ಕೋಲಾರ: ಜಿಲ್ಲೆಯ ಬಹುತೇಕ ಜನರ ಜೀವನಾಧಾರ ಹೈನುಗಾರಿಕೆಯಾಗಿದೆ. ಮಹಿಳೆಯರು ಮತ್ತು ರೈತರ ಬೆವರು ಇದರಲ್ಲಿ ಅಡಗಿದೆ.ಹಾಲಿನ ಹಣ ತಿಂದವರು ಯಾವುದೇ ಕಾರಣಕ್ಕೂ ಉದ್ದಾರವಾಗಲ್ಲ ಎಂದು ಕೋಮುಲ್ ನಿರ್ದೇಶಕ ಚಂಜಿಮಲೆ ಬಿ ರಮೇಶ್ ತಿಳಿಸಿದರು.
ತಾಲೂಕಿನ ಚಂಜಿಮಲೆ ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು ಹಾಲಿಗೂ ನೀರಿಗೂ ತುಂಬಾ ವ್ಯತ್ಯಾಸವಿದೆ. ಕಲಬೆರಕೆ ಮಾಡಬೇಡಿ. ಯಾವುದಾದರೂ ತಪ್ಪು ಕಂಡುಬಂದರೆ ಕೂಡಲೇ ಪ್ರಶ್ನೆ ಮಾಡಬೇಕು. ಹಾಲಿನ ದುಡ್ಡು ತಿನ್ನಂದರೆ ರೈತರು ಮಹಿಳೆಯರ ಶಾಪ ತಟ್ಟುತ್ತದೆ ಹಾಲು ದುಡ್ಡು ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.
ಚಂಜಿಮಲೆ ಡೇರಿಯಲ್ಲಿ ಈ ಸಾಲಿನಲ್ಲಿ 13 ಲಕ್ಷ ವ್ಯಾಪಾರ ಗಳಿಸಿದ್ದು ಅದರಲ್ಲಿ 7.46 ಲಕ್ಷದಷ್ಟು ನಿವ್ವಳ ಲಾಭಗಳಿಸಿದೆ ಉತ್ಪಾದಕರು ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಿ ಉತ್ತಮ ಲಾಭಾಂಶವನ್ನು ಪಡೆಯಬೇಕು ಕಾಲಕಾಲಕ್ಕೆ ರಾಸುಗಳಿಗೆ ವಿಮೆ, ವಾಕ್ಸಿನ್ ಮಾಡಿಸಬೇಕು ಜೊತೆಗೆ ಉತ್ಪಾದಕರು ಕಡ್ಡಾಯವಾಗಿ ಯಶಸ್ವಿನಿ ಯೋಜನೆ ಮಾಡಿಸಿ ಅದರ ಪ್ರಯೋಜನವನ್ನು ಪಡೆಯಬೇಕು ಕೋಮುಲ್ ವತಿಯಿಂದ ಎಂವಿಕೆ ಡೇರಿ, ಸೋಲಾರ್ ಘಟಕದ ಮೂಲಕ ಹಾಲು ಉತ್ಪಾದಕರಿಗೆ ಅನುಕೂಲವಾಗುವಂತೆ ಒಕ್ಕೂಟ ಮಾಡಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕ ಮುನೇಶ್ ಮಾತನಾಡಿ ಒಕ್ಕೂಟಕ್ಕೆ ಸಂಘಗಳು ಆಧಾರಸ್ಥಂಭವಾಗಿದ್ದು ಯಾವುದೇ ಕಾರಣಕ್ಕೂ ಒಕ್ಕೂಟದಲ್ಲಿ ಹಣ ಪೋಲು ಆಗದಂತೆ ಚಂಜಿಮಲೆ ಡೇರಿಯಿಂದ ಪ್ರತಿನಿಧಿಸಿ ಆಯ್ಕೆಯಾದ ಕೋಮುಲ್ ನೂತನ ನಿರ್ದೇಶಕರು ಕ್ರಮ ವಹಿಸಬೇಕಾಗಿದೆ ಮಹಿಳೆಯರು ರೈತರ ಧ್ವನಿಯಾಗಿ ಕೋಮುಲ್ ಆಡಳಿತ ಮಂಡಳಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಚಂಜಿಮಲೆ ಡೇರಿ ಉಪಾಧ್ಯಕ್ಷ ಎನ್ ಶ್ರೀರಾಮಪ್ಪ, ನಿರ್ದೇಶಕರಾದ ಇ ಚಂದ್ರಪ್ಪ, ನರಸಿಂಹಪ್ಪ, ಪ್ರಸನ್ನ, ಅಲ್ಲಾಭಕಾಷ್, ದೇವರಾಜ್, ರಾಜಪ್ಪ, ಪುಷ್ಪ, ಗೌರಮ್ಮ, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಸಿ.ಎನ್ ಪಾಪಣ್ಣ, ಹಾಲು ಪರೀಕ್ಷಕ ಶ್ರೀನಿವಾಸಯ್ಯ, ಸಹಾಯಕ ಮೋಹನ್ ಸೇರಿದಂತೆ ಹಾಲು ಉತ್ಪಾದಕರ ಗ್ರಾಮಸ್ಥರು ಇದ್ದರು.
ರೌಡಿಯಿಸಂ, ಗೂಂಡಾಗಿರಿ, ದೌರ್ಜನ್ಯದಿಂದ ಏನೂ ಪ್ರಯೋಜನವಿಲ್ಲ. ನೆಮ್ಮದಿ ಕಳೆದುಕೊಂಡು, ಕುಟಂಬದಿಂದ ದೂರಾವಾಗಿ ಭಯಭೀತಿಯಲ್ಲಿ ಜೀವನ ಮಾಡಬೇಕಷ್ಟೇ. ಹೀಗಾಗಿ ಅಕ್ರಮ, ಅನೈತಿಕ,…
ಚಿಕ್ಕಬಳ್ಳಾಪುರ: ಜಿಲ್ಲೆಯ ತಾಲೂಕಿನ ಅರಸನಹಳ್ಳಿಯಲ್ಲಿ ತಡರಾತ್ರಿ ಭೀಕರ ಘಟನೆಯೊಂದು ನಡೆದಿದೆ. ಮದುವೆ ಕಾರ್ಯಕ್ರಮವಿದ್ದ ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳು…
ಶನೇಶ್ವರ ಜಯಂತಿ ಹಾಗೂ ಅಮಾವಾಸ್ಯೆ ಒಂದೇ ದಿನ ಬಂದಿರುವ ಹಿನ್ನೆಲೆ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಶನೇಶ್ವರ ದೇವಸ್ಥಾನದಲ್ಲಿ ಅಪಾರ ಭಕ್ತಸಾಗರ…
ಬೆಂಗಳೂರು: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಿಎಂಟಿಸಿ(Bangalore Metropolitan Transport Corporation) ಮೇ 18ರಿಂದ…
ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.…
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವುದನ್ನು ರಾಜ್ಯ ಸರ್ಕಾರ ಖಂಡಿಸಲಿದ್ದು, ಬೆಲೆ ಏರಿಕೆಯನ್ನು ಹಿಂಪಡೆಯಲು ಒತ್ತಾಯಿಸುತ್ತೇವೆ ಎಂದು ಸಿಎಂ…