ಭಾರತದಲ್ಲಿ ಮರುಬಳಕೆ ಮಾಡಿದ ಪಾಲಿಮರ್‌ಗಳನ್ನು ಬಳಸಿದ ಪ್ಯಾಕೇಜಿಂಗ್ ಪರಿಚಯಿಸಿದ ಟೆಟ್ರಾ ಪ್ಯಾಕ್

ಬೆಂಗಳೂರು: ಪ್ಲಾಸ್ಟಿಕ್‌ನನ್ನು ಮರುಬಳಕೆ ಮಾಡುವತ್ತ ಗಮನಾರ್ಹ ಹೆಜ್ಜೆ ಇಟ್ಟಿರುವ ಟೆಟ್ರಾಪ್ಯಾಕ್‌, ತನ್ನೆಲ್ಲಾ ಪ್ಯಾಕೇಜಿಂಗ್‌ನನ್ನು ಮರುಬಳಕೆ ಮಾಡಿದ ಪಾಲಿಮರ್‌ ಒಳಗೊಂಡ ಟೆಟ್ರಾಪ್ಯಾಕ್‌ನನ್ನು ಪರಿಚಯಿಸಿದೆ.

ಆಹಾರ ಮತ್ತು ಪಾನೀಯ ಪ್ಯಾಕೇಜಿಂಗ್‌ ಉದ್ಯಮದಲ್ಲಿ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ ಬಳಕೆ ಮಾಡಿದ ಮೊದಲ ಸಂಸ್ಥೆಯಾಗಿದೆ. ಇದರ ಕಾರ್ಟನ್ ಪ್ಯಾಕೇಜ್‌ಗಳಲ್ಲಿ ಮರುಬಳಕೆ ಮಾಡಿದ ಪಾಲಿಮರ್‌ಗಳಿದ್ದು, ಇದನ್ನು ಸುಸ್ಥಿರತೆ ಪ್ರಮಾಣೀಕರಣ ಸಿಸ್ಟಮ್‌ ಆಗಿರುವ ಐಎಸ್‌ಸಿಸಿ (ಅಂತಾರಾಷ್ಟ್ರೀಯ ಪರಿಸರ ಸ್ನೇಹಿ ಮತ್ತು ಕಾರ್ಬನ್ ಪ್ರಮಾಣೀಕರಣ) ಪ್ರಮಾಣೀಕರಿಸಿದೆ. ಪ್ಯಾಕೇಜಿಂಗ್‌ನಲ್ಲಿ ಶೇ. 5ರಷ್ಟು ಪ್ರಮಾಣಿತ ಮರುಬಳಕೆ ಮಾಡಿದ ಪಾಲಿಮರ್‌ ಇರಲಿದೆ. ಇದನ್ನು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮ 2022 ರ ಅಡಿಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ನಿಗದಿಪಡಿಸಿದ್ದು, ಇದು ಇದೇ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ಪರಿಸರ ರಕ್ಷಣೆಯಲ್ಲಿ ಟೆಟ್ರಾ ಪ್ಯಾಕ್ ಬದ್ಧತೆ ಹೊಂದಿದ್ದು, ಪಳೆಯುಳಿಕೆ ಆಧರಿತ ಸಂಪನ್ಮೂಲಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಸಾಮಗ್ರಿಗಳನ್ನು ಮರುಬಳಕೆ ಮಾಡಿಕೊಳ್ಳುವುದರ ಮೇಲೆ ಇದು ಹೆಚ್ಚು ಗಮನ ಕೇಂದ್ರೀಕರಿಸಿದೆ. ಇದರ ಜೊತೆಗೆ, ಕಚ್ಚಾ ಸಾಮಗ್ರಿಗಳನ್ನು ಖರೀದಿ ಮಾಡುವಲ್ಲಿ ಜವಾಬ್ದಾರಿಯುತವಾಗಿ ಟೆಟ್ರಾ ಪ್ಯಾಕ್ ವರ್ತಿಸುತ್ತದೆ. ಮರುಬಳಕೆಯನ್ನು ಹೆಚ್ಚಿಸಲು ಮತ್ತು ಕಸವನ್ನು ಕಡಿಮೆ ಮಾಡಲು ಪ್ಯಾಕೇಜ್‌ಗಳನ್ನು ವಿನ್ಯಾಸ ಮಾಡುವುದು ಮತ್ತು ಪರಿಣಾಮಕಾರಿಯಾಗಿ ಕಲೆಕ್ಷನ್ ಮತ್ತು ರಿಸೈಕ್ಲಿಂಗ್‌ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಉತ್ತಮ ಪಾಲುದಾರಿಕೆಯನ್ನು ನಿರ್ಮಿಸುವಲ್ಲಿ ಟೆಟ್ರಾ ಪ್ಯಾಕ್ ಬದ್ಧವಾಗಿದೆ.

ಟೆಟ್ರಾ ಪ್ಯಾಕ್‌ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಕ್ಯಾಸಿಯೋ ಸೈಮೋಸ್ ಮಾತನಾಡಿ, “ಭಾರತದಲ್ಲಿ ಶೇ.5ರಷ್ಟು ಪ್ರಮಾಣಿತ ಮರುಬಳಕೆ ಮಾಡಿದ ಪಾಲಿಮರ್‌ಅನ್ನು ಹೊಂದಿರುವ ಪ್ಯಾಕೇಜಿಂಗ್ ಸಾಮಗ್ರಿಯನ್ನು ಪರಿಚಯಿಸುವುದರಲ್ಲಿ ನಾವು ಪ್ರಥಮ ಹೆಜ್ಜೆ ಇಟ್ಟಿದ್ದೇವೆ. ಈ ಮರುಬಳಕೆ ಮಾಡಿದ ಕಂಟೆಂಟ್ ಅನ್ನು ಭಾರತದಿಂದಲೇ ಪಡೆಯಲಾಗಿದೆ. ಪುಣೆಯಲ್ಲಿ ಚಕನ್‌ನಲ್ಲಿರುವ ಐಎಸ್‌ಸಿಸಿ ಪ್ರಮಾಣಿತ ಫ್ಯಾಕ್ಟರಿಯಲ್ಲಿ ಪ್ಯಾಕೇಜಿಂಗ್ ಸಾಮಗ್ರಿಯನ್ನು ತಯಾರಿಸಲಾಗಿದೆ.

ಸರ್ಕ್ಯುಲಾರಿಟಿಯನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯದ ಬದ್ಧತೆಯನ್ನು ನಾವು ಮೆಚ್ಚುತ್ತೇವೆ. 2025 ರಲ್ಲೇ ಈ ನಿಯಮಾವಳಿಯನ್ನು ಪರಿಚಯಿಸುವ ಮೂಲಕ ವಿಶ್ವದ ಪ್ರಥಮ ದೇಶ ಭಾರತ ಆಗುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ. ಆಹಾರ ಮತ್ತು ಪಾನೀಯ ಉದ್ಯಮದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಇನ್ನಷ್ಟು ಸರ್ಕ್ಯುಲರ್ ಪರಿಹಾರಕ್ಕೆ ಪರಿವರ್ತನೆಯಾಗುವುದಕ್ಕೆ ನಮ್ಮೆಲ್ಲರಿಗೆ ಒಂದು ಅವಕಾಶವಾಗಿದೆ ಎಂದರು. ಐಎಸ್‌ಸಿಸಿ (ಇಂಟರ್ನ್ಯಾಷನಲ್ ಸಸ್ಟೇನಬಿಲಿಟಿ & ಕಾರ್ಬನ್ ಸರ್ಟಿಫಿಕೇಶನ್) ಸರ್ಟಿಫೈಡ್ ಮರುಬಳಕೆ ಮಾಡಿದ ಪಾಲಿಮರ್‌ಗಳನ್ನು ಖರೀದಿ ಮಾಡಿ, ಐಎಸ್‌ಸಿಸಿ ಮಾಸ್ ಬ್ಯಾಲೆನ್ಸ್ ಅಟ್ರಿಬ್ಯುಶನ್ ಮೆಥಡ್‌ಗೆ ಅನುಗುಣವಾಗಿ ನಿಯೋಜಿಸಲಾಗುತ್ತದೆ. ಕೆಮಿಕಲ್ ರಿಸೈಕ್ಲಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಿದ ಮತ್ತು ಮರುಬಳಕೆ ಮಾಡಲಾಗದ ಸಾಮಗ್ರಿಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಅಲ್ಲದೆ, ಟೆಟ್ರಾ ಪ್ಯಾಕ್ ಪೂರೈಕೆ ಸರಣಿಯಾದ್ಯಂತ ಮರುಬಳಕೆ ಮಾಡಿದ ಸಾಮಗ್ರಿಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ. ಈ ರಾಸಾಯನಿಕವಾಗಿ ಮರುಬಳಕೆ ಮಾಡಿದ ಪ್ಲಾಸ್ಟಿಕ್‌ಗಳು ವರ್ಜಿನ್ ಪಾಲಿಮರ್‌ಗಳಂತೆಯೇ ಜಾಗತಿಕ ಆಹಾರ ಸಂಪರ್ಕ ನಿಯಮಗಳನ್ನು ಅನುಸರಿಸುತ್ತವೆ. ಗುಣಮಟ್ಟದ ದೃಷ್ಟಿಯಿಂದ, ರಾಸಾಯನಿಕವನ್ನು ಬಳಸಿ ಮರುಬಳಕೆ ಮಾಡಿದ ಪ್ಲಾಸ್ಟಿಕ್‌ಗಳು ಪಳೆಯುಳಿಕೆ ಆಧರಿತ ಪ್ಲಾಸ್ಟಿಕ್‌ಗಳಿಗೆ ಸಮಾನವಾಗಿವೆ.

ಮರುಬಳಕೆ ಮಾಡಿದ ಸಾಮಗ್ರಿಯನ್ನು ಬಳಸಿದರೆ, ಮರುಬಳಕೆ ದರವನ್ನು ಹೆಚ್ಚಳ ಮಾಡಬಹುದು ಮತ್ತು ಮರುಬಳಕೆಯನ್ನು ಹೆಚ್ಚು ಆರ್ಥಿಕವಾಗಿ ಅನುಕೂಲಕರವನ್ನಾಗಿಸಬಹುದು. ಮರುಬಳಕೆ ಮಾಡಿದ ಕಂಟೆಂಟ್ ಭಾರತ ಸೇರಿದಂತೆ ವಿಶ್ವದ ಎಲ್ಲೆಡೆ ಕಡ್ಡಾಯವಾಗಿದ್ದು, ಉತ್ಪಾದಕರು ಮರುಬಳಕೆ ಮಾಡಿದ ಸಾಮಗ್ರಿಯನ್ನು ಖರೀದಿ ಮಾಡುವುದಕ್ಕೆ ಪ್ರೋತ್ಸಾಹಿಸುತ್ತದೆ. ಇದರಿಂದ, ಬೇಡಿಕೆ ಹೆಚ್ಚಳವಾಗುತ್ತದೆ ಮತ್ತು ಈ ಮೂಲಕ ವಿಸ್ತರಿಸಿದ ಆಫರ್ ಅನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳದರು.

Ramesh Babu

Journalist

Recent Posts

ಕುಸುಮ್ (ಸೌರ ವಿದ್ಯುತ್) ಯೋಜನೆ ಹೆಸರಲ್ಲಿ ದೇಶ ಕಾಯೋ ಯೋಧರ ಭೂಮಿಗೆ ಬೇಲಿ: ತಬ್ಬಿಬ್ಬಾದ ಯೋಧರ ಕುಟುಂಬ

ಕಳೆದ 10 ವರ್ಷಗಳಿಂದ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕನ್ನಮಂಗಲ ಗ್ರಾಮದ ಸರ್ವೇ ನಂಬರ್ 50ರ ಗೋಮಾಳದಲ್ಲಿ 53-57 ಅರ್ಜಿ…

6 hours ago

ಟೋಲ್ ರಸ್ತೆಯಲ್ಲಿ ಮಿತಿಮೀರಿದ ಅಪಘಾತ: ರಸ್ತೆ ಸುರಕ್ಷತೆ ಕಾಪಾಡದ ಸುಂಕವಸೂಲಿ(ಟೋಲ್) ಗುತ್ತಿಗೆದಾರರು: ಹೆದ್ದಾರಿಯಲ್ಲಿ ಕುಳಿತು ಟೋಲ್ ವಿರುದ್ಧ ಧಿಕ್ಕಾರ ಕೂಗಿದ ರೈತರು, ಸಂಘಟನೆಗಾರರು…

ರಸ್ತೆ ನಿಯಮಗಳನ್ನು ಪಾಲಿಸದೆ ವಾಹನಸವಾರರಿಗೆ ಸಮಸ್ಯೆ ಮಾಡುತ್ತಿರುವ ಟೋಲ್ ಸಿಬ್ಬಂದಿ ವಿರುದ್ದ ರಾಜ್ಯ ರೈತ ಸಂಘ ಮತ್ತು ವಿವಿಧ ಕನ್ನಡಪರ…

6 hours ago

ವಿಜಯಪುರದ ಬಸವ ಕಲ್ಯಾಣ ಮಠದಲ್ಲಿ 38ನೇ ವರ್ಷದ ಕಡ್ಲೆಕಾಯಿ ಪರಿಷೆ

ವಿಜಯಪುರ(ದೇವನಹಳ್ಳಿ): ಇಂದಿನ ಮಕ್ಕಳಿಗೆ ಶಿಕ್ಷಣದಷ್ಟೇ, ಆಚಾರ-ವಿಚಾರ ಒಳಗೊಂಡ ಸಂಸ್ಕಾರವನ್ನು ನೀಡುವುದು ಅವಶ್ಯವಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕರೆತರುವ…

7 hours ago

ಸಾಸಲು ಹೋಬಳಿಯಲ್ಲಿ ಮಿತಿಮೀರಿದ ಕೃಷಿ ಬೋರ್ ವೆಲ್ ಕೇಬಲ್ ಕಳ್ಳರ ಹಾವಳಿ: ಒಂದೇ ದಿನ ಹಲವು ಕಡೆ ಕೇಬಲ್ ಕಟ್

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯಲ್ಲಿ ಬೋರ್ ವೆಲ್ ಗಳ ವಿದ್ಯುತ್ ಕೇಬಲ್ ಕಳ್ಳರ ಹಾವಳಿ ಮಿತಿಮೀರಿದೆ. ಕಳೆದ ರಾತ್ರಿ ಹತ್ತಾರು…

10 hours ago

ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ವಿದೇಶಗಳಿಂದ…

12 hours ago

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ: ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ ಗ್ರಾಪಂ ವಿಫಲ: ಸಿಡಿದ್ದೆದ್ದ ದಲಿತರು

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಏಕಿಷ್ಟು ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ. ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ…

15 hours ago