ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಬಗ್ಗೆ ರಾಜ್ಯದಲ್ಲಿ ಮತ್ತು ಸಾರ್ವಜನಿಕರಲ್ಲಿ ಸದಾಭಿಪ್ರಾಯವಿದೆ. ಅವೆಷ್ಟೋ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಸಹಾಯಕ ಸಬ್ ಇನ್ಸ್ ಪೆಕ್ಟರ್ ರಾತ್ರಿಯ ಕರ್ತವ್ಯದಲ್ಲಿ ಲೋಪವೆಸಗಿ ಅಮಾನತುಗೊಂಡಿದ್ದಾರೆ.
ಅಷ್ಟಕ್ಕೂ ನಡೆದಿದ್ದು ಏನು?
ಇತ್ತೀಚಿಗೆ ಸುಂಟಿಕೊಪ್ಪ ಸಮೀಪದ ಗರಂಗಂದೂರು ಗ್ರಾಮದಲ್ಲಿ ತೆರೆ ಮಹೋತ್ಸವವೊಂದು ನಡೆದಿತ್ತು. ಈ ಕಾರ್ಯಕ್ರಮಕ್ಕೆ ಎಂಟು ಜನ ಸ್ನೇಹಿತರು ಅಲ್ಲಿಗೆ ತೆರಳಿ ಮಧ್ಯರಾತ್ರಿ ಎರಡು ಗಂಟೆಗೆ ಸುಮಾರಿಗೆ ಕಾಜುರಿಗೆ ಹೋಗುವ ದಾರಿ ಬಳಿ ಇರುವ ಬಸ್ ಶೆಲ್ಟರ್ ನಲ್ಲಿ ಆಟೋರಿಕ್ಷಕ್ಕಾಗಿ ಕಾದು ಕುಳಿತ ಸಂದರ್ಭ ಒಂದು ಓಮಿನಿ ಕಾರ್ ಹಾಗೂ ನೀಲಿ ನೆಕ್ಸಾನ್ ಕಾರಿನಲ್ಲಿ ಮಫ್ತಿಯಲ್ಲಿ ಬಂದ ಪೊಲೀಸರು ನೇರವಾಗಿ ಬಂದು ಇಸ್ಪೀಟ್ ಎಲ್ಲಿ ಆಡಿದ್ದೀರ ಎಂದು ಹೇಳಿ ಲಾಂಗ್ ಒಬ್ಬರ ಕುತ್ತಿಗೆಗೆ ಹಿಡಿದು ನಂತರ ಬೈಕಿನ 3 ಕೀ ಗಳನ್ನು, ಮೂರು ಮೊಬೈಲ್ ಗಳನ್ನು ಪಡೆದುಕೊಂಡು ನಾಳೆ ಸ್ಟೇಷನ್ನಿಗೆ ಬರುವಂತೆ ತಿಳಿಸಿ ತೆರಳಿದ್ದಾರೆ.
ಆಟೋಕ್ಕಾಗಿ ಕಾಯುತ್ತಿರುವುದಾಗಿ ಎಂದು ಪರಿಪರಿಯಾಗಿ ಹೇಳಿಕೊಂಡರು ಕೇಳಲಿಲ್ಲ. ಅವರು ತೆರಳಿದ ನಂತರ ಬೈಕುಗಳನ್ನು ಸಮೀಪದ ಸ್ನೇಹಿತರ ಮನೆಯಲ್ಲಿಟ್ಟು ಈ ವಿಚಾರವಾಗಿ ಸುಂಟಿಕೊಪ್ಪದ ಮತ್ತೋರ್ವ ಎ. ಎಸ್ ಐ ಅವರಿಗೆ ದೂರವಾಣಿ ಮೂಲಕ ಅವರ ಸಂಬಂಧಿ ವಿಚಾರ ತಿಳಿಸಿದರು. ಮೇ ನಾಲ್ಕರಂದು ಸಂಜೆ ಠಾಣೆಗೆ ತೆರಳಿದಾಗ, ಎ. ಎಸ್ ಐ ಇವರಿಂದ 3000 ಹಣವನ್ನು ಪಡೆದುಕೊಂಡು ಮೊಬೈಲ್ ಹಾಗೂ ಬೈಕ್ ನ ಕೀ ಗಳನ್ನು ವಾಪಸ್ ನೀಡಿ, ಖಾಲಿ ಪತ್ರದಲ್ಲಿ ಸಹಿ ಮಾಡಿ ಕಳಿಸಿರುತ್ತಾರೆ ಎಂದು ತಿಳಿದುಬಂದಿದೆ.
