ಬಿಸಿಲಿರಲಿ, ಮಳೆಯಿರಲಿ, ಬಿರುಗಾಳಿಯಿರಲಿ, ನಡುಗುವ ಚಳಿಯಿರಲಿ, ಜಗ್ಗದೆ, ಕುಗ್ಗದೆ, ಬಗ್ಗದೆ, ಮತದಾನ ಮಾಡಿ,……
ಜ್ವರವಿರಲಿ,
ನೆಗಡಿಯಿರಲಿ,
ಕೆಮ್ಮಿರಲಿ,
ತಲೆ ನೋವಿರಲಿ,
ಗ್ಯಾಸ್ಟ್ರಿಕ್ ಇರಲಿ,
ಮರೆಯದೆ ಮತದಾನ ಮಾಡಿ,…….
ಕೆಲಸವಿರಲಿ,
ಇಲ್ಲದಿರಲಿ,
ಕ್ಯೂ ಇರಲಿ,
ಖಾಲಿ ಇರಲಿ,
ದೂರವಿರಲಿ,
ಹತ್ತಿರವಿರಲಿ,
ತಾಳ್ಮೆಯಿಂದ ನಿಂತು, ಮತದಾನ ಮಾಡಿ,…..
ಮತದಾನ ಎಲ್ಲ ದಾನಕ್ಕಿಂತ ಶ್ರೇಷ್ಠ ದಾನ,
ನಿಮ್ಮ ಮತ ದೇಶಕ್ಕೆ ಹಿತ,
ನಿಮ್ಮ ರಕ್ಷಣೆಗಾಗಿ ಮತದಾನ ಮಾಡಿ,
ಪ್ರಜಾಪ್ರಭುತ್ವ ಉಳಿಸಲು ಮತದಾನ ಮಾಡಿ,….
ನಿಮ್ಮ ಪ್ರತಿನಿಧಿಯಾಗಿ ನನ್ನನ್ನು ಚುನಾಯಿಸಲು ಮತದಾನ ಮಾಡಿ,
ಆಮೇಲೆ ಮಂತ್ರಿಯಾಗಲು ಲಾಬಿ ನಾನು ಮಾಡುವೆನು,….
ನೀವು ನೋಡನೋಡುತ್ತಿದ್ದಂತೆ ನಿಮ್ಮ ಭೇಟಿಯ ಅನುಕೂಲಕ್ಕಾಗಿ,
ಒಂದು ಬೃಹತ್ ಬಂಗಲೆ ನಾನು ಮಾಡುತ್ತೇನೆ,
ನನ್ನ ನಂತರ ನಿಮ್ಮ ಸೇವೆಗಾಗಿ ನನ್ನ ಮಗ/ಮಗಳನ್ನು ವಿದ್ಯಾಭ್ಯಾಸಕ್ಕಾಗಿ
ವಿದೇಶಕ್ಕೆ ಕಳಿಸುತ್ತೇನೆ,….
ಗಣೇಶ, ಅಣ್ಣಮ್ಮ, ರಾಜ್ಯೋತ್ಸವದ ನಿಮ್ಮ ಉತ್ಸವಕ್ಕೆ, ಹಣ ಹೊಂದಿಸಲು
ತಿಂಗಳ ಆದಾಯಕ್ಕಾಗಿ
COMMERCIAL COMPLEX ಕಟ್ಟಿಸಿ ಬಾಡಿಗೆ ಬಿಡುತ್ತೇನೆ,……
ನನ್ನ ಸುತ್ತಮುತ್ತಲ ಜನರಿಗೆ ಬೇರೆ ಬೇರೆ CONTRACT ಕೊಡಿಸಿ,
ಮುಂದಿನ ಚುನಾವಣೆಗಾಗಿ ಹಣ ಮಾಡುತ್ತೇನೆ,….
ಯಾವುದಕ್ಕೂ ಇರಲಿ ಎಂದು ಎಲ್ಲಾ ಪಕ್ಷಗಳ ನಾಯಕರ ಜೊತೆಗೂ
CONTACT ನಲ್ಲಿರುತ್ತೇನೆ,
ಸಂಬಂಧ ಬೆಳೆಸುತ್ತೇನೆ…..
