Categories: ಲೇಖನ

ಸಂಬಂಧಗಳ ಬಲೆಯೊಳಗೆ….

ಸಂಬಂಧಗಳ ಬಲೆಯೊಳಗೆ….

ಪೂರ್ವ ನಿರ್ಧಾರಿತ ಬಂಧನದಲ್ಲಿ….

ಒಂದು ನಿಗದಿತ ವ್ಯವಸ್ಥೆಯ ಜೈಲಿನಲ್ಲಿ….

ಹಿಂದಿನವರ ಅನುಭವದ ಗೋಡೆಗಳೊಳಗೆ…..

ಹುಟ್ಟುತ್ತಾ ವಿಶ್ವಮಾನವರು, ಬೆಳೆಯುತ್ತಾ……

ಹುಟ್ಟಿದ ಕ್ಷಣದಿಂದಲೇ ತಂದೆ ತಾಯಿಯ ಸಂಬಂಧ ಬೆಸೆಯುತ್ತದೆ.

ಅಕ್ಕ ಅಣ್ಣ, ತಮ್ಮ ತಂಗಿ,
ಬಂಧು ಬಳಗಗಳು ಕೂಡುತ್ತವೆ.

ಒಂದು ಧರ್ಮ ಪೂರ್ವ ನಿರ್ಧಾರಿತವಾಗಿ ನಮ್ಮ ಹೆಗಲೇರುತ್ತದೆ.

ಅದೇ ರೀತಿ ಒಂದು ಜಾತಿಯಲ್ಲಿ ನಮ್ಮನ್ನು ಗುರುತಿಸಲಾಗುತ್ತದೆ.

ಸಹಜವಾಗಿಯೇ ನಮ್ಮ ಗುರುತಿಗೆ ಒಂದು ಹೆಸರು ನಾಮಕರಣ ಮಾಡಲಾಗುತ್ತದೆ.

ಸಾಮಾನ್ಯವಾಗಿ ತಂದೆಯ ಭಾಷೆಯೇ ಮಾತೃಭಾಷೆಯಾಗುತ್ತದೆ.

ಮುಂದೆ ಶಾಲೆಯಲ್ಲಿ ಪ್ರಕಟಿತ ಪುಸ್ತಕದ ವಿಷಯಗಳನ್ನೇ ನಮಗೆ ಕಲಿಸಿಕೊಡಲಾಗುತ್ತದೆ.

ನಮ್ಮ ಸುತ್ತಲ ಆಹಾರ, ಉಡುಪುಗಳನ್ನೇ ಅನುಸರಿಸುವಂತೆ ಮಾಡಲಾಗುತ್ತದೆ.

ಎಂದಿನಂತೆ ಸ್ಥಳೀಯ ದೇವರು, ಸಂಪ್ರದಾಯಗಳೇ ನಮ್ಮ ಆಚರಣೆಯಾಗುತ್ತವೆ.

ಹದಿನೆಂಟು ತುಂಬಿದ ನಂತರ ಮತದಾನ ಮತ್ತು ಇಲ್ಲಿನ ಕಾನೂನುಗಳು ನಮ್ಮನ್ನು ನಿಯಂತ್ರಿಸುತ್ತವೆ.

ನಂತರ ಕೆಲಸ, ವ್ಯಾಪಾರ, ವ್ಯವಹಾರ, ಬದುಕಿನ ಕನಸುಗಳು.

ಸ್ವಜಾತಿ ಕುಲ ಗೋತ್ರಗಳಲ್ಲಿ ಮದುವೆ ಮಕ್ಕಳು ಸಂಸಾರ.

ಎಲ್ಲವೂ ಕ್ರಮಬದ್ಧ, ನಿಶ್ಚಿತ ಎಂಬಂತೆ ಸಾಗುತ್ತದೆ.

