Categories: ಪರಿಸರ

ಹೊಸ ಪ್ರಭೇದದ ನೀಲಿ ಬಣ್ಣದ ಇರುವೆ ಪತ್ತೆ: ಇದರ ವೈಶಿಷ್ಟತೆ ಏನು..? ಎಲ್ಲಿ ಕಾಣಸಿಗುತ್ತದೆ…? ಇಲ್ಲಿದೆ ಮಾಹಿತಿ ಓದಿ….

ಪೂರ್ವ ಭಾರತದ ಅರಣಾಚಲಪ್ರದೇಶ ರಾಜ್ಯದ ಯಿಂಗ್ಕು (Yingku) ಗ್ರಾಮದ ಅರಣ್ಯ ಪ್ರದೇಶದಲ್ಲಿ ಪರಾಪರಾಟ್ರೆಚಿನಾನೀಲಾ (Paraparatrechinaneela) ಎಂಬ ಅಪರೂಪದ ಜಾತಿಗೆ ಸೇರಿದ ನೀಲಿ ಬಣ್ಣದ ಇರುವೆ ಪತ್ತೆಯಾಗಿದೆ.

ಇತ್ತೀಚೆಗೆ ಬೆಂಗಳೂರಿನ ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ಎನ್ವಿರಾನ್ಮೆಂಟ್(ATREE) ಸಂಸ್ಥೆಯ ಕೀಟ ಶಾಸ್ತ್ರಜ್ಞರಾದ ಡಾ.ಪ್ರಿಯದರ್ಶನನ್ ಧರ್ಮರಾಜನ್ ಮತ್ತು ಆರ್.ಸಹನಶ್ರೀ, ಫ್ಲೋರಿಡಾ ವಿಶ್ವವಿದ್ಯಾಲಯದ ಅಶ್ವಜ್ ಪುನ್ನತ್ ಜೊತೆಗೂಡಿ ಈ ಇರುವೆಯ ವೈಜ್ಞಾನಿಕ ವಿವರಣೆಯನ್ನು ಜೋಕಿಯಾ (ZooKeys) ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ದೊಡ್ಡಬಳ್ಳಾಪುರದ ಕೀಟಶಾಸ್ತ್ರಜ್ಞರಾದ ಆರ್.ಸಹನಶ್ರೀ ‘ಅರುಣಾಚಲ ಪ್ರದೇಶದ ಯಿಂಗ್ಕು ಗ್ರಾಮದ ಸುಮಾರು 10 ಅಡಿ ಎತ್ತರದ ಮರವನ್ನು ಅನ್ವೇಷಿಸುವಾಗ, ಎರಡು ಇರುವೆಗಳನ್ನು ಗುರುತಿಸಲಾಗಿತ್ತು. ಇವು ಹೊಸ ಇರುವೆಗಳು ಎಂದು  ಸಂಶೋಧನೆಯಲ್ಲಿ ಕಂಡುಕೊಳ್ಳಲಾಯಿತು’ ಎಂದರು.

ಈ ಇರುವೆಯ ಗುಣಲಕ್ಷಣ

ಪರಾಪರಾಟ್ರೆಚಿನಾನೀಲಾ ಒಂದು ಸಣ್ಣ ಇರುವೆಯಾಗಿದ್ದು, ಒಟ್ಟು ಉದ್ದ 2 ಮಿ.ಮೀ ಗಿಂತ ಕಡಿಮೆಯಿದೆ. ಆಂಟೆನಾಗಳು, ದವಡೆಗಳು ಮತ್ತು ಕಾಲುಗಳನ್ನು ಹೊರತುಪಡಿಸಿ ಇದರ ದೇಹವು ಪ್ರಧಾನವಾಗಿ ಲೋಹೀಯ ನೀಲಿ ಬಣ್ಣದ್ದಾಗಿದೆ. ತಲೆಯು ದೊಡ್ಡ ಕಣ್ಣುಗಳೊಂದಿಗೆ ಉಪ ತ್ರಿಕೋನವಾಗಿದೆ ಮತ್ತು ಐದು ಹಲ್ಲುಗಳನ್ನು ಒಳಗೊಂಡಿರುವ ತ್ರಿಕೋನ ಮುಖಭಾಗವನ್ನು (ಮಂಡಬಲ್) ಹೊಂದಿದೆ. ಈ ಇರುವೆಯು ವಿಶಿಷ್ಟವಾದ ಲೋಹೀಯ ನೀಲಿ ಬಣ್ಣವನ್ನು ಹೊಂದಿದೆ. ಇರುವೆ ಕುಲದ ಯಾವುದೇ ಜಾತಿಗಳಿಗಿಂತ ಭಿನ್ನವಾಗಿದೆ.

