ಆಟೋ ಎಲ್ಪಿಜಿಗಾಗಿ ಡಿಕ್ರಾಸ್ ರಸ್ತೆಯ ಸೂಪರ್ ಗ್ಯಾಸ್ ಬಂಕ್ ಬಳಿ ನೂರಾರು ಆಟೋಗಳು ಸಾಲುಗಟ್ಟಿ ನಿಂತಿವೆ. ಆಟೋ ಎಲ್ಪಿಜಿ ಇಲ್ಲದೆ ಕಂಗಾಲಾಗಿರುವ ಆಟೋ ಚಾಲಕರಿಗೆ ನಗರದ ಏಕೈಕ ಎಲ್ಪಿಜಿ ಕೇಂದ್ರದಲ್ಲಿ ಎಲ್ಪಿಜಿ ಸಿಗುವ ಮಾಹಿತಿ ಮೇರೆಗೆ ಆಟೋ ಚಾಲಕರು ಕಿಲೊ ಮೀಟರ್ ಗಟ್ಟಲೆ ಸಾಲಿನಲ್ಲಿ ಆಟೋಗಳನ್ನ ನಿಲ್ಲಿಸಿ ಕಾಯುತ್ತಿದ್ದಾರೆ.
ಪಕ್ಕದ ಚಿಕ್ಕಬಳ್ಳಾಪುರ, ವಿಜಯಪುರ, ನೆಲಮಂಗಲ ಗೌರಿಬಿದನೂರು, ಯಲಹಂಕ, ದೇವನಹಳ್ಳಿ, ಕೆಆರ್ ಪುರಂ ಸೇರಿದಂತೆ ಹಲವು ದೂರದ ಊರುಗಳಿಂದಲೂ ಆಟೋ ಚಾಲಕರು ಆಗಮಿಸಿ ಮಧ್ಯಾಹ್ನದಿಂದಲೇ ಕಾಯುತ್ತಿದ್ದಾರೆ.
ಎಲ್ಪಿಜಿ ಇಲ್ಲದೆ ಜೀವನ ನಿರ್ಹವಣೆ ಅಸಾಧ್ಯವಾಗಿದೆ. ನಮ್ಮ ಜೀವನ ಬೆಳಗ್ಗೆಯಿಂದ ಸಂಜೆವರೆಗೂ ದುಡಿದು ಬದುಕುವುದು. ಈಗ ಎಲ್ಪಿಜಿ ಇಲ್ಲದೆ ಆಟೋ ನಿಲ್ಲಿಸಿ 10 ದಿನಗಳಾಗಿವೆ. ಮನೆ ಬಳಿ ಸಾಲ ಕೊಟ್ಟವರು ಬರುತ್ತಿದ್ದಾರೆ. ಸಾಲ ಕಟ್ಟಲಾಗದೆ ಪರಿತಪಿಸುವಂತಾಗಿದೆ. ಒಮ್ಮೆ ಸಾಲ ಕೊಟ್ಟವರು ಮತ್ತೊಮ್ಮೆ ಸಾಲ ನೀಡುತ್ತಿಲ್ಲ. ಸರ್ಕಾರ ಅಧಿಕೃತ ಆಟೊ ಚಾಲಕರನ್ನ ಗುರುತಿಸಿ ಸಹಾಧನ ನೀಡಬೇಕು ಎಂದು ಆಟೋ ಚಾಲಕ ಮಂಜುನಾಥ್ ಮನವಿ ಮಾಡಿದರು.
ಬೆಲೆ ಏರಿಕೆಗೆ ಆಟೋ ಚಾಲಕರು ತತ್ತರ:
ಮಧ್ಯಪ್ರಾಚ್ಯ ಯುದ್ಧ ಆರಂಭಕ್ಕೂ ಮುನ್ನ ಎಲ್ಪಿಜಿ ದರವೂ ಪ್ರತಿ ಕೆಜಿಗೆ 52 ರೂ. ಇತ್ತು. ಕಳೆದ 15 ದಿನಗಳಲ್ಲಿ ಬರೋಬ್ಬರಿ 25 ರಿಂದ 30 ರೂ. ಏರಿಕೆಯಾಗಿದೆ. ಇಂದು ಕೂಡ ಬಂಕ್ ಮಾಲೀಕರು ದರ ನಿಗದಿ ಪಡಿಸಲು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಕಳೆದ ವಾರ 85 ರೂ. ನೀಡಿ ಆಟೋ ಚಾಲಕರು ಎಲ್ಪಿಜಿ ಖರೀದಿಸಿದ್ದರು. ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆ ದರವನ್ನು ಏರಿಕೆ ಆಗುವ ಭೀತಿ ಕಾಡುತ್ತಿದೆ. ಸದ್ಯ ಇರುವ ಎಲ್ಪಿಜಿ ಪ್ರಮಾಣದಲ್ಲಿ ಪ್ರತಿ ಆಟೊ ಚಾಲಕರಿಗೆ 500 ರೂ.ಗೆ ವಿತರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ..
ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ…
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ….
ಪ್ರತೀಕಾರಾತ್ಮಕ ಅಶ್ಲೀಲತೆ , ಸೆಕ್ಸ್ಟಾರ್ಷನ್ ಹಾಗೂ ಬ್ಲ್ಯಾಕ್ಮೇಲ್ ವಿಡಿಯೋಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಡ್ಡಾಯವಾಗಿ ಎಫ್ಐಆರ್ ದಾಖಲಿಸುವಂತೆ ಗೃಹ ಇಲಾಖೆಗೆ ಸೂಚನೆ…
ಕೃಷಿ ಇಲಾಖೆ ವತಿಯಿಂದ 2026-27 ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ…
ದೇವನಹಳ್ಳಿ: ತೋಟಕ್ಕೆ ನೀರು ಬಿಡುವ ವಿಚಾರವಾಗಿ ಉಂಟಾದ ಕುಟುಂಬ ಕಲಹ ಗುಂಡಿನ ದಾಳಿಗೆ ತಿರುಗಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ…
ದೊಡ್ಡಬಳ್ಳಾಪುರ: ಮಕ್ಕಳು ಹಾಗೂ ಯುವಜನತೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ರೂಪಿಸಿಕೊಳ್ಳಬೇಕು…
ಬೆಂಗಳೂರು: ಕರ್ನಾಟಕ ಸರ್ಕಾರವು ಉಪಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಜಿಲ್ಲಾವಾರು ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಹೊಸ ಅಧಿಸೂಚನೆ ಹೊರಡಿಸಿದೆ. ರಾಜ್ಯಪಾಲರ ಅನುಮೋದನೆಯೊಂದಿಗೆ…
ವಿಜಯಪುರ (ದೇವನಹಳ್ಳಿ): ಮನೆಗಳ ಮುಂಭಾಗ ಹಾಗೂ ಸಾರ್ವಜನಿಕ ಪಾರ್ಕಿಂಗ್ ಪ್ರದೇಶಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ವಿಜಯಪುರ…