Categories: ಲೇಖನ

ಮಾನ ಮತ್ತು ಪ್ರಾಣ, ಇವೆರಡರಲ್ಲಿ ಯಾವುದು ಮುಖ್ಯ ಮತ್ತು ಅನಿವಾರ್ಯ….

ಮಾನ – ಪ್ರಾಣ………..

ಮಾನ ಮರ್ಯಾದೆ ಉಳಿಸಿಕೊಳ್ಳಲು ‌ಪ್ರಾಣ ಬಿಡಬೇಕೆ ?
ಪ್ರಾಣ ಉಳಿಸಿಕೊಳ್ಳಲು ಮಾನ ಮರ್ಯಾದೆ ಬಿಡಬೇಕೆ‌ ?……

ಮಾನ ಮತ್ತು ಪ್ರಾಣ,
ಇವೆರಡರಲ್ಲಿ ಯಾವುದು ಮುಖ್ಯ ಮತ್ತು ಅನಿವಾರ್ಯವಾದಾಗ ಯಾವುದರ ರಕ್ಷಣೆಗೆ ನಾವು ಮಹತ್ವ ಕೊಡಬೇಕು. ಯಾವುದಕ್ಕಾಗಿ ನಾವು ಹೋರಾಡಬೇಕು………………..

ಎಲ್ಲರಿಗೂ ತಿಳಿದಿರುವಂತೆ ಹಿಂದಿನ ಕಾಲದಲ್ಲಿ ಮತ್ತು ಇಂದಿಗೂ ಜನಮಾನಸದಲ್ಲಿ ಮಾನಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಪ್ರಾಣ ಹೋದರೂ ಮಾನ ಕಾಪಾಡಿಕೊಳ್ಳಬೇಕು ಎಂಬ ಬಲವಾದ ನಂಬಿಕೆ ಇದೆ.
ಇದು ನಿಜವೇ ? ಸರಿಯೇ ? ಇಂದಿನ ಆಧುನಿಕ ಸಂಕೀರ್ಣ ಬದುಕಿನಲ್ಲೂ ಇದು ಪ್ರಸ್ತುತವೇ ?
ಒಮ್ಮೆ ಅವಲೋಕನ ಮಾಡಿಕೊಳ್ಳೋಣ……….

ಮಾನ ಎಂಬುದು ಭಾವ – ಭ್ರಮೆ – ನಂಬಿಕೆ – ಮಾನಸಿಕ ಸ್ಥಿತಿ.‌‌ ಪ್ರಾಣ ಎಂಬುದು ವಾಸ್ತವ ಮತ್ತು ದೈಹಿಕ ಸ್ಥಿತಿ.

ಇಂದಿನ‌ ಆಧುನಿಕ – ಸ್ಪರ್ಧಾತ್ಮಕ ಭಾರತೀಯ ಸಮಾಜ ಮತ್ತು ಮನಸ್ಥಿತಿಯಲ್ಲಿ ಮಾನ ಎಂಬುದು ತನ್ನ ನೈಜ ಅರ್ಥ ಮತ್ತು ಗುಣವನ್ನು ಕಳೆದುಕೊಂಡಿದೆ ಎನ್ನಬಹುದು. ಮಾನ ಒಂದು ವ್ಯಕ್ತಿತ್ವವನ್ನು ನಿರ್ಧರಿಸುವ ಮಾನದಂಡವಾಗಿ ಉಳಿದಿಲ್ಲ. ಅದನ್ನು ಕಳೆದುಕೊಳ್ಳಬಹುದು ಮತ್ತು ಗಳಿಸಿಕೊಳ್ಳಬಹುದು.