ನೀಲಿ ಬಣ್ಣದ ವಿಶಿಷ್ಟತೆ

ಪ್ರಾಣಿ ಸಂಕುಲದಲ್ಲಿ ನೀಲಿ ಬಣ್ಣವು ಅಪರೂಪ. ಆದರೆ ಕೆಲವು ಮೀನು, ಕಪ್ಪೆಗಳು ಮತ್ತು ಪಕ್ಷಿಗಳು ಹಾಗೆಯೇ ಜೇಡಗಳು, ನೊಣಗಳು ಮತ್ತು ಕಣಜಗಳು ನೀಲಿ ಬಣ್ಣವನ್ನು ಪ್ರದರ್ಶಿಸುತ್ತವೆ. ಕೀಟಗಳಲ್ಲಿ, ನೀಲಿ ಬಣ್ಣವು ಹೆಚ್ಚಾಗಿ ಬಯೊಫೋಟೊನಿಕ್ನ್ಯಾನೊಸ್ಟ್ರಕ್ಚರ್ಗಳ ಜೋಡಣೆಯಿಂದ ಉತ್ಪತ್ತಿಯಾಗುತ್ತದೆ ಮತ್ತು ರಚನಾತ್ಮಕ ಬಣ್ಣಗಳನ್ನು ಸೃಷ್ಟಿಸುತ್ತದೆ. ಚಿಟ್ಟೆಗಳು, ಜೀರುಂಡೆಗಳು, ಜೇನು ನೊಣಗಳು ಮತ್ತು ಕಣಜಗಳಂತಹ ಕೆಲವು ಕೀಟಗಳಲ್ಲಿ ನೀಲಿ ಬಣ್ಣವು ಸಾಮಾನ್ಯವಾಗಿ ಕಂಡುಬಂದರೆ, ಇರುವೆಗಳಲ್ಲಿ ಇದು ಅಪರೂಪ. ಪ್ರಪಂಚದಾದ್ಯಂತ ತಿಳಿದಿರುವ 16,724 ಜಾತಿಗಳು ಮತ್ತು ಇರುವೆಗಳ ಪ್ರಬೆದಗಳಲ್ಲಿ ಕೆಲವು ಮಾತ್ರ ನೀಲಿ ಬಣ್ಣವನ್ನು ಪ್ರದರ್ಶಿಸುತ್ತವೆ ಎಂದು ನೀಲಿ ಬಣ್ಣದ ಇರುವ ವಿಶಿಷ್ಟತೆಯನ್ನು ವಿವರಿಸಿದರು.

ಪರಾಪರಾಟ್ರೆಚಿನಾ ನೀಲಾ ಆವಿಷ್ಕಾರವು ಇರುವೆ ವೈವಿಧ್ಯತೆಯ ಶ್ರೀಮಂತಿಕೆಗೆ ಕೊಡುಗೆ ನೀಡುತ್ತದೆ ಮತ್ತು ಪೂರ್ವ ಹಿಮಾಲಯದ ವಿಶಿಷ್ಟ ಜೀವವೈ ವಿಧ್ಯತೆಯನ್ನು ಪ್ರತಿನಿಧಿಸುತ್ತದೆ. ಇರುವೆಯ ನೀಲಿ ಬಣ್ಣವು ಕುತೂಹಲಕಾರಿ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ನೀಲಿ ಬಣ್ಣವು ಇರುವೆಯ ಸಂವಹನ, ಮರೆ ಮಾಚುವಿಕೆ ಅಥವಾ ಇತರ ಪರಿಸರ ಸಂವಹನಗಳಲ್ಲಿ ಸಹಾಯ ಮಾಡುತ್ತದೆಯೇ? ಈ ಎದ್ದು ಕಾಣುವ ಬಣ್ಣಗಳ ವಿಕಸನ ಸಂಶೋಧನೆಗೆ ಒಂದು ಉತ್ತೇಜಕ ಮಾರ್ಗವನ್ನು ಒದಗಿಸುತ್ತದೆ ಎಂದರು.

