Categories: ಕೊಡಗು

ಬುರ್ಖಾ ಧರಿಸಿ ಮಾರುವೇಶದಲ್ಲಿ ಬಂದು ಸ್ವಂತ ಚಿಕ್ಕಮ್ಮಳ ಚಿನ್ನಾಭರಣವನ್ನು ಕಳುವು: ಕದ್ದ ಚಿನ್ನಾಭರಣ ಮಾರಾಟ ಮಾಡಿ ಮೊಮ್ಮಗಳಿಗೆ ಎರಡು ಚಿನ್ನದ ಓಲೆ ಖರೀದಿ

ಬುರ್ಖಾ ಹಾಕಿಕೊಂಡು ಮಾರುವೇಶದಲ್ಲಿ ಬಂದು ಒಂಟಿಯಾಗಿ ವೃದ್ಧೆ ಮನೆಯಲ್ಲಿದ್ದಾಗ, ಆಕೆಯ ಕುತ್ತಿಗೆಯಿಂದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದ ಖದೀಮ. ಸಿಸಿಟಿವಿ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿ ಜೈಲಿಗೆ ಕಳಿಸಿದ ಘಟನೆ ವಿರಾಜಪೇಟೆಯಲ್ಲಿ ಮೇ 21ರಂದು ನಡೆದಿದ್ದು, ಇದೀಗ ತಡವಾಗಿ ಇದೀಗ ಬೆಳಕಿಗೆ ಬಂದಿದೆ.

ವಿರಾಜಪೇಟೆ -ಅಮ್ಮತ್ತಿ ರಸ್ತೆಯ ಕೊಮ್ಮೆತೋಡು (ಐಮಂಗಲ ಗ್ರಾಮ) ಎಂಬಲ್ಲಿ ಟೀ ಅಂಗಡಿ ಮಾಲೀಕ, ಅಲ್ಲಿಯ ಮಸೀದಿಯ ಆಡಳಿತ ಮಂಡಳಿಯ  ಸದಸ್ಯನಾಗಿದ್ದ ಕೋಳುಮಂಡ ಹ್ಯಾರಿಸ್ ಎಂಬ ವ್ಯಕ್ತಿ ಮೇ.21ರ ಸಂಜೆ ವಿರಾಜಪೇಟೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ತನ್ನ ಸಹೋದರ ಇಬ್ರಾಹಿಂ ರವರ ಮನೆಯಲ್ಲಿರುವ 80 ವರ್ಷದ ವೃದ್ದೆ, ತನ್ನ ತಂದೆಯ ತಂಗಿಯ (ಸೋದರತ್ತೆ) ಮನೆಗೆ ಬುರ್ಖ ಹಾಕಿಕೊಂಡು ಕೊಡೆ ಹಿಡಿದುಕೊಂಡು ಹೆಂಗಿಸಿನ ಚಪ್ಪಲಿ ಧರಿಸಿ ಮಾರುವೇಷದಲ್ಲಿ ಬಂದು ಒಬ್ಬಂಟಿಯಾಗಿದ್ದಾಗ, ಮನೆಗೆ ನುಗ್ಗಿ ಮೂರು ಪವನಿನ ಚಿನ್ನವನ್ನು ಕಸಿದುಕೊಂಡು ಪರಾರಿಯಾಗಿ ನಂತರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮೂಲಕ ನಡೆದುಕೊಂಡು ಬಂದು ಟೆಂಡರ್ ಚಿಕ್ಕನ್ ಮುಂಭಾಗ ತನ್ನ ಕಾರಿನಲ್ಲಿ ಪರಾರಿಯಾಗಿದ್ದ ಹ್ಯಾರಿಸ್ ನನ್ನು ಕೃತ್ಯ ನಡೆದ ಒಂದೆರಡು ದಿನಗಳ ಬಳಿಕ ಪೊಲೀಸರು ಸಿಸಿಟಿವಿ ಮೂಲಕ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಘಟನೆ ನಡೆದಿದೆ.

