ಬೈಕ್ ನಲ್ಲಿ ಪತ್ನಿಯೊಂದಿಗೆ ಸಂಬಂಧಿಕರ ಮನೆಯ ಸಾವಿಗೆ ತೆರಳುತ್ತಿದ್ದ ಬೈಕ್ ಸವಾರನೊಬ್ಬ ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಪೋಲೀಸರನ್ನು ಕಂಡು ಹೌಹಾರಿ ಬೈಕ್ ತಿರುಗಿಸಿದ ಕಾರಣ ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿಯಾದ ಪಿಕಪ್ ವಾಹನ.
ತರುವಾಯ, ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿ, ಬೈಕ್ ಹಿಂಬದಿಯಲ್ಲಿದ್ದ ಪತ್ನಿಯ ಕಾಲುಗಳು ಮುರಿದ ಪ್ರಸಂಗ ಕೂಡುಮಂಗಳೂರು ಹೆದ್ದಾರಿಯಲ್ಲಿ ನಡೆದಿದೆ.
ಕೂಡುಮಂಗಳೂರು ಗ್ರಾಮಾಂತರ ಠಾಣೆಯ ಸಮೀಪ ಮರೂರು ಗ್ರಾಮದ ಕೃಷಿಕ ದಂಪತಿಯ ಬೈಕ್ ಗೆ ವಾಹನ ಡಿಕ್ಕಿಯಾಗಿ ಅಮಾಯಕ ಸವಾರ ಬಲಿಯಾಗಿದ್ದು..ಸವಾರನ ಪತ್ನಿಯ ಕಾಲುಗಳು ಮುರಿದಿದೆ.
ಕೃಷಿ ಕೂಲಿ ಕಾರ್ಮಿಕರಾದ ಈ ಬೈಕ್ ಸವಾರ ದಂಪತಿ ನಿತ್ಯವೂ ಕೂಲಿ ಮಾಡಿಯೇ ಜೀವನ ನಡೆಸುತ್ತಿದ್ದರು. ಇವರಿಗೆ ಚಿಕ್ಕ ವಯಸ್ಸಿನ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿವೆ.
ಮರೂರು ಗ್ರಾಮದ ತಮ್ಮ ನೆರೆಮನೆಯವರ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಈ ದಂಪತಿ ಪಿರಿಯಾಪಟ್ಟಣದಲ್ಲಿ ಮೃತಪಟ್ಟ ತಮ್ಮ ಸಂಬಂಧಿಕರ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ.
ಮರೂರು ಗ್ರಾಮದ ತಮ್ಮ ಮನೆಯಿಂದ ಹೊರಟ ಈ ದಂಪತಿಗಳು ಸಂಬಂಧಿಕರ ಸಾವಿನ ಮನೆಗೆ ಹೋಗಿ ಮಾತನಾಡಿಸಿ ಬರುವ ಯೋಜನೆಯಲ್ಲಿ ಹೊರಟಿದ್ದರು. ಪುಣ್ಯಕ್ಕೆ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಬಂದಿದ್ದಕ್ಕೆ ಮಕ್ಕಳ ಜೀವ ಉಳಿಯಿತು.
ಮೃತರ ಪತ್ನಿಗೆ ಸೈರಸ್ ಆಸ್ಪತ್ರೆಯಲ್ಲಿ ಮುರಿದ ಕಾಲುಗಳ ಶಸ್ತ್ರಚಿಕಿತ್ಸೆ ನಡೆದಿತ್ತು. ಅದೂವರೆಗೂ ಗಂಡನ ಸಾವಿನ ಸುದ್ದಿ ಹೇಳದೇ ಗೌಪ್ಯವಾಗಿಡಲಾಗಿತ್ತು. ಆದರೆ, ಉಭಯಸಂಕಟದಿಂದ ಆಪರೇಷನ್ ಆಗಿ ಐಸಿಯು ಒಳಗೆ ನರಳಾಡುತ್ತಿರುವ ಪತ್ನಿಗೆ ಗಂಡನ ಸಾವಿನ ಸುದ್ದಿ ಯನ್ನು ಅವರ ಕುಟುಂಬದವರು ಹೇಳದೆಯೇ, ಮುಖವನ್ನು ತೋರಿಸದೆಯೇ ಮಣ್ಣು ಮಾಡುವುದು ಬೇಡ ಎಂದು ನಿರ್ಧರಿಸಿ ಆಸ್ಪತ್ರೆಗೆ ತೆರಳಿ ವೈದ್ಯರ ಅಪ್ಪಣೆ ಪಡೆದು ಮೃತ ಗಂಡನ ಪಾರ್ಥಿವ ವನ್ನು ಆಸ್ಪತ್ರೆಗೆ ಒಯ್ದು ಶವವಿದ್ದ ಸ್ಟ್ರಚರ್ ಬಳಿ ಪತ್ನಿಯ ಸ್ಟ್ರಚರ್ ಎಳೆತಂದು ಸಾವನ್ನಪ್ಪಿದ ಪತಿಯ ಕೊರಳಿಗೆ ಹೂವಿನ ಹಾರ ಹಾಕಿದ ದೃಶ್ಯ ಮಿಡಿಯುವಂತಿತ್ತು.
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘ (ಎಂ.ಪಿ.ಆರ್.ಎ.ಸಿ.ಎಸ್.)ದ 2026–2031ನೇ ಅವಧಿಯ ಆಡಳಿತ ಮಂಡಳಿ…
ದೊಡ್ಡಬಳ್ಳಾಪುರ: ಆಷಾಢ ಮಾಸದಲ್ಲಿ ಗಾಳಿಪಟ ಹಾರಿಸುವುದು ನಮ್ಮ ಭಾಗದ ಸಾಂಪ್ರದಾಯಿಕ ಆಚರಣೆಯಾಗಿದ್ದು, ಗಾಳಿಪಟವು ಒಂದು ಕಲೆಯಷ್ಟೇ ಅಲ್ಲ ಸಾಹಸದ ಪ್ರವೃತ್ತಿಯೂ…
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕರ್ನಾಟಕ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ ಭಾನುವಾರ ಯಾವುದೇ ಅಡಚಣೆ ಅಥವಾ…
ಇತ್ತೀಚೆಗೆ ಹೊಸದಾಗಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ, ಡಾಕ್ಟರ್ ರಾಮ್ ಮನೋಹರ್ ಲೋಹಿಯಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಳವಳ್ಳಿ ಶಿವಣ್ಣ…
ದೊಡ್ಡಬಳ್ಳಾಪುರ: ನೆಲಮಂಗಲದಿಂದ ದೊಡ್ಡಬಳ್ಳಾಪುರದತ್ತ ಬರುತ್ತಿದ್ದ ಗೂಡ್ಸ್ ವಾಹನವು ಅರಳುಮಲ್ಲಿಗೆ ಗ್ರಾಮದ ಬಳಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…
ಮದ್ಯಪಾನ, ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗದೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ…