ಪ್ರೀತಿ-ಪ್ರೇಮ-ಮದುವೆ: ಸಂಸಾರ ನಡೆಸಲು ಅಡ್ಡ ಬಂದ ಜಾತಿ- ಗಂಡನಿಂದಲೇ ಯುವತಿ ಕೊಲೆಯಾಗಿರೋ ಶಂಕೆ

ಬಾಗೇಪಲ್ಲಿ: ಪ್ರೀತಿ- ಪ್ರೇಮ ಎಂಬ ಹೆಸರಿನ ನೆಪ ಹೇಳಿಕೊಂಡು ಪ್ರೀತಿಯ ನಾಟಕವಾಡಿ ದಲಿತ ಯುವತಿಯನ್ನ ತನ್ನ ಬುಟ್ಟಿಗೆ ಬೀಳಿಸಿಕೊಂಡು ಮದುವೆಯಾಗಿ ತನ್ನ ಆಸೆಯನ್ನೆಲ್ಲಾ ತೀರಿಸಿಕೊಂಡ ನಂತರ ಅಮಾಯಕ ಯುವತಿಯನ್ನು ನೇಣು ಬಿಗಿದು ಕೊಂದು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ಮೇಲ್ಜಾತಿ ಯುವಕನಿಂದ ನಡೆದಿದೆ.

ಚೇಳೂರು ಪೋಲೀಸ್ ಠಾಣೆಯ ಚಾಕವೇಲು ಗ್ರಾಮದ  ಎರಡನೇ ಬ್ಲಾಕ್ ನಿವಾಸಿ ಮಣಿಕಂಠ ಬಿನ್ ಲೇಟ್ ಶಂಕರಪ್ಪ ಎಂಬುವರು ಒಂದು ವರ್ಷದ ಹಿಂದೆ ಬಾಗೇಪಲ್ಲಿಗೆ ಗಾರ್ಮೆಟ್ಸ್‌ಗೆ ಬರುತ್ತಿದ್ದ ಆಂಧ್ರಪ್ರದೇಶದ ತನಕಲ್ಲು ಮಂಡಲ್ ರಾಚವಾರಪಲ್ಲಿ ಕೊಂಗರಾಳ್ಳ ಕಾಲೋನಿ ನಿವಾಸಿ ಕೊರಚ ಸಮುದಾಯಕ್ಕೆ ಸೇರಿದ ಗಂಗುಲಪ್ಪ ಅವರ ಮಗಳಾದ ಅನಿತಾ (23) ಅವರನ್ನ ಪ್ರೀತಿಯ ನಾಟಕವಾಡಿ ಪೋಷಕರು ಮತ್ತು ಸಂಬಂಧಿಕರ ವಿರೋಧದ ನಡುವೆ ಈ ಪ್ರೇಮಿಗಳಿಬ್ಬರೆ ದೇವಾಲಯದಲ್ಲಿ  ಮದುವೆಯಾಗಿದ್ದರು.

