Categories: ಲೇಖನ

ಆಡಂಬರದ, ಅಹಂಕಾರದ ಜೀವನಕ್ಕಿಂತ ಸಹಜ ಸರಳ ಪ್ರಾಮಾಣಿಕ ಬದುಕೇ ನೆಮ್ಮದಿಯ ತಾಣ

ಸಾಕು ಸಂಬಳ – ಬೇಕು ನೆಮ್ಮದಿ…..

ಜೈಲಿನ ಗೋಡೆಗಳ ನಡುವೆ…….

ನನ್ನೊಳಗಿನ ಜ್ಞಾನೋದಯ ನಿಮ್ಮೊಳಗೂ ಆಗಬಾರದೇ……

ಲೋಕಾಯುಕ್ತ ದಾಳಿ ಮತ್ತು ಮುದ್ದೆ ಸೊಪ್ಪಿನ ಸಾರು……………

ಕಂತೆ ಕಂತೆಗಳ ನಡುವೆ ಮಗುವಿನ ಮುಗ್ದತೆಗೆ ಮನಸ್ಸು ಮರಳಬಾರದೇ…..

ನನ್ನ ಬಾಲ್ಯದಲ್ಲಿ ವಾರ ಪೂರ್ತಿ ಒಂದೇ ಹರಿದ ಬಟ್ಟೆ ಧರಿಸುತ್ತಿದ್ದೆ.

ವಾರದಲ್ಲಿ ಒಂದೇ ದಿನ ಅಂದರೆ ಭಾನುವಾರ ಮಾತ್ರ ಸ್ನಾನ.

ಪ್ರತಿದಿನ ಮುಂಜಾನೆ ಕಾಡಿಗೆ ಹೋಗಿ ಒಣಗಿದ ಸೌದೆ ತರಬೇಕಾಗಿತ್ತು.

ಪ್ರತಿದಿನದ ಊಟ ರಾತ್ರಿಯ ತಂಗಳು ಮತ್ತು ಬೆಳಗಿನ ಗಂಜಿ ಮಾತ್ರ.

ಶಾಲೆಯ ಮಧ್ಯಾಹ್ನದ ಉಪ್ಪಿಟ್ಟೇ ನನಗೆ ಪಂಚಾಮೃತ.

ರಾತ್ರಿ ಸೀಮೆಎಣ್ಣೆಯ ಬುಡ್ಡಿ ದೀಪಗಳೇ ನಮಗೆ ಬೆಳಕಿನ ಮೂಲಗಳು.

ಸರ್ಕಾರದ ಪಾಳುಬಿದ್ದ ಕಟ್ಟಡಗಳೇ ನಮ್ಮ ಶಾಲಾ ತರಗತಿಗಳು.

ಅತ್ಯುತ್ತಮ ಶಿಕ್ಷಕರ ಜೊತೆ ಕ್ರೌರ್ಯತೆ ಇದ್ದ ಶಿಕ್ಷಕರೂ ನಮ್ಮ ಮೇಷ್ಟುಗಳು.

ಆದರೂ SSLC ಪರೀಕ್ಷೆಯಲ್ಲಿ FIRST CLASS ನಲ್ಲಿ ಪಾಸಾದೆ.

ಅನಂತರ PUC ಮತ್ತು BA ಕೂಡ ಸರ್ಕಾರಿ ಕಾಲೇಜಿನಲ್ಲೇ
ಓದಿ ಒಳ್ಳೆಯ ಅಂಕಗಳೊಂದಿಗೆ ಪಾಸಾದೆ.

ಆಗಲೂ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದುದು ಕೇವಲ
ಮದುವೆ ಸಮಾರಂಭಗಳಲ್ಲಿ ಮಾತ್ರ.

ಸೇಬು ಹಣ್ಣು ನಾನು ಕೆಲಸಕ್ಕೆ ಸೇರುವವರೆಗೂ ತಿಂದೇ ಇರಲಿಲ್ಲ.

ಹಾಗೂ ಹೀಗೂ ಕಷ್ಟಪಟ್ಟು ಓದಿ KAS ( KPSC ) ಬರೆದು ಅದರಲ್ಲಿ SELECT ಆದೆ.

