ದೇವನಹಳ್ಳಿ : ಮಕ್ಕಳಿಗೆ ಪಾಠ-ಪ್ರವಚನ, ಶಿಸ್ತು-ಸಂಯಮ ಕಲಿಸಿಕೊಡುವ ಶಾಲಾ ಆಡಳಿತ ಮಂಡಳಿಯ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಬಣ್ಣಬಣ್ಣದ ಮಾತುಗಳಿಂದ ಮರುಳು ಮಾಡಿರುವ ಶಾಲಾ ಮಾಲೀಕರು, ಕಂಟ್ರಾಕ್ಟರ್ ಗೆ ಬರೋಬರಿ 1.75 ಕೋಟಿ ವಂಚಿಸಿರುವ ಆರೋಪ ಕೇಳಿಬಂದಿದೆ. ಹಣ ಕೇಳಲು ಹೋದರೆ ಜೀವ ಬೇದರಿಕೆ ಹಾಕಿರುವುದ್ದಲ್ಲದೆ, ಜಾತಿ ನಿಂದನೆ ಕೂಡ ಮಾಡಿದ್ದಾರೆಂದು ಕಂಟ್ರಾಕ್ಟರ್ ವಿಶ್ವನಾಥಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಯಲಹಂಕದ ಎಸ್ .ರಾಜರೆಡ್ಡಿ ಪರಿಶಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದು, ಕಟ್ಟಡ ನಿರ್ಮಾಣದ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದಾರೆ. 2022ರ ಮಾರ್ಚ್ 26ರಂದು ದೇವನಹಳ್ಳಿಯ ವಿಶ್ವನಾಥಪುರದ ಬಳಿಯ ವಿಹಾನ್ ಶಾಲೆಯ ಮಾಲೀಕ ಪ್ರತಾಪ್ ಯಾದವ್ ರಾಜರೆಡ್ಡಿಯವರನ್ನ ಭೇಟಿಯಾಗುತ್ತಾರೆ. ಶಾಲಾ ಕಟ್ಟಡವನ್ನ ಕಟ್ಟಿಸಿಕೊಂಡುವಂತೆ ಮನವಿ ಮಾಡುತ್ತಾರೆ. ದೊಡ್ಡ ಕೆಲಸದಿಂದ ದೊಡ್ಡ ಪ್ರಮಾಣದಲ್ಲಿ ಹಣ ಬರುತ್ತೆಂಬ ಆಸೆಯಲ್ಲಿ ರಾಜರೆಡ್ಡಿ ಕಟ್ಟಡವನ್ನ ನಿರ್ಮಾಣ ಮಾಡುತ್ತಾರೆ. ಶಾಲಾ ಕಟ್ಟಡ ನಿರ್ಮಾಣವಾದ ನಂತರ ಬಾಕಿ ಕೂಲಿ ಹಣ ಕೇಳಲು ಹೋದರೆ ಕಟ್ಟಡ ಹಣ ಕೊಡೋದಿಲ್ಲ, ಏನು ಬೇಕೋ ಅದನ್ನ ಮಾಡ್ಕೋ ಅಂತಾ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ವಿಹಾನ್ ಶಾಲೆಯವರು ರಾಜರೆಡ್ಡಿ 1.75 ಕೋಟಿ ಕೂಲಿ ಹಣವನ್ನ ಕೊಡದೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ರಾಜರೆಡ್ಡಿಯವರ ಬೆಂಬಲಕ್ಕೆ ದಲಿತ ಸಂಘಟನೆಗಳು ನಿಂತಿವೆ. ವಿಶ್ವನಾಥಪುರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಸಂಘಟನೆಗಳು ರಾಜರೆಡ್ಡಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.
ಹಣ ವಂಚನೆ ಮಾಡಿರುವ ವಿಹಾನ್ ಶಾಲೆಯ ವಿರುದ್ಧ ದೂರು ನೀಡಿರುವ ಸಂಘಟನೆಗಳು, ಬಾಕಿ ಹಣ ಕೊಡದಿದ್ದಲ್ಲಿ ವಿಹಾನ್ ಶಾಲೆಯ ಮುಂದೆ ಬೃಹತ್ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನ ಸಹ ನೀಡಿದ್ದಾರೆ.
