ಸ್ವಂತ ತಂಗಿ ಮೇಲಿನ ಸೇಡಿಗೆ ಆಕೆಯ 6 ವರ್ಷದ ಗಂಡು ಮಗುವನ್ನು ನಿರ್ಜನ ಪ್ರದೇಶಕ್ಕೆ ಕರದೊಯ್ದು ತಲೆಗೆ ಬಲವಾಗಿ ಹೊಡೆದು ಕೊಂದು ಹಾಕಿ, ಅಲ್ಲೇ ಮಣ್ಣು ಮಾಡಿರುವ ಘಟನೆ ಚಿಕ್ಕಬಳ್ಳಾಪುರದ ಮುತ್ತಕದಹಳ್ಳಿ ಬಳಿ ನಡೆದಿದೆ.
6 ವರ್ಷದ ಮಧು ಎಂಬ ಗಂಡು ಮಗುವನ್ನ ಕೊಂದು ಹಾಕಿರುವ ಅಂಬಿಕಾ. ಮತ್ತೊಂದು ಹೆಣ್ಣು ಮಗುವಾದ ಮನುಶ್ರೀ ಕರೆದೊಯ್ದು ಬೆಂಗಳೂರಿನಲ್ಲಿ ಮಾರಾಟಕ್ಕೆ ಯತ್ನಸಿದಾಗ ಪೊಲೀಸರಿಗೆ ಅಂಬಿಕಾ ಸಿಕ್ಕಿಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮುತ್ತಕದಹಳ್ಳಿಯಲ್ಲಿ ನಾಗರಾಜು ಹಾಗೂ ಅನಿತಾ ದಂಪತಿ ವಾಸ ಮಾಡುತ್ತಿದ್ದರು. ಅಕ್ಕ ಅಂಬಿಕಾ ಹಾಗೂ ತಂಗಿ ಅನಿತಾಳ ತವರು ಮನೆ ಚಿಕ್ಕಬಳ್ಳಾಪುರ ತಾಲೂಕಿನ ಮುತ್ತಕದಹಳ್ಳಿ ಆಗಿರುತ್ತದೆ.
ಗಂಡಂದಿರನ್ನ ಬಿಟ್ಟು ಬಂದು ತವರೂರಲ್ಲೇ ವಾಸವಾಗಿರುವ ಅಕ್ಕ ಅಂಬಿಕಾ ಹಾಗೂ ತಂಗಿ ಅನಿತಾ. ಅಂಬಿಕಾ ಹಾಗೂ ಅನಿತಾ ನಡುವೆ ಪದೇ ಪದೇ ಜಗಳ ವೈಮನಸ್ಸು ಆಗುತ್ತಿತ್ತು.
ಅಂಬಿಕಾಳ ವ್ಯಕ್ತಿತ್ವ ಸರಿ ಇಲ್ಲ ಎಂದು ಅನಿತಾ ಪದೇ ಪದೇ ಬೈಯ್ಯುತ್ತಿದ್ದರು. ಇದೇ ಕೋಪಕ್ಕೆ ಅನಿತಾಳ ಮಕ್ಕಳನ್ನ ಕರೆದೊಯ್ದು ಕೃತ್ಯ ಎಸಗಿರುವ ಅಕ್ಕ ಅಂಬಿಕಾ.
ಗಂಡು ಮಗು ಮಧು ಕೊಲೆ ಮಾಡಿ, ಹೆಣ್ಣು ಮಗು ಮನುಶ್ರೀಯನ್ನ ಮಾರಾಟಕ್ಕೆ ಯತ್ನಸಿದ್ದಾರೆ ಎನ್ನಲಾಗಿದೆ. ಸದ್ಯ ಅಂಬಿಕಾ ಪೇರೇಸಂದ್ರ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಬಳ್ಳಾಪುರ ಡಿವೈಎಸ್ಪಿ ಶಿವಕುಮಾರ್ ರಿಂದ ಆರೋಪಿ ವಿಚಾರಣೆ ನಡೆಸಲಾಗುತ್ತಿದೆ.
ದೊಡ್ಡಬಳ್ಳಾಪುರ: ನಾಳೆ (ನ.18) ನಗರದ ಹೊರವಲಯದಲ್ಲಿರುವ 66/11ಕಿವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ತಾಲೂಕಿನ ಹಲವೆಡೆ ವಿದ್ಯುತ್…
18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…
ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…
ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…
ರಾಹುಲ್ ಗಾಂಧಿ...... ಬಿಹಾರ ಚುನಾವಣೆಯಲ್ಲಿ, ಸೀಟುಗಳ ಲೆಕ್ಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ನಂತರ ಶ್ರೀ ರಾಹುಲ್ ಗಾಂಧಿಯವರ ನಾಯಕತ್ವದ ಸಾಮರ್ಥ್ಯದ…
ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…