ಕೆ.ಎಚ್ ಮುನಿಯಪ್ಪನವರ ಅನುಭವಕ್ಕೆ ನ್ಯಾಯ ಸಿಗಲಿ: ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲು ಆಗ್ರಹ

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಯ ಬೆನ್ನಲ್ಲೇ ಬದಲಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ಇದರ ಜೊತೆಗೆ ಸಚಿವ ಸಂಪುಟ ಪುನರ್ ರಚನೆಯೂ ಆಗುವ ಕಾಲ ಬಂದಿದೆ. 7 ಬಾರಿ ಸಂಸದರು, ಕೇಂದ್ರ ಸಚಿವರೂ ಆಗಿ ಅಪಾರ ಅನುಭವ ಹೊಂದಿ ರಾಜ್ಯದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿರುವ ಹಿರಿಯ ಮತ್ಸದ್ದಿ ಕೆ.ಎಚ್. ಮುನಿಯಪ್ಪನವರ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಂಪುಟ ಬದಲಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಘಾಟಿ ಪ್ರವಾಸಿ ಮಂದಿರದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ತೂಬಗೆರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅನುಭವಿ ಹಿರಿಯ ಕಾಂಗ್ರೆಸ್ಸಿಗರಾದ ಮುನಿಯಪ್ಪನವರಿಗೆ ಅರ್ಹತೆಗೆ ತಕ್ಕಂತ ಸಚಿವ ಸ್ಥಾನ ದೊರೆತಿರಲಿಲ್ಲ ಈಗ ಬದಲಾವಣೆ ಪರ್ವದಲ್ಲಿ ಅವರನ್ನು ಗುರ್ತಿಸಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದರು.

ಕಾಂಗ್ರೆಸ್ ಮುಖಂಡ, ಘಾಟಿ ಸುಬ್ರಹ್ಮಣ್ಯ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ರಂಗಪ್ಪ ಮಾತನಾಡಿ, ಕೇಂದ್ರ ಸಚಿವರಾಗಿ ಅನುಭವವಿದ್ದ ಮುನಿಯಪ್ಪನವರು ರಾಜ್ಯದಲ್ಲಿ ಗ್ಯಾರಂಟೀ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯದಂತಹ ಅಕ್ಕಿ ವಿತರಣೆಯ ಆಹಾರ ನಾಗರಿಕ ಸರಬರಾಜು ಸಚಿವರಾಗಿ ಮೂರು ವರ್ಷಗಳಿಂದ ಅತ್ಯತ್ತಮ ಸೇವೆ ಸೇವೆ ಸಲ್ಲಿಸಿದ್ದು, ಈಗ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಇವರಿಗೆ ಡಿಸಿಎಂ. ಸ್ಥಾನ ನೀಡಲೇ ಬೇಕೆಂದರು.

ಮುನಿಯಪ್ಪನವರು ನಮ್ಮ ಕ್ಷೇತ್ರಕ್ಕೆ ಬಂದ ಮೇಲೆ ಇಲ್ಲಿಂದ ಸಚಿವರಾಗಿ ಯಾರೂ ಆಗಿಲ್ಲ ಎಂಬ ಕಳಂಕ ದೂರವಾಯಿತು. ರಾಹುಲ್ ಗಾಂಧಿ ಸೂಚನೆಯಂತೆ ಇಲ್ಲಿ ಬಂದು ನಿಂತು ಸಚಿವರಾದರು. ಅವರು ಕೇಳಿದ ಸ್ಥಾನವೇ ಬೇರೆ ಕೊಟ್ಟ ಖಾತೆಯೇ ಬೇರೆ. ಆದರೂ ಅವರು ಯಾವುದಕ್ಕು ಆಸೆ ಪಡದೆ ಪಕ್ಷ ನಿಷ್ಟರಾಗಿದ್ದಾರೆ. ಹಾಗಾಗಿ ಅಂತಹ ಅನುಭವಿ ರಾಜಕಾರಣಿಗೆ ಹೊಸ ಸಂಪುಟದಲ್ಲಿ ಡಿಸಿಎಂ ಸ್ಥಾನ ಮೊದಲ ಆದ್ಯತೆಯಾಗಿ ನೀಡಬೇಕೆಂದರು.