ಯಾರದೋ ಕ್ಯೆಕಾಲು ಹಿಡಿದು ತಹಶೀಲ್ದಾರ್ ಆಗಿ ನೇಮಕವಾದೆ.

ಬಾಲ್ಯ, ಯೌವನದ ಹಸಿವು ಅವಮಾನಗಳು ಒಮ್ಮೆಲೇ ಎಗರಿ ಬಿದ್ದವು,

ಸಂಬಳದ ಜೊತೆಗೆ ಕುಳಿತಲ್ಲೇ ಲಕ್ಷಾಂತರ ಹಣ ಲಂಚದ ರೂಪದಲ್ಲಿ ಹರಿದು ಬರತೊಡಗಿತು.

ಹಣ ಎಲ್ಲಿ ಇಡುವುದು ಎಂಬುದೇ ಸಮಸ್ಯೆಯಾಯಿತು.

ಬಡತನದಲ್ಲಿ ನನ್ನನ್ನು ಮೂದಲಿಸಿದ್ದ ತುಚ್ಚವಾಗಿ ಕಂಡಿದ್ದ ನಾಯಿ ನರಿಗಳು ಕೂಡ ಮಹಾರಾಜನಂತೆ ನೋಡತೊಡಗಿದರು.

ಪ್ರತಿದಿನವೂ ಭರ್ಜರಿ ಸಂತೋಷ ಕೂಟಗಳೇ ಶ್ರೀಮಂತ ಹೋಟೇಲ್ ಗಳಲ್ಲಿ.

ಬೇರೆ ಬೇರೆ ಕಡೆ ಆಸ್ತಿಗಳು ನನ್ನ ಹೆಸರಿಗೆ ಸೇರತೊಡಗಿದವು,

ಸ್ವರ್ಗಕ್ಕೆ ಮೂರೇ ಗೇಣು. ನನಗೆ ಗೊತ್ತಿಲ್ಲದೆ ನನ್ನ ಅಹಂಕಾರವೂ ಮೇರೆ ಮೀರಿತ್ತು.

ಬಾಲ್ಯದ ಕೀಳರಿಮೆ ಅದಕ್ಕೆ ಕಾರಣವಾಗಿರಬಹುದು.

ಆದರೆ……….,

ಒಂದು ಬೆಳಗಿನ ಜಾವ ಇದ್ದಕ್ಕಿದ್ದಂತೆ ಲೋಕಾಯುಕ್ತ ಪೊಲೀಸರಿಂದ ನನ್ನ ಮನೆ ಮೇಲೆ ದಾಳಿ,

ಎಚ್ಚೆತ್ತುಕೊಳ್ಳುವ ಮುನ್ನ ಎಲ್ಲಾ ಬಟಾ ಬಯಲು,

ಬೆಳಕು ಹರಿಯುವ ಮುನ್ನ ಅಪಾರ ಹಣ ಆಸ್ತಿ ವಶ. ಟಿವಿಯಲ್ಲಿ ಮಾನ ಹರಾಜು, ಬಂಧನ, ಸಂಜೆಯೊಳಗೆ ಜೈಲಿಗೆ ರವಾನೆ.

ಈಗ ತಾನೇ ಕ್ಯೂನಲ್ಲಿ ನಿಂತು, ತಟ್ಟೆ ಹಿಡಿದು ಊಟ ಹಾಕಿಸಿಕೊಂಡು ಮುದ್ದೆ ಮುರಿಯುತ್ತಿದ್ದೇನೆ.

ಈಗ, ಒಮ್ಮೆಗೇ ಆ ಬಡತನದ ದಿನಗಳು ನೆನಪಾಗುತ್ತಿವೆ.
ಕಣ್ಣ ನೀರು ತಟ್ಟೆಗೆ ಬೀಳುತ್ತಿದೆ.

ಆ ದಿನಗಳು, ಆ ಬೆಳದಿಂಗಳ ರಾತ್ರಿಗಳಲ್ಲಿ ಮನೆಯ ಮುಂದೆ ತಿನ್ನುತ್ತಿದ್ದ ಮುದ್ದೆ ಸೊಪ್ಪಿನ ಸಾರು
ಯಾಕೋ ನೆನಪಾಗುತ್ತಿದೆ.

