ಮೋದಿ ಸರ್ಕಾರ 3.0: ನೂತನ ಸಚಿವರಿಗೆ ಖಾತೆ ಹಂಚಿಕೆ: ಎಚ್.ಡಿ.ಕುಮಾರಸ್ವಾಮಿ ಹೆಗಲಿಗೆ ಉಕ್ಕು, ಭಾರೀ ಕೈಗಾರಿಕೆ ಖಾತೆ

ಪ್ರಧಾನಿ ನರೇಂದ್ರ ಮೋದಿ ಅವರ‌ ಮೂರನೇ ಅವಧಿಗೆ 71 ಸಚಿವರೊಂದಿಗೆ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದು, ಇವರಲ್ಲಿ ಮೂವತ್ತು ಮಂದಿ ಕ್ಯಾಬಿನೆಟ್ ದರ್ಜೆ ಮಂತ್ರಿಗಳಾಗಿ, ಐವರು ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರಾಗಿ ಮತ್ತು 36 ಮಂದಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಇದೀಗ ಪ್ರಧಾನಿ ಮೋದಿ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ.

ಯಾರಿಗೆ ಯಾವ ಖಾತೆ..?

ಕ್ಯಾಬಿನೆಟ್ ದರ್ಜೆ ಸಚಿವರ ಖಾತೆ

1.ಅಮಿತ್ ಶಾ- ಗೃಹ ಖಾತೆ, ಸಹಕಾರ ಸಚಿವಾಲಯ

2.ರಾಜನಾಥ್ ಸಿಂಗ್- ರಕ್ಷಣಾ ಇಲಾಖೆ

3.ಎಸ್.ಜೈಶಂಕರ್- ವಿದೇಶಾಂಗ ಇಲಾಖೆ

4.ನಿತಿನ್ ಗಡ್ಕರಿ- ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಖಾತೆ

5.ಜೆಪಿ ನಡ್ಡಾ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೆಮಿಕಲ್‌ ಫರ್ಟಿಲೈಜರ್‌ ಖಾತೆ

6.ನಿರ್ಮಲಾ ಸೀತಾರಾಮನ್‌ – ಹಣಕಾಸು ಸಚಿವಾಲಯ

7.ಧರ್ಮೇಂದ್ರ ಪ್ರದಾನ – ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ

8.ಎಸ್‌.ಎಸ್‌. ಚೌಹಾಣ್‌ – ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಖಾತೆ

9.ಎಚ್‌ಡಿ.ಕುಮಾರಸ್ವಾಮಿ – ಬೃಹತ್‌ ಕೈಗಾರಿಕೆ, ಉಕ್ಕು ಖಾತೆ

10.ಅಶ್ವಿನಿ ವೈಷ್ಣವ್‌ – ರೈಲ್ವೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ

11.ಗಜೇಂದ್ರ ಸಿಂಗ್‌ ಶೇಖಾವತ್‌ – ಪ್ರವಾಸೋದ್ಯಮ, ಸಂಸ್ಕೃತ ಇಲಾಖೆ

12.ಕಿರಣ್‌ ರಿಜಿಜು – ಸಂಸದೀಯ ವ್ಯವಹಾರ ಖಾತೆ

13.ಪ್ರಹ್ಲಾದ್‌ ಜೋಶಿ – ಗ್ರಾಹಕರ ವ್ಯವಹಾರ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ

14.ಅನ್ನಪೂರ್ಣಾ ದೇವಿ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

15.ರಾಮಮೋಹನ ನಾಯ್ಡು – ನಾಗರೀಕ ವಿಮಾನಯಾನ

16.ಗಿರಿರಾಜ್‌ ಸಿಂಗ್‌ – ಜವಳಿ

17.ರಾಜೀವ್‌ ರಂಜನ್‌ಸಿಂಗ್‌ – ಪಂಚಾಯತ್‌ ರಾಜ್‌, ಮೀನುಗಾರಿಕೆ, ಪಶುಸಂಗೋಪನೆ ಖಾತೆ

18.ಜ್ಯೋತಿರಾಧಿತ್ಯ ಸಿಂಧ್ಯಾ – ಟೆಲಿಕಾಂ

19.ಚಿರಾಗ್‌ ಪಾಸ್ವಾನ್‌ – ಆಹಾರ ಸಂಸ್ಕರಣಾ ಕೈಗಾರಿಕೆ ಇಲಾಖೆ

20.ಭೂಪೇಂದ್ರ ಯಾದವ್‌ – ಪರಿಸರ ಅರಣ್ಯ ಹವಾಮಾನ ಬದಲಾವಣೆ ಖಾತೆ

21.ಸಿ.ಆರ್‌ ಪಾಟೀಲ್‌ – ಜಲಶಕ್ತಿ ಖಾತೆ

22.ಜಿ.ಕಿಶನ್‌ ರೆಡ್ಡಿ – ಕಲ್ಲಿದ್ದಲು, ಗಣಿ ಇಲಾಖೆ

23.ರವನೀತ್‌ ಸಿಂಗ್‌ ಬಿಟ್ಟು – ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯ

24. ಹರ್ದೀಪ್‌ ಸಿಂಗ್‌ ಪುರಿ – ಪೆಟ್ರೋಲಿಯಂ ಖಾತೆ

25.ಡಾಎಂ.ಮಂಡಾವಿಯ – ಕಾರ್ಮಿಕ ಕಲ್ಯಾಣ, ಯುವಜನ ಮತ್ತು ಕ್ರೀಡೆ ಇಲಾಖೆ

26.ಜೋಯಲ್‌ ಓರಾಂ – ಬುಡಕಟ್ಟು ಅಭಿವೃದ್ಧಿ ಇಲಾಖೆ

27.ಪಿಯುಷ್‌ ಗೋಯಲ್‌ – ವಾಣಿಜ್ಯ ಮತ್ತು ಕೈಗಾರಿಕೆ

28.ರಾಮ್‌ ಮೋಹನ್‌ ನಾಯ್ಡು – ನಾಗರೀಕ ವಿಮಾನಯಾನ ಸಚಿವಾಲಯ

29.ಜಿತನ್‌ರಾಮ್‌ ಮಾಂಝಿ – ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಖಾತೆ

30.ಡಾ.ವೀರೇಂದ್ರ ಕುಮಾರ್‌ – ಸಾಮಾಜಿಕ ನ್ಯಾಯ ಸಬಲೀಕರಣ ಇಲಾಖೆ

31.ಸರ್ಬಾನಂದ ಸೋನಾವಾಲ್‌ – ಬಂದರು, ಜಲಸಾರಿಗೆ ಸಚಿವಾಲಯ

ರಾಜ್ಯ ಸಚಿವರು- ಸ್ವತಂತ್ರ ನಿರ್ವಹಣೆ ಸಚಿವರ ಖಾತೆ

1.ಎ.ರಾಮ್‌ಮೇಘವಾಲ್‌ – ಕಾನೂನು ಮತ್ತು ನ್ಯಾಯ/ ಸಂಸದೀಯ ವ್ಯವಹಾರ ಖಾತೆ

2.ಜಯಂತ್‌ ಚೌಧರಿ – ಕೌಶಲ್ಯಾಭಿವೃದ್ಧಿ, ಶಿಕ್ಷಣ (ರಾಜ್ಯಖಾತೆ)‌ ಇಲಾಖೆ

3.ರಾವ್‌ ಇಂದ್ರಜಿತ್‌ಸಿಂಗ್‌ – ವಿಜ್ಞಾನ ತಂತ್ರಜ್ಞಾನ ಇಲಾಖೆ

4. ಪ್ರತಾಪ್‌ರಾವ್‌ ಜಾಧವ್‌ – ಆಯುಷ್‌ ಇಲಾಖೆ (ಆರೋಗ್ಯ ರಾಜ್ಯ ಖಾತೆ)ಇಲಾಖೆ

5.ಜಿತೇಂದ್ರ ಸಿಂಗ್‌ – ಭೂ ವಿಜ್ಞಾನ ಖಾತೆ

ವಿವಿಧ ಖಾತೆಗಳ ರಾಜ್ಯ ಸಚಿವರ ಖಾತೆ

1. ಶೋಭಾ ಕರಂದ್ಲಾಜೆ – ಸಣ್ಣ, ಮಧ್ಯಮ ಕೈಗಾರಿಕೆ, ಕಾರ್ಮಿಕ ಇಲಾಖೆ

2.ಶ್ರೀಪಾದ್‌ ನಾಯ್ಕ್‌ – ಇಂಧನ ಖಾತೆ

3.ಪಂಕಜ್‌ ಚೌಧರಿ – ಹಣಕಾಸು ಇಲಾಖೆ

4.ಕ್ರಿಷನ್‌ಪಾಲ್‌ ಗುರ್ಜಾರ್‌ – ಸಹಕಾರ‌ ಖಾತೆ

5.ರಾಮ್‌ದಾಸ್‌ ಅಠಾವಳೆ – ನ್ಯಾಯ ಸಬಲೀಕರಣ ಸಚಿವಾಲಯ

6.ರಾಮನಾಥ್‌ ಠಾಕೂರ್‌ – ಕೃಷಿ, ರೈತರ ಸಬಲೀಕರಣ ಇಲಾಖೆ

7.ನಿತ್ಯಾನಂದ ರಾಯ್‌ – ಗೃಹ ಸಚಿವಾಲಯ

8.ಅನುಪ್ರಿಯಾ ಪಟೇಲ್‌ – ಆರೋಗ್ಯ, ರಾಸಾಯನಿಕ, ಗೊಬ್ಬರ‌ ಖಾತೆ

10.ವಿ.ಸೋಮಣ್ಣ – ಜಲಶಕ್ತಿ, ರೈಲ್ವೆ ಸಚಿವಾಲಯ

11.ಚಂದ್ರಶೇಖರ್‌ ಪೆಮ್ಮಸಾನಿ- ಗ್ರಾಮೀಣ ಅಭಿವೃದ್ಧಿ, ಸಂವಹನ ಖಾತೆ

12.ಎಸ್‌.ಸಿ.ಸಿಂಗ್‌ ಬಘೇಲ್‌ – ಪಶುಸಂಗೋಪನೆ, ಮೀನುಗಾರಿಕೆ, ಪಂಚಾಯತ್‌ ರಾಜ್‌ ಸಚಿವಾಲಯ

