ಕೋಲಾರ: ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿನ ಸಾರ್ವಜನಿಕರ ಮಹತ್ವದ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಯಾಕೆ ಇದರ ಹಿಂದಿರುವ ಹುನ್ನಾರವಾದರೂ ಏನು ಎಂಬುದನ್ನು ಸದನಕ್ಕೆ ತಿಳಿಸುವಂತೆ ವಿಧಾನ ಪರಿಷತ್ ಅಧಿವೇಶನದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಅವರು ಒತ್ತಾಯಿಸಿದರು.
ಕಳೆದ 2022-23ನೇ ಸಾಲಿನ ಅವಧಿಯಲ್ಲಿ ಸುಮಾರು 99 ಶಾಸಕರಿಗೆ ಅಭಿವೃದ್ಧಿ ಮಂಡಳಿಯಿಂದ ತಲಾ ಒಂದು ಕೋಟಿ ಅನುದಾನವನ್ನು ಕಾಮಗಾರಿಗಳಿಗೆ ನೀಡುವಂತೆ ಸೂಚಿಸಿದ್ದು, ಅದರಂತೆ ಇದುವರೆಗೂ ಯಾವುದೇ ರೀತಿ ಅನುದಾನವನ್ನು ಬಿಡುಗಡೆ ಮಾಡಿಲ್ಲ ಏಕೆ? ಸುಮಾರು 362 ಕೋಟಿ ಅನುದಾನವನ್ನು ಸರಕಾರದ ಅನುಮೋದನೆ ಇಲ್ಲದೇ ಬಳಸಿಕೊಳ್ಳುತ್ತಾರೆ ಎಂದರೆ ಮನವಿ ಕೊಟ್ಟ ಶಾಸಕರಿಗೆ ಬೆಲೆ ಇಲ್ಲವೇ? ಇದರ ಹಿಂದಿರುವ ಅಧಿಕಾರಿಗಳ ಮೇಲೆ ಕ್ರಮವಾದರೆ ಅಷ್ಟೇ ಸಾಲದು, ಸಮಗ್ರ ವರದಿ ಕೊಡಬೇಕು. ಇವತ್ತು ಕೇವಲ 35 ಲಕ್ಷ ಅನುದಾನ ಕೊಟ್ಟರೆ ಯಾವ ಶಾಸಕರಿಗೂ ಸಾಕಾಗುವುದಿಲ್ಲ ತೃಪ್ತಿಕರವಿಲ್ಲ, ಜೊತೆಗೆ ಎಂಎಲ್ಸಿಗಳಿಗೆ ಇಂತಹ ಅಭಿವೃದ್ಧಿ ಮಂಡಳಿಗಳಿಂದ ಅಷ್ಟೇ ಅನುದಾನ ಬರುತ್ತದೆ ಅದು ಬಿಟ್ಟು ಬೇರೆ ಕಡೆಯಿಂದ ಅನುದಾನ ಬರಲ್ಲ ಏಕೆ ಇಂತಹ ತಾರತಮ್ಯ ಎಂದು ಪ್ರಶ್ನೆ ಮಾಡಿದರು.
2023 24ನೇ ಸಾಲಿನ ಅವಧಿಗೆ 35ಲಕ್ಷಕ್ಕೆ ಕಾಮಗಾರಿಗಳನ್ನು ಸಲ್ಲಿಸಲು ಕೊರಿದ್ದು, ಈ ಹಿಂದೆ ನೀಡಿರುವ ಕಾಮಗಾರಿಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ, ಕಾಮಗಾರಿಗಳಿಗೆ ಅಡ್ಡಿಪಡಿಸದಂತೆ ಸರಿ ಪಡಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ಬೋಸುರಾಜ್, ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನ ಮೀರಿ ಅನುಮೋದನೆ ಇಲ್ಲದೇ ಸುಮಾರು 362 ಕೋಟಿ ಅನುದಾನದಲ್ಲಿ ಸುಮಾರು 2374 ಕಾಮಗಾರಿಗಳನ್ನು ನಡೆಸಲು ಪ್ರಸ್ತಾಪ ಮಾಡಲಾಗಿತ್ತು. ಇದಕ್ಕೆ ಯಾರು ತಪ್ಪು ಮಾಡಿದ್ದಾರೆ ಅವರನ್ನು ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಈಗಿರುವ 19 ಕೋಟಿ ಅನುದಾನದಲ್ಲಿ ಬಯಲುಸೀಮೆ ಪ್ರದೇಶದ ಶಾಸಕರಿಗೆ ತಲಾ 35 ಲಕ್ಷ ವನ್ನು ಅಧ್ಯತೆಯ ಕಾಮಗಾರಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಸದನದಲ್ಲಿ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…
ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ,…
ಮಂಗಳವಾರ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಬೆಂಬಲಿತ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರು ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಅವರು ಉಪರಾಷ್ಟ್ರಪತಿ…
ದೊಡ್ಡಬಳ್ಳಾಪುರ : 40 ಕೋಟಿ ಮೌಲ್ಯದ ಸರ್ಕಾರಿ ಆಸ್ತಿಯನ್ನ ಸರ್ಕಾರದ ವಶಕ್ಕೆ ಪಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ ಬಸವರಾಜುರವರ…