ಅರುಣಾಚಲಪ್ರದೇಶ ರಾಜ್ಯದಲ್ಲಿ ಶತಮಾನದಷ್ಟು ಹಳೆಯದಾದ ‘ಅಭೋರ್ದಂಡಯಾತ್ರೆ'(Abhor expedition) ನಂತರ ಜೀವ ವೈವಿಧ್ಯತೆಯನ್ನು ಮರುಪರಿಶೀಲಿಸಲು ಅರುಣಾಚಲಪ್ರದೇಶದ ಸಿಯಾಂಗ್ ಕಣಿವೆ ದಂಡಯಾತ್ರೆಯ ಸಂದರ್ಭದಲ್ಲಿ ಈ ಇರುವೆ ಪತ್ತೆಯಾಗಿತ್ತು. ಭಾರತದಲ್ಲಿ ಕಾಲೊನಿಯಲ್ ಆಳ್ವಿಕೆಯ ಅವಧಿಯ ಮೊದಲ ಅಬೋರ್ದಂಡಯಾತ್ರೆಯು 1911-1912 ರಲ್ಲಿ ಅಲ್ಲಿನ ಸ್ಥಳೀಯ ಜನರ ವಿರುದ್ಧ ನಡೆದ ಮಿಲಿಟರಿ ದಂಡಯಾತ್ರೆಯಾಗಿತ್ತು. ಸಿಯಾಂಗ್ ಕಣಿವೆಯ ನೈಸರ್ಗಿಕ ಇತಿಹಾಸ ಮತ್ತು ಭೌಗೋಳಿಕತೆಯನ್ನು ದಾಖಲಿಸಲು ವೈಜ್ಞಾನಿಕ ತಂಡವು ಮಿಲಿಟರಿ ದಂಡಯಾತ್ರೆಯ ಜೊತೆಗೂಡಿತು. ಈ ದಂಡಯಾತ್ರೆಯು ಸಿಯಾಂಗ್ ಕಣಿವೆ ಪ್ರದೇಶದ ದೊಡ್ಡಭಾಗಗಳನ್ನು ಅನ್ವೇಷಿಸಲು ಮತ್ತು ನಕ್ಷೆ ಮಾಡಲು ಯಶಸ್ವಿಯಾಯಿತು, ಪ್ರತಿ ಸಸ್ಯ, ಕಪ್ಪೆ, ಹಲ್ಲಿ, ಮೀನು, ಪಕ್ಷಿ ಮತ್ತು ಸಸ್ತನಿ ಮತ್ತು ಕೀಟಗಳನ್ನು ಪಟ್ಟಿ ಮಾಡಾಲಾಗಿತ್ತು. 1912 ರಿಂದ 1922 ರವರೆಗೆ ಹಲವಾರು ಆವಿಷ್ಕಾರಗಳೊಂದಿಗೆ(Records of the Indian Museum) ಸಂಪುಟಗಳಲ್ಲಿ ಪ್ರಕಟವಾಗಿದೆ.

