ರೈಲಿಗೆ ಸಿಲುಕಿ ವ್ಯಕ್ತಿ ಸಾವು: ಆತ್ಮಹತ್ಯೆ ಶಂಕೆ

ರೈಲಿಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಗರದ ರೈಲ್ವೆ ನಿಲ್ದಾಣ ಸಮೀಪದ ಸಿದ್ದೇನಾಯಕನಹಳ್ಳಿ ಬಳಿ‌ ಇಂದು ನಡೆದಿದೆ.

ಮೃತ ದುರ್ದೈವಿಯನ್ನು ಬೆಳಗಾವಿ ಮೂಲದ ದೇವೇಂದ್ರ(46) ಎಂದು ಗುರುತಿಸಲಾಗಿದೆ.

ಮೃತ ವ್ಯಕ್ತಿ ಹೆಂಡತಿ ಮಕ್ಕಳನ್ನು ಬೆಳಗಾವಿಯಲ್ಲೇ ಬಿಟ್ಟು ದೊಡ್ಡಬಳ್ಳಾಪುರ ನಗರದ ತೇರಿನ‌ಬೀದಿಯಲ್ಲಿ ಮಗ್ಗದ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಮಾನಸಿಕವಾಗಿ ಮನನೊಂದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ರೈಲ್ವೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಫೆ.19ರಂದು ರೀಲ್ಸ್ ಹಾಗೂ ಸೆಲ್ಫಿ‌ ಹುಚ್ಚಿಗೆ ಮೂವರು ಯುವಕರ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದರು. ಆ ಯುವಕರು ಸಾವನ್ನಪ್ಪಿದ ಸುಮಾರು 100 ಮೀ. ಅಂತರದಲ್ಲಿ‌ ಇಂದು ಈ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರು ದೌಡಾಯಿಸಿ‌ ಪರಿಶೀಲನೆ‌‌ ನಡೆಸಿದ್ದಾರೆ.

Leave a Reply

Your email address will not be published. Required fields are marked *