Categories: ಲೇಖನ

ಸಕಾರಾತ್ಮಕ ಮತ್ತು ನಕಾರಾತ್ಮಕ…….

ಸಕಾರಾತ್ಮಕ – ಪಾಸಿಟಿವ್ ವಿಷಯಗಳ ಬಗ್ಗೆಯೇ ಹೆಚ್ಚು ಮಾತನಾಡಬೇಕು, ಓದಬೇಕು, ಬರೆಯಬೇಕು, ತಿಳಿಯಬೇಕು, ತಿಳಿಸಬೇಕು ಎಂಬುದು ಒಂದು ಸಾಮಾನ್ಯ ಸಾರ್ವಜನಿಕ ಅಭಿಪ್ರಾಯ…..

ಹಾಗಾದರೆ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಂತಾದ ವಿಷಯಗಳಲ್ಲಿ ಯಾವುದು ಪಾಸಿಟಿವ್, ಯಾವುದು ನೆಗೆಟಿವ್ ಎಂಬುದು ಒಂದು ಪ್ರಶ್ನೆಯಾಗಿ ಕಾಡುತ್ತದೆ.

ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಇತ್ಯಾದಿ ಧರ್ಮಗಳ ಲೋಪ ದೋಷಗಳ ಬಗ್ಗೆ ಮಾತನಾಡುವುದು ಅಥವಾ ಅವುಗಳಲ್ಲಿರುವ ಒಳ್ಳೆಯ ಗುಣಗಳ ಬಗ್ಗೆ ಮಾತನಾಡುವುದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?

ಕೇವಲ ಒಳ್ಳೆಯ ವಿಷಯ ಮಾತ್ರ ಪ್ರಸ್ತಾಪಿಸಿದರೆ ನಮ್ಮ ಚಿಂತನೆಯಲ್ಲಿ ಮೂಡುವ ಲೋಪಗಳನ್ನು ಸರಿಪಡಿಸುವುದು ಹೇಗೆ ? ಕಾಲಕ್ಕೆ ತಕ್ಕಂತೆ ಲೋಪ ಸರಿಪಡಿಸದೆ ಪರಿಪೂರ್ಣ ಧರ್ಮ ಎಂದು ಕರೆಯುವುದು ಮತ್ತು ಅನುಸರಿಸುವುದು ಹೇಗೆ ?

ಪೆಹಲ್ಗಾಮ್, ಭಯೋತ್ಪಾದನೆ, ಯುದ್ಧ, ಮತಾಂತರ, ಟಿಪ್ಪು ಸುಲ್ತಾನ್, ಶಿವಾಜಿ, ಗಾಂಧಿ, ಸಾರ್ವಕರ್ ಮುಂತಾದವರ ಬಗ್ಗೆ ಪರ ಅಥವಾ ವಿರೋಧ ಮಾತನಾಡುವುದು ಅಥವಾ ಊಟ, ಬಟ್ಟೆ, ವಸತಿ, ಶಿಕ್ಷಣ, ಆರೋಗ್ಯ, ಉದ್ಯೋಗ ಇವುಗಳ ಬಗ್ಗೆ ಮಾತನಾಡುವುದು
ಇದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?

ಇತಿಹಾಸ ತಿರುಚಲಾಗಿದೆ, ಈಗ ಅದನ್ನು ಮತ್ತೆ ಸರಿಪಡಿಸಬೇಕು ಎಂಬುದು ಅಥವಾ ಇತಿಹಾಸ ಸರಿಯಾಗಿದೆ ಈಗ ಅದನ್ನು ತಿರುಚಲಾಗುತ್ತಿದೆ ಎಂಬುದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್….

ಅಂಬಾನಿ, ಅದಾನಿಗಳು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅತ್ಯುತ್ತಮ ಸ್ಥಾನ ಪಡೆದಿದ್ದಾರೆ, ಕೆಲವು ಸಿನಿಮಾಗಳು 1000 ಕೋಟಿಗೂ ಹೆಚ್ಚು ಲಾಭಗಳಿಸಿದ ಸಾಧನೆ ಬಗ್ಗೆ ಮಾತನಾಡುವುದು ಅಥವಾ ಈಗಲೂ ಲಕ್ಷಾಂತರ ಭಿಕ್ಷುಕರು, ಅಪೌಷ್ಟಿಕತೆಯ ಮಕ್ಕಳು, ಅತ್ಯಾಚಾರ, ಕೊಲೆಗಳು, ಭ್ರಷ್ಟಾಚಾರ, ಜಾತೀಯತೆ ಸಮಸ್ಯೆಗಳ ಬಗ್ಗೆ ಮಾತನಾಡುವುದು ಇದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?

