Categories: ಲೇಖನ

ಪ್ರಶ್ನೆ ಪತ್ರಿಕೆ ಬಯಲಾಗುತ್ತಲೇ ಇದೆ….

ನೀಟ್ ಪ್ರಶ್ನೆ ಪತ್ರಿಕೆ ಬಯಲು….

ಪ್ರಶ್ನೆ ಪತ್ರಿಕೆ ಬಯಲಾಗುತ್ತಲೇ ಇದೆ.
ನನಗೆ ಇದೇನು ದೊಡ್ಡ ಆಶ್ಚರ್ಯವಲ್ಲ. ಇಡೀ ಸಮಾಜದ ನಡೆಯುತ್ತಿರುವುದೇ ಮುಖವಾಡಗಳ ಮರೆಯಲ್ಲಿ. ಎಲ್ಲವೂ ಬಟಾ ಬಯಲಾಗುತ್ತಿದೆ. ಇದು ಕಳ್ಳರ ಸಂತೆ. ಆದರೆ ಸಿಕ್ಕಿಹಾಕಿಕೊಂಡವನು ಮಾತ್ರ ಕಳ್ಳ ಎಂದು ನಾವು ಭ್ರಮಿಸಿದ್ದೇವೆ . ಇಡೀ ವ್ಯವಸ್ಥೆಯೇ ತೂತು ಬಿದ್ದಿದೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಂದರೇನು ? ಎರಡೂ ಸರ್ಕಾರಿಗಳಿಗೆ ಮತದಾನ ಮಾಡಿ ಆಯ್ಕೆ ಮಾಡುವುದು ನಾವೇ ತಾನೆ. ಎರಡೂ ಸರ್ಕಾರದ ಖಜಾನೆ ತುಂಬಲು ತೆರಿಗೆ Implementation ನಾವೇ ಹೌದೇ. ಎರಡೂ ಸರ್ಕಾರಗಳು ನಡೆಯುತ್ತಿರುವುದು ಒಂದೇ ಸಂವಿಧಾನದ ಅಡಿಯಲ್ಲಿ ಅಲ್ಲವೇ. ಹಾಗಾದರೆ ಸರ್ಕಾರಗಳ ನಡುವೆ ಭಿನ್ನತೆ ಏಕೆ. ಒಬ್ಬರಿಗೊಬ್ಬರು ನಾನು ಸರಿ, ನೀನು ತಪ್ಪು ಎಂದು ಆರೋಪ ಹೊರಿಸುವುದು ಏಕೆ. ನಾವು ಈ ಸರ್ಕಾರಗಳ ಮೇಲೆ ಕೈ ತೋರಿಸಿ ಎರಡೂ ಭಿನ್ನ ಎಂಬುದಾಗಿ ಏಕೆ ಭಾವಿಸಬೇಕು. ಪಕ್ಷ ಯಾವುದೇ ಇರಲಿ ಆಯ್ಕೆ ನಮ್ಮದೇ ತಾನೆ. ಹಾಗಾದರೆ ಸರಿ ತಪ್ಪುಗಳಿಗೆ ಸರ್ಕಾರವನ್ನು ಹೊಣೆ ಮಾಡಲು ಕೇಂದ್ರ, ರಾಜ್ಯ ಎಂದು ಪಲಾಯನವಾದದ ಒಂದು ಮಾರ್ಗ ಹುಡುಕುವುದು ಬೇಡ.

ಸ್ಪರ್ಧಾ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ವಿಷಯ ತಜ್ಞರೊಬ್ಬರು ಕರೆ ಮಾಡಿ
” ಸತತ ಎರಡು ತಿಂಗಳು ಎಲ್ಲಾ ಸಂಪರ್ಕಗಳಿಂದ ದೂರವಿದ್ದು ನಾವು ಕೆಲವು ಮುಖ್ಯ ವಿಷಯ ತಜ್ಞರು ಕಷ್ಟ ಪಟ್ಟು ಪ್ರಾಮಾಣಿಕತೆಯಿಂದ ಸಿದ್ದಪಡಿಸಿದ ಪ್ರಶ್ನೆ ಪತ್ರಿಕೆ ಬಯಲಾಗಿದೆ. ನಮ್ಮ ಮೇಲಿನ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ” ಎಂದರು…..

ಆದರೆ ವಾಸ್ತವ ಏನು ?…..

ಕಳೆದ ಹಲವಾರು ದಶಕಗಳಿಂದ ರಾಜ್ಯ ಮತ್ತು ರಾಷ್ಟ್ರದ ಬೇರೆ ಬೇರೆ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಬಯಲಾಗುತ್ತಲೇ ಇದೆ. ಕೆಲವೊಮ್ಮೆ ಅದು ಬಹಿರಂಗವಾಗಿದೆ, ಮತ್ತೆ ಕೆಲವೊಮ್ಮೆ ಬಹಿರಂಗವಾಗದೆ ಕದ್ದು ಮುಚ್ಚಿ ನಡೆದು ಹೋಗಿದೆ.

ಇನ್ನೂ ಶಿಕ್ಷಣ ಇಲಾಖೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ವ್ಯವಸ್ಥೆ ಕಂಪ್ಯೂಟರೀಕರಣ ಆಗಿರದ ಸಮಯದಲ್ಲಿ ಇದು ಅತ್ಯಂತ ಸಹಜ, ಸ್ವಾಭಾವಿಕ ಘಟನೆಯಾಗಿತ್ತು. ಇಷ್ಟು ಮಾತ್ರವಲ್ಲದೇ ಹಣ ಪಡೆದು ಪಾಸು ಮಾಡುವುದು ಮತ್ತು ಹೆಚ್ಚು ಅಂಕ ಪಡೆಯುವುದು, ಒಬ್ಬರ ಹೆಸರಲ್ಲಿ ಇನ್ನೊಬ್ಬರು ಕದ್ದು ಉತ್ತರ ಬರೆಯುವುದು, ನಕಲಿ ಅಂಕಪಟ್ಟಿ ಸಿದ್ದಪಡಿಸುವುದು ಸಾಮಾನ್ಯವಾಗಿತ್ತು. ಕಂಪ್ಯೂಟರೀಕೃತ ವ್ಯವಸ್ಥೆ ಬಂದ ನಂತರ ಸ್ವಲ್ಪ ಕಡಿಮೆಯಾಗಿದೆ. ಆದರೆ ಬೇರೆ ರೂಪ ಪಡೆದುಕೊಂಡಿದೆ. ನಕಲಿ ಮಾಡುವುದು ಆಗಲೂ ಈಗಲೂ ಅದೇ ರೀತಿ ಇದೆ.

ಆಗಿನಿಂದಲೂ ಪ್ರಶ್ನೆ ಪತ್ರಿಕೆ ತಯಾರು ಮಾಡುವುದು ಯಾರು, ಎಲ್ಲಿ, ಅದು ಹೇಗೆ ಮತ್ತು ಎಲ್ಲಿ ಮುದ್ರಣವಾಗುತ್ತದೆ, ಎಲ್ಲಿ ಸಂಗ್ರಹವಾಗುತ್ತದೆ, ಹೇಗೆ ಹಂಚಿಕೆಯಾಗುತ್ತದೆ, ಯಾರ ನಿಯಂತ್ರಣದಲ್ಲಿ ಇರುತ್ತದೆ ಎಂಬ ಸಂಪೂರ್ಣ ಮಾಹಿತಿ ಇರುವ ಒಂದು ಏಜೆಂಟರ ಪಡೆಯೇ ಇರುತ್ತದೆ. ದೊಡ್ಡ ದೊಡ್ಡ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ತಮ್ಮ ಮಕ್ಕಳ ಅನುಕೂಲಕ್ಕಾಗಿ ಇವರ ಸಂಪರ್ಕದಲ್ಲಿ ಇರುತ್ತಾರೆ. ಎಸ್ ಎಸ್ ಎಲ್ ಸಿ, ಪಿಯುಸಿ, ಇಂಜಿನಿಯರಿಂಗ್, ವೈದ್ಯಕೀಯ, ಎಲ್ ಎಲ್ ಬಿ, ಕೆ.ಪಿ.ಎಸ್.ಸಿ, ಸಿಇಟಿ, ನೀಟ್ ಮುಂತಾದ ಮುಖ್ಯ ಪರೀಕ್ಷೆಗಳು ಇವರ ಗುರಿಯಾಗಿರುತ್ತದೆ.

