Categories: ಲೇಖನ

ಪ್ರೀತಿ ಎಂಬ ಭಾವ ಹುಡುಕುತ್ತಾ, ಪ್ರೀತಿಯ ಮಾಯೆಯೊಳಗೆ……!

ಪ್ರೀತಿ ಪ್ರೀತಿಯಾಗಿಯೇ ಇದ್ದಾಗ ಅದೇ ನಿಜವಾದ ಭಾವ ಮತ್ತು ಮೌಲ್ಯ,

ಪ್ರೀತಿ ಪ್ರೀತಿಯಂತೆ ಆದಾಗ ಅದೇ ವ್ಯಾಪಾರೀಕರಣ,
ಪ್ರೀತಿ ತೋರ್ಪಡಿಕೆಯಾದಾಗ ಅಥವಾ ಪ್ರದರ್ಶನವಾದಾಗ ಅದೇ ಆತ್ಮವಂಚನೆ ( Hypocrisy ).
ಪ್ರೀತಿ ಕೃತಕವಾದಾಗ ಅದೇ ಮೌಲ್ಯಗಳ ಅಧಃಪತನ……

ಇದು ಸ್ನೇಹ – ವಿಶ್ವಾಸ – ಭಕ್ತಿ – ಶ್ರಮ – ಶ್ರದ್ಧೆ – ಕರುಣೆ – ಕ್ಷಮೆ -ತ್ಯಾಗ – ಪ್ರಾಮಾಣಿಕತೆಗಳಿಗಷ್ಟೇ ಅಲ್ಲ, ಮನುಷ್ಯ ಸಂಬಂಧಗಳಿಗೂ ಅನ್ವಯಿಸುತ್ತದೆ.

ತಾಯಿ- ತಂದೆ, ಅಣ್ಣ-ತಮ್ಮ, ಅಜ್ಜ- ಅಜ್ಜಿ, ತಮ್ಮ- ತಂಗಿ, ಮಗ -ಮಗಳು ಸೊಸೆ ಅಳಿಯ ಹೀಗೆ ಎಲ್ಲರನ್ನೂ ಒಳಗೊಂಡಿರುತ್ತದೆ…..

ಈ ಶಿಥಿಲತೆಯನ್ನೇ ನಾವು ಮೌಲ್ಯಗಳ ಕುಸಿತ ಎಂದು ಬೊಬ್ಬೆ ಹೊಡೆಯುತ್ತಿರುವುದು. ಆಧುನಿಕತೆ ಅಥವಾ ನಗರೀಕರಣ ಅಥವಾ ತಾಂತ್ರಿಕ ಬೆಳವಣಿಗೆ ಇದರ ಹಿಂದಿನ ಮರ್ಮ ಎಂದು ಊಹಿಸಲಾಗುತ್ತದೆ.
ಕಣ್ಣಿಗೆ ಕಾಣುವಷ್ಟು, ಮನಸ್ಸಿಗೆ ನಾಟುವಷ್ಟು, ನೇರವಾಗಿಯೇ ಇದು ಗೋಚರಿಸುತ್ತಿದೆ. ಬಹುತೇಕರ ಮಾತಿನಲ್ಲಿ ಇದು ಆಗಾಗ ಸುಳಿಯುತ್ತಿರುತ್ತದೆ. ಕಾಲ ಬದಲಾಗಿದೆ ಅಥವಾ ಕಾಲ ಕೆಟ್ಟಿದೆ ಎಂದು ಸಾಂಕೇತಿಕವಾಗಿ ಕಾಲದ ಮಹಿಮೆಯನ್ನು ಉದಾಹರಿಸುತ್ತಾರೆ……

ಹಣ ಅಧಿಕಾರ ಅಂತಸ್ತು ಜನಪ್ರಿಯತೆ ದುರಾಸೆ ಇದಕ್ಕೆ ಬಹುಮುಖ್ಯ ಕಾರಣ ಎಂದು ಗುರುತಿಸಲಾಗುತ್ತದೆ. ಜಾಗೃತ ಮನಸ್ಥಿತಿಯವರ ಗೊಂದಲವೆಂದರೆ ಈ ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕೆ ಅಥವಾ ಇದರ ವಿರುದ್ಧ ಹೋಗಬೇಕೆ ? …..

