Categories: ಲೇಖನ

ಕಂಗನಾ ರಣಾವತ್ ಮೇಲಿನ ಕಪಾಳಮೋಕ್ಷ…..ಪರ-ವಿರೋಧ ಚರ್ಚೆ

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ನೂತನ ಸಂಸತ್ ಸದಸ್ಯೆಯಾದ ಖ್ಯಾತ ಸಿನಿಮಾ ನಟಿ ಕಂಗನಾ ರಣಾವತ್ ಅವರ ಮೇಲೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಯೋಧೆಯೊಬ್ಬರು ಕಪಾಳಮೋಕ್ಷ ಮಾಡಿರುವ ಘಟನೆ ದೇಶಾದ್ಯಂತ ಸದ್ದು ಮಾಡುತ್ತಿದೆ……..

ಪರ ಮತ್ತು ವಿರೋಧದ ಚರ್ಚೆಗಳು ನಡೆಯುತ್ತಿವೆ. ಅನೇಕ ರೈತ ಸಂಘಟನೆಗಳು ಆಕೆಯ ಪರವಾಗಿ ನಿಂತಿದ್ದರೆ ಇನ್ನೊಂದಷ್ಟು ಜನ ಕಂಗನಾ ರಣಾವತ್ ಪರವಾಗಿಯೂ ಸಹ ವಾದ ಮಾಡುತ್ತಿದ್ದಾರೆ…..

ಒಂದು ವಿಷಯವನ್ನು ಸಮಗ್ರವಾಗಿ ನೋಡಿ ನಿರ್ದಿಷ್ಟ ಅಭಿಪ್ರಾಯಕ್ಕೆ ಬರಲು ಈ ವಿಷಯ ಹೆಚ್ಚು ಸೂಕ್ತವಾಗಿದೆ. ಸಹಜ ನ್ಯಾಯ, ಕಾನೂನಿನ ನ್ಯಾಯ, ನಾಗರಿಕತೆಯ ನ್ಯಾಯ, ಮಾನವೀಯತೆ ನ್ಯಾಯ ಯಾರ ಪರ ಮತ್ತು ಹೇಗೆ ಇದಕ್ಕೆ ಅನ್ವಯವಾಗುತ್ತದೆ ಎಂಬುದು ಬಹಳ ಮುಖ್ಯ. ಇವೆಲ್ಲದರ ನಡುವೆ ವಾಸ್ತವ ನ್ಯಾಯ ಹೇಗಿರಬೇಕು ಎಂಬುದು ಸಹ ಅಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ…..

ನಮ್ಮೆಲ್ಲರ ಆತ್ಮಾವಲೋಕನಕ್ಕೆ ಈ ವಿಷಯ ತುಂಬಾ ಸೂಕ್ತವಾದದ್ದು. ಇದರ ವಿವಿಧ ಆಯಾಮಗಳನ್ನು ಸೂಕ್ಷ್ಮವಾಗಿ ಗಮನಿಸೋಣ…..

ಭಾರತ ಹಳ್ಳಿಗಳ ದೇಶ.
ಕೃಷಿ ಇಲ್ಲಿನ ಪ್ರಧಾನ ವೃತ್ತಿ. ರೈತರನ್ನು ಅನ್ನದಾತರು ಎಂದೇ ಕರೆಯಲಾಗುತ್ತದೆ. ಅಂತಹ ರೈತರು ಕೆಲವು ತಿಂಗಳುಗಳ ಹಿಂದೆ ದೆಹಲಿಯಲ್ಲಿ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಬೃಹತ್ ಚಳವಳಿ ಮಾಡುತ್ತಾರೆ. ಅನೇಕ ರೈತರು ಹುತಾತ್ಮರಾಗುತ್ತಾರೆ. ಈಗಲೂ ಒಂದಷ್ಟು ಚಳವಳಿ ನಡೆಯುತ್ತಲೇ ಇದೆ……

