ತಮಿಳುನಾಡಿನ ಮಹಿಳೆಯರಿಗೆ ಬಂಪರ್‌ ಕೊಡುಗೆ ಘೋಷಿಸಿ ಹೆಣ್ಮಕ್ಕಳ ಕಣ್ಮಣಿಯಾಗಲು ಹೊರಟ ನಟ, ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್

ನಟಿ ತ್ರಿಷಾ ಜತೆ ಅಫೇರ್‌ ಆರೋಪ, ಹೆಂಡ್ತಿ ಡಿವೋರ್ಸ್‌ ಗೆ ಅರ್ಜಿ ವಿಚಾರ, ವಿಪಕ್ಷಗಳ ಟೀಕಾ ಪ್ರಹಾರ, ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌, ಜಂಟಲ್‌ಮನ್‌ ಖ್ಯಾತಿಗೆ ಕಳಂಕ, ಹೆಣ್ಮಕ್ಕಳ ಸಿಟ್ಟು.. ಇಷ್ಟೆಲ್ಲ ವಿರೋಧದ ಅಲೆಯನ್ನು ಒಂದೇ ಏಟಿಗೆ ಬಡಿದು ಹಾಕಿದ್ದಾರೆ, ತಮಿಳು ನಟ, ಟಿವಿಕೆ ಪಕ್ಷದ ಅಧ್ಯಕ್ಷ ದಳಪತಿ ವಿಜಯ್‌.

ತಮಿಳುನಾಡಿನ ಮಹಿಳೆಯರಿಗೆ ಬಂಪರ್‌ ಕೊಡುಗೆ ಘೋಷಿಸುವ ಮೂಲಕ, ಹೆಣ್ಮಕ್ಕಳ ಕಣ್ಮಣಿಯಾಗಲು ಹೊರಟ್ಟಿದ್ದಾರೆ‌ ವಿಜಯ್.

ಆಡಳಿತಾರೂಢ ಡಿಎಂಕೆ ಪಕ್ಷ, ಉಚಿತಗಳನ್ನು ಘೋಷಿಸ್ತಿದ್ದಂತೆ ಎಚ್ಚೆತ್ತ ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್‌ ಸಹ ನಾನೇನು ಕಮ್ಮಿ ಇಲ್ಲ ಅನ್ನೋ ಹಾಗೇ ಉಚಿತಗಳ ಮಹಾಪೂರವನ್ನೇ ಹರಿಸಿದ್ದಾರೆ.

1.  ಮಹಿಳೆಗೆ 60 ವರ್ಷ ತುಂಬುವವರೆಗೂ ತಿಂಗಳಿಗೆ ತಲಾ 2500 ರೂ.

2. ಪ್ರತಿ ವರ್ಷಕ್ಕೆ 6 ಉಚಿತ ಗ್ಯಾಸ್‌ ಸಿಲಿಂಡರ್‌

3. ಮದುವೆಯಾಗುವ ಹುಡುಗಿಗೆ 8 ಗ್ರಾಂ ಚಿನ್ನ, ರೇಷ್ಮೆ ಸೀರೆ

4. ಹೆಣ್ಣು ಮಗು ಹುಟ್ಟಿದರೆ ಚಿನ್ನದ ಉಂಗುರ

5. ತಮಿಳುನಾಡಿನಾದ್ಯಂತ ಮಹಿಳೆಯರಿಗೆ ಸರಕಾರಿ ಬಸ್‌ ಗಳಲ್ಲಿ ಪ್ರಯಾಣ ಉಚಿತ

6. ಶಾಲಾ, ಕಾಲೇಜುಗಳಲ್ಲಿ ಹೆಣ್ಮಕ್ಕಳಿಗೆ ಉಚಿತ ನ್ಯಾಪ್ಕಿನ್‌

7. ಮಹಿಳಾ ದೌರ್ಜನ್ಯ ಕೇಸ್‌ಗಳ ತ್ವರಿತ ವಿಚಾರಣೆಗೆ ಫಾಸ್ಟ್‌ ಟ್ರಾಕ್‌ ಕೋರ್ಟ್‌ ಸ್ಥಾಪನೆ..

ಹೀಗೇ ಇನ್ನೂ ಹಲವು ಮಹಿಳಾ ಪರ ಯೋಜನೆಗಳನ್ನು ಘೋಷಿಸಿದ್ದಾರೆ ವಿಜಯ್‌.

ತಿಂಗಳಿಗೆ 2500 ರೂ. ಕೊಡೋ ಯೋಜನೆಯಿಂದ ಸರಕಾರಿ ಮಹಿಳಾ ಉದ್ಯೋಗಿಗಳನ್ನು ಹೊರಗಿಟ್ಟಿದ್ದಾರೆ. ಕರ್ನಾಟಕದಲ್ಲಿ ಶಕ್ತಿ ಯೋಜನೆ ಸಕ್ಸಸ್‌ ಆಗಿದ್ದೇ ಆಗಿದ್ದು, ಆಂಧ್ರ ಬಳಿಕ ವಿಜಯ್‌ ಸಹ, ಸರಕಾರಿ ಬಸ್‌ನಲ್ಲಿ ಲೇಡಿಸ್‌ಗೆ ಫ್ರೀ ಅಂದಿದ್ದಾರೆ.

ಸ್ಟಾಲಿನ್‌ ನೇತೃತ್ವದ ಡಿಎಂಕೆ, ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂ. ಘೋಷಿಸಿದ್ರೆ, ವಿಜಯ್‌ 2500 ರೂ. ಪ್ರಕಟಿಸಿ, ಡಿಎಂಕೆಗೆ ಸಡ್ಡು ಹೊಡೆದಿದ್ದಾರೆ.