ಒಂದು ವೇಳೆ ಯಾವುದೋ
ಹಂತದಲ್ಲಿ ನಿಮ್ಮ ಅರಿವು ಈ ಕ್ರಮಬದ್ಧತೆಯನ್ನು
ಮೀರಿ ಜಾಗೃತಾವಸ್ಥೆ ತಲುಪಿ ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಚಿಂತನಾ ಸ್ವಾತಂತ್ರ್ಯ, ಭ್ರಮೆ ಕಳಚಿ ವಾಸ್ತವದೆಡೆಗೆ ನಿಮ್ಮ ಆಲೋಚನೆ ಹರಿಯಲು ಪ್ರಾರಂಭಿಸಿದರೆ ಮುಗಿಯಿತು.

ಮಾನಸಿಕ ತಳಮಳ, ಕ್ಷೋಬೆ, ವ್ಯವಸ್ಥೆಯ ಬಗೆಗಿನ ಭ್ರಮನಿರಸನ, ವಾಸ್ತವದ ಕಠೋರತೆ, ಹೊಂದಿಕೊಳ್ಳಲಾಗದ ಅಸಹಾಯಕತೆ, ಸತ್ಯ ಸುಳ್ಳಿನ ನಡುವಣ ವೇದನೆ, ಸತ್ಯದ ಹುಡುಕಾಟದಲ್ಲಿ ಜನಪ್ರಿಯತೆಯ ಮೇಲಾಟ,

ಅಬ್ಬಾ! ಅರೆ ಹುಚ್ಚರಂತಾಗುವ ಎಲ್ಲಾ ಸಾಧ್ಯತೆಯೂ ಇದೆ.

ಇದನ್ನು ಮೀರಿ ನಮ್ಮನ್ನು ನಾವು ಕಂಡುಕೊಳ್ಳುವ ಸಮಷ್ಠಿ ಪ್ರಜ್ಞೆಯ ಪ್ರಾಯೋಗಿಕ ಚಿಂತನೆಯನ್ನೇ ಪ್ರಬುದ್ಧತೆ ಎನ್ನಬಹುದೇ.

ವ್ಯವಸ್ಥೆಯನ್ನು
ಒಪ್ಪಿಕೊಂಡ ಸಾಮಾನ್ಯ ಜನಕ್ಕಿಂತ ಹಲವಾರು ಪಟ್ಟು ತಾಳ್ಮೆ, ತ್ಯಾಗ, ಪ್ರೀತಿ, ವಿಶ್ವಾಸ ಕರುಣೆ, ಕ್ಷಮಾಧಾನಗಳನ್ನು ಈ ಜಾಗೃತ ಮನಸ್ಥಿತಿಯ ವ್ಯಕ್ತಿ ಹೊಂದಿರಬೇಕಾಗುತ್ತದೆ.

ಬಹುಶಃ ಇತಿಹಾಸದಲ್ಲಿ ಮಹಾನ್ ವ್ಯಕ್ತಿಗಳೆಂದು ಗುರುತಿಸಲ್ಪಡುವ ಬುದ್ದ, ಬಸವ, ವಿವೇಕಾನಂದ, ಗಾಂಧಿ, ಅಂಬೇಡ್ಕರ್ ಮುಂತಾದವರು ಇದನ್ನು ಮೈಗೂಡಿಸಿಕೊಂಡಿದ್ದಿರಬಹುದೇ.

ಆದರೂ ಬಗೆಹರಿಯದ ಸಾಕಷ್ಟು ಗೊಂದಲಗಳು, ದ್ವಂದ್ವಗಳು, ಪ್ರಶ್ನೆಗಳು ಹಾಗೆಯೇ ಉಳಿಯುತ್ತದೆ. ಮತ್ತೆ ಅದರ ಸಹಜ ಹುಡುಕಾಟವೇ ಪ್ರಬುದ್ಧತೆ ಇರಬಹುದೇ.

ಎಲ್ಲವನ್ನು ಮೀರುವ, ಒತ್ತಡವನ್ನು ಸಹಿಸುವ, ಸಮಷ್ಠಿ ಪ್ರಜ್ಞೆಯ, ವಿಶಾಲ ಹೃದಯದ, ಧ್ಯಾನಸ್ತ ಮನಸ್ಥಿತಿಯ ಬದುಕು ನಮ್ಮದಾಗಲಿ ಎಂದು ಆಶಿಸುತ್ತಾ………

ಒಂದು ಸುಂದರ, ಒಳ್ಳೆಯ ಗುಣಮಟ್ಟದ ನಾಗರಿಕ ಸಮಾಜ ನಿರ್ಮಾಣಕ್ಕೆ ಇವು ತುಂಬಾ ಅವಶ್ಯಕ ಎಂದು ಭಾವಿಸುತ್ತಾ…..

