Categories: ಲೇಖನ

ಜಾಗೃತ ಮನಸ್ಸುಗಳ ಜವಾಬ್ದಾರಿ…….

ಚಳಿ ತಡೆಯಲಾರದೆ ರಸ್ತೆ ಬದಿಯಲ್ಲಿ ಮಲಗಿರುವ ಮಗು,

ಒಂದು ತುತ್ತು ಅನ್ನಕ್ಕಾಗಿ ದೇವ ಮಂದಿರಗಳ ಮುಂದೆ
ಹಸಿವಿನಿಂದ ಅಂಗಲಾಚುತ್ತಿರುವ ಪುಟ್ಟ ಕಂದ,

ತನ್ನ ಹಾಗೂ ತನ್ನ ನಂಬಿದವರ ಊಟಕ್ಕಾಗಿ
ಯಾರೋ ಅಪರಿಚಿತನಿಗೆ ದೇಹ ಅರ್ಪಿಸುವ ಹೆಣ್ಣು,

ಹಸಿವು ನೀಗಿಕೊಳ್ಳಲು, ಸಂಸಾರ ನಡೆಸಲು ಇತರರ ಮಲ ಹೊತ್ತು ಸಾಗುವ ವ್ಯಕ್ತಿ,

ರೋಗ ಉಲ್ಬಣಿಸಿದ್ದರೂ ಚಿಕಿತ್ಸೆ ಪಡೆಯಲು ಕಾಸಿಲ್ಲದೆ ಸಾವನ್ನು ಎದುರು ನೋಡುತ್ತಿರುವ ಜೀವ,

ತಾನು ಮಾಡದ ತಪ್ಪಿಗೆ ಜ್ಯೆಲುಪಾಲಾಗಿ
ಕೋರ್ಟನಿಂದ ಜಾಮೀನು ಸಿಕ್ಕರೂ ಶ್ಯೂರಿಟಿ ಇಲ್ಲದೇ
ವರ್ಷಾನುಗಟ್ಟಲೆ ಜ್ಯೆಲಿನಲ್ಲಿ ಕೊಳೆಯುತ್ತಿರುವ ನತದೃಷ್ಟ,

ಓದುವ ಆಸೆ ಇದ್ದರು ಬಡತನದಿಂದ ಸಾಧ್ಯವಾಗದೆ ಹೋಟೆಲ್ಲಿನಲ್ಲಿ
ದಿನದ 18 ಗಂಟೆ ದುಡಿಯುವ ಪುಟ್ಟ ಕಂದಮ್ಮಗಳು,

ಮದುವೆ ವಯಸ್ಸು ಮೀರಿದ್ದರೂ ಮದುವೆಯಾಗದೆ ತನ್ನ ಓರಗೆಯವರು ತಮ್ಮ ಮಕ್ಕಳೊಂದಿಗೆ ಆಟವಾಡುವುದನ್ನು ನೋಡುತ್ತಾ
ತನ್ನ ದರಿದ್ರ ದುರಾದೃಷ್ಟದ ಅಸಹಾಯಕತೆಗೆ ಕೊರಗುವ ಅಬಲೆ,

ಸೇಬು, ಐಸ್ ಕ್ರೀಮ್, ಡ್ರೈಪ್ರೂಟ್ಸ್ ಗಳನ್ನು ಜೀವನದಲ್ಲಿ ಒಮ್ಮೆಯೂ ಸವಿಯದ ಕೋಟ್ಯಾಂತರ ಜನ ವಾಸಿಸುತ್ತಿರುವ ಈ ನಮ್ಮ ಸಮಾಜದಲ್ಲಿ,

ರಾಜಕಾರಣಿಗಳು ಆಡಳಿತಗಾರರು, ಸಿನಿಮಾ ನಟರು, ಪತ್ರಿಕೋದ್ಯಮಿಗಳು,
ವ್ಯಾಪಾರಿಗಳು, ಸಾಹಿತಿಗಳು, ಮಠಾಧೀಶರು, …ಇತ್ಯಾದಿ, ಇತ್ಯಾದಿಗಳು………

ಮಹಾನ್ ನಾಗರೀಕರಂತೆ,
ಇರುವ – ಇಲ್ಲದ – ದೇವರು ಧರ್ಮ, ಜಾತಿ,
ತತ್ವ ಸಿದ್ಧಾಂತ, ವಾಕ್ ಚಾತುರ್ಯಗಳನ್ನು ಪ್ರದರ್ಶಿಸುತ್ತಾ, ತಮಗೂ ಇದಕ್ಕೂ ಸಂಬಂಧವಿಲ್ಲದಿರುವಂತೆ ಜೀವಿಸುತ್ತಿರುವುದನ್ನು,
ನೋಡಿದರೆ,

ಈ ಅಭಿವೃದ್ಧಿ ಮತ್ತು ಚಿಂತನೆಗಳ ಕ್ರಮವನ್ನೇ ಪ್ರಶ್ನಿಸಿಕೊಳ್ಳಬೇಕೆನಿಸುತ್ತದೆ.

ಕನಿಷ್ಠ ಮಟ್ಟದ ನಾಗರಿಕ ಸೌಲಭ್ಯಗಳನ್ನು ಈ ಜನರಿಗೆ ತಲುಪಿಸಲು ಸಾಧ್ಯವಾಗದ ವ್ಯವಸ್ಥೆಯ ಬಗ್ಗೆ ಜಿಗುಪ್ಸೆ ಮೂಡುತ್ತದೆ.

