Categories: ರಾಜ್ಯ

ಮಳೆ ಎಫೆಕ್ಟ್: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಏರಿಕೆ: ಯಾವ್ಯಾವ ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟೇಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ

ರಾಜ್ಯದ ಹಲವು ಭಾಗಗಳಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆ ರಾಜ್ಯದ ಹಲವು ಪ್ರಮುಖ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇದರಿಂದ ರೈತರ ಮುಖದಲ್ಲೂ ಕಳೆ ಬಂದಂತಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಅನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ.

ಜೋರು ಮಳೆಗೆ ಚಿಕ್ಕಮಗಳೂರು, ಕಾರವಾರ, ಉತ್ತರ ಕರ್ನಾಟಕ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಳ್ಳ, ನದಿಗಳು ಉಕ್ಕಿ ಹರಿಯುತ್ತಿವೆ.

ಮತ್ತೊಂದೆಡೆ ಮೈಸೂರು, ಮಂಡ್ಯ, ಬೆಂಗಳೂರಿನ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈಗಾಗಲೇ ಈ ಜಲಾಶಯದ ನೀರನ್ನು ಕ್ರಸ್ಟ್‌ ಗೇಟ್‌ಗಳ ಮೂಲಕ ನಾಲೆ, ನದಿಗಳಿಗೆ ಹರಿಸಲಾಗಿದೆ.

ಅಲ್ಲದೆ ಇದೀಗ ಈ ಜಲಾಶಯರ ಜಲಾಶಯ ಮಟ್ಟ ಇದೀಗ 100 ಅಡಿಯತ್ತ ಸಮೀಪಿಸುತ್ತಿದೆ. ಹಾಗಾದರೆ ಕೆಆರ್‌ಎಸ್‌ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಮಾಹಿತಿ ಇಲ್ಲಿದೆ….

ಲಿಂಗನಮಕ್ಕಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 554.44

* ಒಟ್ಟು ಸಾಮರ್ಥ್ಯ – 151.75

* ಇಂದಿನ ನೀರಿನ ಮಟ್ಟ – 46.89

* ಕಳೆದ ವರ್ಷದ ನೀರಿನ ಮಟ್ಟ – 91.02

* ಒಳಹರಿವು – 73,505 ಕ್ಯೂಸೆಕ್‌

* ಹೊರಹರಿವು – 94 ಕ್ಯೂಸೆಕ್‌

ಆಲಮಟ್ಟಿ ಜಲಾಶಯ

* ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

* ಒಟ್ಟು ಸಾಮರ್ಥ್ಯ- 123.08 ಟಿಎಂಸಿ

* ಇಂದಿನ ನೀರಿನ ಮಟ್ಟ – 62.53 ಟಿಎಂಸಿ

* ಕಳೆದ ವರ್ಷದ ನೀರಿನ ಮಟ್ಟ- 97.55 ಟಿಎಂಸಿ

* ಒಳಹರಿವು- 1,14,445 ಕ್ಯೂಸೆಕ್‌

* ಹೊರಹರಿವು – 6981 ಕ್ಯೂಸೆಕ್‌

ತುಂಗಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 497.71

* ಒಟ್ಟು ಸಾಮರ್ಥ್ಯ – 105.79

* ಇಂದಿನ ನೀರಿನ ಮಟ್ಟ- 25.42

* ಕಳೆದ ವರ್ಷದ ನೀರಿನ ಮಟ್ಟ – 105.79

* ಒಳಹರಿವು – 47,294 ಕ್ಯೂಸೆಕ್‌

* ಹೊರಹರಿವು – 296 ಕ್ಯೂಸೆಕ್‌

ವರಾಹಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 594.36

* ಒಟ್ಟು ಸಾಮರ್ಥ್ಯ – 31.1

* ಇಂದಿನ ನೀರಿನ ಮಟ್ಟ – 6.76

* ಕಳೆದ ವರ್ಷದ ನೀರಿನ ಮಟ್ಟ – 7.50

* ಒಳಹರಿವು – 17,972 ಕ್ಯೂಸೆಕ್‌

* ಹೊರಹರಿವು – 23,937

ಮಲಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 633.8

* ಒಟ್ಟು ಸಾಮರ್ಥ್ಯ – 37.73

* ಇಂದಿನ ನೀರಿನ ಮಟ್ಟ – 12.70

* ಕಳೆದ ವರ್ಷದ ನೀರಿನ ಮಟ್ಟ – 24.21

* ಒಳಹರಿವು – 21,247 ಕ್ಯೂಸೆಕ್‌

* ಹೊರಹರಿವು – 194 ಕ್ಯೂಸೆಕ್‌

ಕೆಆರ್​ಎಸ್​ ಜಲಾಶಯ

* ಗರಿಷ್ಠ ನೀರಿನ ಮಟ್ಟ – 124.80 ಅಡಿ

* ಒಟ್ಟು ಸಾಮರ್ಥ್ಯ- 49452

* ಇಂದಿನ ನೀರಿನ ಮಟ್ಟ- 97.50 ಅಡಿ

* ಕಳೆದ ವರ್ಷದ ನೀರಿನ ಮಟ್ಟ – 124.65

* ಒಳಹರಿವು – 44,436 ಕ್ಯೂಸೆಕ್‌

* ಹೊರಹರಿವು – 5283 ಕ್ಯೂಸೆಕ್‌

ಹೇಮಾವತಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 890.58

* ಒಟ್ಟು ಸಾಮರ್ಥ್ಯ – 37.1

* ಇಂದಿನ ನೀರಿನ ಮಟ್ಟ – 21.73

* ಕಳೆದ ವರ್ಷದ ನೀರಿನ ಮಟ್ಟ – 36.81

* ಒಳಹರಿವು – 23,142 ಕ್ಯೂಸೆಕ್‌

* ಹೊರಹರಿವು – 200

ಕಬಿನಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 696.13

* ಒಟ್ಟು ಸಾಮರ್ಥ್ಯ – 19.52

* ಇಂದಿನ ನೀರಿನ ಮಟ್ಟ – 16.09

* ಕಳೆದ ವರ್ಷದ ನೀರಿನ ಮಟ್ಟ – 19.34

* ಒಳಹರಿವು – 20,749 ಕ್ಯೂಸೆಕ್‌

* ಹೊರಹರಿವು – 3333 ಕ್ಯೂಸೆಕ್‌

ಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 657.73

* ಒಟ್ಟು ಸಾಮರ್ಥ್ಯ – 71.54

* ಇಂದಿನ ನೀರಿನ ಮಟ್ಟ – 33.83

* ಕಳೆದ ವರ್ಷದ ನೀರಿನ ಮಟ್ಟ – 69.76

* ಒಳಹರಿವು – 39,348 ಕ್ಯೂಸೆಕ್‌

* ಹೊರಹರಿವು – 170 ಕ್ಯೂಸೆಕ್‌

ಘಟಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 662.91

* ಒಟ್ಟು ಸಾಮರ್ಥ್ಯ – 51

* ಇಂದಿನ ನೀರಿನ ಮಟ್ಟ – 20.63

* ಕಳೆದ ವರ್ಷದ ನೀರಿನ ಮಟ್ಟ – 35.16

* ಒಳಹರಿವು – 31,815 ಕ್ಯೂಸೆಕ್‌

* ಹೊರಹರಿವು – 99

ಹಾರಂಗಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 871.38

* ಒಟ್ಟು ಸಾಮರ್ಥ್ಯ – 8.5

* ಇಂದಿನ ನೀರಿನ ಮಟ್ಟ – 6.76

* ಕಳೆದ ವರ್ಷದ ನೀರಿನ ಮಟ್ಟ – 7.50

* ಒಳಹರಿವು – 17,972 ಕ್ಯೂಸೆಕ್‌

* ಹೊರಹರಿವು – 23,937

ಸೂಫಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 564.33

* ಒಟ್ಟು ಸಾಮರ್ಥ್ಯ – 145.33

* ಇಂದಿನ ನೀರಿನ ಮಟ್ಟ – 57.15

* ಕಳೆದ ವರ್ಷದ ನೀರಿನ ಮಟ್ಟ – 66.11

* ಒಳಹರಿವು – 52,650 ಕ್ಯೂಸೆಕ್‌

* ಹೊರಹರಿವು – 0

Ramesh Babu

Journalist

Recent Posts

ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: 7.96 ಲಕ್ಷ ಮತದಾರರ ಹೆಸರು ಅಂತಿಮ ಹಂತಕ್ಕೆ

ಬೆಂಗಳೂರು ಗ್ರಾಮಾಂತರ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಸೋಮವಾರ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ…

3 hours ago

ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಹೊಸ ವೇದಿಕೆ ಒಂದೇ ಆವರಣದಲ್ಲಿ ಬಾಕ್ಸಿಂಗ್, ಕುಸ್ತಿ, ಜೂಡೋ, ಕಬ್ಬಡಿ, ಬ್ಯಾಡ್ಮಿಂಟನ್, ಸ್ಕೇಟಿಂಗ್ ಸೌಲಭ್ಯ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…

1 day ago

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಅಭಿಯಾನ: ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕರೆತರಲು ಕ್ರಮ

  ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…

1 day ago

ಪಾಕಿಸ್ತಾನಿ ಗ್ಯಾಂಗ್‌ ಜೊತೆ ಸಂಪರ್ಕ ಆರೋಪ: ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿ ಬಂಧನ

ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…

2 days ago

ದೊಡ್ಡಬಳ್ಳಾಪುರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…

3 days ago

ಘಾಟಿ ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ಸಂಭ್ರಮ; ಮಹಿಳೆಯರಿಗೆ ಬಳೆ, ಅರಶಿನ–ಕುಂಕುಮ ವಿತರಣೆ

ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…

3 days ago