 ಮದುವೆಯಾದ ಸ್ವಲ್ಪ ದಿನಗಳ ಕಾಲ ಚಿಕ್ಕಬಳ್ಳಾಪುರ ಮತ್ತು ಅನಿತಾ ಅವರ ತವರೂರಾದ ಕೊಂಗರಾಳ್ಳ ಗ್ರಾಮದಲ್ಲಿ ವಾಸ ಮಾಡಿ ನಂತರ ಚಾಕವೇಲು ಗ್ರಾಮಕ್ಕೆ ಅನಿತಾ ಅವರನ್ನು ಕರೆ ತಂದಿದ್ದಾನೆ. ಮಣಿಕಂಠ ಮದುವೆಯಾದ ಅನಿತಾ ಪರಿಶಿಷ್ಠ ಜಾತಿಯವಳು ಎಂಬ ಕಾರಣವೊಡ್ಡಿ ನಾವು ಸವರ್ಣಿಯರು ನಮ್ಮ ಮನೆಗೆ ಸೇರಿಸುವುದಿಲ್ಲ ಎಂದು ಮಣಿಕಂಠನ ತಾಯಿ ಸಾವಿತ್ರಮ್ಮ, ಅಕ್ಕ ಕುಸುಮ, ಬಾವನಾದ ರಾಘವೇಂದ್ರ ಗಲಾಟೆ ಮಾಡಿ ಮನೆಯೊಳಗೆ ಸೇರಿಸಿಕೊಳ್ಳದ ಕಾರಣಕ್ಕೆ ಜೋಡಿಗಳು ಕಳೆದ ಆರು ತಿಂಗಳಿಂದ ಆರೋಪಿ ಮಣಿಕಂಠ ಅವರ ಹಳೆಯ ಮನೆಯಲ್ಲಿ ವಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಭೂ- ಮಾಪನ ಇಲಾಖೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಮಣಿಕಂಠ ಸಂಬಂಧಿಕರ ಮಾತು ಕೇಳಿ ಅವರ ಜೊತೆಗೂಡಿ ಪ್ರೀತಿಸಿ ಮದುವೆಯಾದ ಅನಿತಾಳಿಗೆ ನಾನಾ ವಿಧದಲ್ಲಿ ಚಿತ್ರ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

 ಅನಿತಾ ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ನರಕಯಾತನೆ ಅನುಭವಿಸಿತ್ತಿದ್ದರು, ಮಣಿಕಂಠ ಮತ್ತು ಆತನ ಸಂಬಂಧಿಕರು ಏನಾದರೂ ಮಾಡಿ ಅನಿತಾಳನ್ನು ಸಾಯಿಸಬೇಕೆಂದು ಹಲವು ಬಗೆಯಲ್ಲಿ ಹೊಂಚು ಹಾಕುತ್ತಿದ್ದರು ಎಂದು ಆರೋಪಿಸಲಾಗಿದೆ.

ಗುರುವಾರ ಸಂಜೆ ಹಳೇ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆಂದು ಚಾಕವೇಲು ಗ್ರಾಮದ ಸಾರ್ವಜನಿಕರು ಹೇಳಿದ್ದು, ನಾನು ಚಾಕವೇಲುಗೆ ಹೋಗಿ ನೋಡಿದಾಗ ನನ್ನ ಮಗಳು ಅನುಮಾನಸ್ಪದವಾಗಿ ಮೃತಪಟ್ಟಿದ್ದು ತನ್ನ ಮಗಳ ಸಾವಿಗೆ ಈ ನಾಲ್ಕು ಜನರೇ ಕಾರಣ, ಇವರ ವಿರುಧ್ದ ಕಾನೂನಿನ ಕ್ರಮ ಜರುಗಿಸಿ ಎಂದು ಮೃತಳ ತಾಯಿ ಡಿ.ನಾಗಮ್ಮ ಚೇಳೂರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಸದ್ಯ ಭೂ- ಮಾಪನ ಇಲಾಖೆಯ ಗುಮಾಸ್ತ ಮಣಿಕಂಠ ಚಾಕವೇಲು ಗ್ರಾಮದಲ್ಲಿರುವ ಪೊಲೀಸ್ ಚೌಕಿಯೊಳಗೆ ಗುರುವಾರ ರಾತ್ರಿ ಬಂದು ಶರಣಾಗಿದ್ದಾನೆ.

