ಆಕೆ ಗಂಡನ ಜೊತೆಯಲ್ಲಿ ಶುಭ ಕಾರ್ಯಕ್ಕೆ ಎಂದು ತಮಿಳುನಾಡಿನಿಂದ ಬಂದಿದ್ದಾಳೆ. ಗಂಡನ ಸ್ನೇಹಿತರ ಮನೆಗೆ ಹೋಗಿ ರೆಡಿ ಹಾಗಿ ಶುಭ ಕಾರ್ಯಕ್ಕೆ ಹೋಗಬೇಕು ಎಂದು ಸ್ನಾನದ ಗೃಹಕ್ಕೆ ಹೋದವಳು ಈಚೆ ಬಂದಿದ್ದು ಮಾತ್ರ ಹೆಣವಾಗಿ. ಅಷ್ಟಕ್ಕೂ ಆ ಮಹಿಳೆ ಸಾವನಪ್ಪಿದ್ದು ಯಾಕೆ ಅಂತಿರಾ ಈ ಸ್ಟೋರಿ ನೋಡಿ……
ಸಾವನ್ನಪ್ಪಿರುವ ಮಹಿಳೆಯ ಹೆಸರು ಲಕ್ಷ್ಮೀ.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅಡೇಪೇಟೆಯಲ್ಲಿ ನಿನ್ನೆ ಸಾವನಪ್ಪಿದ್ದಾಳೆ. ತಿರುಪತಿಯಿಂದ ಮಲ್ಲೇಶ್ವರಂ ನಲ್ಲಿ ಕಾರ್ಯಕ್ರಮ ನಿಮಿತ್ತ ಸಂಬಂಧಿಕರ ಮನೆಗೆ ಬಂದಿದ್ದಾಳೆ. ಈ ವೇಳೆಯಲ್ಲಿ ಸ್ನಾನಕ್ಕೆ ಎಂದು ಸ್ನಾನಗೃಹದಲ್ಲಿ ಹೆಣವಾಗಿ ಬಿದ್ದಿದ್ದಾಳೆ. ಆದರೆ, ಸ್ನಾನಕ್ಕೆ ಹೋಗುವ ವೇಳೆ ಆಕೆಯ ಮುಖದಲ್ಲಿ ಯಾವುದೇ ರೀತಿಯ ಗಾಯಗಳು ಇರುವುದಿಲ್ಲ. ಆದರೆ ಸ್ನಾನ ಗೃಹದಲ್ಲಿ ಬಿದ್ದಿದಾಗ ಆಕೆಯ ಮುಖದ ಮೇಲೆ ಗಾಯಗಳಾಗಿದ್ದವು. ಆಕೆಯ ಮುಖದ ಮೇಲೆ ಗಾಯಗಳು ಹೇಗಾದವು ಎಂಬುದೇ ಗಂಡನ ಅನುಮಾನವಾಗಿದೆ.
ಇನ್ನೂ ಸ್ಥಳಕ್ಕೆ ನೆಲಮಂಗಲ ನಗರ ಪೊಲೀಸರು ಭೇಟಿ ನೀಡಿ, ಪ್ರಾಥಮಿಕ ತನಿಖೆಯನ್ನು ಮಾಡುತ್ತಿದ್ದಾರೆ. ತನಿಖೆಯ ವೇಳೆ ಗೀಸರ್ ಆನ್ ಆಗಿಲ್ಲ, ಬಕೆಟ್ ನಲ್ಲಿ ನೀರು ಇರಲಿಲ್ಲ ಎಂದು ಮೃತ ಲಕ್ಷ್ಮೀಯ ಗಂಡ ಪೊಲೀಸರಿಗೆ ಮಾಹಿತಿ ನೀಡಿದ ಎನ್ನಲಾಗಿದೆ.
ಹೀಗಾಗಿ ಮನೆಯ ಮಾಲೀಕರ ಜೊತೆಗೆ ಗಂಡನ ಹೇಳಿಕೆಯನ್ನು ಪಡೆದು ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದಾರೆ.
ಇನ್ನೂ ನೆಲಮಂಗಲದ ಶವಾಗಾರದಲ್ಲಿ ಶವಪರೀಕ್ಷೆ ಆಗಿದ್ದು, ಮೃತಳ ಗಂಡನ ಸ್ವಗ್ರಾಮದಲ್ಲಿ ಮಹಿಳೆ ಅಂತಿಮ ಶವಸಂಸ್ಕಾರ ಮಾಡಲಾಗಿದೆ.
ಒಟ್ಟಾರೆ, ಶುಭ ಕಾರ್ಯಕ್ಕೆ ಹೋಗಬೇಕು ಎಂದು ಬಂದವಳು ಹೆಣವಾಗಿ ಸ್ವಾಗ್ರಾಮಕ್ಕೆ ವಾಪಸ್ ಆಗಿದ್ದಾಳೆ. ಆದರೆ, ಆಕೆಯ ಸಾವು ಮಾತ್ರ ನಿಗೂಢವಾಗಿದೆ. ಮಹಿಳೆಯ ಸಾವಿಗೆ ಸೂಕ್ತ ಕಾರಣ ಪೊಲೀಸರ ತನಿಖೆಯಿಂದಲೇ ಹೊರಬರಬೇಕಿದೆ…
ಬೆಳಗಾವಿ: ಗಣೇಶ ಚತುರ್ಥಿ ದಿನವೇ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿರುವ…
ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಕೆಎಸ್ಆರ್ಟಿಸಿ ಬಸ್ಗಳಿಂದಾಗಿ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ.…
ದೊಡ್ಡಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ದೊಡ್ಡಬಳ್ಳಾಪುರ ನಗರದಲ್ಲೂ ಗಣೇಶೋತ್ಸವದ ಕಳೆ ಹೆಚ್ಚಾಗಿದೆ. ನಗರದ ವಿವಿಧೆಡೆ ಗಣೇಶ…
ದೊಡ್ಡಬಳ್ಳಾಪುರ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಗುಂಡಮಗೆರೆ ಕೆರೆಯಲ್ಲಿ ವಿಶೇಷ ವ್ಯವಸ್ಥೆ…
ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…
ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…