ಬಿ.ಸಿ ಆನಂದ್ ಕಾಂಗ್ರೆಸ್ ಭಿಕ್ಷೆ: ನಾವಲ್ಲ ಅಡಾ**ಸ್: ಬಿ.ಸಿ ಆನಂದ್ ಡಬಲ್ ಅಡಾ**ಸ್- ಮಾಜಿ ಶಾಸಕ‌ ಟಿ.ವೆಂಕಟರಮಣಯ್ಯ ವಾಗ್ದಾಳಿ

ಕಳೆದ ಬಮೂಲ್ ಚುನಾವಣೆಯಲ್ಲಿ‌ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಬಿ.ಸಿ ಆನಂದ್ ಚುನಾವಣೆ ಗೆದ್ದನಂತರ ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಮಾಧ್ಯಮಗಳ ಮೂಲಕ‌ ತಿಳಿದುಬಂದಿದೆ. ಇದು ಅತ್ಯಂತ ಖಂಡನೀಯ, ಉಂಡ ಮನೆಗೆ ದ್ರೋಹ ಬಗೆದಿದ್ದಾರೆ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಕಿಡಿಕಾರಿದ್ದಾರೆ.

ಈ‌ ಕುರಿತು ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲೇ ಇದ್ದು, ಎಲ್ಲಾ ರೀತಿಯ ಅಧಿಕಾರಿಗಳನ್ನು ಅನುಭವಿಸಿ, ಒಂದು ಹಂತಕ್ಕೆ ಬೆಳೆದು ಪಕ್ಷ‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡು, ಇದೀಗ ಬೆಳೆಸಿದ ಪಕ್ಷದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದು ಶೋಭೆ ತರುವಂತದ್ದಲ್ಲ ಎಂದು ಹೇಳಿದರು.

ನಾವಲ್ಲ ಅಡಾಸ್ ಬಿ.ಸಿ.ಆನಂದ್ ಡಬಲ್ ಅಡಾಸ್:

ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡರ ತಂದೆ, ನಮ್ಮ ತಂದೆಯವರ ಬಗ್ಗೆ ಮಾತನಾಡಿರುವುದು ನಮಗೆ ಬಹಳ ನೋವಾಗಿದೆ. ನಮ್ಮನ್ನು ಅಡಾಸ್ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ,‌‌ ನಾವಲ್ಲ ಅಡಾಸ್, ಈ‌ ಮಾತನ್ನು ಹೇಳಿದ ಬಿ.ಸಿ ಆನಂದ್ ಡವಲ್ ಅಡಾಸ್ ಎಂದು ಗರಂ ಆದರು.

ನಮ್ಮ ಭಿಕ್ಷೆಯಿಂದ ಬೆಳೆದ ಬಿ.ಸಿ ಆನಂದ್

ನಮ್ಮ ಭಿಕ್ಷೆಯಿಂದ ಬೆಳೆದ ವ್ಯಕ್ತಿ, ಈಗ ನಮಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾನೆ. ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ರೀತಿಯ ಅಕಾರಗಳನ್ನು ಕೊಟ್ಟಿದೆ. ಮೊದಲನೇ ಭಿಕ್ಷೆ: ಬಿ.ಸಿ.ಆನಂದ್ ಮೊದಲಿಗೆ ಬಮೂಲ್ ನಿರ್ದೇಶಕರ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾಗ ನನ್ನ ಸಹೋದರ ರಾಮಣ್ಣ ಸಹ ಆಕಾಂಕ್ಷಿಯಾಗಿ ಸ್ಪರ್ಧಿಸಲು ಸಿದ್ದವಾಗಿದ್ದರು. ಆಗ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿ, ರಾಮಣ್ಣ ಬದಲಾಗಿ ಕಾಂಗ್ರೆಸ್‍ನಿಂದ ಬಿ.ಸಿ.ಆನಂದ್ ಸ್ಪರ್ಧಿಸುವಂತೆ ಮಾಡಿ ಅವರ ಗೆಲುವಿಗೆ ಶ್ರಮಿಸಿದ್ದೆವು.

ಎರಡನೇ ಭಿಕ್ಷೆ: ಸೋಮಶೇಖರ್ ಸಹಕಾರ ಸಚಿವರಾಗಿದ್ದಾಗ ಕೆಎಂಎಫ್ ನಿರ್ದೇಶಕರನ್ನಾಗಿ ಮಾಡಿದೆವು.

ಮೂರನೇ ಭಿಕ್ಷೆ: ಕೊಳಗೇರಿ ಅಭಿವೃದ್ದಿ ಮಂಡಲಿ ಮಾಜಿ ಅಧ್ಯಕ್ಷ ಲಕ್ಷ್ಮಣ್ ಅವರು ಕಾಂಗ್ರೆಸ್ ಗೆ ಸೇರಿಸಿದರು..

ನಾಲ್ಕನೇ ಭಿಕ್ಷೆ:ಬಿ.ಸಿ ಆನಂದ್ ಪತ್ನಿಗೆ ಜಿಲ್ಲಾ ಪಂಚಾಯಿತಿ ಟಿಕೆಟ್ ನೀಡಿ ಗೆಲ್ಲಲು ಶ್ರಮಿಸಿದ್ದೆವು.

ಐದನೇ ಭಿಕ್ಷೆ: ಹಾಲಿನ ಡೈರಿಗೆ ನಾಮಿನಿ ಮಾಡುವ ಮೂಲಕ ನಾನು ಭಿಕ್ಷೆ ನೀಡಿದ್ದೇನೆ…

ಹೀಗೆ ಎಲ್ಲಾ ಕಾಲದಲ್ಲೂ, ಎಲ್ಲಾ ಸಮಯದಲ್ಲೂ ನಮ್ಮ ಭಿಕ್ಷೆಯಿಂದ ಅಧಿಕಾರ ಅನುಭವಿಸಿದ್ದಾನೆ. ಇದೀಗ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಹೋಗಿ ನಮ್ಮ ವಿರುದ್ಧ ಮಾತನಾಡುತ್ತಿದ್ದಾನೆ ಎಂದು ಕಿಡಿಕಾರಿದರು.

ಇಷ್ಟೆಲ್ಲಾ  ಅಕಾರಗಳನ್ನು ಅನುಭವಿಸಿರುವ ಆನಂದ್ ಅವರು ಉಂಡ ಮನೆಗೆ ದ್ರೋಹ ಬಗೆದು ನಮ್ಮನ್ನು ಅಡಾಸ್ ಎಂಬ ಶಬ್ದ ಬಳಸಿ ನಿಂದನೆ ಮಾಡಿರುವುದು ಹಾಗೂ ನಮ್ಮ ತಂದೆಯನ್ನು ಎಳೆತಂದಿರುವುದು ಮನಸ್ಸಿಗೆ ನೋವು ತಂದಿದೆ ಎಂದರು.

ಬಿ.ಸಿ ಆನಂದ್ ಪಡೆದಿರುವ ಈ ಸ್ಥಾನಗಳು ಎಲ್ಲವೂ ನಾವು ಹಾಕಿರುವ ಭಿಕ್ಷೆಯಾಗಿದ್ದು, ಇದರಲ್ಲಿ ಸುಳ್ಳಿದ್ದರೆ, ಧರ್ಮಸ್ಥಳದಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ದರಿದ್ದೇವೆ ಅವರೂ ಸಹ ಬಂದು ಸತ್ಯ ಹೇಳಲಿ ಎಂದು ಸವಾಲು ಹಾಕಿದರು.

ಹಿರಿಯ ಮುಖಂಡ ರಂಗರಾಜು ಅವರಿಗೆ ಅದು ಇದು ಹೇಳಿ ತಲೆ ಕೆಡಿಸಿ ಪಕ್ಷ ಬಿಡಿಸಿದ್ದಾನೆ. ಬಿಜೆಪಿ ಶಾಸಕರನ್ನು ಇಂದ್ರ, ಚಂದ್ರ ಅಂತಾ ಹೇಳಿ ನಾಟಕವಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಅವರಿಗೂ ತಿರುಗು ಮುರುಗು ಮಾಡುತ್ತಾನೆ ನೋಡಿ ಎಂದು ಹೇಳಿದರು.

ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ

ನಾನು ಹತ್ತು ವರ್ಷ ಅಧಿಕಾರದಲ್ಲಿ ಇದ್ದಾಗ ತಾಲೂಕು ಅಭಿವೃದ್ಧಿಗೆ ಶ್ರಮಿಸಿದ್ದೇನೆ. ತಾಲೂಕು ಆಸ್ಪತ್ರೆಗೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಅದಿಕ್ಕಿಂತ ಏನು ಬೇಕು ನನಗೆ ಎಂದರು.

ನಾನು ಕ್ಷೇತ್ರದಲ್ಲಿ 10 ವರ್ಷಗಳ ಕಾಲ ಶಾಸಕನಾಗಿ ಕೆಲಸ ಮಾಡಿದ್ದು, ಯಾವತ್ತೂ ಇನ್ನೊಬ್ಬರನ್ನು ಹೀಯಾಳಿಸಿ ಮಾತನಾಡಿಲ್ಲ. ನಮ್ಮ ಹಿರಿಯ ರಾಜಕಾರಣಿಗಳು ಸಹ ಇಂತಹ ರಾಜಕೀಯ ಮಾಡಲ್ಲ. ಅಕಾರ ಇಲ್ಲದಿದ್ದರೂ ನನ್ನ ಸೇವೆ ಕ್ಷೇತ್ರದ ಜನರಿಗೆ ನಿರಂತರವಾಗಿರುತ್ತದೆ. ನಾನು ಶಾಸಕನಾಗಿದ್ದಾಗ ಇಎಸ್‍ಐ ಆಸ್ಪತ್ರೆ ನಿರ್ಮಾಣವಾಗಿದ್ದು, ಇದುವರೆವಿಗೂ ಅದು ಉದ್ಘಾಟನೆಯಾಗಿಲ್ಲ. ಸಾವಿರಾರು ಕೋಟಿ ರೂ ಕಾಮಗಾರಿಗಳನ್ನು ಮಾಡಿದ್ದರೂ ಸಹ ಫ್ಲೆಕ್ಸ್ ಮೂಲಕ ಪ್ರಚಾರ ಮಾಡಿಲ್ಲ. ಆದರೆ ಈಗಿನ ಶಾಸಕರು 5ರಿಂದ 10 ಲಕ್ಷ ಕೆಲಸ ಮಾಡಿಸಿದರೂ ಸಹ ಫ್ಲೆಕ್ಸ್ ಹಾಕಿಸಿಕೊಳ್ಳುತ್ತಾರೆ ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಡಿಸಿಎಂ ರಾಜೀನಾಮೆಗೆ ಬಿಜೆಪಿ ನಾಯಕರ ಒತ್ತಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಈ ಕುರಿತು ನ್ಯಾಯಾಂಗ ತನಿಖೆಗೆ ನಡೆಯುತ್ತಿದೆ. ತನಿಖೆಯಾದ ನಂತರ ಸರ್ಕಾರ ಸೂಕ್ತವಾದ ಕ್ರಮ ತೆಗೆದುಕೊಳ್ಳುತ್ತದೆ. ಈಗಾಗಲೇ ಇದರಲ್ಲಿ ಬೇಜವಾಬ್ದಾರಿಯಾಗಿ ಕೆಲಸ ಮಾಡಿದ ಪೊಲೀಸರನ್ನ ಅಮಾನತು ಮಾಡಲಾಗಿದೆ. ರಾಜೀನಾಮೆ ಕೊಡಿ ಅಂತಾ ಕೇಳಿದ್ರೆ, ಹಿಂದೆ‌ ನಡೆದ ಘಟನೆಗಳಲ್ಲಿ ಯಾಕೆ ಕೇಂದ್ರ ರಾಜ್ಯದವರು ರಾಜೀನಾಮೆ ಕೊಡಲಿಲ್ಲ, ಟೀಕೆ ಮಾಡುತ್ತಿರೋದು ವಿರೋಧ ಪಕ್ಷದವರ‌ ಕೆಲಸ ಮಾಡಲಿ ಎಂದರು.

ದೇಶದಲ್ಲಿ, ರಾಜ್ಯದಲ್ಲಿ ಹಲವಾರು ಇಂತಹ ಘಟನೆಗಳು ನಡೆದಿವೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ, ಸರ್ಕಸ್ ದುರಂತ, ತಿರುಪತಿಯಲ್ಲಿ ಆದ ಘಟನೆ ಇರಬಹುದು, ಇವೆಲ್ಲಾ ಆಕಸ್ಮಿಕವಾಗಿ ಹಾಗಿರೊಂತದ್ದು ಎಂದು ಹೇಳಿದರು.

ಸರ್ಕಾರಕ್ಕೆ ಒಂದು ಇತಿಮಿತಿ ಇದೆ, ಯಾರಾದ್ರು 25 ಲಕ್ಷ ಪರಿಹಾರ ಕೊಟ್ಟಿರೋ ಉದಾಹರಣೆ ಇದೆಯಾ, ಈಗಾಗಲೇ ಸರ್ಕಾರದ ಇತಿಮಿತಿಗಳಲ್ಲಿ ಮೃತಪಟ್ಟಿರೋರಿಗೆ ಪರಿಹಾರ ಘೋಷಿಸಲಾಗಿದೆ ಎಂದು ಹೇಳಿದರು.

ಈ ವೇಳೆ ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ತಿಪ್ಪೂರು ಬೈರೇಗೌಡ, ನಗರ ಘಟಕದ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇವತಿ, ನಗರಸಭಾ ಸದಸ್ಯ ಅಲ್ತಾಫ್, ಮುಖಂಡರಾದ ಆಂಜಿನ ಮೂರ್ತಿ, ಶರತ್, ನಾರಾಯಣ್, ಜವಾಜಿ ರಾಜೇಶ್, ಮಂಜುನಾಥ್ ಮೊದಲಾದವರು ಹಾಜರಿದ್ದರು.

Ramesh Babu

Journalist

Recent Posts

ನೊಂದವರ ನೋವಾ ನೋಯದವರೆತ್ತ ಬಲ್ಲರೋ……

ಸುಪ್ರಭಾತ.......... ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ…

1 hour ago

ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು- ಎಸ್ಪಿ ಸಿ.ಕೆ ಬಾಬಾ

ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ…

15 hours ago

ಗೊತ್ತಿರದ ವಿಷಯ ಕಲಿಯುವ ಕಡೆ ಗಮನ ಕೇಂದ್ರೀಕರಿಸಿ- ಡಾ. ಸೀಮಾ ಚೋಪ್ರಾ

"ನೀವು ಮಾಡುವ ಕೆಲಸವನ್ನು ಪ್ರೀತಿಸಿ. ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಕಲಿಯುವ ಕಡೆಗೆ ಗಮನ ಕೇಂದ್ರೀಕರಿಸಿ ಮತ್ತು ಜೀವನಪರ್ಯಂತ ಕಲಿಯುತ್ತಲೇ ಇರಿ,…

16 hours ago

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನಿಂದ ಕ್ರೂರವಾಗಿ ಹಲ್ಲೆ: ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು: ಒಬ್ಬ ಬಾಲಕ ಜೀವನ್ಮರಣ ಹೋರಾಟ

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…

1 day ago

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

2 days ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

2 days ago