ಆಟೋ ಎಲ್ಪಿಜಿಗಾಗಿ ಡಿಕ್ರಾಸ್ ರಸ್ತೆಯ ಸೂಪರ್ ಗ್ಯಾಸ್ ಬಂಕ್ ಬಳಿ ನೂರಾರು ಆಟೋಗಳು ಸಾಲುಗಟ್ಟಿ ನಿಂತಿವೆ. ಆಟೋ ಎಲ್ಪಿಜಿ ಇಲ್ಲದೆ ಕಂಗಾಲಾಗಿರುವ ಆಟೋ ಚಾಲಕರಿಗೆ ನಗರದ ಏಕೈಕ ಎಲ್ಪಿಜಿ ಕೇಂದ್ರದಲ್ಲಿ ಎಲ್ಪಿಜಿ ಸಿಗುವ ಮಾಹಿತಿ ಮೇರೆಗೆ ಆಟೋ ಚಾಲಕರು ಕಿಲೊ ಮೀಟರ್ ಗಟ್ಟಲೆ ಸಾಲಿನಲ್ಲಿ ಆಟೋಗಳನ್ನ ನಿಲ್ಲಿಸಿ ಕಾಯುತ್ತಿದ್ದಾರೆ.
ಪಕ್ಕದ ಚಿಕ್ಕಬಳ್ಳಾಪುರ, ವಿಜಯಪುರ, ನೆಲಮಂಗಲ ಗೌರಿಬಿದನೂರು, ಯಲಹಂಕ, ದೇವನಹಳ್ಳಿ, ಕೆಆರ್ ಪುರಂ ಸೇರಿದಂತೆ ಹಲವು ದೂರದ ಊರುಗಳಿಂದಲೂ ಆಟೋ ಚಾಲಕರು ಆಗಮಿಸಿ ಮಧ್ಯಾಹ್ನದಿಂದಲೇ ಕಾಯುತ್ತಿದ್ದಾರೆ.
ಎಲ್ಪಿಜಿ ಇಲ್ಲದೆ ಜೀವನ ನಿರ್ಹವಣೆ ಅಸಾಧ್ಯವಾಗಿದೆ. ನಮ್ಮ ಜೀವನ ಬೆಳಗ್ಗೆಯಿಂದ ಸಂಜೆವರೆಗೂ ದುಡಿದು ಬದುಕುವುದು. ಈಗ ಎಲ್ಪಿಜಿ ಇಲ್ಲದೆ ಆಟೋ ನಿಲ್ಲಿಸಿ 10 ದಿನಗಳಾಗಿವೆ. ಮನೆ ಬಳಿ ಸಾಲ ಕೊಟ್ಟವರು ಬರುತ್ತಿದ್ದಾರೆ. ಸಾಲ ಕಟ್ಟಲಾಗದೆ ಪರಿತಪಿಸುವಂತಾಗಿದೆ. ಒಮ್ಮೆ ಸಾಲ ಕೊಟ್ಟವರು ಮತ್ತೊಮ್ಮೆ ಸಾಲ ನೀಡುತ್ತಿಲ್ಲ. ಸರ್ಕಾರ ಅಧಿಕೃತ ಆಟೊ ಚಾಲಕರನ್ನ ಗುರುತಿಸಿ ಸಹಾಧನ ನೀಡಬೇಕು ಎಂದು ಆಟೋ ಚಾಲಕ ಮಂಜುನಾಥ್ ಮನವಿ ಮಾಡಿದರು.
ಬೆಲೆ ಏರಿಕೆಗೆ ಆಟೋ ಚಾಲಕರು ತತ್ತರ:
ಮಧ್ಯಪ್ರಾಚ್ಯ ಯುದ್ಧ ಆರಂಭಕ್ಕೂ ಮುನ್ನ ಎಲ್ಪಿಜಿ ದರವೂ ಪ್ರತಿ ಕೆಜಿಗೆ 52 ರೂ. ಇತ್ತು. ಕಳೆದ 15 ದಿನಗಳಲ್ಲಿ ಬರೋಬ್ಬರಿ 25 ರಿಂದ 30 ರೂ. ಏರಿಕೆಯಾಗಿದೆ. ಇಂದು ಕೂಡ ಬಂಕ್ ಮಾಲೀಕರು ದರ ನಿಗದಿ ಪಡಿಸಲು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಕಳೆದ ವಾರ 85 ರೂ. ನೀಡಿ ಆಟೋ ಚಾಲಕರು ಎಲ್ಪಿಜಿ ಖರೀದಿಸಿದ್ದರು. ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆ ದರವನ್ನು ಏರಿಕೆ ಆಗುವ ಭೀತಿ ಕಾಡುತ್ತಿದೆ. ಸದ್ಯ ಇರುವ ಎಲ್ಪಿಜಿ ಪ್ರಮಾಣದಲ್ಲಿ ಪ್ರತಿ ಆಟೊ ಚಾಲಕರಿಗೆ 500 ರೂ.ಗೆ ವಿತರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ..
ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ…
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ….
ಪ್ರವಾಸ ಕಥನಗಳ ಬಗ್ಗೆ ಬಹಳ ಹಿಂದಿನಿಂದಲೂ ಸಾಕಷ್ಟು ಲೇಖನಗಳನ್ನು ಓದುತ್ತಲೇ ಇರುತ್ತೇನೆ. ಅದು ಪ್ರವಾಸೋದ್ಯಮಕ್ಕಾಗಿಯಲ್ಲ. ಏಕೆಂದರೆ ಪ್ರವಾಸ ವ್ಯಾಪಾರಿಗಳಿಗೆ ಒಂದು…
ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇಕಡ 33 ರಷ್ಟು ಮಳೆ ಕೊರತೆಯಾಗಿದ್ದು ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ…
ದೊಡ್ಡಬಳ್ಳಾಪುರ: ಸಮರ್ಪಕ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ಎದುರಿಸುತ್ತಿರುವ ದೊಡ್ಡಬಳ್ಳಾಪುರ ಕ್ಷೇತ್ರದ ರೈತರಿಗೆ ನೆರವಾಗುವ ಉದ್ದೇಶದಿಂದ, ಕ್ಷೇತ್ರದ ಪ್ರಮುಖ ಬೆಳೆಯಾದ…
ಗೌರಿಬಿದನೂರು: ಕೋಳಿ ವಿಚಾರವಾಗಿ ಆರಂಭವಾದ ನೆರೆಹೊರೆಯವರ ನಡುವಿನ ಜಗಳ ಗಂಭೀರ ಸ್ವರೂಪ ಪಡೆದು, ಸಾರ್ವಜನಿಕ ಆಸ್ಪತ್ರೆಯೊಳಗೂ ಗಲಾಟೆ ನಡೆದ ಘಟನೆ…
ಕನ್ನಡದ ಖ್ಯಾತ, ಪ್ರತಿಭಾವಂತ ಚಲನಚಿತ್ರ ನಟ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಅನಂತನಾಗ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ದೆಹಲಿಯ…
ಬೆಂಗಳೂರಿನ ಹೆಬ್ಬಾಳ ಬಳಿಯ ಕೆಂಪಾಪುರ ಗ್ರಾಮದ ವೃದ್ಧ ದಂಪತಿ ಆತ್ಮಹತ್ಯೆಗೆ ಯತ್ನಿಸಿ ಪತಿ ಶಿವಪ್ಪ(76) ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ…