ಯಲಹಂಕ-ಹಿಂದೂಪುರ ಟೋಲ್ ರಸ್ತೆಯಲ್ಲಿ ವಾಹನ ಸವಾರರಿಂದ ಟೋಲ್ ಸುಂಕ ವಸೂಲಿ ಮಾಡುವ ಟೋಲ್ ನವರು, ತೆಗೆದುಕೊಂಡ ಹಣಕ್ಕೆ ಸೇವೆ ಕೊಡಲಾಗುತ್ತಿದಿಯೇ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ, ಟೋಲ್ ರಸ್ತೆಯಲ್ಲಿ ಬೀದಿ ದೀಪಗಳಿಲ್ಲ, ಸರ್ಕಲ್ ಗಳಲ್ಲಿ ಹೈಮಾಸ್ಟ್ ದೀಪಗಳಿಲ್ಲ, ರಸ್ತೆ ಬದಿಯಲ್ಲಿ ಚರಂಡಿ ಇಲ್ಲ, ಸ್ವಚ್ಛತೆಯೂ ಇಲ್ಲ, ಸೂಚನ ಫಲಕಗಳಿಲ್ಲ, ಟ್ರಾಫಿಕ್ ಸಿಗ್ನಲ್ ಗಳಿಲ್ಲ. ಅವ್ಯವಸ್ಥಿತವಾಗಿರುವ ಟೋಲ್ ರಸ್ತೆಯಿಂದ ಅಮಾಯಕ ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಕೇವಲ ವಾಹನ ಸವಾರರಿಂದ ಹಣ ಸಂಗ್ರಹಿಸುವುದಷ್ಟೇ ನಮ್ಮ ಕಾಯಕ, ಸೇವೆ ನೀಡುವುದು ನಮ್ಮ ಧರ್ಮ ಅಲ್ಲ, ಅಮಾಯಕ ವಾಹನ ಸವಾರರು ಸತ್ತರೇನು ಎಂಬ ಉಢಾಪೆಯಲ್ಲಿದ್ದಾರೆ. ಅದಕ್ಕೆ ಸಾಕ್ಷಿ ಅನ್ನುವಂತೆ ಟೋಲ್ ರಸ್ತೆಯ ವ್ಯಾಪ್ತಿಯಲ್ಲಿ ಬರುವು ಟಿ.ಬಿ ಸರ್ಕಲ್ ನಿಂದ ಪಾಲನಜೋಗಹಳ್ಳಿಯವರೆಗೂ ಕಳೆದ 15 ದಿನಗಳಿಂದ ಬೀದಿ ದೀಪಗಳು ಉರಿಯುತ್ತಿಲ್ಲ.
ಯಲಹಂಕ-ಹಿಂದೂಪುರ ಟೋಲ್ ಸಂಸ್ಥೆ ಜನರ ರಕ್ತ ಹೀರುವ ಸಂಸ್ಥೆಯಾಗಿದೆ. ದೃಷ್ಟಿ ಬೊಂಬೆ ರೀತಿ ರಸ್ತೆಯ ವಿಭಜಕದ ಮೇಲೆ ಬೀದಿ ದೀಪಗಳನ್ನ ಹಾಕಲಾಗಿದೆ. ಕಳೆದ 15 ದಿನಗಳಿಂದ ಟಿ.ಬಿ ಸರ್ಕಲ್ ನಿಂದ ಪಾಲನಜೋಗಹಳ್ಳಿವರೆಗೂ ಒಂದೇ ಒಂದು ಲೈಟ್ ಉರಿಯುತ್ತಿಲ್ಲ. ಮುಂಜಾನೆ 4 ಗಂಟೆ ಸಮಯದಲ್ಲಿ ಎಪಿಎಂಸಿ ಗೆ ಸಾಕಷ್ಟು ರೈತರು ಬರುತ್ತಾರೆ. ಕೆಲವು ರೈತರು ಸೈಕಲ್ ನಲ್ಲಿ ಬರುತ್ತಾರೆ, ಕತ್ತಲ ರಸ್ತೆಯಲ್ಲಿ ಬರುವುದರಿಂದ ಟೋಲ್ ರಸ್ತೆಯಲ್ಲಿ ಅಪಘಾತಗಳು ಸಾಮಾನ್ಯವಾಗಿದೆ ಎಂದು ಸ್ಥಳೀಯ ಮುಖಂಡರಾದ ಮಹಮ್ಮದ್ ಆದಿಲ್ ಪಾಷಾ ಕಿಡಿಕಾರಿದ್ದಾರೆ.
ರಸ್ತೆಯಲ್ಲಿ ಕಸವನ್ನು ತೆಗೆಯುವುದಿಲ್ಲ, ರಸ್ತೆಯಲ್ಲಿನ ಹಳ್ಳಗಳನ್ನ ದುರಸ್ಥಿ ಮಾಡದೆ ಆಗೆಯೇ ಬಿಟ್ಟಿದ್ದಾರೆ, ಅಮಾಯಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಟೋಲ್ ನವರಿಗೆ ಮಾನವೀಯತೆಯೇ ಇಲ್ಲವೆಂದು ಅಕ್ರೋಶ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಕಾರ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವೇಗ…
ಕೋಲಾರ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಜಾ ಸೇವಾ…
ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ನವದೆಹಲಿಗೆ…
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…
ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…
ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…