ಭೂ ಮಂಜೂರಾತಿ ಸಮಿತಿ ಸದಸ್ಯ ಗಂಗಸಂದ್ರ ಶ್ರೀಧರ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಡಿ.ಕೆ.ಶಿವಕುಮಾರ್ ಆಗುತ್ತಿರುವುದು ಸಂತಸದ ವಿಷಯ. ಅದೇ ರೀತಿ 8 ವರ್ಷಗಳ ಕಾಲ ಉತ್ತಮ ಆಡಳಿತ ನೀಡಿ ಬಡವರ ಪಾಲಿನ ಭಾಗ್ಯರಾಮಯ್ಯ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಬ್ಬರಿಗೆ ಆ ಸ್ಥಾನದ ಅವಕಾಶ ಮಾಡಿಕೊಡುವ ಮೂಲಕ ತಾವೊಬ್ಬ ಬಲಿಷ್ಠ ದೊಡ್ಡ ನಾಯಕ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಅದೇ ರೀತಿ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಹೊಂದಿರುವ ಕೆ.ಎಚ್. ಮುನಿಯಪ್ಪನವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ ಎಡಗೈ ಸಮಾಜಕ್ಕೆ ಉನ್ನತ ಸ್ಥಾನ ನೀಡುವ ಮೂಲಕ ಬಹುಸಂಖ್ಯಾತ ಎಡಗೈ ಸಮಾಜದವರು ಕಾಂಗ್ರೆಸ್ ಮೇಲೆ ಇಟ್ಟಿರುವ ನಂಬಿಕೆ ವಿಶ್ವಾಸವನ್ನು ಉಳಿಸಿಕೊಳ್ಳಬೇಕೆಂದರು.

ವಕೀಲ, ಕಾಂಗ್ರೆಸ್ ಬೆಂ ಜಿಲ್ಲಾ ಉಪಾಧ್ಯಕ್ಷ ಎಸ್ ಡಿ ಮುನಿರಾಜು ಮಾತನಾಡಿ,‌ ಕೆ.ಎಚ್ ಮುನಿಯಪ್ಪನವರಿಗೆ ಸರ್ಕಾರದಲ್ಲಿ ಉತ್ತಮ ಸ್ಥಾನ ಕೊಟ್ಟರೆ ಸರ್ಕಾರಕ್ಕೆ ಒಳ್ಳೆ ಗೌರವ ಬರುತ್ತೆ.‌ ಶುದ್ಧ ವ್ಯಕ್ತಿತ್ವದ ಮುನಿಯಪ್ಪನವರನ್ನು ಡಿಸಿಎಂ ಮಾಡಬೇಕು. ಅವರು ಕೇವಲ ಉಪಮುಖ್ಯಮಂತ್ರಿ ಸ್ಥಾನಕ್ಕೊಂದೇ ಅರ್ಹರಲ್ಲ. ಅವರು ಮುಖ್ಯಮಂತ್ರಿ ಸ್ಥಾನಕ್ಕೂ ಅರ್ಹರು.

ಮುನಿಯಪ್ಪನವರು ಸಕ್ರಿಯ ರಾಜಕಾರಣಿ. ಎಡಗೈ ಸಮುದಾಯದ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬರಲು ನೇರ ಕಾರಣ ಮುನಿಯಪ್ಪ. ಆದ ಕಾರಣ ಅಂತಹ ನಾಯಕರಿಗೆ ಉತ್ತಮ ಸ್ಥಾನಮಾನ ಕೊಟ್ಟು ಗೌರವಯುತವಾಗಿ ನಡೆಸಿಕೊಡಬೇಕು.

ಮುನಿಯಪ್ಪ ಅವರು ಕೇವಲ ಒಂದು ಜಾತಿಗೆ ಸೀಮರಲ್ಲ. ಅವರನ್ನು ಎಲ್ಲಾ ಜಾತಿ, ಧರ್ಮದವರು ನಾಯಕರನ್ನಾಗಿ ಸ್ವೀಕರಿಸಿದ್ದಾರೆ. ಮುಂದಿನ‌ ಚುನಾವಣೆಗಳ ಹಿತದೃಷ್ಠಿಯಿಂದ ಅವರಿಗೆ ಡಿಸಿಎಂ ಮಾಡಿ ಉತ್ತಮ‌ ಖಾತೆ ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ‌ ಮೇಳೆಕೋಟೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಚಿದಾನಂದ, ತೂಬಗೆರೆ ಹೋಬಳಿ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಆಂಜಿನಪ್ಪ, ಮಂಜುನಾಥ್ ಮೆಳೇಕೋಟೆ ಆಂಜಿನಪ್ಪ, ಲಕ್ಷ್ಮನಾಯಕ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.

Ramesh Babu

Journalist

Recent Posts

ಭಾರತದ ಉತ್ತರ ಮತ್ತು ದಕ್ಷಿಣ ಧ್ರುವ ಪ್ರವಾಸದ ನೆನಪುಗಳು…..

ಕಾಶ್ಮೀರ ಮತ್ತು ಕನ್ಯಾಕುಮಾರಿ...... ಭಾರತದ ಉತ್ತರ ಮತ್ತು ದಕ್ಷಿಣ ಧ್ರುವ ಪ್ರವಾಸದ ನೆನಪುಗಳು..... ಕನ್ಯಾಕುಮಾರಿ, ಧ್ಯಾನ, ಸ್ವಾಮಿ ವಿವೇಕಾನಂದ, ಕಾಶ್ಮೀರ,…

11 hours ago

ಶ್ರೀ ಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿ ಎಣಿಕೆ: 79,72,502 ಕಾಣಿಕೆ ಸಂಗ್ರಹ

ದೊಡ್ಡಬಳ್ಳಾಪುರ ತಾಲೂಕಿನ ನಾಗಾರಾಧನೆಗೆ ಪ್ರಸಿದ್ಧಿ ಪಡೆದಿರುವ ಶ್ರೀ ಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಹಣವನ್ನು ಎಣಿಕೆ‌…

1 day ago

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ರಾಜೀನಾಮೆ ಪತ್ರವನ್ನ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅಂಗೀಕಾರ: ಸಚಿವ ಸಂಪುಟವನ್ನೂ ತಕ್ಷಣ ಜಾರಿಗೆ ಬರುವಂತೆ ವಿಸರ್ಜನೆ

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಅಂಗೀಕರಿಸಿದ್ದಾರೆ.‌‌ ಜೊತೆಗೆ ಸಿದ್ದರಾಮಯ್ಯ…

1 day ago

ಸಿದ್ದರಾಮಯ್ಯ 8 ವರ್ಷಗಳು, ನರೇಂದ್ರ ಮೋದಿ 12 ವರ್ಷಗಳು…..

ಸಿದ್ದರಾಮಯ್ಯ 8 ವರ್ಷಗಳು, ನರೇಂದ್ರ ಮೋದಿ 12 ವರ್ಷಗಳು,.. ಕರ್ನಾಟಕ ಮತ್ತು ಭಾರತದ ಈ 25 ವರ್ಷಗಳಲ್ಲಿ ಆಗಿದ್ದೇನು...... 2000/2025......…

1 day ago

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ: ರಾಜ್ಯದ ಜನತೆಗೆ ಸಿದ್ದು ಕೃತಜ್ಞತೆ ಸಲ್ಲಿಕೆ

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ: ರಾಜ್ಯದ ಜನತೆಗೆ ಸಿದ್ದು ಕೃತಜ್ಞತೆಯ ಮಾತು * ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಲ್ಲಿಸಿರುವ…

2 days ago

ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿ- ಶಾಸಕ ಬೇಳೂರು ಗೋಪಾಲಕೃಷ್ಣ

ಬೆಂಗಳೂರು ಗ್ರಾಮಾಂತರ: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ತೀವ್ರವಾಗಿರುವ ನಡುವೆಯೇ, ಶಾಸಕ ಬೇಳೂರು ಗೋಪಾಲಕೃಷ್ಣ ಮಹತ್ವದ ಹೇಳಿಕೆ ನೀಡಿದ್ದಾರೆ.…

2 days ago