ಒಂದು ವೇಳೆ ಯಾವುದೋ ಕಾರಣದಿಂದ ನಿಮ್ಮ ಮಾನಹಾನಿಯಾಗಿದ್ದರೆ ಮುಂದೆ ಪ್ರತಿಭೆ, ಸಾಮರ್ಥ್ಯ, ದಿಟ್ಟತನ, ಆತ್ಮ ವಿಮರ್ಶೆ‌, ಸಾಧನೆ ‌ಅಥವಾ ಹಣ, ಅಧಿಕಾರ, ಭಂಡತನ, ನಿರ್ಲಜ್ಜೆ, ವಿತಂಡ ಸಮರ್ಥನೆ, ಜನರನ್ನು ಮರುಳು ಮಾಡುವಿಕೆ ಮುಂತಾದ ಕ್ರಮಗಳ ಮುಖಾಂತರ ಅದನ್ನು ಮೇಲ್ನೋಟಕ್ಕಾದರೂ ಮರಳಿ ಪಡೆಯಬಹುದು. ಕೊಲೆ, ಅತ್ಯಾಚಾರ, ಭ್ರಷ್ಟಾಚಾರ ಮುಂತಾದ ಗಂಭೀರ ಪ್ರಕರಣಗಳಲ್ಲಿ ನೇರ ಸಿಕ್ಕಿ ಹಾಕಿಕೊಂಡು ಜೈಲುವಾಸ ಅನುಭವಿಸಿ ಬಂದ ನಂತರವೂ ಹಣಬಲ, ಜಾತಿಬಲ, ಅಧಿಕಾರಬಲ ಇರುವವನು ಮಾನ ಮರ್ಯಾದೆಯೂ ಸೇರಿದಂತೆ ಎಲ್ಲವನ್ನೂ ಮರಳಿ ಗಳಿಸಬಹುದು ಮತ್ತು ಗಳಿಸುತ್ತಿದ್ದಾರೆ. ಅದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.

ಅಷ್ಟೇ ಏಕೆ ಸಾಮಾನ್ಯರು ಕೂಡ ಆಕಸ್ಮಿಕವಾಗಿ – ಅನಿವಾರ್ಯವಾಗಿ – ಪರಿಸ್ಥಿತಿಯ ಒತ್ತಡದಿಂದ ಒಂದು ವೇಳೆ ತಪ್ಪುಮಾಡಿ ಅವಮಾನಕ್ಕೆ ಗುರಿಯಾದರೂ ಮುಂದೊಂದು ದಿನ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡು ಮಾನವೀಯ ಅಂತಃಕರಣದಿಂದ ಸಮಾಜಮುಖಿ ಕೆಲಸಗಳನ್ನು ಮಾಡಿದರೆ ಹೋದ ಮಾನವನ್ನು ಸ್ವಲ್ಪಮಟ್ಟಿಗೆ ಮರಳಿ ಪಡೆಯಬಹುದು. ( ಅತ್ಯಂತ ಹುಟ್ಟಾ ಕ್ರಿಮಿನಲ್ ಗಳಿಗೆ ಇದು ಯಾವ ಕಾರಣಕ್ಕೂ ಅನ್ವಯಿಸುವುದಿಲ್ಲ ಮತ್ತು ಉದ್ದೇಶಪೂರ್ವಕವಾಗಿ ಮತ್ತೆ ಮತ್ತೆ ಅದೇ ತಪ್ಪು ಮಾಡುವ ಕಿರಾತಕ ಮನೋಭಾವದವರನ್ನು ಈ ಲೇಖನದಿಂದ ಹೊರಗಿಡಲಾಗಿದೆ‌. ಸಾಮಾನ್ಯರ ಸಹಜ ಪರಿಸ್ಥಿತಿಯಲ್ಲಿ ಮಾತ್ರ ಇದನ್ನು ಪರಿಗಣಿಸಬೇಕು.)