ಆದರೆ ಕೃತಕ ಬಣ್ಣದೊಂದಿಗೆ, ಕೃತಕ ಬೆಳಕಿನೊಂದಿಗೆ, ಮತ್ಯಾರೋ ಬರೆದುಕೊಟ್ಟ ಸಂಭಾಷಣೆಯೊಂದಿಗೆ, ಸಂಕಲನ, ಸಂಗೀತದ ಸಂಯೋಜನೆಯೊಂದಿಗೆ ಅಭಿನಯಿಸುವ ಸಿನಿಮಾ ನಟಿ ಕಂಗನಾ ರಣಾವತ್ ಆ ರೈತ ಹೋರಾಟದ ಮಹಿಳೆಯರ ಬಗ್ಗೆ ಒಂದು ಹೇಳಿಕೆಯನ್ನು ನೀಡುತ್ತಾರೆ. ಆ ಚಳವಳಿಯಲ್ಲಿ ಭಾಗವಹಿಸಿದ ಹೆಣ್ಣು ಮಕ್ಕಳು ನೂರು ರೂಪಾಯಿಯ ಬಾಡಿಗೆ ಹೋರಾಟಗಾರರು ಎಂಬರ್ಥದಲ್ಲಿ ಅತ್ಯಂತ ತುಚ್ಛವಾಗಿ ಮಾತನಾಡುತ್ತಾರೆ. ಖಂಡಿತವಾಗಲೂ ಇದೊಂದು ಅಯೋಗ್ಯ, ಅಸೂಕ್ಷ್ಮ, ವಿವೇಚನೆ ಇಲ್ಲದ, ದುರಹಂಕಾರಿ ಹೇಳಿಕೆ. ನೂರು ರೂಪಾಯಿಗೆ ಪ್ರತಿಭಟನೆಗೆ ಇಳಿದು ದೀರ್ಘಕಾಲ ಪ್ರತಿಭಟನೆ ಮಾಡುವುದು ಕೋಟ್ಯಂತರ ಹಣ ಪಡೆದು ಸಿನಿಮಾದಲ್ಲಿ ಅಭಿನಯಿಸಿದಂತಲ್ಲ. ಅದೊಂದು ಬದುಕಿನ ಹೋರಾಟ. ಸ್ವಾಭಿಮಾನದ ಸಂಕೇತ. ಹಕ್ಕುಗಳಿಗಾಗಿ ಬಡಿದಾಟ…..

ಜೊತೆಗೆ ಆ ಬೇಡಿಕೆಗಳ ಮಹತ್ವ ಕಂಗನಾ ಅವರಿಗೆ ಅರ್ಥವಾದಂತಿಲ್ಲ. ರೈತರ ಸಂಕಷ್ಟಗಳು ಅವರಿಗೆ ತಿಳಿದಿಲ್ಲ. ಅವರಿಗೆ ವಿರೋಧವಿದ್ದರೆ ಆ ರೈತ ಹೋರಾಟವನ್ನು ಸೈದ್ಧಾಂತಿಕವಾಗಿ ವಿರೋಧಿಸಬಹುದಿತ್ತೇ ಹೊರತು ಆ ರೀತಿಯ ಪದಗಳಿಂದ ನಿಂದಿಸಲು ಅವರಲ್ಲಿರುವ ಕಠಿಣ, ಕಠೋರ, ವಿಷಯುಕ್ತ ಮನಸ್ಥಿತಿಯೇ ಕಾರಣ…..

ಆದ್ದರಿಂದ ಆಕೆಯ ಆ ಹೇಳಿಕೆ ನಿಜಕ್ಕೂ ಅನೇಕರಿಗೆ ಬೇಸರ ಮೂಡಿಸಿದೆ ಮತ್ತು ಕೆಲವರಿಗೆ ಆಕ್ರೋಶವನ್ನು ಉಂಟು ಮಾಡಿದೆ. ಆ ಹೇಳಿಕೆ ಖಂಡನಾರ್ಹ……

ಹಾಗೆಯೇ ಇದಕ್ಕೆ ಇನ್ನೊಂದು ಮುಖವೂ ಇದೆ. ದೇಶದ ಅನೇಕ ಮುಖ್ಯ ಸ್ಥಳಗಳ ರಕ್ಷಣೆಗಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು ರಚಿಸಲಾಗಿದೆ. ಅದೊಂದು ಸರ್ಕಾರಿ ಉದ್ಯೋಗ. ರಕ್ಷಣೆಯೇ ಬಹಳ ಮುಖ್ಯ. ಹಾಗಿದ್ದ ಸಂದರ್ಭದಲ್ಲಿ, ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ರಕ್ಷಣಾ ಪಡೆಯ ಯೋಧೆಯ ತಾಯಿಯು ಆ ಚಳವಳಿಯಲ್ಲಿ ಭಾಗವಹಿಸಿರುತ್ತಾರೆ. ಅವರಿಗೆ ಕಂಗನ ರಣಾವತ್ ಅವರ ಹೇಳಿಕೆ ಬಹಳ ನೋವನ್ನುಂಟು ಮಾಡಿರುತ್ತದೆ. ಅದು ಸಹಜ…..

