Categories: ಲೇಖನ

ಮಾನ ಮತ್ತು ಪ್ರಾಣ, ಇವೆರಡರಲ್ಲಿ ಯಾವುದು ಮುಖ್ಯ ಮತ್ತು ಅನಿವಾರ್ಯ….

ಮಾನ – ಪ್ರಾಣ………..

ಮಾನ ಮರ್ಯಾದೆ ಉಳಿಸಿಕೊಳ್ಳಲು ‌ಪ್ರಾಣ ಬಿಡಬೇಕೆ ?
ಪ್ರಾಣ ಉಳಿಸಿಕೊಳ್ಳಲು ಮಾನ ಮರ್ಯಾದೆ ಬಿಡಬೇಕೆ‌ ?……

ಮಾನ ಮತ್ತು ಪ್ರಾಣ,
ಇವೆರಡರಲ್ಲಿ ಯಾವುದು ಮುಖ್ಯ ಮತ್ತು ಅನಿವಾರ್ಯವಾದಾಗ ಯಾವುದರ ರಕ್ಷಣೆಗೆ ನಾವು ಮಹತ್ವ ಕೊಡಬೇಕು. ಯಾವುದಕ್ಕಾಗಿ ನಾವು ಹೋರಾಡಬೇಕು………………..

ಎಲ್ಲರಿಗೂ ತಿಳಿದಿರುವಂತೆ ಹಿಂದಿನ ಕಾಲದಲ್ಲಿ ಮತ್ತು ಇಂದಿಗೂ ಜನಮಾನಸದಲ್ಲಿ ಮಾನಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಪ್ರಾಣ ಹೋದರೂ ಮಾನ ಕಾಪಾಡಿಕೊಳ್ಳಬೇಕು ಎಂಬ ಬಲವಾದ ನಂಬಿಕೆ ಇದೆ.
ಇದು ನಿಜವೇ ? ಸರಿಯೇ ? ಇಂದಿನ ಆಧುನಿಕ ಸಂಕೀರ್ಣ ಬದುಕಿನಲ್ಲೂ ಇದು ಪ್ರಸ್ತುತವೇ ?
ಒಮ್ಮೆ ಅವಲೋಕನ ಮಾಡಿಕೊಳ್ಳೋಣ……….

ಮಾನ ಎಂಬುದು ಭಾವ – ಭ್ರಮೆ – ನಂಬಿಕೆ – ಮಾನಸಿಕ ಸ್ಥಿತಿ.‌‌ ಪ್ರಾಣ ಎಂಬುದು ವಾಸ್ತವ ಮತ್ತು ದೈಹಿಕ ಸ್ಥಿತಿ.

ಇಂದಿನ‌ ಆಧುನಿಕ – ಸ್ಪರ್ಧಾತ್ಮಕ ಭಾರತೀಯ ಸಮಾಜ ಮತ್ತು ಮನಸ್ಥಿತಿಯಲ್ಲಿ ಮಾನ ಎಂಬುದು ತನ್ನ ನೈಜ ಅರ್ಥ ಮತ್ತು ಗುಣವನ್ನು ಕಳೆದುಕೊಂಡಿದೆ ಎನ್ನಬಹುದು. ಮಾನ ಒಂದು ವ್ಯಕ್ತಿತ್ವವನ್ನು ನಿರ್ಧರಿಸುವ ಮಾನದಂಡವಾಗಿ ಉಳಿದಿಲ್ಲ. ಅದನ್ನು ಕಳೆದುಕೊಳ್ಳಬಹುದು ಮತ್ತು ಗಳಿಸಿಕೊಳ್ಳಬಹುದು.