ಆರೋಪಿ ಹ್ಯಾರಿಸ್ ಚಿನ್ನವನ್ನು ಇರಿಟಿಯ ಚಿನ್ನಾಭರಣ ಮಳಿಗೆಗೆ ಮಾರಿದ ಹಣದಲ್ಲಿ ತನ್ನ ಮೊಮ್ಮಗಳಿಗೆ ಎರಡು ಚಿನ್ನದ ಓಲೆಯನ್ನು ಖರೀದಿಸಿದ್ದನ್ನು ತನಿಖೆ ವೇಳೆ ಬಹಿರಂಗಗೊಳಿಸಿದ್ದಾನೆ. ಆರೋಪಿಯು ಕೃತ್ಯವೆಸಗಿ ಸೋದರತ್ತೆಯ ಚಿನ್ನಾಭರಣವನ್ನು ತನ್ನ ಕೈವಶಗೊಳಿಸಿದ ನಂತರ ಅದೇ ದಿನ ಸಂಜೆ ಬಿಟ್ಟಂಗಾಲ- ಹಾತೂರು- ಬೈಗೋಡು ರಸ್ತೆ  ಮೂಲಕವಾಗಿ ತನ್ನ ಕಾರಿನಲ್ಲಿ  ಕೊಮ್ಮೆತೋಡುವಿನ ತನ್ನ ಮನೆಗೆ ಸೇರಿಕೊಂಡಿದ್ದನ್ನು, ಈ ದಾರಿ ಮಧ್ಯೆ ಬುರ್ಖವನ್ನು ಮತ್ತು ಚಪ್ಪಲಿಯನ್ನು ಕೂಡ ಎಸೆದಿದ್ದಾನೆ ಎಂಬುದನ್ನು ತನಿಖೆಯ ವೇಳೆ  ಬಾಯಿಬಿಟ್ಟಿದ್ದಾನೆ.

ಹಣಕ್ಕಾಗಿ ಇದೀಗ ಸ್ವಂತ ಸಂಬಂಧಿಕರು ಕೂಡ ಕಳ್ಳತನದ ದಾರಿ ಹಿಡಿಯುತ್ತಿದ್ದಾರೆ. ವಿರಾಜಪೇಟೆ  ಭಾಗದಲ್ಲಿ ಗಂಡಸು ಬುರ್ಖಾ ಧರಿಸಿ ಸಿನಿಮಯ ರೀತಿಯಾಗಿ  ಕಳವು ನಡಿಸಿರುವುದು ಇದು ಪ್ರಥಮ ಎನ್ನಲಾಗಿದೆ.

Ramesh Babu

Journalist

Recent Posts

ಇಬ್ಬರು ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಾಲೇಜಲ್ಲಿ ಶೋಕಿ ಮಾಡೋ ಖಯಾಲಿ: ಆದ್ರೆ ಜೇಬಲ್ಲಿ ಕಾಂಚಾಣ ಇಲ್ಲ: ಕಾಸಿಗಾಗಿ ಏನು ಮಾಡಿದ್ರು ಗೊತ್ತಾ……

ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…

5 hours ago

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹೀಲಿನ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ

ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…

6 hours ago

ದೇಶದ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ರಾಯಚೂರಿನ ಕವಿತಾಳ ಪೊಲೀಸ್ ಠಾಣೆ ಆಯ್ಕೆ

ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…

11 hours ago

ನಾಯಿ, ಹಾವು/ ಇತರೆ ಪ್ರಾಣಿಗಳ ದಾಳಿ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳು

ನಮ್ಮ‌ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…

13 hours ago

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು….ಮನಸ್ಸಿನ ದಾರಿಯಲ್ಲಿ ಅನಂತ ಪಯಣ….

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…

15 hours ago

ನಿರ್ಜನ ಪ್ರದೇಶದಲ್ಲಿ ದೊರೆತಿದ್ದ ನವಜಾತ ಶಿಶುವಿನ ಆರೋಗ್ಯ ಸ್ಥಿರ: ಜಿಲ್ಲಾ ಸರ್ಕಾರಿ ದತ್ತು ಕೇಂದ್ರಕ್ಕೆ ಹಸ್ತಾಂತರ

ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…

17 hours ago