ತಪ್ಪು ಮಾಡದೆ ಖಾಲಿ ಪತ್ರಕೆ ಸಹಿ ಹಾಕಿಸಿಕೊಂಡಿದ್ದು ಯುವಕರಿಗೆ ಸಂಶಯ ತಂದೊಡ್ಡಿ, ನೇರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಐವರು ಯುವಕರು ನಡೆದ ಘಟನೆಯ ಬಗ್ಗೆ ವಿವರ ನೀಡಿ ದೂರು ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸೋಮವಾರಪೇಟೆ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ತನಿಖೆ ಕೈಗೊಂಡು ನೀಡಿದ ವರದಿ ಅನ್ವಯ ಇದೀಗ ಸಬ್ ಇನ್ಸ್ ಪೆಕ್ಟರ್ ಜಗದೀಶ್, ಸಹಾಯಕ ಸಬ್ ಇನ್ಸ್ ಪೆಕ್ಟರ್ ತೀರ್ಥಕುಮಾರ್ ರವರನ್ನು ಸಸ್ಪೆಂಡ್ ಮಾಡಲಾಗಿದೆ.
ಈ ನಡುವೆ ತೀರ್ಥ ಕುಮಾರ್ ದೂರವಾಣಿ ಮೂಲಕ ನಡೆದ ಘಟನೆ ಹಾಗೂ ಪಡೆದುಕೊಂಡ ಹಣದ ಬಗ್ಗೆ ಮಾತನಾಡಿರುವ ಆಡಿಯೋ ಯುವಕರ ಕೈಗೆ ಸೇರಿದ್ದು, ಇದನ್ನು ಕೂಡ ತನಿಖಾ ಅಧಿಕಾರಿಗಳಿಗೆ ನೀಡಲಾಗಿತ್ತು. ಎಸ್.ಐ, ಹಾಗು ಎ ಎಸ್.ಐ ಅವರು ಕುಡಿದು ರಾತ್ರಿ ಅವಾಂತರ ಸೃಷ್ಟಿಸಿದ್ದಾರೆ ಎಂದು ಯುವಕರು ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ.
ಬೇರೆ ಬೇರೆ ವೃತ್ತಿಯಲ್ಲಿರುವ ಯುವಕರಿಗೆ ಇಸ್ಪೀಟ್ ಆಟ ತಿಳಿಯದಿದ್ದರೂ, ಇಸ್ಪೀಟ್ ಆಟ ಆಡುತ್ತಿದ್ದಾಗ ಲಾಂಗ್ ತೋರಿಸಿ ದಾಳಿ ನಡೆಸಲಾಗಿದೆ ಎಂದು ಪ್ರಚಾರಪಡಿಸಲಾಗಿದೆ. ಆದರೆ ಪೊಲೀಸರ ತನಿಖೆಯಿಂದ ಇದೀಗ ಯುವಕರು ನಿರಳರಾಗಿದ್ದಾರೆ.
ದೊಡ್ಡಬಳ್ಳಾಪುರ : ಉದ್ಯಮಿಗಳು ಮತ್ತು ಸಮಾಜ ಸೇವಕರಾದ ಗಂಟಿಗಾನಹಳ್ಳಿ ಸಂದೀಪ್ ರವರ ಹುಟ್ಟುಹಬ್ಬವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ಬುಕ್, ಸಿಹಿ,…
ದೊಡ್ಡಬಳ್ಳಾಪುರ: ನಗರದ ರೈಲ್ವೆ ನಿಲ್ದಾಣದ ಸಮೀಪದ ಆಂಜನೇಯ ದೇವಾಲಯದ ಪಕ್ಕದಲ್ಲಿ ಹೂತುಹಾಕಲಾಗಿದ್ದ ನವಜಾತ ಶಿಶುವಿನ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ…
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ಯಶ್ಪಾಲ್…
ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಚಟುವಟಿಕೆಗಳು ಈ ಬಾರಿ ತೀವ್ರ ಹಿನ್ನಡೆ ಅನುಭವಿಸಿವೆ. ಸಾಮಾನ್ಯಕ್ಕಿಂತ…
ಸ್ಪರ್ಧೆ ಇರಲಿ, ಆದರೆ ಬದುಕೇ ಸ್ಪರ್ಧೆಯಾಗುವುದು ಬೇಡ..... ಎಲ್ಲಿ ಜೀವನ ನಡೆವುದೋ ಅದೇ ನನ್ನೂರು, ಯಾರು ಸ್ನೇಹದಿ ಬರುವರೋ ಅವರೇ…
ರಾಜಾನುಕುಂಟೆ: ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯ ರಾಜಾನುಕುಂಟೆ ಸಮೀಪ ಶುಕ್ರವಾರ ಮುಂಜಾನೆ ವೇಗವಾಗಿ ಬಂದ ವಾಹನವೊಂದು ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ…