ಸವಾರನೊಬ್ಬ ಬೈಕ್ ನ ಸೈಲೆನ್ಸರನ್ನು ಮಾರ್ಪಡುಗೊಳಿಸಿರುವುದಕ್ಕೆ ಮತ್ತು ಸೈಡ್ ಮಿರರ್, ಹಿಂಬದಿ ಇಂಡಿಕೇಟರ್ ಮತ್ತು ಹೊಗೆ ತಪಾಸಣಾ ಪತ್ರ ಹೊಂದಿಲ್ಲದ ಕಾರಣ ಬರೋಬ್ಬರಿ 25,500/- ರೂ. ದಂಡ ತೆತ್ತಿದ್ದಾನೆ. ಮಡಿಕೇರಿ ಮಹದೇವಪೇಟೆಯ ಅಬ್ದುಲ್ ಫಹಿಮ್ (21) ಎಂಬಾತ ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಧರ್ ಮತ್ತು ಸಿಬ್ಬಂದಿ ಬಲೆಗೆ ಬಿದ್ದು ಸಂಚಾರಿ ನಿಯಮ ಉಲ್ಲಂಘನೆಗಾಗಿ ದಂಡ ಕಟ್ಟಿದವನಾಗಿದ್ದಾನೆ.
ಡಿ.1ರಂದು ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಧರ್ ಮತ್ತು ಸಿಬ್ಬಂದಿ ಕಾಲೇಜು ರಸ್ತೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳನ್ನು ಪರಿಶೀಲಿಸುವ ಕರ್ತವ್ಯದಲ್ಲಿದ್ದ ಸಂದರ್ಭ ದ್ವಿಚಕ್ರ ವಾಹನವೊಂದು ಅತೀ ವೇಗ ಹಾಗೂ ಕರ್ಕಶ ಧ್ವನಿ ಉಂಟು ಮಾಡುತ್ತಾ ಬಂದಿದೆ. ಅದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ KA 09 – V9114 ನೋಂದಣಿ ಸಂಖ್ಯೆಯ ಸುಜುಕಿ ಸಮುರಾಯಿ ಮೋಟಾರ್ ಸೈಕಲಿನ ಸೈಲೆನ್ಸರನ್ನು ಮಾರ್ಪಡುಗೊಳಿಸಿರುವುದು ಮತ್ತು ಸೈಡ್ ಮಿರರ್, ಹಿಂಬದಿಯ ಇಂಡಿಕೇಟರ್ ಹಾಗೂ ಹೊಗೆ ತಪಾಸಣಾ ಪತ್ರ ಇಲ್ಲದಿರುವುದು ಕಂಡುಬಂದಿದೆ.
ಅದರ ಸವಾರ ಮಡಿಕೇರಿ ಮಹದೇವಪೇಟೆಯ ಅಬ್ದುಲ್ ಫಹಿಮ್ (21) ಎಂಬಾತನ ವಿರುದ್ಧ ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಲಂ 281 BNS & 189, 177 & 190(2), 115 CMV ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಿ ಒಟ್ಟು ರೂ. 25,500/- ದಂಡ ವಿಧಿಸಲಾಗಿದೆ.
*ದಂಡದ ವಿವರ*
1) ಅತೀ ವೇಗ ಮತ್ತು ಅಜಾಗರುಕತೆಯ ವಾಹನ ಚಾಲನೆಗೆ – ರೂ. 10,000/-
2) ಸೆನ್ಸರ್ ಮಾರ್ಪಡುಗೊಳಿಸಿರುವುದು ಮತ್ತು ಹೊಗೆ ತಪಾಸಾಣಾ ಪತ್ರ ಇಲ್ಲದಿರುವುದಕ್ಕೆ ರೂ. 10,000/-
3) ರೇಸಿಂಗ್ ಮತ್ತು ವೇಗದ ಪ್ರಯೋಗಕ್ಕೆ – ರೂ. 5,000/-
4) ಸೈಡ್ ಮಿರರ್ ಮತ್ತು ಹಿಂಬದಿಯ ಇಂಡಿಕೇಟರ್ ಇಲ್ಲದಿರುವುದಕ್ಕೆ ರೂ. 500/-
ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…
ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…
ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದೇವನಹಳ್ಳಿ ಹೊರವಲಯದ ಬೈಪಾಸ್ ನಲ್ಲಿ ಪುಂಡರು ಗುಂಪು ಗುಂಪಾಗಿ ಆಟೋ,…
80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.…
ಗ್ರಾಮೀಣರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ (ವಿಬಿ…
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್ಡಿಎ ಬೆಂಬಲಿತ ನಿರ್ದೇಶಕ ಟಿ.ಜಿ.…