ಹೊಂದಾಣಿಕೆ ಮಾಡಿಕೊಂಡರೆ ಆತ್ಮ ವಂಚನೆ ಮಾಡಿಕೊಂಡಂತಾಗುತ್ತದೆ. ವಿರುದ್ಧ ಹೋದರೆ ಅರೆ ಹುಚ್ಚರಾಗುತ್ತೇವೆ. ಕನಿಷ್ಠ ನಿರ್ಲಕ್ಷತೆ ಅಥವಾ ನಿರ್ಲಿಪ್ತತೆ ತಾಳಲು ಇಂದಿನ ವಾಸ್ತವ ಬದುಕು ಬಿಡುವುದಿಲ್ಲ. ಎರಡರಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಮೊದಲೇ ಹೇಳಿದಂತೆ ನಿಮ್ಮ ಮನಸ್ಥಿತಿ ಜಾಗೃತವಾಗಿದೆ.

ಆದ್ದರಿಂದ……..

ಪ್ರೀತಿಯ ಅಂಗಡಿಗೆ ನಿಮಗೆ ಸ್ವಾಗತ………

ಪ್ರೀತಿ ಬೇಕೆ ಪ್ರೀತಿ ಗೆಳತಿಯರೇ,
ಪ್ರೀತಿ ಬೇಕೆ ಪ್ರೀತಿ ಗೆಳೆಯರೇ,

ಬನ್ನಿ ನನ್ನೊಂದಿಗೆ ನನ್ನ ಮನದಂಗಳಕ್ಕೆ,
ಯಾವ ಪ್ರೀತಿ ಬೇಕು – ಎಷ್ಟು ಪ್ರೀತಿ ಬೇಕು,
ತೆಗೆದುಕೊಳ್ಳಿ – ಮೊಗೆದುಕೊಳ್ಳಿ ನಿಮ್ಮ ಭಾವನೆಗಳಿಗನುಗುಣವಾಗಿ,….

ಬೊಗಸೆ ಕಂಗಳಲ್ಲಿ –
ವಿಶಾಲ ಹೃದಯದಲ್ಲಿ –
ತುಂಬು ಮನಸ್ಸಿನಲ್ಲಿ,….

ಹುಚ್ಚುಹಿಡಿಸಲಷ್ಟು ಪ್ರೀತಿ –
ಹುಚ್ಚು ಬಿಡಿಸಲಷ್ಟು ಪ್ರೀತಿ,
ಹಣದ ಆಕರ್ಷಣೆಗೊಂದಷ್ಟು ಪ್ರೀತಿ – ದೇಹದ ಆಕರ್ಷಣೆಗೊಂದಷ್ಟು ಪ್ರೀತಿ,
ಸುಂದರ ಯುವಕನಿಗೊಂದಷ್ಟು ಪ್ರೀತಿ,
ಕುರೂಪಿಯೊಬ್ಬಳಿಗೊಂದಷ್ಟು ಪ್ರೀತಿ,
ಶ್ರೀಮಂತರ ಮನೆಯ ರಾಜಕುಮಾರಿಗೊಂದಷ್ಟು ಪ್ರೀತಿ,
ರೈಲು ನಿಲ್ದಾಣದ ಕೂಲಿಯವನಿಗೊಂದಷ್ಟು ಪ್ರೀತಿ,
ವಿಧುರನಿಗೊಂದಷ್ಟು ಪ್ರೀತಿ – ವಿಚ್ಛೇದಿತೆಗೊಂದಷ್ಟು ಪ್ರೀತಿ,
ಮುದುಕನಿಗೊಂದಷ್ಟು ಪ್ರೀತಿ –
ಎಳೆ ಹುಡುಗಿಗೊಂದಷ್ಟು ಪ್ರೀತಿ,…