ಎಷ್ಟೊಂದು ಕ್ರಮಬದ್ಧ ಆಡಳಿತ ವ್ಯವಸ್ಥೆ ಇದೆ. ಗ್ರಾಮ ಪಂಚಾಯತಿಯಿಂದ ಕೇಂದ್ರ ಸರ್ಕಾರದವರೆಗೆ ಮತ್ತು ಇದನ್ನು ನಿರ್ವಹಿಸುವವರು ಶಿಶಿವಿಹಾರದಿಂದ ಡಾಕ್ಟರೇಟ್ ವರೆಗೆ ಓದಿರುತ್ತಾರೆ.

ಸಾಕಷ್ಟು ಸಂಬಳ ಮತ್ತು ಇತರ ಸೌಲಭ್ಯಗಳನ್ನು ಪಡೆಯುತ್ತಾರೆ.

ಇದನ್ನು ಬೇರೆ ಬೇರೆ ರೀತಿಯಲ್ಲಿ ನಿಯಂತ್ರಿಸಲು ಸಹಕರಿಸಲು ಮೇಲ್ವಿಚಾರಣೆ ನಡೆಸಲು ಅನೇಕ ಮತ್ತಷ್ಟು ಸರ್ಕಾರಿ ಸಂಸ್ಥೆಗಳೇ ಇವೆ.

ಆದರೂ ಸಾಕಷ್ಟು ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತಿಲ್ಲ.

ಹೌದು, ಒಂದಷ್ಟು ಜನ ಇದರ ಸಂಪೂರ್ಣ ಲಾಭ ಪಡೆದು ಸುಖವಾಗಿದ್ದಾರೆ. ಅವರುಗಳಿಗೆ ಯಾವುದೇ ತಕರಾರು ಇಲ್ಲ.

ಹಾಗೆಂದು ಜಾಗೃತಗೊಂಡ ಮನಸ್ಸುಗಳು ಸುಮ್ಮನೆ ಇರಬಾರದು. ಯಾವುದಾದರೂ ರೀತಿಯಲ್ಲಿ ಈ ವ್ಯವಸ್ಥೆಯ ನಾಗರಿಕ ಸೌಲಭ್ಯಗಳನ್ನು ವಂಚಿತರಿಗೆ ತಲುಪಿಸಲು ಪ್ರಯತ್ನಿಸಬೇಕಿದೆ.

ಇಲ್ಲದಿದ್ದರೆ ಮುಂದೆ ಈ ಅಂತರ ಹೆಚ್ಚಾದಂತೆ ಈಗ ನೆಮ್ಮದಿಯಿಂದ ಇರುವವರ ಅನುಕೂಲಗಳಿಗೂ ತೊಂದರೆಯಾಗುವ ಸಾಧ್ಯತೆ ಇದೆ.

ಕ್ರಿಯಾತ್ಮಕ ಮಾನವೀಯ ಮನಸ್ಸುಗಳು ಈ ಬಗ್ಗೆ ಮತ್ತಷ್ಟು ಚಿಂತಿಸುವುದು ವ್ಯವಸ್ಥೆಯ ಸುಧಾರಣೆಯ ದೃಷ್ಟಿಯಿಂದ ತುಂಬಾ ಅವಶ್ಯಕತೆ ಇದೆ.

ಮುಂದಿನ ದಿನಗಳು ಮತ್ತಷ್ಟು ಹದಗೆಡುವ ಮುನ್ನ ಎಚ್ಚರಿಕೆಯಿಂದ ಮುನ್ನಡೆಯಬೇಕಿದೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

5 hours ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

6 hours ago

ಮನೆ ಮಾಲೀಕರ ಮುಂದೆಯೇ ಮನೆ ದೋಚಿ ಪರಾರಿಯಾಗಿದ್ದ ಕಳ್ಳ ಲಾಕ್‌!

ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…

7 hours ago

ಕೋಳಿಫಾರ್ಮ್‌ಗೆ ಚಿರತೆ ದಾಳಿ ಶಂಕೆ: 950ಕ್ಕೂ ಅಧಿಕ ಕೋಳಿಮರಿಗಳು ಬಲಿ!

  ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…

7 hours ago

ಯೋಜನಾ ಪ್ರಾಧಿಕಾರಕ್ಕೆ ಮುನಿರಾಜು ಆಯ್ಕೆ: ಯುವ ಕಾಂಗ್ರೆಸ್‌ನಿಂದ ಆತ್ಮೀಯ ಅಭಿನಂದನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…

11 hours ago

ವಿಯೆಟ್ನಾಂನಿಂದ 1.38 ಕೋಟಿ ಮೌಲ್ಯದ ಹೈಡ್ರೋಫೋನಿಕ್ ಗಾಂಜಾ ಸಾಗಾಟ: ಆರೋಪಿ ಬಂಧನ

ದೇವನಹಳ್ಳಿ: ವಿಯೆಟ್ನಾಂನ ಹಾನೊಯ್ ನಗರದಿಂದ ಬೆಂಗಳೂರಿಗೆ ವಿಮಾನದ ಮೂಲಕ ಹೈಡ್ರೋಫೋನಿಕ್ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಯನ್ನು ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ…

13 hours ago