ಈ ನೋವಿನಲ್ಲೂ ಆ ಮಧುರ ನೆನಪುಗಳು ಮುದ ನೀಡುತ್ತಿದೆ.

ಹಾಗೇ ಅತ್ತು ಅತ್ತು ಮನಸ್ಸು ಹಗುರಾಯಿತು. ಬದುಕಿನ ನಿಜ ಅರ್ಥ ಅರಿವಾಯಿತು.

ಎಲ್ಲವನ್ನೂ ಕಳೆದುಕೊಂಡರೂ ನನ್ನನ್ನು ನಾ ಪಡೆದೆ ಎಂಬ ಸಮಾಧಾನದ ಭಾವ ಮೂಡಿತು.

ಆಡಂಬರದ ಅಹಂಕಾರದ ಜೀವನಕ್ಕಿಂತ ಸಹಜ ಸರಳ ಪ್ರಾಮಾಣಿಕ ಬದುಕೇ ನೆಮ್ಮದಿಯ ತಾಣ ಎಂಬ ಜ್ಞಾನೋದಯವಾಯಿತು……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಕನ್ನಡದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ

ದೊಡ್ಡಬಳ್ಳಾಪುರ: ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಮತ್ತು ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು…

16 hours ago

ಕ್ಷಯ ಮುಕ್ತ ಭಾರತ ಅಭಿಯಾನ: ಜಾಗೃತಿ ಜಾಥಾ, ಬೀದಿ ನಾಟಕದ ಮೂಲಕ ಅರಿವು

ದೊಡ್ಡಬಳ್ಳಾಪುರ: ಕ್ಷಯರೋಗ ಮುಕ್ತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ತಾಲ್ಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಟಿಬಿ ಮುಕ್ತ ಭಾರತ್ ಅಭಿಯಾನ’ದ…

16 hours ago

ಎಕ್ಸ್‌ಪ್ರೆಸ್ ರೈಲು ಹರಿದು ಇಬ್ಬರು ಮಹಿಳೆಯರು, ಮಗು ಬಲಿ

ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಎಕ್ಸ್‌ಪ್ರೆಸ್ ರೈಲು ಹರಿದ ಪರಿಣಾಮ ಇಬ್ಬರು ಮಹಿಳೆಯರು ಹಾಗೂ ಒಂದು ಮಗು…

21 hours ago

ಟಾಕ್ಸಿಕ್

ಕ್ರಿಯಾತ್ಮಕತೆ ಮತ್ತು ಪ್ರಯತ್ನಗಳಿಗೂ ಒಂದಷ್ಟು ಮಿತಿ ಇರುತ್ತದೆ. ಏಕೆಂದರೆ ನಾವು ಸಾಮಾನ್ಯ ಮನುಷ್ಯರು. ಹಣ, ಜನಪ್ರಿಯತೆ, ಅಧಿಕಾರ ಬಂದ ತಕ್ಷಣ…

3 days ago

ಚಿ.ನಾ.ಹಳ್ಳಿ ತಾಲ್ಲೂಕಿಗೆ ಸಿಇಒ ದಿಢೀರ್ ಭೇಟಿ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಚಿಕ್ಕನಾಯಕನಹಳ್ಳಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ ಬಿ.ವಿ. ಅವರು ತಾಲ್ಲೂಕಿಗೆ ದಿಢೀರ್ ಭೇಟಿ ನೀಡಿ ವಿವಿಧ ಅಭಿವೃದ್ಧಿ…

4 days ago

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೆಂಗಳೂರು ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಸೇರಿ ನಾಲ್ವರು ಬಲಿ

ಬೆಂಗಳೂರು: ಆರೋಪಿಯ ಹುಡುಕಾಟಕ್ಕೆ ತೆರಳುತ್ತಿದ್ದ ಬೆಂಗಳೂರು ಸೈಬರ್ ಕ್ರೈಂ ತಂಡ ಪ್ರಯಾಣಿಸುತ್ತಿದ್ದ ಬಸ್ ಮಧ್ಯಪ್ರದೇಶದಲ್ಲಿ ಭೀಕರ ಅಪಘಾತಕ್ಕೀಡಾಗಿ, ಪೊಲೀಸ್ ಇನ್‌ಸ್ಪೆಕ್ಟರ್…

4 days ago