ನಿಮ್ಮ ಸಮಸ್ಯೆಗಳನ್ನು ಹಾಗೆಯೇ ಉಳಿಸುತ್ತೇನೆ,
ಏಕೆಂದರೆ PROBLEMS
ಇದ್ದರೇನೆ ನಿಮಗೆ ನನ್ನ ನೆನಪಾಗುವುದು,….
ನಿಮ್ಮಿಂದಲೇ ನಾವು,
ನಿಮ್ಮ ಒಂದು ಮತ,
ನನಗಷ್ಟೇ ಅಲ್ಲದೆ,
ಮಾಧ್ಯಮದವರು, ಕಾಂಟ್ರಾಕ್ಟರ್ ಗಳು, ಅಧಿಕಾರಿಗಳು,
ಪುಢಾರಿಗಳು,
ಎಲ್ಲರನ್ನೂ ಚೆನ್ನಾಗಿಟ್ಟಿರುತ್ತದೆ,……
ಇದರಲ್ಲಿ ಮುಚ್ಚುಮರೆ ಏನೂ ಇಲ್ಲ,
ನನ್ನದು ನೇರವಾದ ಮಾತು, ಸತ್ಯವಾದ ಮಾತು,
ಬೇಕಾದರೆ ಇನ್ನೊಂದು 1000 ರೂಪಾಯಿ ಹೆಚ್ಚಿಗೆ ತೆಗೆದುಕೊಳ್ಳಿ,…..
ಆದರೆ,
ಮತದಾರ ಬಂಧುಗಳೇ,
ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ,…..
Public ಆಗಿ ಯಾರಿಗೂ ಹೇಳಬೇಡಿ, ನಿಮ್ಮಲ್ಲೇ ಇರಲಿ,
ಚುನಾವಣಾಧಿಕಾರಿಗಳು ಕೇಳಿಸಿಕೊಂಡಾರು…………
ಇದು ನನ್ನ – ನಿಮ್ಮ ನಡುವಿನ ವ್ಯವಹಾರ….
ವಂದೇ ಮಾತರಂ,
ಜೈಹಿಂದ್,
ಬೋಲೋ ಭಾರತ್ ಮಾತಾ ಕೀ ಜೈ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ- ವಿವೇಕಾನಂದ. ಎಚ್.ಕೆ.
ರಾಮನಗರ ಗ್ರಾಮಾಂತರ ಹಾಗೂ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಜಮೀನಿನಲ್ಲಿ ಪಂಪ್ ಸೆಟ್ ಗಳಿಗೆ ಅಳವಡಿಸಿದ್ದ…
ಬಿರುಬಿಸಿಲಿಗೆ ಬಾಯಾರಿಕೆಯಿಂದ ಕೋತಿಯೊಂದು ನೀರಿಗಾಗಿ ವಾಟರ್ ಬಾಟಲ್ ಹಿಡಿದು ಒಂದೊಂದು ಹನಿಗೂ ಪರದಾಡಿದ ದೃಶ್ಯ ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ…
ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು…
ಚಿಂತನೆ ಮತ್ತು ಚಿಂತಕರು....... " ಹೃದಯಾಂತರಾಳದಿಂದ ಬರುವ ಮಾತುಗಳು ಹೃದಯವನ್ನು ತಾಕುತ್ತವೆ " ರೂಮಿ........... ಕೃತಕತೆ ಮತ್ತು ಸಹಜತೆಯ ನಡುವಿನ…
ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರನ್ನಾಗಿ ನರಸಿಂಹ ಮೂರ್ತಿ ಅವರನ್ನು ಅಧಿಕೃತವಾಗಿ ನೇಮಕ ಮಾಡಿದ್ದೇವೆ. ಅವರು ಪಕ್ಷಕ್ಕಾಗಿ ಹಗಲಿರುಳು…
ಕನ್ನಡಿಗರು ತಮ್ಮ ಬೆವರ ಗಳಿಕೆಯಿಂದ ನೀಡುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಹದಿನೈದು ಪೈಸೆ ಮಾತ್ರ ವಾಪಸ್ಸು…