
ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಅಕ್ರಮವಾಗಿ ರಕ್ತಚಂದನ ಸಾಗಣೆ ಮಾಡುತ್ತಿದ್ದ ಕಳ್ಳರನ್ನು ಹೊಸಕೋಟೆ ಪೊಲೀಸರು ಬಂಧನ ಮಾಡಿದ್ದಾರೆ.
ಖತರ್ನಾಕ್ ಕಳ್ಳರು ರಕ್ತಚಂದನ ಮರದ ತುಂಡುಗಳನ್ನು ತರಿಸಿಕೊಂಡು ಡೆಲಿವರಿ ಟ್ರಾನ್ಸ್ ಫೋರ್ಟ್ ಮಾಡಲು ಮುಂದಾಗಿದ್ದರು.

ಏಜಾಜ್ ಷರೀಪ್(47), ಪಯಾಜ್ ಷರೀಪ್( 47) ಮತ್ತು ಸಾಧಿಕ್ ಖಾನ್( 34) ಬಂದಿತ ಆರೋಪಿಗಳು.
ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ, ಟೇಪ್ ಸುತ್ತಿ ಡಿಲಿವರಿ ಮಾಡಲು ಮುಂದಾಗಿದ್ದರು.

ಹೊಸಕೋಟೆಯ ಕೊಳತ್ತೂರು ಗ್ರಾಮದ ಡಿಲವರಿ ಟ್ರಾನ್ಸ್ ಪೋರ್ಟ್ ಕಂಪನಿ ಮೂಲಕ ಹರಿಯಾಣದ ವಿಷ್ಣುಕುಮಾರ್ ಎಂಬುವವರಿಗೆ ಪಾರ್ಸಲ್ ಮಾಡಲು ಯತ್ನಿಸಿದ್ದರು.
25 ಲಕ್ಷ ಬೆಲೆ ಬಾಳುವ 1093 ಕೆಜಿ ತೂಕದ 102 ತುಂಡುಗಳು ವಶಕ್ಕೆ ಪಡೆಯಲಾಗಿದೆ.ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.