ಹೃದಯಕ್ಕೆ ಚೂರಿ ಹಾಕುವವಳಿಗೊಂದಷ್ಟು ಪ್ರೀತಿ,
ಬದುಕಿಗೆ ಕೊಳ್ಳಿ ಇಡುವವನೊಬ್ಬನಿಗೊಂದಷ್ಟು ಪ್ರೀತಿ,
ಆಡಂಬರವಾಗಿ ನುಲಿಯುವವಳಿಗೊಂದಷ್ಟು ಪ್ರೀತಿ,
ಹೃದಯಕ್ಕೇ ಕಿಚ್ಚುಹಚ್ಚುವ ತ್ಯಾಗಜೀವಿಗೊಂದಷ್ಟು ಪ್ರೀತಿ,
ಕ್ಯಾನ್ಸರ್ ರೋಗಿಯೊಬ್ಬಳಿಗೊಂದಷ್ಟು ಪ್ರೀತಿ,
ಜೈಲಿನ ಖೈದಿಯೊಬ್ಬನಿಗೊಂದಷ್ಟು ಪ್ರೀತಿ,
ದೂರದ ಸೈನಿಕನ ಹೃದಯಕ್ಕೊಂದಷ್ಟು ಪ್ರೀತಿ,
ಪಕ್ಕದ ಮನೆಯ ಕಿಟಕಿಯ ಚೆಲುವೆಗೊಂದಷ್ಟು ಪ್ರೀತಿ,…..

ಮೋಸ ಮಾಡಿದವನಿಗೊಂದಷ್ಟು ಪ್ರೀತಿ,
ಮೋಸ ಹೋದವಳಿಗೊಂದಷ್ಟು ಪ್ರೀತಿ,
ಅಂಗವಿಕಲೆಗೊಂದಷ್ಟು ಪ್ರೀತಿ – ಮನೋರೋಗಿಗೊಂದಷ್ಟು ಪ್ರೀತಿ,
ಜಾತಿ ಬಿಟ್ಟವಳಿಗೊಂದಷ್ಟು ಪ್ರೀತಿ, ಧರ್ಮಭ್ರಷ್ಟನಿಗೊಂದಷ್ಟು ಪ್ರೀತಿ,
ಗಂಡ ಬಿಟ್ಟವಳಿಗೊಂದಷ್ಟು ಪ್ರೀತಿ – ಹೆಂಡತಿಕೊಂದವನಿಗೊಂದಷ್ಟು ಪ್ರೀತಿ,……

ದೂರ ಪ್ರಯಾಣಕ್ಕೊಂದಷ್ಟು ಪ್ರೀತಿ – ಫೇಸ್ ಬುಕ್ ಸ್ನೇಹಕ್ಕೊಂದಷ್ಟು ಪ್ರೀತಿ,
ಕಾಮುಕನಿಗೊಂದಷ್ಟು ಪ್ರೀತಿ – ನಪುಂಸಕನಿಗೊಂದಷ್ಟು ಪ್ರೀತಿ,…..

ಬನ್ನಿ ಗೆಳೆಯ – ಗೆಳತಿಯರೇ ನನ್ನ ಮನದಂಗಳಕ್ಕೆ,
ನಾನೊಬ್ಬ ಪ್ರೀತಿಯ ವ್ಯಾಪಾರಿ,

ಪ್ರೀತಿಯ ವ್ಯಾಪಾರದಲ್ಲಿ ಭರ್ಜರಿ ಲಾಭ ಗಳಿಸುತ್ತಲೇ ಇದ್ದೇನೆ,
ವರ್ಷದಿಂದ ವರ್ಷಕ್ಕೆ ವ್ಯಾಪಾರ ವೃದ್ಧಿಸುತ್ತಲೇ ಇದೆ,…..

ಪ್ರೀತಿಯನ್ನು ಕೊಳ್ಳುವವರಿಲ್ಲದೆ ವ್ಯಾಪಾರ ನಾಶವಾಗಿ,
ಪ್ರೇಮಿಗಳ ಹೃದಯದಲ್ಲಿ ನಿಜ ಪ್ರೀತಿ
ಶಾಶ್ವತವಾಗಿ ನೆಲೆಗೊಳ್ಳುವವರೆಗೂ ……..
ವ್ಯಾಪಾರ ಮಾಡುತ್ತಲೇ ಇರುತ್ತೇನೆ…,,,,,,,,,,,

ಆದರೆ,
ಮನದಾಳದಿಂದ ಹೇಳುತ್ತೇನೆ…….

ಪ್ರೀತಿ ವ್ಯಾಪಾರವಲ್ಲ, ಅದು ಜೀವಸೆಲೆ. ಅದು ಭ್ರಮೆಯನ್ನು ಕಳಚಿ ವಾಸ್ತವವಾಗಿ ಅಮರವಾಗುವವರೆಗೂ ವ್ಯಾಪಾರ ಮಾಡುತ್ತಲೇ ಇರುತ್ತೇನೆ………

ಪ್ರೀತಿ ಪ್ರೀತಿಯಾಗಿಯೇ ನಿಮಗೆ ದೊರೆತಾಗ ನನ್ನ ವ್ಯಾಪಾರ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ.
ಅಲ್ಲಿಯವರೆಗೂ ನಾನೊಬ್ಬ ಪ್ರೀತಿಯ ವ್ಯಾಪಾರಿ…..

