Categories: ಲೇಖನ

ಮಾನ ಮತ್ತು ಪ್ರಾಣ, ಇವೆರಡರಲ್ಲಿ ಯಾವುದು ಮುಖ್ಯ ಮತ್ತು ಅನಿವಾರ್ಯ….

ಮಾನ – ಪ್ರಾಣ………..

ಮಾನ ಮರ್ಯಾದೆ ಉಳಿಸಿಕೊಳ್ಳಲು ‌ಪ್ರಾಣ ಬಿಡಬೇಕೆ ?
ಪ್ರಾಣ ಉಳಿಸಿಕೊಳ್ಳಲು ಮಾನ ಮರ್ಯಾದೆ ಬಿಡಬೇಕೆ‌ ?……

ಮಾನ ಮತ್ತು ಪ್ರಾಣ,
ಇವೆರಡರಲ್ಲಿ ಯಾವುದು ಮುಖ್ಯ ಮತ್ತು ಅನಿವಾರ್ಯವಾದಾಗ ಯಾವುದರ ರಕ್ಷಣೆಗೆ ನಾವು ಮಹತ್ವ ಕೊಡಬೇಕು. ಯಾವುದಕ್ಕಾಗಿ ನಾವು ಹೋರಾಡಬೇಕು………………..

ಎಲ್ಲರಿಗೂ ತಿಳಿದಿರುವಂತೆ ಹಿಂದಿನ ಕಾಲದಲ್ಲಿ ಮತ್ತು ಇಂದಿಗೂ ಜನಮಾನಸದಲ್ಲಿ ಮಾನಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಪ್ರಾಣ ಹೋದರೂ ಮಾನ ಕಾಪಾಡಿಕೊಳ್ಳಬೇಕು ಎಂಬ ಬಲವಾದ ನಂಬಿಕೆ ಇದೆ.
ಇದು ನಿಜವೇ ? ಸರಿಯೇ ? ಇಂದಿನ ಆಧುನಿಕ ಸಂಕೀರ್ಣ ಬದುಕಿನಲ್ಲೂ ಇದು ಪ್ರಸ್ತುತವೇ ?
ಒಮ್ಮೆ ಅವಲೋಕನ ಮಾಡಿಕೊಳ್ಳೋಣ……….

ಮಾನ ಎಂಬುದು ಭಾವ – ಭ್ರಮೆ – ನಂಬಿಕೆ – ಮಾನಸಿಕ ಸ್ಥಿತಿ.‌‌ ಪ್ರಾಣ ಎಂಬುದು ವಾಸ್ತವ ಮತ್ತು ದೈಹಿಕ ಸ್ಥಿತಿ.

ಇಂದಿನ‌ ಆಧುನಿಕ – ಸ್ಪರ್ಧಾತ್ಮಕ ಭಾರತೀಯ ಸಮಾಜ ಮತ್ತು ಮನಸ್ಥಿತಿಯಲ್ಲಿ ಮಾನ ಎಂಬುದು ತನ್ನ ನೈಜ ಅರ್ಥ ಮತ್ತು ಗುಣವನ್ನು ಕಳೆದುಕೊಂಡಿದೆ ಎನ್ನಬಹುದು. ಮಾನ ಒಂದು ವ್ಯಕ್ತಿತ್ವವನ್ನು ನಿರ್ಧರಿಸುವ ಮಾನದಂಡವಾಗಿ ಉಳಿದಿಲ್ಲ. ಅದನ್ನು ಕಳೆದುಕೊಳ್ಳಬಹುದು ಮತ್ತು ಗಳಿಸಿಕೊಳ್ಳಬಹುದು.

ಒಂದು ವೇಳೆ ಯಾವುದೋ ಕಾರಣದಿಂದ ನಿಮ್ಮ ಮಾನಹಾನಿಯಾಗಿದ್ದರೆ ಮುಂದೆ ಪ್ರತಿಭೆ, ಸಾಮರ್ಥ್ಯ, ದಿಟ್ಟತನ, ಆತ್ಮ ವಿಮರ್ಶೆ‌, ಸಾಧನೆ ‌ಅಥವಾ ಹಣ, ಅಧಿಕಾರ, ಭಂಡತನ, ನಿರ್ಲಜ್ಜೆ, ವಿತಂಡ ಸಮರ್ಥನೆ, ಜನರನ್ನು ಮರುಳು ಮಾಡುವಿಕೆ ಮುಂತಾದ ಕ್ರಮಗಳ ಮುಖಾಂತರ ಅದನ್ನು ಮೇಲ್ನೋಟಕ್ಕಾದರೂ ಮರಳಿ ಪಡೆಯಬಹುದು. ಕೊಲೆ, ಅತ್ಯಾಚಾರ, ಭ್ರಷ್ಟಾಚಾರ ಮುಂತಾದ ಗಂಭೀರ ಪ್ರಕರಣಗಳಲ್ಲಿ ನೇರ ಸಿಕ್ಕಿ ಹಾಕಿಕೊಂಡು ಜೈಲುವಾಸ ಅನುಭವಿಸಿ ಬಂದ ನಂತರವೂ ಹಣಬಲ, ಜಾತಿಬಲ, ಅಧಿಕಾರಬಲ ಇರುವವನು ಮಾನ ಮರ್ಯಾದೆಯೂ ಸೇರಿದಂತೆ ಎಲ್ಲವನ್ನೂ ಮರಳಿ ಗಳಿಸಬಹುದು ಮತ್ತು ಗಳಿಸುತ್ತಿದ್ದಾರೆ. ಅದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.

