Categories: ಲೇಖನ

ಮತದಾನ – ಸರ್ವಶ್ರೇಷ್ಠ ದಾನ…..ನಿಮ್ಮ ಮತ ದೇಶಕ್ಕೆ ಹಿತ

ಬಿಸಿಲಿರಲಿ, ಮಳೆಯಿರಲಿ, ಬಿರುಗಾಳಿಯಿರಲಿ, ನಡುಗುವ ಚಳಿಯಿರಲಿ, ಜಗ್ಗದೆ, ಕುಗ್ಗದೆ, ಬಗ್ಗದೆ, ಮತದಾನ ಮಾಡಿ,……

ಜ್ವರವಿರಲಿ,
ನೆಗಡಿಯಿರಲಿ,
ಕೆಮ್ಮಿರಲಿ,
ತಲೆ ನೋವಿರಲಿ,
ಗ್ಯಾಸ್ಟ್ರಿಕ್ ಇರಲಿ,
ಮರೆಯದೆ ಮತದಾನ ಮಾಡಿ,…….

ಕೆಲಸವಿರಲಿ,
ಇಲ್ಲದಿರಲಿ,
ಕ್ಯೂ ಇರಲಿ,
ಖಾಲಿ ಇರಲಿ,
ದೂರವಿರಲಿ,
ಹತ್ತಿರವಿರಲಿ,
ತಾಳ್ಮೆಯಿಂದ ನಿಂತು, ಮತದಾನ ಮಾಡಿ,…..

ಮತದಾನ ಎಲ್ಲ ದಾನಕ್ಕಿಂತ ಶ್ರೇಷ್ಠ ದಾನ,
ನಿಮ್ಮ ಮತ ದೇಶಕ್ಕೆ ಹಿತ,
ನಿಮ್ಮ ರಕ್ಷಣೆಗಾಗಿ ಮತದಾನ ಮಾಡಿ,
ಪ್ರಜಾಪ್ರಭುತ್ವ ಉಳಿಸಲು ಮತದಾನ ಮಾಡಿ,….

ನಿಮ್ಮ ಪ್ರತಿನಿಧಿಯಾಗಿ ನನ್ನನ್ನು ಚುನಾಯಿಸಲು ಮತದಾನ ಮಾಡಿ,
ಆಮೇಲೆ ಮಂತ್ರಿಯಾಗಲು ಲಾಬಿ ನಾನು ಮಾಡುವೆನು,….

ನೀವು ನೋಡನೋಡುತ್ತಿದ್ದಂತೆ ನಿಮ್ಮ ಭೇಟಿಯ ಅನುಕೂಲಕ್ಕಾಗಿ,
ಒಂದು ಬೃಹತ್ ಬಂಗಲೆ ನಾನು ಮಾಡುತ್ತೇನೆ,
ನನ್ನ ನಂತರ ನಿಮ್ಮ ಸೇವೆಗಾಗಿ ನನ್ನ ಮಗ/ಮಗಳನ್ನು ವಿದ್ಯಾಭ್ಯಾಸಕ್ಕಾಗಿ
ವಿದೇಶಕ್ಕೆ ಕಳಿಸುತ್ತೇನೆ,….

ಗಣೇಶ, ಅಣ್ಣಮ್ಮ, ರಾಜ್ಯೋತ್ಸವದ ನಿಮ್ಮ ಉತ್ಸವಕ್ಕೆ, ಹಣ ಹೊಂದಿಸಲು
ತಿಂಗಳ ಆದಾಯಕ್ಕಾಗಿ
COMMERCIAL COMPLEX ಕಟ್ಟಿಸಿ ಬಾಡಿಗೆ ಬಿಡುತ್ತೇನೆ,……

ನನ್ನ ಸುತ್ತಮುತ್ತಲ ಜನರಿಗೆ ಬೇರೆ ಬೇರೆ CONTRACT ಕೊಡಿಸಿ,
ಮುಂದಿನ ಚುನಾವಣೆಗಾಗಿ ಹಣ ಮಾಡುತ್ತೇನೆ,….

ಯಾವುದಕ್ಕೂ ಇರಲಿ ಎಂದು ಎಲ್ಲಾ ಪಕ್ಷಗಳ ನಾಯಕರ ಜೊತೆಗೂ
CONTACT ನಲ್ಲಿರುತ್ತೇನೆ,
ಸಂಬಂಧ ಬೆಳೆಸುತ್ತೇನೆ…..