ಒಂದು ವೇಳೆ ಯಾವುದೋ ಕಾರಣದಿಂದ ನಿಮ್ಮ ಮಾನಹಾನಿಯಾಗಿದ್ದರೆ ಮುಂದೆ ಪ್ರತಿಭೆ, ಸಾಮರ್ಥ್ಯ, ದಿಟ್ಟತನ, ಆತ್ಮ ವಿಮರ್ಶೆ‌, ಸಾಧನೆ ‌ಅಥವಾ ಹಣ, ಅಧಿಕಾರ, ಭಂಡತನ, ನಿರ್ಲಜ್ಜೆ, ವಿತಂಡ ಸಮರ್ಥನೆ, ಜನರನ್ನು ಮರುಳು ಮಾಡುವಿಕೆ ಮುಂತಾದ ಕ್ರಮಗಳ ಮುಖಾಂತರ ಅದನ್ನು ಮೇಲ್ನೋಟಕ್ಕಾದರೂ ಮರಳಿ ಪಡೆಯಬಹುದು. ಕೊಲೆ, ಅತ್ಯಾಚಾರ, ಭ್ರಷ್ಟಾಚಾರ ಮುಂತಾದ ಗಂಭೀರ ಪ್ರಕರಣಗಳಲ್ಲಿ ನೇರ ಸಿಕ್ಕಿ ಹಾಕಿಕೊಂಡು ಜೈಲುವಾಸ ಅನುಭವಿಸಿ ಬಂದ ನಂತರವೂ ಹಣಬಲ, ಜಾತಿಬಲ, ಅಧಿಕಾರಬಲ ಇರುವವನು ಮಾನ ಮರ್ಯಾದೆಯೂ ಸೇರಿದಂತೆ ಎಲ್ಲವನ್ನೂ ಮರಳಿ ಗಳಿಸಬಹುದು ಮತ್ತು ಗಳಿಸುತ್ತಿದ್ದಾರೆ. ಅದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.

ಅಷ್ಟೇ ಏಕೆ ಸಾಮಾನ್ಯರು ಕೂಡ ಆಕಸ್ಮಿಕವಾಗಿ – ಅನಿವಾರ್ಯವಾಗಿ – ಪರಿಸ್ಥಿತಿಯ ಒತ್ತಡದಿಂದ ಒಂದು ವೇಳೆ ತಪ್ಪುಮಾಡಿ ಅವಮಾನಕ್ಕೆ ಗುರಿಯಾದರೂ ಮುಂದೊಂದು ದಿನ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡು ಮಾನವೀಯ ಅಂತಃಕರಣದಿಂದ ಸಮಾಜಮುಖಿ ಕೆಲಸಗಳನ್ನು ಮಾಡಿದರೆ ಹೋದ ಮಾನವನ್ನು ಸ್ವಲ್ಪಮಟ್ಟಿಗೆ ಮರಳಿ ಪಡೆಯಬಹುದು. ( ಅತ್ಯಂತ ಹುಟ್ಟಾ ಕ್ರಿಮಿನಲ್ ಗಳಿಗೆ ಇದು ಯಾವ ಕಾರಣಕ್ಕೂ ಅನ್ವಯಿಸುವುದಿಲ್ಲ ಮತ್ತು ಉದ್ದೇಶಪೂರ್ವಕವಾಗಿ ಮತ್ತೆ ಮತ್ತೆ ಅದೇ ತಪ್ಪು ಮಾಡುವ ಕಿರಾತಕ ಮನೋಭಾವದವರನ್ನು ಈ ಲೇಖನದಿಂದ ಹೊರಗಿಡಲಾಗಿದೆ‌. ಸಾಮಾನ್ಯರ ಸಹಜ ಪರಿಸ್ಥಿತಿಯಲ್ಲಿ ಮಾತ್ರ ಇದನ್ನು ಪರಿಗಣಿಸಬೇಕು.)

ಅದರೆ ಪ್ರಾಣವನ್ನು ಒಮ್ಮೆ ಕಳೆದುಕೊಂಡರೆ ಮತ್ತೆಂದೂ ಅದನ್ನು ಗಳಿಸಲು ಸಾಧ್ಯವಿಲ್ಲ. ಅದೊಂದು ಅತ್ಯಮೂಲ್ಯ ಮತ್ತು ಪ್ರಕೃತಿಯ ವರ. ಅದನ್ನು ಕಾಪಾಡಿಕೊಳ್ಳುವುದೇ ನಮಗೆ ಬಹುಮುಖ್ಯ ಆದ್ಯತೆಯಾಗಬೇಕು. ಪ್ರಾಣ‌ ಇದ್ದರೆ ಮಾತ್ರ ‌ಉಳಿದದ್ದೆಲ್ಲಾ ಲೆಕ್ಕಕ್ಕೆ ಬರುತ್ತದೆ.