ಮಾಧ್ಯಮಗಳ ಪ್ರತಿ ಕ್ಷಣವೂ ಬಿತ್ತರಿಸುವ ಬ್ರೇಕಿಂಗ್ ನ್ಯೂಸ್ ಗಳಲ್ಲಿ ಎಷ್ಟು ಪಾಸಿಟಿವ್ ಇದೆ, ಎಷ್ಟು ನೆಗೆಟಿವ್ ಇದೆ, ಅದು ಯಾವುದು ಎಂದು ಗಮನಿಸಿದರೆ ಸಕಾರಾತ್ಮಕ ಮತ್ತು ನಕಾರಾತ್ಮಕದ ಅರ್ಥವೇ ಬದಲಾಗುತ್ತದೆ…..

ಕುಸಿಯುತ್ತಿರುವ ರೂಪಾಯಿ ಬೆಲೆ, ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಅಥವಾ ಆರ್ಥಿಕ ಗಾತ್ರದಲ್ಲಿ ಮತ್ತು ಜಿಡಿಪಿ ಬೆಳವಣಿಗೆಯಲ್ಲಿ ಏರುತ್ತಿರುವ ಅಂಕಿಅಂಶಗಳ ಬಗ್ಗೆ ಮಾತನಾಡುವುದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?

ಮುಸ್ಲಿಮರದು ಅತಿಯಾಯಿತು ಅವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂಬುದು ಒಂದು ಕಡೆ, ಹಿಂದೂಗಳ ದಬ್ಬಾಳಿಕೆ ಜಾಸ್ತಿಯಾಯಿತು‌ ಅವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂಬುದು ಅಥವಾ ಘರ್ಷಣೆ ಬೇಡ ಆಗಿದ್ದು ಆಗಿ ಹೋಯಿತು, ಈಗ ಎಲ್ಲರೂ ಒಟ್ಟಾಗಿ ಒಬ್ಬರನ್ನೊಬ್ಬರು ಗೌರವಿಸಿತ್ತಾ ಇರೋಣ ಎಂಬುದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?

ಹಿಂದೂ ಧರ್ಮ ತುಂಬಾ ಒಳ್ಳೆಯದು, ಇಸ್ಲಾಂ ಧರ್ಮ ತುಂಬಾ ಶಾಂತಿ ಪ್ರಿಯ ಧರ್ಮ, ಕ್ರಿಶ್ಚಿಯನ್ ಧರ್ಮ ತುಂಬಾ ಸಮಾನತೆಯ ಪ್ರೀತಿಯ ಧರ್ಮ ಎಂಬುದು ಅಥವಾ ಹಿಂದೂ ಧರ್ಮದಲ್ಲಿ ಅಮಾನವೀಯ ಜಾತಿ ಪದ್ದತಿ ಇದೆ, ಇಸ್ಲಾಂ ಧರ್ಮದಲ್ಲಿ ಪ್ರಶ್ನೆ ಮಾಡಲಾಗದ ಮತಾಂಧತೆ ಇದೆ, ಕ್ರಿಶ್ಚಿಯನ್ ಧರ್ಮದಲ್ಲಿ ಮತಾಂತರ ಇದೆ ಎಂದು ಚರ್ಚೆ ಮಾಡುವಾಗ ಯಾವುದು ಪಾಸಿಟಿವ್ ಯಾವುದು ನೆಗೆಟಿವ್‌ ?

ಸಮಸ್ಯೆಗಳ ಬಗ್ಗೆ ಮಾತನಾಡುವುದು, ಸಮಸ್ಯೆ ಇದ್ದರೂ ಅದನ್ನು ಮರೆಮಾಚಿ ಕೇವಲ ಅನುಕೂಲಗಳನ್ನು ಮಾತ್ರ ಮಾತನಾಡುವುದು, ಸಮಸ್ಯೆ ಮತ್ತು ಪರಿಹಾರ ಎರಡನ್ನೂ ಮಾತನಾಡುವುದು ಇದರಲ್ಲಿ ‌ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?

ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಪರಿಹಾರ ಸಾಧ್ಯ. ‌ಪಾಸಿಟಿವ್ ಮತ್ತು ನೆಗೆಟಿವ್ ಎಂದು ನಮಗೆ ಅನುಕೂಲ ವಿಷಯಗಳನ್ನು ಮಾತ್ರ ಮಾತನಾಡುವುದಲ್ಲ. ಸಮಯಕ್ಕೆ ತಕ್ಕಂತೆ ಲಾಭ ಪಡೆಯುವುದು ಅಥವಾ ವಾದ ಮಂಡಿಸುವುದಲ್ಲ.
ಹೃದಯಾಂತರಾಳದಿಂದ ಸಮಸ್ಯೆಗಳಿಗೆ ನಿಜವಾದ ಸ್ಪಂದನೆ ಇರಬೇಕು. ಆಗ ಸಮಾಜ ಶಾಂತಿಯ ಕಡೆಗೆ ಸಾಗುತ್ತದೆ.