ಡಿಎಂಕೆ, 6 ರಿಂದ 12ನೇ ಕ್ಲಾಸ್‌ ಓದೋ ಹೆಣ್ಮಕ್ಕಳಿಗೆ ತಿಂಗಳಿಗೆ ತಲಾ 1 ಸಾವಿರ ಕೊಡ್ತೀವಿ ಅಂದ್ರೆ, ವಿಜಯ್ ಒಂದು ಹೆಜ್ಜೆ ಮುಂದೆ ಹೋಗಿ, ಸ್ಕೂಲ್ ಹೋಗೋ ಹೆಣ್ಮಕ್ಕಳ ತಾಯಂದಿರಿಗೆ ವಾರ್ಷಿಕ 1500 ರೂ. ಘೋಷಿಸಿದ್ದಾರೆ.

ಹೆಣ್ಮಕ್ಕಳ ಗೋಲ್ಡ್‌ ವೀಕ್ ನೆಸ್ ಅರ್ಥ ಮಾಡ್ಕೊಂಡಿರೋ ವಿಜಯ್, ಚಿನ್ನದ ದರ ಏರುತ್ತಿದ್ರೂ ತಲೆಕೆಡಿಸಿಕೊಳ್ಳದೇ ಮದುಮಗಳಿಗೆ 8 ಗ್ರಾಂ ಚಿನ್ನ, ಹುಟ್ಟೋ ಮಗುವಿಗೆ ಉಂಗುರ ಕೊಡೋ ಆಸೆ ಹುಟ್ಟಿಸಿದ್ದಾರೆ.

ವಿಜಯ್‌ ಘೋಷಿಸಿದ ಉಚಿತ ಯೋಜನೆಗಳು ತಮಿಳುನಾಡಿನಲ್ಲಿ ಭಾರೀ‌ ಸದ್ದು ಮಾಡುತ್ತಿದೆ. ಪರ- ವಿರೋಧದ ಮಾತುಗಳ ಜಟಾಪಟಿ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲೂ ಬಿಸಿಬಿಸಿ ಚರ್ಚೆ..

ತಮಿಳರ ವೋಟ್‌ಗಾಗಿ ಹತ್ತು ಹಲವು ಉಚಿತ ಯೋಜನೆಗಳನ್ನು ಘೋಷಿಸಿ ಡಿಎಂಕೆ- ಡಿವಿಕೆ, ನೇರಾ ನೇರ ಫೈಟ್‌ಗಿಳಿದಿದೆ.

ನಾನೇ ಸಿಎಂ ಅನ್ನೋ ಆಸೆಯಲ್ಲಿರೋ ನಟ ವಿಜಯ್‌, ಪತ್ನಿ ಜತೆಗಿನ ಡಿವೋರ್ಸ್‌ ವಿವಾದ ತನ್ನ ವರ್ಚಸ್ಸಿಗೆ ಘಾಸಿ ಮಾಡುವ ಭೀತಿಯಲ್ಲಿ, ಮಹಿಳೆಯರಿಗೆ ಚಿನ್ನ, ದುಡ್ಡಿನ ಕನಸು ಭಿತ್ತಿದ್ದಾರೆ.

ಆದ್ರೆ, ಚಿನ್ನದ ಮಾತು ವಿಜಯ್ ಗೆ ವೋಟ್‌ ಆಗಿ ಬದಲಾಗುತ್ತಾ? ನೋಡ್ಬೇಕು.

ಉಚಿತ ಯೋಜನೆಗಳ ಬಗ್ಗೆ ಇತ್ತೀಚಿಗಷ್ಟೇ ಸುಪ್ರೀಂಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ರೂ, ರಾಜಕೀಯ ಪಕ್ಷಗಳು ಕ್ಯಾರೆ ಅನ್ನುತ್ತಿಲ್ಲ ಅನ್ನೋದು ತಮಿಳುನಾಡು ವಿಚಾರದಲ್ಲಿ ದೃಢಪಟ್ಟಿದೆ.

Ramesh Babu

Journalist

Recent Posts

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

5 hours ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

7 hours ago

ಮನೆ ಮಾಲೀಕರ ಮುಂದೆಯೇ ಮನೆ ದೋಚಿ ಪರಾರಿಯಾಗಿದ್ದ ಕಳ್ಳ ಲಾಕ್‌!

ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…

7 hours ago

ಕೋಳಿಫಾರ್ಮ್‌ಗೆ ಚಿರತೆ ದಾಳಿ ಶಂಕೆ: 950ಕ್ಕೂ ಅಧಿಕ ಕೋಳಿಮರಿಗಳು ಬಲಿ!

  ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…

8 hours ago

ಯೋಜನಾ ಪ್ರಾಧಿಕಾರಕ್ಕೆ ಮುನಿರಾಜು ಆಯ್ಕೆ: ಯುವ ಕಾಂಗ್ರೆಸ್‌ನಿಂದ ಆತ್ಮೀಯ ಅಭಿನಂದನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…

12 hours ago

ವಿಯೆಟ್ನಾಂನಿಂದ 1.38 ಕೋಟಿ ಮೌಲ್ಯದ ಹೈಡ್ರೋಫೋನಿಕ್ ಗಾಂಜಾ ಸಾಗಾಟ: ಆರೋಪಿ ಬಂಧನ

ದೇವನಹಳ್ಳಿ: ವಿಯೆಟ್ನಾಂನ ಹಾನೊಯ್ ನಗರದಿಂದ ಬೆಂಗಳೂರಿಗೆ ವಿಮಾನದ ಮೂಲಕ ಹೈಡ್ರೋಫೋನಿಕ್ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಯನ್ನು ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ…

14 hours ago