ಬನ್ನಿ ಗೆಳೆಯ ಗೆಳತಿಯರೆ….
ನಿಮಗಿಷ್ಟದ ಪ್ರೀತಿ ಕೊಳ್ಳಲು ನನ್ನ ಮನಸ್ಸಿನ ಅಂಗಳಕ್ಕೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಬೆಳೆ ವಿಮೆ ಮಾಡಿಸಲು ಆ.14 ಕೊನೆಯ ದಿನ: ರೈತರು ತಪ್ಪದೇ ಬೆಳೆ ವಿಮೆ ಮಾಡಿಸಿ- ಸಚಿವ ಕೆ.ಎಚ್ ಮುನಿಯಪ್ಪ

ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇಕಡ 33 ರಷ್ಟು ಮಳೆ ಕೊರತೆಯಾಗಿದ್ದು ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ…

6 hours ago

ಬರದ ನಡುವೆಯೂ ರಾಗಿ ರೈತರಿಗೆ ಆಸರೆ: ಫಸಲ್ ಬಿಮಾ ಪ್ರೀಮಿಯಂ ಭರಿಸುವುದಾಗಿ ಶಾಸಕ ಧೀರಜ್ ಮುನಿರಾಜ್ ಘೋಷಣೆ

ದೊಡ್ಡಬಳ್ಳಾಪುರ: ಸಮರ್ಪಕ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ಎದುರಿಸುತ್ತಿರುವ ದೊಡ್ಡಬಳ್ಳಾಪುರ ಕ್ಷೇತ್ರದ ರೈತರಿಗೆ ನೆರವಾಗುವ ಉದ್ದೇಶದಿಂದ, ಕ್ಷೇತ್ರದ ಪ್ರಮುಖ ಬೆಳೆಯಾದ…

9 hours ago

ಕೋಳಿ ವಿಚಾರದ ಜಗಳಕ್ಕೆ ಹೊಸ ಟ್ವಿಸ್ಟ್: ಎರಡೂ ಕಡೆಯಿಂದ ಹಲ್ಲೆ ಆರೋಪ, ಆಸ್ಪತ್ರೆಯಲ್ಲೂ ಗಲಾಟೆ

ಗೌರಿಬಿದನೂರು: ಕೋಳಿ ವಿಚಾರವಾಗಿ ಆರಂಭವಾದ ನೆರೆಹೊರೆಯವರ ನಡುವಿನ ಜಗಳ ಗಂಭೀರ ಸ್ವರೂಪ ಪಡೆದು, ಸಾರ್ವಜನಿಕ ಆಸ್ಪತ್ರೆಯೊಳಗೂ ಗಲಾಟೆ ನಡೆದ ಘಟನೆ…

10 hours ago

” ಕ್ಷಮೆ” ಎಂಬ ಭಾವದ ಸುತ್ತ……

ಕನ್ನಡದ ಖ್ಯಾತ, ಪ್ರತಿಭಾವಂತ ಚಲನಚಿತ್ರ ನಟ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಅನಂತನಾಗ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ದೆಹಲಿಯ…

18 hours ago

ವೃದ್ಧ ದಂಪತಿ ಆತ್ನಹತ್ಯೆಗೆ ಯತ್ನ: ಪತಿ ಶಿವಪ್ಪ ಸಾವು

ಬೆಂಗಳೂರಿನ ಹೆಬ್ಬಾಳ ಬಳಿಯ ಕೆಂಪಾಪುರ ಗ್ರಾಮದ ವೃದ್ಧ ದಂಪತಿ ಆತ್ಮಹತ್ಯೆಗೆ ಯತ್ನಿಸಿ ಪತಿ ಶಿವಪ್ಪ(76) ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ…

1 day ago

ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಅಂಗಡಿಯಲ್ಲಿ ದರೋಡೆ ಯತ್ನ

ನೆಲಮಂಗಲ: ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿ ಚಿನ್ನಾಭರಣ ದರೋಡೆಗೆ…

1 day ago