ಅಷ್ಟೇ ಏಕೆ ಸಾಮಾನ್ಯರು ಕೂಡ ಆಕಸ್ಮಿಕವಾಗಿ – ಅನಿವಾರ್ಯವಾಗಿ – ಪರಿಸ್ಥಿತಿಯ ಒತ್ತಡದಿಂದ ಒಂದು ವೇಳೆ ತಪ್ಪುಮಾಡಿ ಅವಮಾನಕ್ಕೆ ಗುರಿಯಾದರೂ ಮುಂದೊಂದು ದಿನ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡು ಮಾನವೀಯ ಅಂತಃಕರಣದಿಂದ ಸಮಾಜಮುಖಿ ಕೆಲಸಗಳನ್ನು ಮಾಡಿದರೆ ಹೋದ ಮಾನವನ್ನು ಸ್ವಲ್ಪಮಟ್ಟಿಗೆ ಮರಳಿ ಪಡೆಯಬಹುದು. ( ಅತ್ಯಂತ ಹುಟ್ಟಾ ಕ್ರಿಮಿನಲ್ ಗಳಿಗೆ ಇದು ಯಾವ ಕಾರಣಕ್ಕೂ ಅನ್ವಯಿಸುವುದಿಲ್ಲ ಮತ್ತು ಉದ್ದೇಶಪೂರ್ವಕವಾಗಿ ಮತ್ತೆ ಮತ್ತೆ ಅದೇ ತಪ್ಪು ಮಾಡುವ ಕಿರಾತಕ ಮನೋಭಾವದವರನ್ನು ಈ ಲೇಖನದಿಂದ ಹೊರಗಿಡಲಾಗಿದೆ‌. ಸಾಮಾನ್ಯರ ಸಹಜ ಪರಿಸ್ಥಿತಿಯಲ್ಲಿ ಮಾತ್ರ ಇದನ್ನು ಪರಿಗಣಿಸಬೇಕು.)

ಅದರೆ ಪ್ರಾಣವನ್ನು ಒಮ್ಮೆ ಕಳೆದುಕೊಂಡರೆ ಮತ್ತೆಂದೂ ಅದನ್ನು ಗಳಿಸಲು ಸಾಧ್ಯವಿಲ್ಲ. ಅದೊಂದು ಅತ್ಯಮೂಲ್ಯ ಮತ್ತು ಪ್ರಕೃತಿಯ ವರ. ಅದನ್ನು ಕಾಪಾಡಿಕೊಳ್ಳುವುದೇ ನಮಗೆ ಬಹುಮುಖ್ಯ ಆದ್ಯತೆಯಾಗಬೇಕು. ಪ್ರಾಣ‌ ಇದ್ದರೆ ಮಾತ್ರ ‌ಉಳಿದದ್ದೆಲ್ಲಾ ಲೆಕ್ಕಕ್ಕೆ ಬರುತ್ತದೆ.

ಆದ್ದರಿಂದ,
ಪ್ರೀತಿಗಾಗಿ – ಕೌಟುಂಬಿಕ ಕಾರಣಗಳಿಗಾಗಿ – ಹಣಕಾಸಿನ ನಷ್ಟದಿಂದಾಗಿ ಅಥವಾ ಮತ್ಯಾವುದೇ ಕಾರಣದಿಂದಾಗಿ ನಿಮಗೆ ಅವಮಾನವಾಗಿ ಸಹಿಸಲಾಸಾಧ್ಯವಾದರೂ ಸಹ ಆತ್ಮಹತ್ಯೆ ಅಥವಾ ಕೊಲೆ ಮಾಡುವಂತ ಯಾವ ಜೀವಹಾನಿಯ ಕ್ರಮಗಳನ್ನೂ ಕೈಗೊಳ್ಳಬೇಡಿ.

” ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ ”
ಜೀವವಿದ್ದರೆ ಎಲ್ಲವನ್ನೂ ಮರಳಿ ಪಡೆಯಬಹುದು.
ಅಂತಿಮವಾಗಿ ನನ್ನ ದೃಷ್ಟಿಯಲ್ಲಿ ಮಾನಕ್ಕಿಂತ ಪ್ರಾಣವೇ ಮುಖ್ಯ.