ಪ್ರತಿ ಬಾರಿ ಪ್ರಶ್ನೆ ಪತ್ರಿಕೆ ಬಯಲಾದ ನಂತರ ಆಯಾಶ ಇಲಾಖೆಗಳು ಹೊಸ ಹೊಸ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅದಕ್ಕೆ ಸರಿಯಾಗಿ ಈ ಏಜೆಂಟರುಗಳು ಸಹ ಹೊಸ ಹೊಸ ತಂತ್ರ ಮಾಡುತ್ತಾರೆ. ಕೆಲವರು ಪೋಲೀಸರಿಗೆ ಸಿಕ್ಕಿ ಬೀಳುತ್ತಾರೆ. ಕಿಲಾಡಿಗಳು ತಪ್ಪಿಸಿಕೊಳ್ಳುತ್ತಾರೆ. ಜೊತೆಗೆ ಬಂಧಿತರು ಸ್ವಲ್ಪ ದಿನಗಳ ನಂತರ ಜಾಮೀನು ಪಡೆದು ಮತ್ತೆ ಧಂದೆಯಲ್ಲಿ ತೊಡಗುತ್ತಾರೆ.

ಇಂತಹ ಕೆಟ್ಟ ವ್ಯವಸ್ಥೆಯಲ್ಲಿ ಯಾರಾದರೂ ಮಾಡಬಹುದಾದ್ದರೂ ಏನು ?

ಪಬ್ಲಿಕ್ ಪರೀಕ್ಷೆ ಅಥವಾ ಸ್ಪರ್ಧಾತ್ಮಕ ಪರೀಕ್ಷೆ ಎನ್ನುವುದು ಭಾರತದಂತ ದೊಡ್ಡ ಸಂಖ್ಯೆಯ ದೇಶದಲ್ಲಿ ಒಂದು ಬೃಹತ್ ವ್ಯವಸ್ಥೆ. ಕೇವಲ ಶಿಕ್ಷಕರು ಮಾತ್ರವಲ್ಲ ಅಧಿಕಾರಿಗಳು, ಭೋದಕೇತರ ಸಿಬ್ಬಂದಿ, ಶೀಘ್ರಲಿಪಿಗಾರರು, ತಂತ್ರಜ್ಞರು, ಚಾಲಕರು, ತೂಕದ ಕಟ್ಟುಗಳನ್ನು ಸಾಗಿಸುವವರು, ಭದ್ರತಾ ಸಿಬ್ಬಂದಿ ಹೀಗೆ ಹಲವಾರು ಜನರಿರುತ್ತಾರೆ. ಇವರಲ್ಲಿ ಯಾರೋ ಒಬ್ಬರು ಹಣ ಅಥವಾ ಇನ್ಯಾವುದೋ ಆಸೆಗೆ ಕೇವಲ ಮೊಬೈಲಿನಲ್ಲಿ ಒಂದು ಛಾಯಾಚಿತ್ರ ತೆಗೆದಿಟ್ಟುಕೊಂಡರೆ ಮುಗಿಯಿತು. ಎಲ್ಲವೂ ವಿಫಲ.

ನಿಮಗೆ ಇನ್ನೂ ಒಂದು ಪ್ರಶ್ನೆ ಕಾಡಬಹುದು. ಕೆಲವು ವರ್ಷ, ಕೆಲವು ಪರೀಕ್ಷೆಗಳ, ಕೆಲವು ಪತ್ರಿಕೆಗಳು ಮಾತ್ರ ಹೇಗೆ ಬಯಲಾಗುತ್ತದೆ ಎಂದು. ಇಲ್ಲ ಪ್ರತಿ ವರ್ಷವೂ ಒಂದಲ್ಲ ಒಂದು ಪತ್ರಿಕೆ ಬಯಲಾಗಿರುತ್ತದೆ. ಕೆಲವು ಮಾತ್ರ ಹೊರ ಪ್ರಪಂಚಕ್ಕೆ ತಿಳಿಯುತ್ತದೆ. ಉಳಿದವು ಹಾಗೇ ಮುಚ್ಚಿಹೋಗುತ್ತದೆ.

