ವಿಶ್ವ ಖ್ಯಾತಿಯ” ಡಿಸ್ಟಿಂಗ್ವಿಶ್ಡ್” ಫೆಲೋಶಿಪ್ ಪ್ರಶಸ್ತಿಗೆ ಭಾಜನರಾದ ಡಾ.ರೊನಾಲ್ಡ್ ಕೊಲಾಸೋ

ದೇವನಹಳ್ಳಿ: ಕರ್ನಾಟಕ ರಾಜ್ಯ ವ್ಯಾಪ್ತಿ ಅಲ್ಲದೆ ವಿಶ್ವ ವ್ಯಾಪ್ತಿಯಾಗಿ ಹಲವಾರು ಸಮಾಜಮುಖಿ ಸೇವೆಗಳು ಸಾರ್ವಜನಿಕ ಉಪಯೋಗಕರವಾದ ಮೂಲಭೂತ ಸೌಕರ್ಯಗಳನ್ನು ವಿವಿಧ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆಗಳನ್ನು ಗುರುತಿಸಿ ಅನಿವಾಸಿ ಭಾರತೀಯರಾದ ಡಾ. ರೊನಾಲ್ಡ್ ಕೊಲಾಸೋ ವಿಶ್ವಖ್ಯಾತಿಯ “ಡಿಸ್ಟಿಂಗ್ವಿಶ್ಡ್” ಫೆಲೋಶಿಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 ಬ್ರಿಟಿಷ್ ಪಾರ್ಲಿಮೆಂಟ್ ಹೌಸ್ ಆಫ್ ಲಂಡನ್ ನಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ಭಾರತ ಸಂವಿಧಾನದ ಸುಧಾರಣಾ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎಂ .ಎನ್ ವೆಂಕಟಾಚಲಯ್ಯ ಅವರು ಸಹಿ ಮಾಡಿರುವ ವಿಶ್ವಖ್ಯಾತಿಯ” ಡಿಸ್ಟಿಂಗ್ವಿಶ್ಡ್” ಫೆಲೋಶಿಪ್ ಪ್ರಶಸ್ತಿ ಪತ್ರದ ಫಲಕವನ್ನು ಲಂಡನ್ ಲಾರ್ಡ್ ಮೇಯರ್ ಲಂಡನ್ ಡಿಜಿಟಲ್ ಆರ್ಥಿಕತೆಯ ಮಂತ್ರಿಗಳು, ಹಾಗೂ ಲೆಫ್ಟಿನೆಂಟ್ ಜನರಲ್ ಸುರೇಂದ್ರನಾಥ್, ಮೂವರು ಜಂಟಿಯಾಗಿ 20ಕ್ಕೂ ಹೆಚ್ಚು ಅಧಿಕ ದೇಶಗಳನ್ನು ಪ್ರತಿನಿಧಿಸುವ CEOಗಳು, ಗಣ್ಯಾತಿಗಣ್ಯರುಗಳ ಉಪಸ್ಥಿತಿಯಲ್ಲಿ ಇನ್ಸ್ ಟ್ಯೂಟ್ ಆಫ್ ಡೈರೆಕ್ಟರ್ಸ್ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಡಾ. ರೋನಾಲ್ಡ್ ಕೊಲಾಸೋ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಕೆಪಿಸಿಸಿ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸಂದೀಪ್ ಮಾತನಾಡಿ, ಡಾ. ರೊನಾಲ್ಡ್ ಕೊಲಾಸೋ ಅವರು ವಿಶ್ವಕ್ಕೆ ಮಾದರಿಯಾಗುವಂತಿರುವ ಪೊಲೀಸ್ ಠಾಣೆಗಳು, ಸರ್ಕಾರಿ ಹಾಗೂ ಚಾರಿಟಬಲ್ ಟ್ರಸ್ಟ್ ಗಳು ನಡೆಸುವ ಅತ್ಯಾಧುನಿಕ ಮಾದರಿಯ ಶಾಲೆಗಳು, ಸಾರ್ವಜನಿಕ ರಸ್ತೆಗಳು, ಆಸ್ಪತ್ರೆಗಳು, ತಾಲೂಕು ಆಫೀಸ್, ನ್ಯಾಯಾಂಗ, ವಕೀಲರ ಭವನ, ಹಾಫ್ ಕಾಮ್ಸ್ ಮಳಿಗೆಗಳು, ನಿರಾಶ್ರಿತರಿಗೆ ಸೂಕ್ತ ಮನೆಗಳ ಕೊಡುಗೆ, ಹಿಂದೂ ದೇವಾಲಯಗಳು, ಚರ್ಚ್ ಗಳು, ಮಸೀದಿಗಳು, ಬೆಸ್ಕಾಂ, ಸಾರ್ವಜನಿಕ ಸೌಲಭ್ಯಗಳು, ಪಂಚಾಯತಿ ಕಟ್ಟಡ, ಪೀಠೋಪಕರಣಗಳು, ಕೋವಿಡ್ ಸಮಯದಲ್ಲಿ ಸಂಕಟದಲ್ಲಿರುವ ಸಹಸ್ರಾರು ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಅನೇಕ ಹಳ್ಳಿಗಳಲ್ಲಿ ವಿತರಣೆ ಮಾಡಿ, ಪ್ರಕೃತಿ ವಿಕೋಪಕ್ಕೆ ತುತ್ತಾದವರೆಗೆ ಸಹಾಯ ಹಸ್ತ, ಕುಡಿಯುವ ನೀರಿನ ವ್ಯವಸ್ಥೆ ಮುಂತಾದ ಅಭಿವೃದ್ಧಿ ಹಾಗೂ ಜನಪರ ಸೇವೆಗಳನ್ನು ಗುರುತಿಸಿ ಅವರಿಗೆ ನೀಡಿದ ಗೌರವ ಇದಾಗಿದ್ದು, ಈ ವಿಶ್ವಖ್ಯಾತಿಯ ಗೌರವ ನಮ್ಮ ತಾಲೂಕು ರಾಜ್ಯ ಹಾಗೂ ನಮ್ಮ ದೇಶಕ್ಕೂ ಸಂದ ಗೌರವವಾಗಿರುತ್ತದೆ ಎಂದರು.