ಅದರೆ ಪ್ರಾಣವನ್ನು ಒಮ್ಮೆ ಕಳೆದುಕೊಂಡರೆ ಮತ್ತೆಂದೂ ಅದನ್ನು ಗಳಿಸಲು ಸಾಧ್ಯವಿಲ್ಲ. ಅದೊಂದು ಅತ್ಯಮೂಲ್ಯ ಮತ್ತು ಪ್ರಕೃತಿಯ ವರ. ಅದನ್ನು ಕಾಪಾಡಿಕೊಳ್ಳುವುದೇ ನಮಗೆ ಬಹುಮುಖ್ಯ ಆದ್ಯತೆಯಾಗಬೇಕು. ಪ್ರಾಣ‌ ಇದ್ದರೆ ಮಾತ್ರ ‌ಉಳಿದದ್ದೆಲ್ಲಾ ಲೆಕ್ಕಕ್ಕೆ ಬರುತ್ತದೆ.

ಆದ್ದರಿಂದ,
ಪ್ರೀತಿಗಾಗಿ – ಕೌಟುಂಬಿಕ ಕಾರಣಗಳಿಗಾಗಿ – ಹಣಕಾಸಿನ ನಷ್ಟದಿಂದಾಗಿ ಅಥವಾ ಮತ್ಯಾವುದೇ ಕಾರಣದಿಂದಾಗಿ ನಿಮಗೆ ಅವಮಾನವಾಗಿ ಸಹಿಸಲಾಸಾಧ್ಯವಾದರೂ ಸಹ ಆತ್ಮಹತ್ಯೆ ಅಥವಾ ಕೊಲೆ ಮಾಡುವಂತ ಯಾವ ಜೀವಹಾನಿಯ ಕ್ರಮಗಳನ್ನೂ ಕೈಗೊಳ್ಳಬೇಡಿ.

” ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ ”
ಜೀವವಿದ್ದರೆ ಎಲ್ಲವನ್ನೂ ಮರಳಿ ಪಡೆಯಬಹುದು.
ಅಂತಿಮವಾಗಿ ನನ್ನ ದೃಷ್ಟಿಯಲ್ಲಿ ಮಾನಕ್ಕಿಂತ ಪ್ರಾಣವೇ ಮುಖ್ಯ.

ಆದರೆ ಇದು ಅಪರಾಧವೆಸಗಲು ಸಿಕ್ಕ ಅನುಮತಿಯೆಂದು ಭಾವಿಸಬಾರದು. ಪರಿಸ್ಥಿತಿಯ ಒತ್ತಡದ ನಾಗರಿಕ ಪ್ರಜ್ಞೆ ಜಾಗೃತರಾಗಿರುವವರಿಗೆ ಮಾತ್ರ ಇದು ಅನ್ವಯ………..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

7 hours ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

8 hours ago

ಮನೆ ಮಾಲೀಕರ ಮುಂದೆಯೇ ಮನೆ ದೋಚಿ ಪರಾರಿಯಾಗಿದ್ದ ಕಳ್ಳ ಲಾಕ್‌!

ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…

9 hours ago

ಕೋಳಿಫಾರ್ಮ್‌ಗೆ ಚಿರತೆ ದಾಳಿ ಶಂಕೆ: 950ಕ್ಕೂ ಅಧಿಕ ಕೋಳಿಮರಿಗಳು ಬಲಿ!

  ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…

9 hours ago

ಯೋಜನಾ ಪ್ರಾಧಿಕಾರಕ್ಕೆ ಮುನಿರಾಜು ಆಯ್ಕೆ: ಯುವ ಕಾಂಗ್ರೆಸ್‌ನಿಂದ ಆತ್ಮೀಯ ಅಭಿನಂದನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…

13 hours ago

ವಿಯೆಟ್ನಾಂನಿಂದ 1.38 ಕೋಟಿ ಮೌಲ್ಯದ ಹೈಡ್ರೋಫೋನಿಕ್ ಗಾಂಜಾ ಸಾಗಾಟ: ಆರೋಪಿ ಬಂಧನ

ದೇವನಹಳ್ಳಿ: ವಿಯೆಟ್ನಾಂನ ಹಾನೊಯ್ ನಗರದಿಂದ ಬೆಂಗಳೂರಿಗೆ ವಿಮಾನದ ಮೂಲಕ ಹೈಡ್ರೋಫೋನಿಕ್ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಯನ್ನು ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ…

15 hours ago