ಆದರೆ ಆ ಅಕ್ರೋಶವನ್ನು ಆಕೆ ಕಂಗನಾ ರಣಾವತ್ ವಿಮಾನ ನಿಲ್ದಾಣದಲ್ಲಿ ತಪಾಸಣೆಗಾಗಿ ನಿಂತಿರುವಾಗ ಕಪಾಳಕ್ಕೆ ಹೊಡೆದು ವ್ಯಕ್ತಪಡಿಸುವುದು ಅತ್ಯಂತ ಖಂಡನೀಯ ಮತ್ತು ಅಮಾನವೀಯ. ಇಲ್ಲಿ ಕಾನೂನು ಮತ್ತು ಮಾನವೀಯತೆ ಎರಡಕ್ಕೂ ಈ ಘಟನೆ ವಿರೋಧವಾಗಿದೆ. ಆಕೆಗೆ ಆಕ್ರೋಶವಿದ್ದಲ್ಲಿ ಅದನ್ನು ವ್ಯಕ್ತಪಡಿಸಲು ಅನೇಕ ಮಾರ್ಗಗಳಿವೆ……

ಪ್ರತಿಭಟಿಸಬಹುದು, ಧಿಕ್ಕಾರ ಕೂಗಬಹುದು, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬಹುದು ಅಥವಾ ಆಕೆ ನಿಂತಿದ್ದ ಚುನಾವಣಾ ಸಂದರ್ಭದಲ್ಲಿ ಆಕೆಯ ವಿರುದ್ಧ ಸ್ಪರ್ಧಿಸಿ ಸೋಲಿಸಬಹುದು ಹೀಗೆ ನಾನಾ ಸಾಧ್ಯತೆಗಳಿವೆ. ಆದರೆ ಅದನ್ನು ಮಾಡಲು ಮೊದಲಿಗೆ ಆಕೆ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಬೇಕು. ರಕ್ಷಕರೇ ಈ ರೀತಿಯ ಹಿಂಸಾಕೃತ್ಯದಲ್ಲಿ ತೊಡಗುವುದು ಖಂಡಿತ ವಿಷಯ ಯಾವುದಾದರು ಒಪ್ಪತಕ್ಕದ್ದಲ್ಲ. ಆದ್ದರಿಂದ ರೈತ ಸಂಘಟನೆಗಳು ಪ್ರತಿಭಟನೆ ಮಾಡುವುದು ಸಹ ಸರಿಯಲ್ಲ….

ಹೀಗೆ ಇನ್ನೂ ಒಂದು ವಾದವಿದೆ. ಹಾಗಾದರೆ ಈ ಸಮಾಜದ ತಿಂದು ಕೊಬ್ಬಿದ, ಶ್ರಮವಹಿಸದ, ರಾಜಕಾರಣಿಗಳು, ಅಧಿಕಾರಿಗಳು, ಸ್ವಾಮೀಜಿಗಳು, ಸಿನಿಮಾನಟರು, ಹೋರಾಟಗಾರರು ಹೇಗೆಂದರೆ ಹಾಗೆ ಬಾಯಿಗೆ ಬಂದಂತೆ ಮಾತನಾಡಬಹುದೇ ಎನ್ನುವ ಪ್ರಶ್ನೆಯು ಹಲವರಲ್ಲಿ ಉದ್ಭವವಾಗುತ್ತದೆ. ಪ್ರಜಾಪ್ರಭುತ್ವವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒಪ್ಪಿಕೊಂಡ ಮೇಲೆ ಅದರ ಈ ರೀತಿಯ ಸ್ವೇಚ್ಛಾಚಾರವನ್ನು ಸಹ ಒಂದಷ್ಟು ಮಟ್ಟಿಗೆ ಸಹಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ನಾಳೆ ಕಾನೂನು ಮತ್ತು ಸಮಾಜ ಹಿಡಿತಕ್ಕೆ ಸಿಗುವುದಿಲ್ಲ. ನಮ್ಮ ಧ್ವನಿ ಮತ್ತು ಬೆಂಬಲ ಯೋಧೆಯ ಸಾತ್ವಿಕ ಆಕ್ರೋಶದ ಪರವಾಗಿ ಇದ್ದರೂ, ನಮ್ಮ ವಿರೋಧ ಕಂಗನಾ ರಣಾವತ್ ಅವರ ಹೇಳಿಕೆ ಬಗ್ಗೆ ಇದ್ದರೂ ಸಹ, ನ್ಯಾಯಾಂಗ ವ್ಯವಸ್ಥೆ, ಮಾನವೀಯತೆ ಮತ್ತು ಕರ್ತವ್ಯ ಪ್ರಜ್ಞೆಯ ಮೂಲಕ ವಿಷಯವನ್ನು ಪರಾಮರ್ಶಿಸಿ ನೋಡಬೇಕಾಗುತ್ತದೆ……

ನಮಗೆ ಸರಿ ಎನಿಸಿದ ನ್ಯಾಯವು ಸರಿಯೇ ಆಗಿರಬೇಕೆಂದೇನೂ ಇಲ್ಲ. ಅಲ್ಲಿ ನಿಂತು, ಇಲ್ಲಿ ನಿಂತು, ಸುತ್ತಲೂ ನೋಡಿ, ದೂರಕ್ಕೆ ನೋಡಿ ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಆಗ ಅನೇಕ ಸಮಸ್ಯೆಗಳು ಸಹಜವಾಗಿ, ಸರಳವಾಗಿ ಬಗೆಹರಿಯುತ್ತದೆ……

