Categories: ಲೇಖನ

ಮಾನ ಮತ್ತು ಪ್ರಾಣ, ಇವೆರಡರಲ್ಲಿ ಯಾವುದು ಮುಖ್ಯ ಮತ್ತು ಅನಿವಾರ್ಯ….

ಮಾನ – ಪ್ರಾಣ………..

ಮಾನ ಮರ್ಯಾದೆ ಉಳಿಸಿಕೊಳ್ಳಲು ‌ಪ್ರಾಣ ಬಿಡಬೇಕೆ ?
ಪ್ರಾಣ ಉಳಿಸಿಕೊಳ್ಳಲು ಮಾನ ಮರ್ಯಾದೆ ಬಿಡಬೇಕೆ‌ ?……

ಮಾನ ಮತ್ತು ಪ್ರಾಣ,
ಇವೆರಡರಲ್ಲಿ ಯಾವುದು ಮುಖ್ಯ ಮತ್ತು ಅನಿವಾರ್ಯವಾದಾಗ ಯಾವುದರ ರಕ್ಷಣೆಗೆ ನಾವು ಮಹತ್ವ ಕೊಡಬೇಕು. ಯಾವುದಕ್ಕಾಗಿ ನಾವು ಹೋರಾಡಬೇಕು………………..

ಎಲ್ಲರಿಗೂ ತಿಳಿದಿರುವಂತೆ ಹಿಂದಿನ ಕಾಲದಲ್ಲಿ ಮತ್ತು ಇಂದಿಗೂ ಜನಮಾನಸದಲ್ಲಿ ಮಾನಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಪ್ರಾಣ ಹೋದರೂ ಮಾನ ಕಾಪಾಡಿಕೊಳ್ಳಬೇಕು ಎಂಬ ಬಲವಾದ ನಂಬಿಕೆ ಇದೆ.
ಇದು ನಿಜವೇ ? ಸರಿಯೇ ? ಇಂದಿನ ಆಧುನಿಕ ಸಂಕೀರ್ಣ ಬದುಕಿನಲ್ಲೂ ಇದು ಪ್ರಸ್ತುತವೇ ?
ಒಮ್ಮೆ ಅವಲೋಕನ ಮಾಡಿಕೊಳ್ಳೋಣ……….

ಮಾನ ಎಂಬುದು ಭಾವ – ಭ್ರಮೆ – ನಂಬಿಕೆ – ಮಾನಸಿಕ ಸ್ಥಿತಿ.‌‌ ಪ್ರಾಣ ಎಂಬುದು ವಾಸ್ತವ ಮತ್ತು ದೈಹಿಕ ಸ್ಥಿತಿ.

ಇಂದಿನ‌ ಆಧುನಿಕ – ಸ್ಪರ್ಧಾತ್ಮಕ ಭಾರತೀಯ ಸಮಾಜ ಮತ್ತು ಮನಸ್ಥಿತಿಯಲ್ಲಿ ಮಾನ ಎಂಬುದು ತನ್ನ ನೈಜ ಅರ್ಥ ಮತ್ತು ಗುಣವನ್ನು ಕಳೆದುಕೊಂಡಿದೆ ಎನ್ನಬಹುದು. ಮಾನ ಒಂದು ವ್ಯಕ್ತಿತ್ವವನ್ನು ನಿರ್ಧರಿಸುವ ಮಾನದಂಡವಾಗಿ ಉಳಿದಿಲ್ಲ. ಅದನ್ನು ಕಳೆದುಕೊಳ್ಳಬಹುದು ಮತ್ತು ಗಳಿಸಿಕೊಳ್ಳಬಹುದು.