ರಾತ್ರಿ ಹತ್ತಾರು ವಾಹನಗಳಲ್ಲಿ ಮೃತ ಅನಿತಾಳ ಸಂಬಂಧಿಕರು ಹಾಗೂ ಗ್ರಾಮಸ್ಥರು ಸುಮಾರು 50 ರಿಂದ 60 ಜನರಿದ್ದ ಆಂಧ್ರಪ್ರದೇಶದ ತನಕಲ್ಲು ಗ್ರಾಮದಿಂದ ಬಂದು ಚಾಕವೇಲು ಗ್ರಾಮದ ಪೊಲೀಸ್ ಚೌಕಿಗೆ ನುಗ್ಗಿ ತನ್ನ ಮಗಳನ್ನ ಸಾಯಿಸಿರುವ ಇವನನ್ನು ಇಲ್ಲೇ ಸಾಯಿಸುತ್ತೇವೆಂದು ಗಲಾಟೆ ಮಾಡಿ ಚೌಕಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ, ಗಲಾಟೆ ತಿಳಿಗೊಳಿಸಲು ಪೊಲೀಸರು ಹರ ಸಾಹಸ ಮಾಡಿದರಾದರೂ  ಪೊಲೀಸರಿಗೆ ಕೇರ್ ಮಾಡದ ಆಂಧ್ರ ಜನರು ಚೌಕಿಗೆ ನುಗ್ಗಲು ಯತ್ನಿಸಿದರು ಎನ್ನಲಾಗಿದೆ.

 ಇದೇ ಸಮಯಕ್ಕೆ ಚಿಕ್ಕಬಳ್ಳಾಪುರ ಡಿವೈಎಸ್ಪಿ  ಶಿವಕುಮಾರ್ ಅವರು  ದಿಢೀರನೇ ಭೇಟಿ ನೀಡಿ ವಸ್ತು ಸ್ಥಿತಿ ಕಣ್ಣಾರೇ ಕಂಡು ಪರಸ್ಥಿತಿ ತಿಳಿಗೊಳಿಸಿ ನಿಮಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿ ರೊಚ್ಚಿ ಗೆದ್ದ ಜನರನ್ನು ಸಮಾಧಾನ ಮಾಡಿದ್ದಾರೆ.

 ನಂತರ ಆರೋಪಿಯನ್ನು ಪೊಲೀಸ್ ಜೀಪ್‍ನಲ್ಲಿ ಚಿಕ್ಕಬಳ್ಳಾಪುರ ಜೈಲಿಗೆ ಕಳುಹಿಸುತ್ತಿರುವಾಗ ನೂರಾರು ಜನರ ಗುಂಪು ಪೊಲೀಸ್ ಜೀಪಿಗೆ ಅಡ್ಡ ಹೋಗಿ ಮುಗಿಬಿದ್ದ ಜನರು ಪೊಲೀಸ್ ವಾಹನವನ್ನು ಜಖಂಗೊಳಿಸಲು ಪ್ರಯತ್ನಿಸಿದ್ದಾರೆ.

ಪೊಲೀಸರ ಸಮಯ ಪ್ರಜ್ಞೆಯಿಂದ ನಡೆಯಬಹುದಾದ ಅನಾಹುತವನ್ನು ತಪ್ಪಿಸಿ ಆರೋಪಿ ಮಣಿಕಂಠನನ್ನು ಚಿಕ್ಕಬಳ್ಳಾಪುರ ಜೈಲಿಗೆ ಕಳುಹಿಸಿದ್ದಾರೆ.

ಅನಿತಾಳ ತಾಯಿ ನಾಗಮ್ಮ ಅವರು ಸಲ್ಲಿಸಿರುವ ದೂರಿನ‌ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಚೇಳೂರು ಸಬ್‌ ಇನ್ಸ್ ಪೆಕ್ಟರ್ ಜಿ.ಜಿ. ನರಸಿಂಹ ನಾಯುಡು. ತನಿಖೆ ಮುಂದುವರಿಸಿದ್ದಾರೆ.

Ramesh Babu

Journalist

Recent Posts

ಮೆಳೇಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ: ರಾಮ ಲಕ್ಷ್ಮಣರಿಗೆ ಅಳವಡಿಸಿದ್ದ ಬೆಳ್ಳಿ ಕಿರೀಟ ಕದ್ದೊಯ್ದ ಐನಾತಿಗಳು

ಮುಜರಾಯಿ ಇಲಾಖೆಗೆ ಒಳಪಡುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮ ಲಕ್ಷ್ಮಣರಿಗೆ ಅಳವಡಿಸಿದ್ದ ಬೆಳ್ಳಿ ಕಿರೀಟವನ್ನು ಕಳ್ಳರು ಕದ್ದೊಯ್ದಿರುವ ಘಟನೆ ಕಳೆದ…