ಆದ್ದರಿಂದ,
ಪ್ರೀತಿಗಾಗಿ – ಕೌಟುಂಬಿಕ ಕಾರಣಗಳಿಗಾಗಿ – ಹಣಕಾಸಿನ ನಷ್ಟದಿಂದಾಗಿ ಅಥವಾ ಮತ್ಯಾವುದೇ ಕಾರಣದಿಂದಾಗಿ ನಿಮಗೆ ಅವಮಾನವಾಗಿ ಸಹಿಸಲಾಸಾಧ್ಯವಾದರೂ ಸಹ ಆತ್ಮಹತ್ಯೆ ಅಥವಾ ಕೊಲೆ ಮಾಡುವಂತ ಯಾವ ಜೀವಹಾನಿಯ ಕ್ರಮಗಳನ್ನೂ ಕೈಗೊಳ್ಳಬೇಡಿ.

” ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ ”
ಜೀವವಿದ್ದರೆ ಎಲ್ಲವನ್ನೂ ಮರಳಿ ಪಡೆಯಬಹುದು.
ಅಂತಿಮವಾಗಿ ನನ್ನ ದೃಷ್ಟಿಯಲ್ಲಿ ಮಾನಕ್ಕಿಂತ ಪ್ರಾಣವೇ ಮುಖ್ಯ.

ಆದರೆ ಇದು ಅಪರಾಧವೆಸಗಲು ಸಿಕ್ಕ ಅನುಮತಿಯೆಂದು ಭಾವಿಸಬಾರದು. ಪರಿಸ್ಥಿತಿಯ ಒತ್ತಡದ ನಾಗರಿಕ ಪ್ರಜ್ಞೆ ಜಾಗೃತರಾಗಿರುವವರಿಗೆ ಮಾತ್ರ ಇದು ಅನ್ವಯ………..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಮೀಸಲಾತಿ ಘೋಷಣೆ ಬೆನ್ನಲ್ಲೇ ಗ್ರಾಮಾಂತರದಲ್ಲಿ ಚುನಾವಣಾ ಕಾವು: ಹಳ್ಳಿಗಳಲ್ಲಿ ಚುರುಕಾದ ರಾಜಕೀಯ ಚಟುವಟಿಕೆ: ಆಕಾಂಕ್ಷಿಗಳಿಂದ ಲೆಕ್ಕಾಚಾರ ಆರಂಭ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…

48 minutes ago

ಹೆದ್ದಾರಿ ಸರ್ವೀಸ್ ರಸ್ತೆಗಳಲ್ಲಿ ಭಾರೀ ವಾಹನಗಳ ಅನಧಿಕೃತ ನಿಲುಗಡೆ: ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಸರ್ವೀಸ್ ರಸ್ತೆಗಳು ದಿನದಿಂದ ದಿನಕ್ಕೆ ಭಾರಿ…

1 day ago

ಬೆಂಗಳೂರು ಗ್ರಾಮಾಂತರದಲ್ಲಿ ಕ್ಷಯರೋಗದ ಆತಂಕ: ಏಳು ತಿಂಗಳಲ್ಲಿ 26,531 ಮಂದಿಗೆ ಕಫ ಪರೀಕ್ಷೆ; 434 ಪ್ರಕರಣಗಳು ಪತ್ತೆ, 530 ಸಕ್ರಿಯ ರೋಗಿಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷಯರೋಗ (ಟಿಬಿ) ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವು ಹಂತಗಳಲ್ಲಿ ತಪಾಸಣೆ ಹಾಗೂ ಚಿಕಿತ್ಸಾ ಕ್ರಮಗಳನ್ನು ಕೈಗೊಂಡಿದ್ದರೂ,…

2 days ago

ಘಾಟಿ ಕ್ಷೇತ್ರದಲ್ಲಿ ನಾಗರ ಪಂಚಮಿ ಸಂಭ್ರಮ

ದೊಡ್ಡಬಳ್ಳಾಪುರ: ನಾಗರಾಧನೆಗೆ ಪ್ರಸಿದ್ಧವಾಗಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ನಾಗರ ಪಂಚಮಿ…

3 days ago

ದೊಡ್ಡಬಳ್ಳಾಪುರದಲ್ಲಿ ಆ.18ರಂದು ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ…

4 days ago

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ, ಸದಸ್ಯರ ನೇಮಕ: ಯೋಜಿತ ನಗರಾಭಿವೃದ್ಧಿಗೆ ಆದ್ಯತೆ- ಸದಸ್ಯ ಎಸ್.ಡಿ. ಮುನಿರಾಜು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…

4 days ago