ಒಂದು ವೇಳೆ ಯಾವುದೋ ಕಾರಣದಿಂದ ನಿಮ್ಮ ಮಾನಹಾನಿಯಾಗಿದ್ದರೆ ಮುಂದೆ ಪ್ರತಿಭೆ, ಸಾಮರ್ಥ್ಯ, ದಿಟ್ಟತನ, ಆತ್ಮ ವಿಮರ್ಶೆ‌, ಸಾಧನೆ ‌ಅಥವಾ ಹಣ, ಅಧಿಕಾರ, ಭಂಡತನ, ನಿರ್ಲಜ್ಜೆ, ವಿತಂಡ ಸಮರ್ಥನೆ, ಜನರನ್ನು ಮರುಳು ಮಾಡುವಿಕೆ ಮುಂತಾದ ಕ್ರಮಗಳ ಮುಖಾಂತರ ಅದನ್ನು ಮೇಲ್ನೋಟಕ್ಕಾದರೂ ಮರಳಿ ಪಡೆಯಬಹುದು. ಕೊಲೆ, ಅತ್ಯಾಚಾರ, ಭ್ರಷ್ಟಾಚಾರ ಮುಂತಾದ ಗಂಭೀರ ಪ್ರಕರಣಗಳಲ್ಲಿ ನೇರ ಸಿಕ್ಕಿ ಹಾಕಿಕೊಂಡು ಜೈಲುವಾಸ ಅನುಭವಿಸಿ ಬಂದ ನಂತರವೂ ಹಣಬಲ, ಜಾತಿಬಲ, ಅಧಿಕಾರಬಲ ಇರುವವನು ಮಾನ ಮರ್ಯಾದೆಯೂ ಸೇರಿದಂತೆ ಎಲ್ಲವನ್ನೂ ಮರಳಿ ಗಳಿಸಬಹುದು ಮತ್ತು ಗಳಿಸುತ್ತಿದ್ದಾರೆ. ಅದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.

ಅಷ್ಟೇ ಏಕೆ ಸಾಮಾನ್ಯರು ಕೂಡ ಆಕಸ್ಮಿಕವಾಗಿ – ಅನಿವಾರ್ಯವಾಗಿ – ಪರಿಸ್ಥಿತಿಯ ಒತ್ತಡದಿಂದ ಒಂದು ವೇಳೆ ತಪ್ಪುಮಾಡಿ ಅವಮಾನಕ್ಕೆ ಗುರಿಯಾದರೂ ಮುಂದೊಂದು ದಿನ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡು ಮಾನವೀಯ ಅಂತಃಕರಣದಿಂದ ಸಮಾಜಮುಖಿ ಕೆಲಸಗಳನ್ನು ಮಾಡಿದರೆ ಹೋದ ಮಾನವನ್ನು ಸ್ವಲ್ಪಮಟ್ಟಿಗೆ ಮರಳಿ ಪಡೆಯಬಹುದು. ( ಅತ್ಯಂತ ಹುಟ್ಟಾ ಕ್ರಿಮಿನಲ್ ಗಳಿಗೆ ಇದು ಯಾವ ಕಾರಣಕ್ಕೂ ಅನ್ವಯಿಸುವುದಿಲ್ಲ ಮತ್ತು ಉದ್ದೇಶಪೂರ್ವಕವಾಗಿ ಮತ್ತೆ ಮತ್ತೆ ಅದೇ ತಪ್ಪು ಮಾಡುವ ಕಿರಾತಕ ಮನೋಭಾವದವರನ್ನು ಈ ಲೇಖನದಿಂದ ಹೊರಗಿಡಲಾಗಿದೆ‌. ಸಾಮಾನ್ಯರ ಸಹಜ ಪರಿಸ್ಥಿತಿಯಲ್ಲಿ ಮಾತ್ರ ಇದನ್ನು ಪರಿಗಣಿಸಬೇಕು.)

ಅದರೆ ಪ್ರಾಣವನ್ನು ಒಮ್ಮೆ ಕಳೆದುಕೊಂಡರೆ ಮತ್ತೆಂದೂ ಅದನ್ನು ಗಳಿಸಲು ಸಾಧ್ಯವಿಲ್ಲ. ಅದೊಂದು ಅತ್ಯಮೂಲ್ಯ ಮತ್ತು ಪ್ರಕೃತಿಯ ವರ. ಅದನ್ನು ಕಾಪಾಡಿಕೊಳ್ಳುವುದೇ ನಮಗೆ ಬಹುಮುಖ್ಯ ಆದ್ಯತೆಯಾಗಬೇಕು. ಪ್ರಾಣ‌ ಇದ್ದರೆ ಮಾತ್ರ ‌ಉಳಿದದ್ದೆಲ್ಲಾ ಲೆಕ್ಕಕ್ಕೆ ಬರುತ್ತದೆ.

ಆದ್ದರಿಂದ,
ಪ್ರೀತಿಗಾಗಿ – ಕೌಟುಂಬಿಕ ಕಾರಣಗಳಿಗಾಗಿ – ಹಣಕಾಸಿನ ನಷ್ಟದಿಂದಾಗಿ ಅಥವಾ ಮತ್ಯಾವುದೇ ಕಾರಣದಿಂದಾಗಿ ನಿಮಗೆ ಅವಮಾನವಾಗಿ ಸಹಿಸಲಾಸಾಧ್ಯವಾದರೂ ಸಹ ಆತ್ಮಹತ್ಯೆ ಅಥವಾ ಕೊಲೆ ಮಾಡುವಂತ ಯಾವ ಜೀವಹಾನಿಯ ಕ್ರಮಗಳನ್ನೂ ಕೈಗೊಳ್ಳಬೇಡಿ.

” ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ ”
ಜೀವವಿದ್ದರೆ ಎಲ್ಲವನ್ನೂ ಮರಳಿ ಪಡೆಯಬಹುದು.
ಅಂತಿಮವಾಗಿ ನನ್ನ ದೃಷ್ಟಿಯಲ್ಲಿ ಮಾನಕ್ಕಿಂತ ಪ್ರಾಣವೇ ಮುಖ್ಯ.

ಆದರೆ ಇದು ಅಪರಾಧವೆಸಗಲು ಸಿಕ್ಕ ಅನುಮತಿಯೆಂದು ಭಾವಿಸಬಾರದು. ಪರಿಸ್ಥಿತಿಯ ಒತ್ತಡದ ನಾಗರಿಕ ಪ್ರಜ್ಞೆ ಜಾಗೃತರಾಗಿರುವವರಿಗೆ ಮಾತ್ರ ಇದು ಅನ್ವಯ………..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಬಾಶೆಟ್ಟಿಹಳ್ಳಿ ಕೋಟ್ಯಂತರ ಹಗರಣ ಆರೋಪ: ಶಾಸಕರು ಮೌನ ಏಕೆ ಎಂದು ಸ್ಥಳೀಯರ ಪ್ರಶ್ನೆ

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ವಿವಿಧ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅಕ್ರಮಗಳ ಕುರಿತು ಲೋಕಾಯುಕ್ತ ಪೊಲೀಸರು ಕಳೆದ…

8 hours ago

ಅಗಸ್ಟ್ 2ರ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆ: ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ, ಎಸ್ಪಿ

ಆಗಸ್ಟ್ 2ರಂದು ನಡೆಯಲಿರುವ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ…

9 hours ago

ದೊಡ್ಡಬಳ್ಳಾಪುರದಲ್ಲಿ ನೈತಿಕ ಪೊಲೀಸ್‌ಗಿರಿ ಆರೋಪ: ಯುವಕನ ಮೇಲೆ ಹಲ್ಲೆ, 6 ಜನರ ವಿರುದ್ಧ ಪ್ರಕರಣ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾರಿನಲ್ಲಿ ಮಾತನಾಡುತ್ತಿದ್ದ ಸ್ನೇಹಿತರ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿ…

1 day ago

ಮಳೆಗಾಗಿ ಆಚರಣೆಗಳ ಮೊರೆ: ಬರದ ನಡುವೆ ಭರವಸೆಯ ಸಂಪ್ರದಾಯಗಳು

ಮಳೆ ಎನ್ನುವುದು ರೈತನ ಬದುಕಿನ ಜೀವನಾಡಿ. ಮುಂಗಾರು ವಿಳಂಬವಾದಾಗ ಅಥವಾ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ರೈತರು ಮಾತ್ರವಲ್ಲ, ಗ್ರಾಮೀಣ ಜೀವನವೇ…

3 days ago

ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಾರು–ಅಶೋಕ್ ಲೇಲ್ಯಾಂಡ್ ನಡುವೆ ಅಪಘಾತ

ದೊಡ್ಡಬಳ್ಳಾಪುರ–ನೆಲಮಂಗಲ ಮುಖ್ಯ ರಸ್ತೆಯ ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಳೆದರಾತ್ರಿ ಕಾರು ಹಾಗೂ ಅಶೋಕ್ ಲೇಲ್ಯಾಂಡ್ ಸರಕು ವಾಹನದ ನಡುವೆ…

4 days ago

ರಾಷ್ಟ್ರೀಯ ಸಾಹಿತ್ಯ ಸೌರಭದಲ್ಲಿ ಕವಿ ರವಿಕುಮಾರ್ ಅವರ ‘ಅಂಚಿನ ತೊರೆ’ ಕವನ ಸಂಕಲನ ಲೋಕಾರ್ಪಣೆ

ಉಡುಪಿ: ಉಡುಪಿ ಜಿಲ್ಲೆಯ ಕೋಟದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಜ್ಞಾನಗಂಗಾ ಸಾಹಿತ್ಯ…

5 days ago