ವಿವಾಹದ ಕಟ್ಟುಪಾಡುಗಳು ಇತ್ತೀಚಿನವು- ನಮಗೆ ಜಾತಿ ಮೀರಿದ ಬದುಕು ಮುಖ್ಯವಾಗಬೇಕು- ಪ್ರಗತಿಪರ ಚಿಂತಕ ಮಂಜುನಾಥ ಅದ್ದೆ


ದೊಡ್ಡಬಳ್ಳಾಪುರ: ಪ್ರೀತಿಸುವವರು ದುಖಿಃಸುವಂತಾಗದೆ. ಬಾಳಿದಾಗಲೇ ಪಂಪ ಕವಿಯ ‘ಮನುಷ್ಯ ಜಾತಿ ತಾನೊಂದೇ ವಲಂ’ ಎನ್ನುವ ಮಾತು ಸಾರ್ಥಕವಾಗುತ್ತದೆ ಎಂದು ಪ್ರಗತಿಪರ ಚಿಂತಕ ಮಂಜುನಾಥ ಅದ್ದೆ ಹೇಳಿದರು.

ತಾಲ್ಲೂಕಿಗೆ ಸಮೀಪದ ಅದ್ದೆ ಗ್ರಾಮದ ತಿಮ್ಮರಾಯಸ್ವಾಮಿ ದೇವಾಲಯ ಆವರಣದಲ್ಲಿ ಸೋಮವಾರ ಕುವೆಂಪು ಅವರ ಮಂತ್ರಮಾಂಗಲ್ಯದಂತೆ ಸರಳವಾಗಿ ನಡೆದ ಅಂತರ ಜಾತಿ ವಿವಾಹದಲ್ಲಿ ಜೋಡಿಯಾದ ಶಿಲ್ಪ ಮತ್ತು ಸಂದೀಪ್ ಅವರನ್ನು ಆರ್ಶಿವದಿಸಿ ಮಾತನಾಡಿದರು.

ವಿವಾಹದ ಕಟ್ಟುಪಾಡುಗಳು ಇತ್ತೀಚಿನವು. ನಮಗೆ ಜಾತಿ ಮೀರಿದ ಬದುಕು ಮುಖ್ಯವಾಗಬೇಕು. ಪ್ರೀತಿ ಮತ್ತು ಪ್ರಕೃತಿಯಿಂದ ಮಾತ್ರವೇ ಇಂದಿನವರೆಗೂ ಮನುಷ್ಯ ಜೀನವ ಸಾಗಿ ಬಂದಿದೆ. ಲಂಪಟತನವನ್ನು ಮೀರಿ ಜೀವನ ನಡೆಸುವ ಕಡೆಗೆ ನಮ್ಮ ಗುರಿ ಸದಾ ಇರಬೇಕು.ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಎಲ್ಲರು ಹರಿಕಾರರಾಗಬೇಕಿದೆ. 12ನೇ ಶತಮಾನದಲ್ಲಿ ಬಸವಣ್ಣ ಪ್ರಾರಂಭಿಸಿರುವ ಸಾಮಾಜಿಕ ಬದಲಾವಣೆ ನಿರಂತರವಾಗಿ ನಡೆಯಬೇಕು. ಆಗ ಮಾತ್ರವೇ ಮನುಷ್ಯ ಕುಲ ಸಾರ್ಥಕತೆ ಪಡೆಯಲು ಸಾಧ್ಯ ಎಂದರು.

ಪ್ರಾಧ್ಯಾಪಕ ಪ್ರಕಾಶ್ ಮಂಟೆದ ಅವರು ಶಿಲ್ಪ,ಸಂದೀಪ್ ದಂಪತಿಗಳಿಗೆ ಕುವೆಂಪು ಅವರ ಮಂತ್ರ ಮಾಂಗಲ್ಯ ಬೋಧಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ವಿಶ್ವನಾಥಬಾತಿ,ಆವಲಹಳ್ಳಿಶ್ರೀನಿವಾಸ್, ಗ್ರಾಮ ಪಂಚಾತಿಯಿ ಸದಸ್ಯ ಸಂತೋಷ್, ಸಾದೇನಹಳ್ಳಿ ಚಿಕ್ಕಣ್ಣ, ಹರೀಶ್, ಗೋವಿಂದರಾಜ್, ಚಂದ್ರಶೇಖರ್, ವಿಜಯಕುಮಾರ್ ಅದ್ದೆ, ಹನುಮಂತರಾಜು, ಕಾಕೋಳುಬಾಬು, ನವೀನ್ಸಾದೇನಹಳ್ಳಿ, ದೊಡ್ಡಬ್ಯಾಲಕೆರೆ ಮುನಿರಾಜು, ಮುತ್ತಗದಹಳ್ಳಿರವಿ, ಅರಕೆರೆ ಶ್ರೀನಿವಾಸ್, ಹನುಮಂತರಾಜು, ಲಿಂಗನಹಳ್ಳಿ ಬಸವರಾಜು, ಶ್ರೀರಾಮಪ್ಪತರಹುಣಸೆ, ಕೃಷ್ಣನಾಯಕ್, ಅಶೋಕ್ ಇದ್ದರು.

Ramesh Babu

Journalist

Recent Posts

ಅನ್ನದಾಸೋಹ ಮಾಡುವ ಮೂಲಕ ಸಂದೀಪ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

ದೊಡ್ಡಬಳ್ಳಾಪುರ : ಉದ್ಯಮಿಗಳು ಮತ್ತು ಸಮಾಜ ಸೇವಕರಾದ ಗಂಟಿಗಾನಹಳ್ಳಿ ಸಂದೀಪ್ ರವರ ಹುಟ್ಟುಹಬ್ಬವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್, ಸಿಹಿ,…

2 hours ago

ರೈಲ್ವೆ ನಿಲ್ದಾಣದ ಬಳಿ ನವಜಾತ ಶಿಶುವಿನ ಮೃತದೇಹ ಪತ್ತೆ; ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ದೊಡ್ಡಬಳ್ಳಾಪುರ: ನಗರದ ರೈಲ್ವೆ ನಿಲ್ದಾಣದ ಸಮೀಪದ ಆಂಜನೇಯ ದೇವಾಲಯದ ಪಕ್ಕದಲ್ಲಿ ಹೂತುಹಾಕಲಾಗಿದ್ದ ನವಜಾತ ಶಿಶುವಿನ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ…

3 hours ago

ರಾಹುಲ್ ಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆ ಖಂಡನೆ: ಶಾಸಕ ಯಶ್ ಪಾಲ್ ಆನಂದ್ ಸುವರ್ಣ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ಯಶ್ಪಾಲ್…

8 hours ago

ಮಳೆ ಕೈಕೊಟ್ಟು ಮುಂಗಾರು ಬಿತ್ತನೆ ಕುಂಠಿತ: ಶೇ.66ರಷ್ಟು ಮಳೆ ಕೊರತೆ; ಗುರಿಯ ಶೇ.3ರಷ್ಟು ಮಾತ್ರ ಬಿತ್ತನೆ ಪೂರ್ಣ

ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಚಟುವಟಿಕೆಗಳು ಈ ಬಾರಿ ತೀವ್ರ ಹಿನ್ನಡೆ ಅನುಭವಿಸಿವೆ. ಸಾಮಾನ್ಯಕ್ಕಿಂತ…

11 hours ago

ಇರುವುದೊಂದೇ ಬದುಕು, ಅದನ್ನು ಅರ್ಥಪೂರ್ಣವಾಗಿ ಸಾರ್ಥಕ ಪಡಿಸಿಕೊಳ್ಳಿ…….

ಸ್ಪರ್ಧೆ ಇರಲಿ, ಆದರೆ ಬದುಕೇ ಸ್ಪರ್ಧೆಯಾಗುವುದು ಬೇಡ..... ಎಲ್ಲಿ ಜೀವನ ನಡೆವುದೋ ಅದೇ ನನ್ನೂರು, ಯಾರು ಸ್ನೇಹದಿ ಬರುವರೋ ಅವರೇ…

13 hours ago

ಜಿಂಕೆಗೆ ವಾಹನ ಡಿಕ್ಕಿ; ಸ್ಥಳದಲ್ಲೇ ಸಾವು

ರಾಜಾನುಕುಂಟೆ: ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯ ರಾಜಾನುಕುಂಟೆ ಸಮೀಪ ಶುಕ್ರವಾರ ಮುಂಜಾನೆ ವೇಗವಾಗಿ ಬಂದ ವಾಹನವೊಂದು ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ…

13 hours ago