ದೊಡ್ಡಬಳ್ಳಾಪುರ: ಪ್ರೀತಿಸುವವರು ದುಖಿಃಸುವಂತಾಗದೆ. ಬಾಳಿದಾಗಲೇ ಪಂಪ ಕವಿಯ ‘ಮನುಷ್ಯ ಜಾತಿ ತಾನೊಂದೇ ವಲಂ’ ಎನ್ನುವ ಮಾತು ಸಾರ್ಥಕವಾಗುತ್ತದೆ ಎಂದು ಪ್ರಗತಿಪರ ಚಿಂತಕ ಮಂಜುನಾಥ ಅದ್ದೆ ಹೇಳಿದರು.
ತಾಲ್ಲೂಕಿಗೆ ಸಮೀಪದ ಅದ್ದೆ ಗ್ರಾಮದ ತಿಮ್ಮರಾಯಸ್ವಾಮಿ ದೇವಾಲಯ ಆವರಣದಲ್ಲಿ ಸೋಮವಾರ ಕುವೆಂಪು ಅವರ ಮಂತ್ರಮಾಂಗಲ್ಯದಂತೆ ಸರಳವಾಗಿ ನಡೆದ ಅಂತರ ಜಾತಿ ವಿವಾಹದಲ್ಲಿ ಜೋಡಿಯಾದ ಶಿಲ್ಪ ಮತ್ತು ಸಂದೀಪ್ ಅವರನ್ನು ಆರ್ಶಿವದಿಸಿ ಮಾತನಾಡಿದರು.
ವಿವಾಹದ ಕಟ್ಟುಪಾಡುಗಳು ಇತ್ತೀಚಿನವು. ನಮಗೆ ಜಾತಿ ಮೀರಿದ ಬದುಕು ಮುಖ್ಯವಾಗಬೇಕು. ಪ್ರೀತಿ ಮತ್ತು ಪ್ರಕೃತಿಯಿಂದ ಮಾತ್ರವೇ ಇಂದಿನವರೆಗೂ ಮನುಷ್ಯ ಜೀನವ ಸಾಗಿ ಬಂದಿದೆ. ಲಂಪಟತನವನ್ನು ಮೀರಿ ಜೀವನ ನಡೆಸುವ ಕಡೆಗೆ ನಮ್ಮ ಗುರಿ ಸದಾ ಇರಬೇಕು.ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಎಲ್ಲರು ಹರಿಕಾರರಾಗಬೇಕಿದೆ. 12ನೇ ಶತಮಾನದಲ್ಲಿ ಬಸವಣ್ಣ ಪ್ರಾರಂಭಿಸಿರುವ ಸಾಮಾಜಿಕ ಬದಲಾವಣೆ ನಿರಂತರವಾಗಿ ನಡೆಯಬೇಕು. ಆಗ ಮಾತ್ರವೇ ಮನುಷ್ಯ ಕುಲ ಸಾರ್ಥಕತೆ ಪಡೆಯಲು ಸಾಧ್ಯ ಎಂದರು.
ಪ್ರಾಧ್ಯಾಪಕ ಪ್ರಕಾಶ್ ಮಂಟೆದ ಅವರು ಶಿಲ್ಪ,ಸಂದೀಪ್ ದಂಪತಿಗಳಿಗೆ ಕುವೆಂಪು ಅವರ ಮಂತ್ರ ಮಾಂಗಲ್ಯ ಬೋಧಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ವಿಶ್ವನಾಥಬಾತಿ,ಆವಲಹಳ್ಳಿಶ್ರೀನಿವಾಸ್, ಗ್ರಾಮ ಪಂಚಾತಿಯಿ ಸದಸ್ಯ ಸಂತೋಷ್, ಸಾದೇನಹಳ್ಳಿ ಚಿಕ್ಕಣ್ಣ, ಹರೀಶ್, ಗೋವಿಂದರಾಜ್, ಚಂದ್ರಶೇಖರ್, ವಿಜಯಕುಮಾರ್ ಅದ್ದೆ, ಹನುಮಂತರಾಜು, ಕಾಕೋಳುಬಾಬು, ನವೀನ್ಸಾದೇನಹಳ್ಳಿ, ದೊಡ್ಡಬ್ಯಾಲಕೆರೆ ಮುನಿರಾಜು, ಮುತ್ತಗದಹಳ್ಳಿರವಿ, ಅರಕೆರೆ ಶ್ರೀನಿವಾಸ್, ಹನುಮಂತರಾಜು, ಲಿಂಗನಹಳ್ಳಿ ಬಸವರಾಜು, ಶ್ರೀರಾಮಪ್ಪತರಹುಣಸೆ, ಕೃಷ್ಣನಾಯಕ್, ಅಶೋಕ್ ಇದ್ದರು.
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಲಕ್ಷ್ಮೀಪುರ ಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿ–648ರಲ್ಲಿ ಲಾರಿ ಚಾಲಕನ ಅಜಾಗರೂಕತೆಯಿಂದ ಭೀಕರ…
ಬೆಂಗಳೂರು ಗ್ರಾಮಾಂತರ: ಮುಂಗಾರು ಕೃಷಿ ಚಟುವಟಿಕೆಗಳು ಚುರುಕುಗೊಂಡಿರುವ ನಡುವೆಯೇ ರೈತರಿಗೆ ಯೂರಿಯಾ ರಸಗೊಬ್ಬರ ವಿತರಣೆಯಲ್ಲಿ ಹೊಸ ನಿಯಮ ಜಾರಿಯಾಗಿದೆ. ಯೂರಿಯಾ…
ದೊಡ್ಡಬಳ್ಳಾಪುರ: ಒಂದೇ ರಾತ್ರಿ ಎರಡು ಸ್ಥಳಗಳಲ್ಲಿ ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಕದ್ದೊಯ್ದಿರುವ ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ…
ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಓಬದೇನಹಳ್ಳಿ ರಸ್ತೆಯ ಕಾಂತಿ ಸ್ವೀಟ್ಸ್ ಮುಂಭಾಗ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ…
ಬಾಶೆಟ್ಟಿಹಳ್ಳಿ ಬಳಿ ಭೀಕರ ಅಪಘಾತವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಯುವತಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ…
ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಕೊಲೆಗೈದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೇರಳೇಘಟ್ಟ…