ಇದನ್ನೂ ಮೀರಿದ ಇನ್ನೂ ಕೆಲವು ಆಯಾಮಗಳು ಇರಬಹುದು. ಅದನ್ನೂ ಸ್ವಾಗತಿಸುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ ಎಚ್. ಕೆ

Ramesh Babu

Journalist

Recent Posts

ಸಿನಿಮಾ ಸ್ಟೈಲ್‌ನಲ್ಲಿ ಪೊಲೀಸರ ಚೇಸಿಂಗ್: ಎರಡೇ ಗಂಟೆಗಳಲ್ಲಿ ಕಳವು ಮಾಡಿದ್ದ ಕ್ಯಾಷ್‌ ಸಮೇತ ಕಳ್ಳರ ಬಂಧನ

ಚಿಕ್ಕಬಳ್ಳಾಪುರ-‌ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಕ್ಷಣ ಮಾತ್ರದಲ್ಲಿ ಕಣ್ಣಿಗೆ ಕಾರದಪುಡಿ ಹಾಕಿ ಒಂದಲ್ಲ ಎರಡಲ್ಲ ಬರೋಬ್ಬರಿ ಏಳೂವರೆ…

8 hours ago

ನಮ್ಮ ದೇಶದ ಪ್ರಗತಿ ಯುವಜನರಿಂದಲೇ ಆಗಬೇಕಿದೆ-ಇಂಧನ‌ ಸಚಿವ ಕೆ.ಜೆ.ಜಾರ್ಜ್

ಸುಶಿಕ್ಷಿತ, ಪ್ರಜ್ಞಾವಂತ ಯುವಶಕ್ತಿಯಿಂದ ನಮ್ಮ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ. ಇಂಡಿಯನ್ ಅಕಾಡೆಮಿ ಆಫ್…

9 hours ago

ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭೀಕರ ಅಪಘಾತ: ಬೈಕ್ ಸವಾರ ದುರ್ಮರಣ

ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ಮೇ.12ರ ರಾತ್ರಿ…

13 hours ago

‘ಪಬ್ಲಿಕ್ ಮಿರ್ಚಿ’ ವರದಿ ಫಲಶೃತಿ: ಕೊನೆಗೂ ಹೊಸಹಳ್ಳಿ ರಸ್ತೆಗೆ ಡಾಂಬರ್ ಭಾಗ್ಯ – ಜನರಲ್ಲಿ ಸಂತಸ

ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು–ಆರೂಢಿ ಭಾಗದ ಜನರ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಗುಂಡಮಗೆರೆ–ಹೊಸಹಳ್ಳಿ ರಸ್ತೆಗೆ ಕೊನೆಗೂ ಡಾಂಬರೀಕರಣ ಕಾಮಗಾರಿ ಆರಂಭವಾಗಿದ್ದು, ಗ್ರಾಮಸ್ಥರಲ್ಲಿ…

14 hours ago

ಐದು ದಶಕಗಳಿಂದ ಗುಡಿಸಲಲ್ಲೇ ಬದುಕು: ಮೂಲಭೂತ ಸೌಲಭ್ಯಕ್ಕಾಗಿ ಹಕ್ಕಿಪಿಕ್ಕಿ ಕುಟುಂಬಗಳ ನರಳಾಟ

ದೊಡ್ಡಬಳ್ಳಾಪುರ: ಸರ್ಕಾರ ಆಶ್ರಯ ಯೋಜನೆ ಮೂಲಕ ಗುಡಿಸಲು ಮುಕ್ತ ರಾಜ್ಯ ನಿರ್ಮಾಣದ ಘೋಷಣೆ ಮಾಡುತ್ತಿದ್ದರೂ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ…

20 hours ago

ಓದು ಮುಖ್ಯ. ಗ್ರಹಿಕೆ ಅತಿಮುಖ್ಯ. ಮಾನವೀಯ ಸ್ಪಂದನೆ ಎಲ್ಲಕ್ಕಿಂತ ಮುಖ್ಯ

ಅನಕ್ಷರಸ್ಥರ ಬುದ್ದಿವಂತಿಕೆ ಪ್ರಶ್ನಿಸುವವರು ಅಕ್ಷರಸ್ಥರ ಮಾನವೀಯತೆಯನ್ನು ಪ್ರಶ್ನಿಸಬೇಕಲ್ಲವೇ........ ......ಒಂದು ಟ್ವೀಟ್... ಅಕ್ಷರ ಕಲಿಕೆ ಒಂದು ನೈಪುಣ್ಯ ಅಥವಾ ಸುಲಭವಾಗಿ ಮಾಹಿತಿ…

21 hours ago