ಇದಾಗಿ ಒಂದು ಶತಮಾನದ ನಂತರ ಬೆಂಗಳೂರಿನ ಏಟ್ರಿಯ (ATREE) ಯಸಂಶೋಧಕರ ತಂಡ ಮತ್ತು ಫೆಲಿಸ್ಕ್ರಿಯೇಷನ್ಸ್ ತಂಡವು ‘ಸಿಯಾಂಗ್ ಎಕ್ಸ್ಪೆಡಿಶನ್’ ಬ್ಯಾರ್ ಅಡಿಯಲ್ಲಿ ಈ ಪ್ರದೇಶದ ಜೀವ ವೈವಿಧ್ಯವನ್ನು ಮರು ಸಮೀಕ್ಷೆ ಮಾಡಲು ಮತ್ತು ದಾಖಲಿಸಲು ದಂಡಯಾತ್ರೆಗಳ ಸರಣಿಯನ್ನು ಪ್ರಾರಂಭಿಸಿದೆ. ಈ ದಂಡಯಾತ್ರೆಗೆ ನ್ಯಾಷನ್ ಜಿಯೋಗ್ರಾಪಿಕ್ ಸೋಸೈಟಿಯು(National Geographic Society) ವನ್ಯಜೀವಿ ಸಂರಕ್ಷಣ ದಂಡಯಾತ್ರೆಯ ಅನುದಾನದ ಮೂಲಕ ಅನುದಾನ ನೀಡಿದೆ. ಈ ದಂಡಯಾತ್ರೆ ಸಮಯದಲ್ಲಿ ಒಂದು ಹೊಸ ಉಪಕುಟುಂಬ, 6 ಹೊಸ ತಳಿಗಳು ಮತ್ತು 40 ಕ್ಕೂ ಹೆಚ್ಚು ಹೊಸ ಪ್ರಭೇದಗಳನ್ನು ಏಟ್ರಿಯ ಕೀಟಶಾಸ್ತ್ರಜ್ಞರು ಪತ್ತೆಮಾಡಿದ್ದಾರೆ.

ಹಿಮಾಲಯದ ಜೀವವೈವಿಧ್ಯದ ಹಾಟ್ಸ್ಪಾಟ್ನಲ್ಲಿ (biodiversity hotspot) ನೆಲೆಗೊಂಡಿರುವ ಅರುಣಾಚಲಪ್ರದೇಶದ ಸಿಯಾಂಗ್ ಕಣಿವೆಯು ಸಾಟಿಯಿಲ್ಲದ ವೈವಿಧ್ಯತೆಯ ಜಗತ್ತನ್ನು ಹೊಂದಿದೆ. ಇದರಲ್ಲಿ ಹೆಚ್ಚಿನದನ್ನು ಇನ್ನೂ ಅನ್ವೇಷಿಸಬೇಕಾಗಿದೆ.

ಸಾಂಸ್ಕೃತಿಕ ಮತ್ತು ಪರಿಸರ ಶ್ರೀಮಂತಿಕೆ ಇರುವ ಈ ಅಭೂತಪೂರ್ವ ಪ್ರದೇಶ ಆಪತ್ತುಗಳನ್ನು ಎದುರಿಸುತ್ತಲೆ ಇದೆ. ಹವಾಮಾನ ಬದಲಾವಣೆಯ ಜೊತೆಗೆ ಅಣೆಕಟ್ಟುಗಳು, ಹೆದ್ದಾರಿಗಳು ಮತ್ತು ಮಿಲಿಟರಿ ಸ್ಥಾಪನೆಗಳಂತಹ ದೊಡ್ಡ ಪ್ರಮಾಣದ ಮೂಲ ಸೌಕರ್ಯ ಯೋಜನೆಗಳು ಈ ಕಣಿವೆಯನ್ನು ವೇಗವಾಗಿ ಬದಲಾಯಿಸುತ್ತಿವೆ.

ಈ ಪರ್ವತಗಳು ತಮ್ಮದೇ ಆದ ವೈವಿಧ್ಯಮಯ ಪರಿಸರ ವ್ಯವಸ್ಥೆಗಳನ್ನು ಉಳಿಸಿಕೊಳ್ಳುವಲ್ಲಿ ಮಾತ್ರವಲ್ಲದೆ ಕಣಿವೆಯ ಕೆಳಭಾಗದಲ್ಲಿ ವಾಸಿಸುವ ಲಕ್ಷಾಂತರ ಜನರ ಯೋಗಕ್ಷೇಮವನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವುದರಿಂದ ಇದರ ಪ್ರಭಾವವು ಆಪಾರ ಎನ್ನುವುದು ಡಾ.ಪ್ರಿಯದರ್ಶನನ್ ಧರ್ಮರಾಜನ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿ ಮೆಚ್ಚುಗೆ

ನೀಲಿ ಬಣ್ಣದ ಅಪರೂಪದ ಇರುವೆ ಪತ್ತೆ ಮಾಡಿರುವ ತಂಡದ ಬಗ್ಗೆ ಮೆಚ್ಚುಗೆ ಸೂಚಿಸಿ ‘ಸಿಯಾಂಗ್ ಕಣಿವೆಯಲ್ಲಿ ಸಂಶೋಧಕರು ಪರಾಪರಾಟ್ರೆಚಿನಾ ನೀಲಾ ಎಂಬ ಹೊಸ ಇರುವೆಯ ಆವಿಷ್ಕಾರವು ಅರುಣಾಚಲ ಪ್ರದೇಶದ ವೈವಿಧ್ಯಮಯ ಜೀವ ವೈವಿಧ್ಯದ ಶ್ರೀಮಂತಿಕೆಯನ್ನು ಮತ್ತಷ್ಟು ಒತ್ತಿಹೇಳುತ್ತದೆ. ಮುಂದಿನ ಪೀಳಿಗೆಗೆ ನಮ್ಮ ಶ್ರೀಮಂತ ಪ್ರಾಣಿಗಳನ್ನು ಸಂರಕ್ಷಿಸೋಣ’ ಎಂದು ‘ಅರುಣಾಚಲಪ್ರದೇಶ ರಾಜ್ಯ ಮುಖ್ಯಮಂತ್ರಿ ಪ್ರೇಮ ಖಂಡು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹಾಗೆಯೇ ನೀಲಿ ಬಣ್ಣದ ಇರುವೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

Ramesh Babu

Journalist

Recent Posts

ಒಂದೇ ರಾತ್ರಿ ಎರಡು ಕಡೆ ಶ್ರೀಗಂಧದ ಮರಗಳ ಕಳವು

ದೊಡ್ಡಬಳ್ಳಾಪುರ: ಒಂದೇ ರಾತ್ರಿ ಎರಡು ಸ್ಥಳಗಳಲ್ಲಿ ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಕದ್ದೊಯ್ದಿರುವ ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ…

2 hours ago

ಬೈಕ್‌ಗೆ ಟಿಟಿ ವಾಹನ ಡಿಕ್ಕಿ ಪ್ರಕರಣ: ಇಬ್ಬರು ಯುವತಿಯರ ದುರ್ಮರಣ – ಮೃತರ ಕಣ್ಣು ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬಸ್ಥರು

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಓಬದೇನಹಳ್ಳಿ ರಸ್ತೆಯ ಕಾಂತಿ ಸ್ವೀಟ್ಸ್ ಮುಂಭಾಗ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ…

4 hours ago

ಬೈಕ್ ಗೆ ಟಿಟಿ ವಾಹನ ಡಿಕ್ಕಿ: ಮಹಿಳೆ ಸಾವು: ಮತ್ತೋರ್ವ ಯುವತಿಗೆ ಗಂಭೀರ ಗಾಯ

ಬಾಶೆಟ್ಟಿಹಳ್ಳಿ ಬಳಿ ಭೀಕರ ಅಪಘಾತವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಯುವತಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ‌ ಬಾಶೆಟ್ಟಿಹಳ್ಳಿ ಕೈಗಾರಿಕಾ…

9 hours ago

ಹೆಣ್ಣು ಕೊಟ್ಟ ಮಾವನನ್ನೇ ಕೊಲೆಗೈದ ಅಳಿಯ

ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಕೊಲೆಗೈದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೇರಳೇಘಟ್ಟ…

10 hours ago

ಕರ್ನಾಟಕದ ಮುಖ್ಯಮಂತ್ರಿ  ಡಿಕೆ ಶಿವಕುಮಾರ್ ಅವರಿಗೊಂದು ಬಹಿರಂಗ ಪತ್ರ..

ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರೇ, ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಯ ಅತ್ಯದ್ಭುತ ಫಲಿತಾಂಶವೆಂದರೆ ಯಾವುದೋ ಹಳ್ಳಿಯಲ್ಲಿ, ಎಲ್ಲಿಯೋ ಹುಟ್ಟಿದ…

13 hours ago

ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಇಲ್ಲಿಗೆ ಹೆಚ್ಚು ಅನುದಾನ ಬರಬೇಕೆಂಬ ತತ್ವ- ಚಿಂತನೆ ಸರಿಯಲ್ಲ. ಇದೆಲ್ಲವನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ- ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ದೇವನಹಳ್ಳಿ: ಭಾರತಮಾಲಾ ಪರಿಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ದೇಶದ ಎರಡು ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳಾದ ಬೆಂಗಳೂರು…

1 day ago