Ramesh Babu

Journalist

Recent Posts

ಡಿಕ್ರಾಸ್-ಹಳೇ ಬಸ್ ನಿಲ್ದಾಣ ರಸ್ತೆಯಲ್ಲಿ ಬೈಕ್ ಅಪಘಾತದಲ್ಲಿ ಸವಾರ ದುರ್ಮರಣ ಪ್ರಕರಣ: ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನಿಂತಿದ್ದ ಟಾಟಾ ಏಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದುರ್ಮರಣ ಹೊಂದಿರುವ ಘಟನೆ ಏ.27ರಂದು ದೊಡ್ಡಬಳ್ಳಾಪುರ…

46 minutes ago

ನಿಂತಿದ್ದ ಟಾಟಾ ಏಸ್ ಗೆ ಬೈಕ್ ಡಿಕ್ಕಿ: ಹೆಲ್ಮೆಟ್ ಧರಿಸದ ಕಾರಣ ಬೈಕ್ ಸವಾರ ದುರ್ಮರಣ

ನಿಂತಿದ್ದ ಟಾಟಾ ಏಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದುರ್ಮರಣ ಹೊಂದಿರುವ ಘಟನೆ ಇಂದು ಬೆಳಗ್ಗೆ…

20 hours ago

ಏ.25ರ ರಾತ್ರಿ ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತದಲ್ಲಿ ಇಬ್ಬರ ಸಾವು ಪ್ರಕರಣ: ಕತ್ತಲಲ್ಲಿ ಪ್ರಯಾಣಿಸುತ್ತಿದ್ದವರ ಬದುಕಲ್ಲಿ ಶಾಶ್ವತ ಕತ್ತಲು ಮೂಡಿಸಿದ ಜವರಾಯ: ಎಚ್ಚೆತ್ತ ನಗರಸಭೆ ಬೀದಿ ದೀಪ ಅಳವಡಿಕೆ

ಏ.25ರ ರಾತ್ರಿ ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದರು. ರಸ್ತೆ ಇಕ್ಕೆಲಗಳಲ್ಲಿ ಬೀದಿ ದೀಪಗಳು ಬೆಳಗದ…

22 hours ago

ರಾಷ್ಟ್ರೀಯತೆ ಎಂಬ ಪರಿಕಲ್ಪನೆಯ ಸುತ್ತಾ…….

ದೇಶಭಕ್ತಿ ಮತ್ತು ದೇಶದ್ರೋಹ...... ಇದು ಬ್ರಿಟಿಷರ ಕಾಲದ್ದೇ ಅಥವಾ ಈ ಕಾಲಕ್ಕೂ ಅನ್ವಯಿಸುತ್ತದೆಯೇ..... ರಾಷ್ಟ್ರೀಯತೆ ಎಂಬ ಪರಿಕಲ್ಪನೆಯ ಸುತ್ತಾ....... ರಾಷ್ಟ್ರ…

1 day ago

ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ: ಇಬ್ಬರು ಸಾವು

ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಬೈಕ್ ಸಾವನ್ನಪ್ಪಿದರೆ, ಮತ್ತೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ…

2 days ago

ಕೆಯುಡಬ್ಲ್ಯೂಜೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳಿಸಿದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ…

2 days ago