ಮುಖವಾಡಗಳ ಮರೆಯಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ತಮ್ಮ ಸ್ವ ಹಿತಾಸಕ್ತಿಯ ಹೊರತು.
ಬಡತನ ನೆಗೆಟಿವ್, ಶ್ರೀಮಂತಿಕೆ ಪಾಸಿಟಿವ್, ಬಡವರು ಪಾಸಿಟಿವ್, ಶ್ರೀಮಂತರು ನೆಗೆಟಿವ್ ಹೀಗೂ ಚರ್ಚೆ ಮಾಡಬಹುದು. ಆದರೆ ವಾಸ್ತವ ಬೇರೆ. ಅದು ವಿಶಾಲ ಶುದ್ಧ ಮನಸ್ಸುಗಳ ಗ್ರಹಿಕೆಗೆ ಮಾತ್ರ ನಿಲುಕುತ್ತದೆ. ಮುಖವಾಡ ಧರಿಸಿದವರಿಗಲ್ಲ…..

ವೈಯಕ್ತಿಕ ಮಟ್ಟದಲ್ಲಿ ಒಳ್ಳೆಯದು ಕೆಟ್ಟದ್ದನ್ನು ಪಾಸಿಟಿವ್ ಅಥವಾ ನೆಗೆಟಿವ್ ಎಂದು ಅನುಕೂಲಕರವಾಗಿ ವಿಂಗಡಿಸಬಹುದು. ಆದರೆ ಒಟ್ಟಾರೆ ವ್ಯವಸ್ಥೆಯನ್ನು ವಿಮರ್ಶಿಸುವಾಗ ಇದು ತುಂಬಾ ಕಷ್ಟ. ವಿಷಯಗಳನ್ನು ಆಧರಿಸಿ ಅರ್ಥೈಸಬೇಕಾಗುತ್ತದೆ.
ಧನ್ಯವಾದಗಳು

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಒಂದೇ ರಾತ್ರಿ ಎರಡು ಕಡೆ ಶ್ರೀಗಂಧದ ಮರಗಳ ಕಳವು

ದೊಡ್ಡಬಳ್ಳಾಪುರ: ಒಂದೇ ರಾತ್ರಿ ಎರಡು ಸ್ಥಳಗಳಲ್ಲಿ ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಕದ್ದೊಯ್ದಿರುವ ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ…

10 hours ago

ಬೈಕ್‌ಗೆ ಟಿಟಿ ವಾಹನ ಡಿಕ್ಕಿ ಪ್ರಕರಣ: ಇಬ್ಬರು ಯುವತಿಯರ ದುರ್ಮರಣ – ಮೃತರ ಕಣ್ಣು ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬಸ್ಥರು

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಓಬದೇನಹಳ್ಳಿ ರಸ್ತೆಯ ಕಾಂತಿ ಸ್ವೀಟ್ಸ್ ಮುಂಭಾಗ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ…

11 hours ago

ಬೈಕ್ ಗೆ ಟಿಟಿ ವಾಹನ ಡಿಕ್ಕಿ: ಮಹಿಳೆ ಸಾವು: ಮತ್ತೋರ್ವ ಯುವತಿಗೆ ಗಂಭೀರ ಗಾಯ

ಬಾಶೆಟ್ಟಿಹಳ್ಳಿ ಬಳಿ ಭೀಕರ ಅಪಘಾತವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಯುವತಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ‌ ಬಾಶೆಟ್ಟಿಹಳ್ಳಿ ಕೈಗಾರಿಕಾ…

16 hours ago

ಹೆಣ್ಣು ಕೊಟ್ಟ ಮಾವನನ್ನೇ ಕೊಲೆಗೈದ ಅಳಿಯ

ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಕೊಲೆಗೈದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೇರಳೇಘಟ್ಟ…

18 hours ago

ಕರ್ನಾಟಕದ ಮುಖ್ಯಮಂತ್ರಿ  ಡಿಕೆ ಶಿವಕುಮಾರ್ ಅವರಿಗೊಂದು ಬಹಿರಂಗ ಪತ್ರ..

ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರೇ, ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಯ ಅತ್ಯದ್ಭುತ ಫಲಿತಾಂಶವೆಂದರೆ ಯಾವುದೋ ಹಳ್ಳಿಯಲ್ಲಿ, ಎಲ್ಲಿಯೋ ಹುಟ್ಟಿದ…

21 hours ago

ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಇಲ್ಲಿಗೆ ಹೆಚ್ಚು ಅನುದಾನ ಬರಬೇಕೆಂಬ ತತ್ವ- ಚಿಂತನೆ ಸರಿಯಲ್ಲ. ಇದೆಲ್ಲವನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ- ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ದೇವನಹಳ್ಳಿ: ಭಾರತಮಾಲಾ ಪರಿಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ದೇಶದ ಎರಡು ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳಾದ ಬೆಂಗಳೂರು…

1 day ago