ವಿಷಯ ತಜ್ಞರೇ, ಶೈಕ್ಷಣಿಕ ವಿದ್ವಾಂಸರೆ, ಶಿಕ್ಷಕರೇ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಶಿಕ್ಷಣ ಮತ್ತು ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಪರೀಕ್ಷೆ ಮತ್ತು ಅಂಕಗಳ ಮೂಲಕ ವಿದ್ಯಾರ್ಥಿಗಳ ಸಾಮರ್ಥ್ಯ ಅಳೆಯುವುದು ಒಂದು ಸಣ್ಣ ಅಂಶ ಮಾತ್ರ. ಇಡೀ ವರ್ಷ ಅವರ ಸಂಪೂರ್ಣ ಮನಸ್ಸನ್ನು ನಿಯಂತ್ರಿಸಿ ಅವರ ಬದುಕು ಮತ್ತು ವ್ಯಕ್ತಿತ್ವವನ್ನು ರೂಪಿಸುವುದೇ ಶಿಕ್ಷಣದ ಬಹುದೊಡ್ಡ ಜವಾಬ್ದಾರಿ ಮತ್ತು ಕರ್ತವ್ಯ – ಧರ್ಮ.

ಪ್ರಶ್ನೆ ಪತ್ರಿಕೆ ಬಯಲಾದಾಗ ನಾಚಿಕೆ ಪಡಬೇಕಾಗಿರುವುದು ಸರ್ಕಾರ ಮತ್ತು ಸಮಾಜ. ಕೇವಲ ಶಿಕ್ಷಕರು ಮಾತ್ರವಲ್ಲ.

ನಿಮಗೆ ತಿಳಿದಿರಲಿ ದೇವರ ಅವತಾರವೆಂದು ಭಾವಿಸಲಾದ ವೈದ್ಯರು ಇಂದು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ,

ನೋಟ್ ಬ್ಯಾನ್ ಸಮಯದಲ್ಲಿ ಗೌರವಯುತ ಸ್ಥಾನ ಗಳಿಸಿದ್ದ ಬ್ಯಾಂಕ್ ಅಧಿಕಾರಿಗಳು ನಂಬಿಕೆ ಕಳೆದುಕೊಂಡರು,

ಪತ್ರಕರ್ತರೆಂಬ ಬುದ್ದಿವಂತರು ನಂಬಿಕೆ ಉಳಿಸಿಕೊಳ್ಳುತ್ತಿಲ್ಲ,

ಸರ್ವ ಸಂಗ ಪರಿತ್ಯಾಗಿ ಧರ್ಮಾಧಿಕಾರಿಗಳು ನಂಬಿಕೆ ಉಳಿಸಿಕೊಂಡಿಲ್ಲ,

ತಮ್ಮ ಭಾವನೆಗಳನ್ನು ಅಕ್ಷರಗಳಲ್ಲಿ ಉಕ್ಕಿಸುವ ಸಾಹಿತಿಗಳು ನಂಬಿಕೆ ಉಳಿಸಿಕೊಂಡಿಲ್ಲ,

ಇನ್ನು ರಾಜಕಾರಣಿಗಳು, ಅಧಿಕಾರಿಗಳ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ.

ಹೀಗಿರುವಾಗ ಒಂದು ವರ್ಗದ ಮೇಲೆ ತಪ್ಪುಗಳನ್ನು ಹೊರಿಸುವುದು ಸೂಕ್ತವಲ್ಲ.

ಭ್ರಷ್ಟಾಚಾರ ಎಂಬುದು ಸರ್ವವ್ಯಾಪಿಯಾಗಿದೆ. ಕೇವಲ ಪ್ರಶ್ನೆ ಪತ್ರಿಕೆ ಬಯಲು ಮಾತ್ರವಲ್ಲ ಅದರ ನಂತರ ಉದ್ಯೋಗಕ್ಕಾಗಿ, ಕಾಲೇಜು ಪ್ರವೇಶಕ್ಕಾಗಿ ಅನೇಕ ರೀತಿಯ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆಯುತ್ತದೆ. ಅದೆಲ್ಲವೂ ವ್ಯವಸ್ಥೆಯ ಭಾಗವಾಗಿ ಅದರೊಳಗೆ ಅಂತರ್ಗತವಾಗಿದೆ. ಅದನ್ನು ತಡೆಯುವುದು ಅಷ್ಟು ಸುಲಭವಲ್ಲ.