ಆದರೆ ಇದು ಅಪರಾಧವೆಸಗಲು ಸಿಕ್ಕ ಅನುಮತಿಯೆಂದು ಭಾವಿಸಬಾರದು. ಪರಿಸ್ಥಿತಿಯ ಒತ್ತಡದ ನಾಗರಿಕ ಪ್ರಜ್ಞೆ ಜಾಗೃತರಾಗಿರುವವರಿಗೆ ಮಾತ್ರ ಇದು ಅನ್ವಯ………..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಟ್ರಂಪ್ ಕಾರ್ಡ್…….

ಟ್ರಂಪ್ ಕಾರ್ಡ್....... ವಿಶ್ವದ ಕ್ರೀಡಾ ಸಂಸ್ಕೃತಿಯ ಘನತೆಗೆ ಚ್ಯುತಿ ತಂದ ಡೊನಾಲ್ಡ್ ಟ್ರಂಪ್... ವಿಶ್ವದ ಕ್ರೀಡಾ ಸಂಸ್ಕೃತಿಗೆ ಅವಮಾನ ಮಾಡಿದ,…

3 hours ago

ಚಿಕ್ಕಮಧುರೆ ಶನಿಮಹಾತ್ಮ ದೇವಾಲಯ ಬಳಿ ಕ್ಯಾಂಟರ್ ಪಲ್ಟಿ: ರಸ್ತೆಬದಿಯ ಅಂಗಡಿಗಳು ಜಖಂ

ದೊಡ್ಡಬಳ್ಳಾಪುರ: ತಾಲೂಕಿನ ಚಿಕ್ಕಮಧುರೆ ಗ್ರಾಮದ ಶನಿಮಹಾತ್ಮ ದೇವಾಲಯದ ಬಳಿ ಕಳೆದ ರಾತ್ರಿ ಸಂಭವಿಸಿದ ಕ್ಯಾಂಟರ್ ಅಪಘಾತದಲ್ಲಿ ರಸ್ತೆಬದಿಯ ಮೂರು-ನಾಲ್ಕು ಅಂಗಡಿಗಳು…

4 hours ago

ಹಾಲಿನ ಖರೀದಿ ದರ ಹೆಚ್ಚಳಕ್ಕೆ ರೈತರ ಬೃಹತ್ ಪ್ರತಿಭಟನೆ

ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ ರೂ. 10 ಹೆಚ್ಚಿಸಬೇಕು ಹಾಗೂ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಹೆಚ್ಚಿಸಬೇಕು ಎಂದು…

15 hours ago

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರ ಉನ್ನತೀಕರಣಕ್ಕೆ ಗುದ್ದಲಿ ಪೂಜೆ

ದೊಡ್ಡಬಳ್ಳಾಪುರ: ತಾಲೂಕಿನ ಅನಿಬೆಸೆಂಟ್ ಪಾರ್ಕ್‌ನಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರವನ್ನು ಉನ್ನತೀಕರಿಸುವ ಕಾಮಗಾರಿಗೆ ಶಾಸಕ ಧೀರಜ್ ಮುನಿರಾಜ್…

15 hours ago

ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್ ವಿಲ್ಲಾಸ್‌ನಲ್ಲಿ ಕರಡಿಗಳ ಪ್ರತ್ಯಕ್ಷ: ನಂದಿಬೆಟ್ಟ ಸಮೀಪ ವನ್ಯಜೀವಿಗಳ ಓಡಾಟದಿಂದ ಆತಂಕ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಸಮೀಪದ ಪ್ರಖ್ಯಾತ ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್ ವಿಲ್ಲಾಸ್ ಆವರಣದಲ್ಲಿ…

15 hours ago

ಪೆಟ್ರೋಲ್ ಟ್ಯಾಂಕರ್-ಹಾಲಿನ ಟ್ಯಾಂಕರ್ ನಡುವೆ ಅಪಘಾತ: ಬೆಂಕಿಗಾಹುತಿಯಾದ ಎರಡು ಟ್ಯಾಂಕರ್ ಗಳು

ದೊಡ್ಡಬಳ್ಳಾಪುರ: ತಾಲೂಕಿನ ಮಧುರೆ ಹೋಬಳಿಯ 11ನೇ ಮೈಲಿ (ಮಲ್ಲೋಹಳ್ಳಿ ಸಮೀಪ) ಪೆಟ್ರೋಲ್ ಟ್ಯಾಂಕರ್ ಹಾಗೂ ಹಾಲಿನ ಟ್ಯಾಂಕರ್ ನಡುವೆ ಸಂಭವಿಸಿದ…

24 hours ago