ್ಣ, ಶಪಿ, ತಿಮ್ಮಣ್ಣ, ಗೀರೀಶ್ ಮುಂತಾದವರಿದ್ದರು.

Ramesh Babu

Journalist

Recent Posts

ಜನರನ್ನು ತಾಲೂಕು ಕಚೇರಿಗೆ ಅಲೆದಾಟ ತಪ್ಪಿಸಿ ಸ್ಥಳದಲ್ಲೇ ಸಮಸ್ಯೆ ಪರಿಹರಿಸಿ- ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಜಾ ಸೇವಾ…

12 hours ago

ಭಾರತಕ್ಕೆ ಕ್ಸಿ ಜಿನ್‌ಪಿಂಗ್ ಭೇಟಿ: ಮೋದಿ–ಕ್ಸಿ ದ್ವಿಪಕ್ಷೀಯ ಮಾತುಕತೆ ಇಂದು

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ನವದೆಹಲಿಗೆ…

16 hours ago

ಮಧುರೆ ದೇವಾಲಯದ ಬಳಿ ಮೇಲ್ಸೇತುವೆ ಅವ್ಯವಸ್ಥೆ: ಮೇಲಕ್ಕೆ ಚಾಚಿರುವ ಕಂಬಿಗಳಿಂದ ವಾಹನ ಸವಾರರಿಗೆ ತೊಂದರೆ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…

23 hours ago

ನಾಯಿ ಕಡಿತದ ಆತಂಕಕ್ಕೆ ಲಸಿಕೆಯ ಕವಚ: ರೇಬೀಸ್ ನಿಯಂತ್ರಣಕ್ಕೆ 32 ಸಾವಿರ ಲಸಿಕೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…

24 hours ago

2028ರ ಚುನಾವಣೆಗೆ ಜಾಲತಾಣವೇ ಅಸ್ತ್ರ- ಸಿಎಂಆರ್ ಶ್ರೀನಾಥ್

ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…

2 days ago

ಗಣೇಶ ವಿಸರ್ಜನೆ ವೇಳೆ ಮುಂಜಾಗ್ರತೆ ವಹಿಸಲು ರೈತ ಸಂಘ ಒತ್ತಾಯ: ಕೃಷಿ ಹೊಂಡ, ಕೆರೆ-ಕುಂಟೆಗಳಲ್ಲಿ ವಿಸರ್ಜನೆಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿಗೆ ಮನವಿ

ಕೋಲಾರ : ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ, ಅಹಿತಕರ ಘಟನೆಗಳು ಸಂಭವಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳ…

2 days ago