ವಿಹಾನ್ ಶಾಲೆ ಮಾಲೀಕರಿಂದ ವಂಚನೆಗೊಳಗಾದ ರಾಜರೆಡ್ಡಿ ಮಾಧ್ಯಮದೊಂದಿಗೆ ಮಾತನಾಡಿ, ಮೊದಲಿನ ಕಂಟ್ರಾಕ್ಟರ್ ವಿಹಾನ್ ಶಾಲೆಯ ಕಟ್ಟಡವನ್ನ ಅರೆಬರೆ ಕೆಲಸ ಮಾಡಿ ಬಿಟ್ಟು ಹೋಗಿದ್ದರು. ಶೀಟ್ ನಂತಿದ್ದ ಶಾಲಾ ಕಟ್ಟಡವನ್ನ ಸುಂದರವಾದ ಕಟ್ಟಡವಾಗಿ ನಿರ್ಮಾಣ ಮಾಡಿದ್ದೇನೆ. ಕೂಲಿಯಾಳುಗಳ ಕೂಲಿಗಾಗಿ 3.5 ಕೋಟಿ ಖರ್ಚಾಗಿದ್ದು, ಇದರಲ್ಲಿ ಕೇವಲ 1.5 ಕೋಟಿ ಹಣವನ್ನು ನೀಡಿದ್ದಾರೆ. ಇನ್ನುಳಿದ 1.75 ಕೋಟಿ ಹಣವನ್ನ ನೀಡದೆ ದೌರ್ಜನ್ಯ ಮಾಡುತ್ತಿದ್ದಾರೆ. ಸಾಲ ಮಾಡಿದ ಹಣದಲ್ಲಿ ಕೂಲಿಯಾಳುಗಳಿಗೆ ಕೂಲಿ ನೀಡಿ ಕಟ್ಟಡದ ಕೆಲಸ ಮುಗಿಸಿದ್ದೇನೆ. ಈಗ ಸಾಲಗಾರರು ನನ್ನ ಮನೆಗೆ ಬಂದು ಸಾಲದ ಹಣ ಕೇಳುತ್ತಿದ್ದಾರೆಂದು ತಮ್ಮ ನೋವು ತೋಡಿಕೊಂಡರು.
ಇತ್ತೀಚೆಗೆ ಹೊಸದಾಗಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ, ಡಾಕ್ಟರ್ ರಾಮ್ ಮನೋಹರ್ ಲೋಹಿಯಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಳವಳ್ಳಿ ಶಿವಣ್ಣ…
ದೊಡ್ಡಬಳ್ಳಾಪುರ: ನೆಲಮಂಗಲದಿಂದ ದೊಡ್ಡಬಳ್ಳಾಪುರದತ್ತ ಬರುತ್ತಿದ್ದ ಗೂಡ್ಸ್ ವಾಹನವು ಅರಳುಮಲ್ಲಿಗೆ ಗ್ರಾಮದ ಬಳಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…
ಮದ್ಯಪಾನ, ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗದೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ…
ದೊಡ್ಡಬಳ್ಳಾಪುರ : ಉದ್ಯಮಿಗಳು ಮತ್ತು ಸಮಾಜ ಸೇವಕರಾದ ಗಂಟಿಗಾನಹಳ್ಳಿ ಸಂದೀಪ್ ರವರ ಹುಟ್ಟುಹಬ್ಬವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ಬುಕ್, ಸಿಹಿ,…
ದೊಡ್ಡಬಳ್ಳಾಪುರ: ನಗರದ ರೈಲ್ವೆ ನಿಲ್ದಾಣದ ಸಮೀಪದ ಆಂಜನೇಯ ದೇವಾಲಯದ ಪಕ್ಕದಲ್ಲಿ ಹೂತುಹಾಕಲಾಗಿದ್ದ ನವಜಾತ ಶಿಶುವಿನ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ…
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ಯಶ್ಪಾಲ್…