13.ಜಿತಿನ್‌ ಪ್ರಸಾದ್‌ – ವಾಣಿಜ್ಯ ಮತ್ತು ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಇಲಾಖೆ

14.ಕೀರ್ತಿವಧನ್‌ ಸಿಂಗ್‌- ಪೆಂಡಿಂಗ್

15.ಬಿ.ಎಲ್‌.ವರ್ಮಾ-ಪೆಂಡಿಂಗ್

Ramesh Babu

Journalist

Recent Posts

ಏ.5ಕ್ಕೆ ತೂಬಗೆರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ

ಬಾಬು ಜಗಜೀವನ್ ರಾಮ್ ಜಯಂತಿ ಪ್ರಯುಕ್ತ ಏ.5ರ ಭಾನುವಾರ ತೂಬಗೆರೆ ಸರ್ಕಾರಿ ಶಾಲೆಯಲ್ಲಿ ಬಾಬು ಜಗಜೀವನ ರಾಮ್ ರಾಷ್ಟ್ರೀಯ ಶಿಕ್ಷಣ…

10 minutes ago

ಡ್ರಿಪ್ ಹಾಕಿಸಿಕೊಂಡೇ SSLC ಪರೀಕ್ಷೆ ಬರೆದ ವಿದ್ಯಾರ್ಥಿ….

ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಹೊಟ್ಟೆನೋವಿಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ನೇರವಾಗಿ ಪರೀಕ್ಷಾ ಕೊಠಡಿಗೆ…

5 hours ago

ಜೈಲಿನ ಜೈಲರ್ ಲೋಕಾಯುಕ್ತ ಬಲೆಗೆ

ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಜೈಲಿನ ಜೈಲರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.. ಕೈದಿಗೆ ಸರ್ಕಾರದಿಂದ ಬಂದ ಹಣ ನೀಡಲು 60 ಸಾವಿರ…

8 hours ago

ದ್ವಿಚಕ್ರ ವಾಹನ ಹಾಗೂ ಪಂಪ್ ಸೆಟ್ ಗೆ ಅಳವಡಿಸಿದ್ದ ಮೋಟಾರ್ ಗಳ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ರಾಮನಗರ ಗ್ರಾಮಾಂತರ ಹಾಗೂ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಜಮೀನಿನಲ್ಲಿ ಪಂಪ್ ಸೆಟ್ ಗಳಿಗೆ ಅಳವಡಿಸಿದ್ದ…

1 day ago

ಬಿಸಿಲಿನ ಬೇಗೆ: ಬಾಯಾರಿದ ಕೋತಿ ನೀರಿಗಾಗಿ ಪರದಾಟ: ವಾಟರ್ ಬಾಟಲ್ ನೀರು ಕುಡಿಯಲು ಹರಸಾಹಸ

ಬಿರುಬಿಸಿಲಿಗೆ ಬಾಯಾರಿಕೆಯಿಂದ ಕೋತಿಯೊಂದು ನೀರಿಗಾಗಿ ವಾಟರ್ ಬಾಟಲ್ ಹಿಡಿದು ಒಂದೊಂದು ಹನಿಗೂ ಪರದಾಡಿದ ದೃಶ್ಯ ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ…

1 day ago

ಪಾಲನಜೋಗಿಹಳ್ಳಿ ಬಳಿ ಅಪಘಾತ: ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು…

1 day ago