ವಿಜೃಂಭಣೆಯಿಂದ ಜರುಗಿದ ಸುಮಾರು 600 ವರ್ಷಗಳ ಇತಿಹಾಸವಿರುವ ರಂಗನಾಥಸ್ವಾಮಿ ಕೋಲು ಬೇಟೆ ಜಾತ್ರಾ ಮಹೋತ್ಸವ


ಹುಲಿಕುಂಟೆ (ದೊಡ್ಡಬಳ್ಳಾಪುರ): ತಾಲ್ಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀವರಪ್ರದ ಬೇಟೆ ರಂಗನಾಥಸ್ವಾಮಿ ಕೋಲು ಬೇಟೆ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.

ಹುಲಿಕುಂಟೆ ಗ್ರಾಮದ ಬೇಟೆ ಕೊಡುವ ಕದಿರು ಆಲದ ಮರದ ದಿನ್ನೆಯವರೆಗೆ ಸಾಗಿದ ರಂಗನಾಥಸ್ವಾಮಿ ಉತ್ಸವದಲ್ಲಿ ರಾಜ್ಯದ ವಿವಿಧಡೆಗಳಿಂದ ಆಗಮಿಸಿದ್ದ ಸಹಸ್ರಾರು ಜನ ಭಕ್ತಾದಿಗಳು ಭಾಗವಹಿಸಿದ್ದರು. ಪೇಟಧಾರಿ ಬೇಟೆ ರಂಗನಾಥಸ್ವಾಮಿಯನ್ನು ಹೂವುಗಳಿಂದ ಸಿಂಗರಿಸಲಾಗಿತ್ತು.

ಹುಲಿಕುಂಟೆ, ಮಾವಿನಕುಂಟೆ, ಸೀತಕಲ್ಲು, ಚಿಕ್ಕಬೆಳವಂಗಲ ಮತ್ತಿತರೆ ಗ್ರಾಮಗಳಿಂದ ಕೋಲು, ಕುಡುಗೋಲು, ಭರ್ಜಿಗಳನ್ನು ಹಿಡಿದುಕೊಂಡು ತಂಡೋಪ ತಂಡವಾಗಿ ಆಗಮಿಸಿ ಕೋಲು ಬೇಟೆ ಸಂಪ್ರದಾಯವನ್ನು ಸಾಂಕೇತಿಕವಾಗಿ ಆಚರಿಸಿದರು.

ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಜಾತ್ರೆಯಲ್ಲಿ ಕೋಲುಬೇಟೆ, ವಿವಿಧ ರೀತಿಯ ತಿಂಡಿ ತಿನಿಸುಗಳ ಅಂಗಡಿಗಳು ಗಮನ ಸೆಳೆದವು.

ಸುಮಾರು 600 ವರ್ಷಗಳ ಇತಿಹಾಸವಿರುವ ಚೋಳರ ಕಾಲದ ಇತಿಹಾಸ ಹೊಂದಿರುವ ಹುಲಿಕುಂಟೆ ಕೋಲುಬೇಟೆ ಕಾರಣಕ್ಕೆ ಮಹತ್ವದ್ದೆನಿಸಿದೆ.

ಮಾಗಡಿ ತಾಲ್ಲೂಕಿನ ಜನತೆಯ ಆರಾಧ್ಯ ದೈವವಾದ ಮಾಗಡಿ ರಂಗನಾಥ, ದೊಡ್ಡಬಳ್ಳಾಪುರ ತಾಲ್ಲೂಕಿನ ಹಣಬೆ ಗ್ರಾಮದ ಸುತ್ತಲಿನ ಜನರು ಪೂಜಿಸುವ ಹಣಬೆ ರಂಗನಾಥ ಮತ್ತು ಹುಲಿಕುಂಟೆ ಸುತ್ತಲಿನ ಜನತೆಯ ಆರಾದ್ಯ ದೈವ ಹುಲಿಕುಂಟೆ ಬೇಟೆ ರಂಗನಾಥ ಈ ಮೂರು ಐತಿಹಾಸಿಕ ವ್ಯಕ್ತಿಗಳ ಶಕ್ತಿ ಸಂಚಯನದ ಸಾಕಾರ ರೂಪವೇ ಹುಲಿಕುಂಟೆ ಬೇಟೆ ರಂಗನಾಥ.

ಮೂರೂ ಜನ ವ್ಯಕ್ತಿಗಳು ಸೇರಿ ತಮ್ಮ ಶಕ್ತಿಯನ್ನು ಕ್ರೋಢೀಕರಿಸಿ ಹುಲಿಕುಂಟೆಯಲ್ಲಿ ‘ಬೇಟೆ ರಂಗನಾಥಸ್ವಾಮಿ’ ಹೆಸರಿನ ಗುಡಿಯೊಂದನ್ನು ಕಟ್ಟಿ ವಿಗ್ರಹವೊಂದನ್ನು ಸ್ಥಾಪಿಸಿ ಯುದ್ಧವೊಂದಕ್ಕೆ ಸಿದ್ಧರಾಗುತ್ತಾರೆ.

ರಂಗನಾಥಸ್ವಾಮಿಯೇ ಬೇಟೆಯ ನಾಯಕ ಎಂದು ಈ ಆಚರಣೆಯನ್ನು ಸಾಂಕೇತಿಕವಾಗಿ ಈಗಲೂ ನಡೆಸುತ್ತ ಬರಲಾಗುತ್ತಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ರಂಗನಾಥಸ್ವಾಮಿಗೆ ಮೊದಲ ಬಲಿ ಸಿಗುತ್ತದೆ. ಆ ಮೊದಲ ಬಲಿ ಸಿಕ್ಕ ಜಾಗದಲ್ಲಿ ಒಂದು ಮಂಟಪ ಕಟ್ಟಿ ಸ್ವಾಮಿಯನ್ನು ಶಾಂತಗೊಳಿಸಲಾಗುತ್ತದೆ.

ಈಗಲೂ ಅದೇ ಜಾಗದಲ್ಲಿ ಬೇಟೆ ಮುಗಿಸಿಕೊಂಡು ಬಂದ ಬೇಟೆ ರಂಗನಾಥಸ್ವಾಮಿಗೆ ಪೂಜೆ ನಡೆಯುತ್ತದೆ. ಈ ಕುರಿತ ಆಚರಣೆಗೆ ‘ಕೋಲು ಬೇಟೆ’ ಎಂದೇ ಕರೆಯಲಾಗುತ್ತದೆ. ಪ್ರತಿ ವರ್ಷದ ಶೂನ್ಯ ಮಾಸದ ಕಡೆಯ ಗುರುವಾರ ಈ ಆಚರಣೆ ನಡೆಯುತ್ತದೆ. ಬೆಳೆಗಳ ಕೊಯ್ಲು ಮುಗಿದು ದಾನ್ಯ ಮನೆಗೆ ಬರುವ ಕಾಲವಾದ್ದರಿಂದ ದಾನ್ಯಗಳನ್ನು ಹೊಲಗಳಲ್ಲಿಯೇ ಕೂಡಿಡುವ ಪರಿಪಾಟವಿದ್ದುದರಿಂದ ಸುತ್ತಲಿನ ಪ್ರದೇಶದ ಪ್ರಾಣಿಗಳನ್ನು ನಿಯಂತ್ರಿಸುವ ಕಾರಣಕ್ಕೆ ಸುತ್ತಲಿನ ಜನ ಬೇಟೆಯಾಡಿ ಪ್ರಾಣಿಗಳನ್ನು ನಿಯಂತ್ರಿಸುವ ಪದ್ಧತಿ ಬೆಳೆದು ಬಂದಿರಬಹುದು ಎನ್ನಲಾಗಿದೆ.

ಹಳ್ಳಿಗಳ ಜನ ಸುತ್ತಲಿನ ಕಾಡುಗಳನ್ನು ತಿರುಗಿ,ಕೋಲು ಹಿಡಿದುಕೊಂಡು ಈ ಸ್ಥಳಕ್ಕೆ ಬಂದು ಸೇರಿ ಸಾಂಪ್ರದಾಯಿಕ ಕೋಲು ಬೇಟೆ ಆಚರಣೆಯನ್ನು ಮಾಡಲಾಗುತ್ತದೆ.

Ramesh Babu

Journalist

Recent Posts

ಅಪಘಾತದಲ್ಲಿ ಪ್ರಜ್ಞೆ ತಪ್ಪಿಬಿದ್ದ ವ್ಯಕ್ತಿ: ಆಸ್ಪತ್ರೆಗೆ ದಾಖಲಿಸುವುದಾಗಿ ನಂಬಿಸಿ ಫೋನ್ ಪೇ ಮೂಲಕ 80 ಸಾವಿರ ವಸೂಲಿ: ಆಸ್ಪತ್ರೆಗೆ ದಾಖಲಿಸದೇ ಪರಾರಿಯಾಗಿದ್ದ ಐನಾತಿಗಳ ಬಂಧನ

ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ನಿಂದ ಫೋನ್ ಪೇ ಮೂಲಕ 80 ಸಾವಿರ ಮೋಸದಿಂದ ಪಡೆದು ಆಸ್ಪತ್ರೆಗೂ ಸಹ ದಾಖಲಿಸದೇ…

10 hours ago

ಚಿನ್ನಾಭರಣ ಮಳಿಗೆಯಲ್ಲಿ ದರೋಡೆ….3 ಕೋಟಿ ಮೌಲ್ಯದ 140 ಕೆಜಿ ಬೆಳ್ಳಿ ಅಭರಣಗಳ ಕಳವು

ಚಿಕ್ಕಬಳ್ಳಾಪುರ ನಗರದ ಬಿ ಬಿ ರಸ್ತೆಯಲ್ಲಿರುವ ಎಯು ಜ್ಯುವೆಲ್ಲರಿ ಶಾಪ್ ಗೆ ಕನ್ನ ಹಾಕಿರುವ ಕಳ್ಳರು ಸರಿಸುಮಾರು 3 ಕೋಟಿ…

14 hours ago

ಕಾಲೇಜಿನಿಂದ ಸಹೋದರನನ್ನು ಮನೆಗೆ ಕರೆದುಕೊಂಡು ಬರುವಾಗ ಜೆಸಿಬಿ ಹಾಗೂ ಬೈಕ್ ನಡುವೆ ಅಪಘಾತ: ಬೈಕ್ ನಲ್ಲಿದ್ದ ಅಣ್ಣ ಸಾವು, ತಮ್ಮನಿಗೆ ಗಾಯ

ಜೆಸಿಬಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯಗಳಾಗಿರುವ ಘಟನೆ ನಿನ್ನೆ…

16 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ರೌಂಡ್ಸ್​

ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಇಂದು ದಿಢೀರ್ ಭೇಟಿ ನೀಡಿ, ಆಸ್ಪತ್ರೆಯಲ್ಲಿನ…

18 hours ago

ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆ

ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಯಲ್ಲಿ…

1 day ago

ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ: ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆ: ಯಾವೆಲ್ಲಾ ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ…

ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.... ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು…

1 day ago