ನಿಮ್ಮ ಸಮಸ್ಯೆಗಳನ್ನು ಹಾಗೆಯೇ ಉಳಿಸುತ್ತೇನೆ,
ಏಕೆಂದರೆ PROBLEMS
ಇದ್ದರೇನೆ ನಿಮಗೆ ನನ್ನ ನೆನಪಾಗುವುದು,….

ನಿಮ್ಮಿಂದಲೇ ನಾವು,
ನಿಮ್ಮ ಒಂದು ಮತ,
ನನಗಷ್ಟೇ ಅಲ್ಲದೆ,
ಮಾಧ್ಯಮದವರು, ಕಾಂಟ್ರಾಕ್ಟರ್ ಗಳು, ಅಧಿಕಾರಿಗಳು,
ಪುಢಾರಿಗಳು,
ಎಲ್ಲರನ್ನೂ ಚೆನ್ನಾಗಿಟ್ಟಿರುತ್ತದೆ,……

ಇದರಲ್ಲಿ ಮುಚ್ಚುಮರೆ ಏನೂ ಇಲ್ಲ,
ನನ್ನದು ನೇರವಾದ ಮಾತು, ಸತ್ಯವಾದ ಮಾತು,
ಬೇಕಾದರೆ ಇನ್ನೊಂದು 1000 ರೂಪಾಯಿ ಹೆಚ್ಚಿಗೆ ತೆಗೆದುಕೊಳ್ಳಿ,…..

ಆದರೆ,
ಮತದಾರ ಬಂಧುಗಳೇ,
ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ,…..

Public ಆಗಿ ಯಾರಿಗೂ ಹೇಳಬೇಡಿ, ನಿಮ್ಮಲ್ಲೇ ಇರಲಿ,
ಚುನಾವಣಾಧಿಕಾರಿಗಳು ಕೇಳಿಸಿಕೊಂಡಾರು…………

ಇದು ನನ್ನ – ನಿಮ್ಮ ನಡುವಿನ ವ್ಯವಹಾರ….

ವಂದೇ ಮಾತರಂ,
ಜೈಹಿಂದ್,
ಬೋಲೋ ಭಾರತ್ ಮಾತಾ ಕೀ ಜೈ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್.ಕೆ.

Ramesh Babu

Journalist

Recent Posts

ಕಡೇ ಕಾರ್ತೀಕ ಸೋಮವಾರ: ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವ

ದೂಡ್ಡಬಳ್ಳಾಪುರದ ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರ ಪ್ರಯುಕ್ತ ಈ ದಿನ ಬೆಳಿಗ್ಗೆ ಗಣಪತಿ…

47 minutes ago

ನಾಳೆ (ನ.18) ತಾಲೂಕಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳ ಪಟ್ಟಿ ಇಲ್ಲಿದೆ ನೋಡಿ….

ದೊಡ್ಡಬಳ್ಳಾಪುರ: ನಾಳೆ (ನ.18) ನಗರದ ಹೊರವಲಯದಲ್ಲಿರುವ 66/11ಕಿವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ತಾಲೂಕಿನ ಹಲವೆಡೆ ವಿದ್ಯುತ್‌…

1 hour ago

18 ದೇವಸ್ಥಾನಗಳಿಗೆ ಕನ್ನ ಹಾಕಿದ್ದ ಖದೀಮರ ಬಂಧನ: ಲಕ್ಷಾಂತರ ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು, ಗುಂಡುಗಳು ವಶ

  18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು‌ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…

8 hours ago

ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಎಂಬಿಎ ವಿದ್ಯಾರ್ಥಿ ಸಾವು

ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…

8 hours ago

ಮೊಬೈಲ್ ನೋಡುತ್ತಾ ಕುಳಿತಿದ್ದ 21 ವರ್ಷದ ಯುವಕನಿಗೆ ಚಾಕು ಇರಿತ: ಚಾಕು ಇರಿತ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…

11 hours ago

ರಾಹುಲ್ ಗಾಂಧಿ ಸೈದ್ಧಾಂತಿಕ ಬದ್ಧತೆಯಿರುವ ವ್ಯಕ್ತಿ….

ರಾಹುಲ್ ಗಾಂಧಿ...... ಬಿಹಾರ ಚುನಾವಣೆಯಲ್ಲಿ, ಸೀಟುಗಳ ಲೆಕ್ಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ನಂತರ ಶ್ರೀ ರಾಹುಲ್ ಗಾಂಧಿಯವರ ನಾಯಕತ್ವದ ಸಾಮರ್ಥ್ಯದ…

14 hours ago