ಇಡೀ ವ್ಯವಸ್ಥೆಯ ಎಲ್ಲಾ ಕ್ಷೇತ್ರಗಳ ಜನರ ಮನಸ್ಥಿತಿಯ ಪುನರ್ ಅವಲೋಕನದ ಅವಶ್ಯಕತೆ ಇದೆ. ಹೊಸ ಕಾನೂನುಗಳು ಹೊಸ ಅಪರಾಧಗಳಿಗೆ ದಾರಿ ಮಾಡಿಕೊಡುತ್ತಿದೆ. ಏಕೆಂದರೆ ಇದೇ ಜನರೇ ಆ ಕಾನೂನಿಗೂ ಒಳಪಡುತ್ತಾರೆ.
ಬದಲಾಣೆಯ ಮೂಲವನ್ನು ಹುಡುಕುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ವಿಮಾನಕ್ಕೆ ಬಾಂಬ್ ಬೆದರಿಕೆ; ತುರ್ತು ತಪಾಸಣೆ ಬಳಿಕ ಹುಸಿ ಕರೆ ಎಂದು ಸ್ಪಷ್ಟ

ದೇವನಹಳ್ಳಿ: ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿನಿಂದ ಅಹಮದಾಬಾದ್‌ಗೆ ತೆರಳಲು ಸಿದ್ಧವಾಗಿದ್ದ ಇಂಡಿಗೋ ಸಂಸ್ಥೆಯ 6E-6423 ವಿಮಾನಕ್ಕೆ…

18 hours ago

ಸೋನಂ ವಾಂಗ್ ಚುಕ್……

ಸೋನಂ ವಾಂಗ್ ಚುಕ್...... ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗಿಂತ ಸೋನಂ ವಾಂಗ್ ಚುಕ್ ಅವರ ಜೀವ ಭಾರತೀಯರಿಗೆ…

2 days ago

ರೈತರ ಜಮೀನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಯಾವುದೇ ರೈತರ ಜಮೀನನ್ನೂ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.…

2 days ago

ಶಾಲೆ, ಅಂಗನವಾಡಿ ಮುಂಭಾಗವೇ ಕಸದ ರಾಶಿ; ದುರ್ವಾಸನೆಯ ನಡುವೆ ಪಾಠ ಕೇಳುವ ಮಕ್ಕಳು ಪಾಲನಜೋಗಿಹಳ್ಳಿ ಪ್ರವೇಶ ದ್ವಾರದಲ್ಲೇ ತ್ಯಾಜ್ಯ ರಾಶಿ – ಸ್ವಚ್ಛತೆಗೆ ಗ್ರಾಮಸ್ಥರ ಆಗ್ರಹ

ದೊಡ್ಡಬಳ್ಳಾಪುರ: ತಾಲೂಕಿನ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಪಾಲನಜೋಗಿಹಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಗ್ರಾಮ ಪ್ರವೇಶ…

2 days ago

ಮುಂದೆ ಸಾಗುತ್ತಿದ್ದ ಕಂಟೈನರ್ ಲಾರಿಗೆ ಐಚರ್ ವಾಹನ ಡಿಕ್ಕಿ: ಚಾಲಕ ಸಾವು

ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ–44ರ ದೇವನಹಳ್ಳಿ ಬೈಪಾಸ್‌ನ ಕೆಂಪೇಗೌಡ ವೃತ್ತದ ಬಳಿ ಮುಂದೆ ಸಾಗುತ್ತಿದ್ದ ಕಂಟೈನರ್ ಲಾರಿಗೆ ಐಚರ್ ಸರಕು ಸಾಗಣೆ…

2 days ago

ಸೆಲೆಬ್ರಿಟಿ…………….

ಸೆಲೆಬ್ರಿಟಿ................ ಇತ್ತೀಚಿನ ವರ್ಷಗಳ ಭಾರತೀಯ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದರೆ ಬದಲಾಗುತ್ತಿರುವ ಯುವಸಮೂಹದ ಗ್ರಹಿಕಾ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡುತ್ತಿದೆ. ಏಕೆಂದರೆ,…

3 days ago