ಈ ನಿಟ್ಟಿನಲ್ಲಿ ನಾವು ನೀವು, ಮುಖವಾಡಗಳನ್ನು ತೊರೆದು, ಸಹಜ ವ್ಯಕ್ತಿತ್ವ ಅನಾವರಣಗೊಳ್ಳಲು ಅನುವು ಮಾಡಿಕೊಡೋಣ ಎಂದು ಮನವಿ ಮಾಡಿಕೊಳ್ಳುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಕಸ್ತೂರಿ ರಂಗನ್ ವರದಿ; ‘ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ’- ಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಇಂದು ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕ ಸಭೆಯಲ್ಲಿ  ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು…

2 hours ago

ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ರೈತ ಸಂಘ ಆಗ್ರಹ

ಕೋಲಾರ : ನಗರದ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯಲ್ಲಿ ಬಡ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು, ಖಾಸಗಿ…

3 hours ago

ಶಿಷ್ಟಾಚಾರ ವಿವಾದಕ್ಕೆ ಮತ್ತಷ್ಟು ಕಾವು: ಶಾಸಕರಿಗೆ ಕಾನೂನು, ಶಿಷ್ಟಾಚಾರದ ಅರಿವಿಲ್ಲ- ಶಾಸಕ ಧೀರಜ್ ಮುನಿರಾಜ್ ವಿರುದ್ಧ ಮಾಜಿ ಶಾಸಕ ವೆಂಕಟರಮಣಯ್ಯ ವಾಗ್ದಾಳಿ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕ ಧೀರಜ್ ಮುನಿರಾಜು ಹಾಗೂ ಮಾಜಿ ಶಾಸಕ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ (ಡಿಪಿಎ) ಅಧ್ಯಕ್ಷ…

4 hours ago

ಕುಡಿಯುವ ನೀರು, ಮೇವಿಗೆ ಮುಂಜಾಗ್ರತೆ ವಹಿಸಿ: ನಿಗದಿತ ಅವಧಿಯೊಳಗೆ ಬಡವರಿಗೆ ಸೂರು, ಸೈಟ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಿ- ಸಚಿವ ಕೆ.ಎಚ್ ಮುನಿಯಪ್ಪ

ಎಲ್ಲಾ ವರ್ಗದ ಬಡವರಿಗೆ ಸೂರು, ಸೈಟ್ ನೀಡುವುದು ನಮ್ಮ ಸರ್ಕಾರದ ಗುರಿಯಾಗಿದ್ದು ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ,…

6 hours ago

ಶಿಷ್ಟಾಚಾರದ ಹೆಸರಲ್ಲಿ ವಾಗ್ಯುದ್ಧ: ಹಾಲಿ ಶಾಸಕ ಧೀರಜ್ ಮುನಿರಾಜು–ಮಾಜಿ ಶಾಸಕ ವೆಂಕಟರಮಣಯ್ಯ ನಡುವೆ ಬಹಿರಂಗ ಕಿತ್ತಾಟ

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಹಾಲಿ ಶಾಸಕ ಧೀರಜ್ ಮುನಿರಾಜು ಹಾಗೂ ಮಾಜಿ ಶಾಸಕ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ…

12 hours ago

ನಿಷೇಧದ ನಡುವೆಯೂ ಡಿಜೆ ಬಳಕೆ: ವಾಹನ ವಶ, ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿ ಡಿಜೆ ಬಳಕೆಗೆ ನಿಷೇಧವಿದ್ದರೂ ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಬಳಸಿದ ಆರೋಪದ ಮೇರೆಗೆ ಡಿಜೆ ವಾಹನವನ್ನು ಜಪ್ತಿ ಮಾಡಿರುವ…

1 day ago