13 minutes ago

ಮಾರಮ್ಮ ದೇವಿಯ ಮೂರು ಚಿನ್ನದ ತಾಳಿ, ನಾಲ್ಕು ಗುಂಡುಗಳನ್ನ ಕದ್ದ ಖದೀಮರು

ದೊಡ್ಡಬಳ್ಳಾಪುರ ತಾಲೂಕಿನ ಕಲ್ಲುದೇವನಹಳ್ಳಿ ಮಾರಮ್ಮ ದೇವಿ ದೇವಸ್ಥಾನದಲ್ಲಿ ಕಳೆದ ರಾತ್ರಿ ಕಳ್ಳತನ‌ ನಡೆದಿದೆ.. ಕಲ್ಲುದೇವನಹಳ್ಳಿ ಗ್ರಾಮದ ಮಧ್ಯ ಭಾಗದಲ್ಲಿರುವ ಮಾರಮ್ಮ…

1 hour ago

T20 World Cup: ವಿಶ್ವ ವಿಜೇತ ಟೀಂ ಇಂಡಿಯಾಗೆ ದಾಖಲೆಯ ಮೂರನೇ T20 ವಿಶ್ವಕಪ್ ಕಿರೀಟ

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಅದ್ಭುತವಾದ…

12 hours ago

2026-27ನೇ ಸಾಲಿನ ರಾಜ್ಯ ಬಜೆಟ್: ಬಜೆಟ್ ಬಗ್ಗೆ ಶಾಸಕ ಧೀರಜ್ ಮುನಿರಾಜ್ ಏನಂದ್ರು ಗೊತ್ತಾ….? ಅವರ ಪ್ರತಿಕ್ರಿಯೆ ಇಲ್ಲಿದೆ ನೋಡಿ….

ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಎಲ್ಲಾ ಬಜೆಟ್ ಗಳ ಪೈಕಿ 2026-27ರ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ. ಈ ಬಜೆಟ್ ನಲ್ಲಿ ಹೊಸ…

21 hours ago

ವಸತಿ ಶಾಲಾ ಸಹಪಾಠಿಗಳ ಮೇಲೆ ಕಬ್ಬಿಣದ ಸರಳು, ಸ್ಕ್ರೂಡ್ರೈವರ್‌, ಚಾಕುವಿನಿಂದ ದಾಳಿ: ಒಬ್ಬ ವಿದ್ಯಾರ್ಥಿ ಸಾವು: 8 ಮಂದಿಗೆ ಗಾಯ

ಬಳ್ಳಾರಿ ನಗರದ "ಗುರುಕುಲ ವಸತಿ ಶಾಲೆ"ಯಲ್ಲಿ ಶನಿವಾರ ರಾತ್ರಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಕಬ್ಬಿಣದ ಸರಳು, ಸ್ಕ್ರೂಡ್ರೈವರ್‌, ಚಾಕುವಿನಿಂದ…

1 day ago

ತಮಿಳುನಾಡಿನ ಮಹಿಳೆಯರಿಗೆ ಬಂಪರ್‌ ಕೊಡುಗೆ ಘೋಷಿಸಿ ಹೆಣ್ಮಕ್ಕಳ ಕಣ್ಮಣಿಯಾಗಲು ಹೊರಟ ನಟ, ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್

ನಟಿ ತ್ರಿಷಾ ಜತೆ ಅಫೇರ್‌ ಆರೋಪ, ಹೆಂಡ್ತಿ ಡಿವೋರ್ಸ್‌ ಗೆ ಅರ್ಜಿ ವಿಚಾರ, ವಿಪಕ್ಷಗಳ ಟೀಕಾ ಪ್ರಹಾರ, ಸೋಷಿಯಲ್‌ ಮೀಡಿಯಾದಲ್ಲಿ…

1 day ago