ತಮಿಳುನಾಡಿನ ಮಹಿಳೆಯರಿಗೆ ಬಂಪರ್‌ ಕೊಡುಗೆ ಘೋಷಿಸಿ ಹೆಣ್ಮಕ್ಕಳ ಕಣ್ಮಣಿಯಾಗಲು ಹೊರಟ ನಟ, ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್

ನಟಿ ತ್ರಿಷಾ ಜತೆ ಅಫೇರ್‌ ಆರೋಪ, ಹೆಂಡ್ತಿ ಡಿವೋರ್ಸ್‌ ಗೆ ಅರ್ಜಿ ವಿಚಾರ, ವಿಪಕ್ಷಗಳ ಟೀಕಾ ಪ್ರಹಾರ, ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌, ಜಂಟಲ್‌ಮನ್‌ ಖ್ಯಾತಿಗೆ ಕಳಂಕ, ಹೆಣ್ಮಕ್ಕಳ ಸಿಟ್ಟು.. ಇಷ್ಟೆಲ್ಲ ವಿರೋಧದ ಅಲೆಯನ್ನು ಒಂದೇ ಏಟಿಗೆ ಬಡಿದು ಹಾಕಿದ್ದಾರೆ, ತಮಿಳು ನಟ, ಟಿವಿಕೆ ಪಕ್ಷದ ಅಧ್ಯಕ್ಷ ದಳಪತಿ ವಿಜಯ್‌.

ತಮಿಳುನಾಡಿನ ಮಹಿಳೆಯರಿಗೆ ಬಂಪರ್‌ ಕೊಡುಗೆ ಘೋಷಿಸುವ ಮೂಲಕ, ಹೆಣ್ಮಕ್ಕಳ ಕಣ್ಮಣಿಯಾಗಲು ಹೊರಟ್ಟಿದ್ದಾರೆ‌ ವಿಜಯ್.

ಆಡಳಿತಾರೂಢ ಡಿಎಂಕೆ ಪಕ್ಷ, ಉಚಿತಗಳನ್ನು ಘೋಷಿಸ್ತಿದ್ದಂತೆ ಎಚ್ಚೆತ್ತ ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್‌ ಸಹ ನಾನೇನು ಕಮ್ಮಿ ಇಲ್ಲ ಅನ್ನೋ ಹಾಗೇ ಉಚಿತಗಳ ಮಹಾಪೂರವನ್ನೇ ಹರಿಸಿದ್ದಾರೆ.

1.  ಮಹಿಳೆಗೆ 60 ವರ್ಷ ತುಂಬುವವರೆಗೂ ತಿಂಗಳಿಗೆ ತಲಾ 2500 ರೂ.

2. ಪ್ರತಿ ವರ್ಷಕ್ಕೆ 6 ಉಚಿತ ಗ್ಯಾಸ್‌ ಸಿಲಿಂಡರ್‌

3. ಮದುವೆಯಾಗುವ ಹುಡುಗಿಗೆ 8 ಗ್ರಾಂ ಚಿನ್ನ, ರೇಷ್ಮೆ ಸೀರೆ

4. ಹೆಣ್ಣು ಮಗು ಹುಟ್ಟಿದರೆ ಚಿನ್ನದ ಉಂಗುರ

5. ತಮಿಳುನಾಡಿನಾದ್ಯಂತ ಮಹಿಳೆಯರಿಗೆ ಸರಕಾರಿ ಬಸ್‌ ಗಳಲ್ಲಿ ಪ್ರಯಾಣ ಉಚಿತ

6. ಶಾಲಾ, ಕಾಲೇಜುಗಳಲ್ಲಿ ಹೆಣ್ಮಕ್ಕಳಿಗೆ ಉಚಿತ ನ್ಯಾಪ್ಕಿನ್‌

7. ಮಹಿಳಾ ದೌರ್ಜನ್ಯ ಕೇಸ್‌ಗಳ ತ್ವರಿತ ವಿಚಾರಣೆಗೆ ಫಾಸ್ಟ್‌ ಟ್ರಾಕ್‌ ಕೋರ್ಟ್‌ ಸ್ಥಾಪನೆ..

ಹೀಗೇ ಇನ್ನೂ ಹಲವು ಮಹಿಳಾ ಪರ ಯೋಜನೆಗಳನ್ನು ಘೋಷಿಸಿದ್ದಾರೆ ವಿಜಯ್‌.

ತಿಂಗಳಿಗೆ 2500 ರೂ. ಕೊಡೋ ಯೋಜನೆಯಿಂದ ಸರಕಾರಿ ಮಹಿಳಾ ಉದ್ಯೋಗಿಗಳನ್ನು ಹೊರಗಿಟ್ಟಿದ್ದಾರೆ. ಕರ್ನಾಟಕದಲ್ಲಿ ಶಕ್ತಿ ಯೋಜನೆ ಸಕ್ಸಸ್‌ ಆಗಿದ್ದೇ ಆಗಿದ್ದು, ಆಂಧ್ರ ಬಳಿಕ ವಿಜಯ್‌ ಸಹ, ಸರಕಾರಿ ಬಸ್‌ನಲ್ಲಿ ಲೇಡಿಸ್‌ಗೆ ಫ್ರೀ ಅಂದಿದ್ದಾರೆ.

ಸ್ಟಾಲಿನ್‌ ನೇತೃತ್ವದ ಡಿಎಂಕೆ, ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂ. ಘೋಷಿಸಿದ್ರೆ, ವಿಜಯ್‌ 2500 ರೂ. ಪ್ರಕಟಿಸಿ, ಡಿಎಂಕೆಗೆ ಸಡ್ಡು ಹೊಡೆದಿದ್ದಾರೆ.

ಡಿಎಂಕೆ, 6 ರಿಂದ 12ನೇ ಕ್ಲಾಸ್‌ ಓದೋ ಹೆಣ್ಮಕ್ಕಳಿಗೆ ತಿಂಗಳಿಗೆ ತಲಾ 1 ಸಾವಿರ ಕೊಡ್ತೀವಿ ಅಂದ್ರೆ, ವಿಜಯ್ ಒಂದು ಹೆಜ್ಜೆ ಮುಂದೆ ಹೋಗಿ, ಸ್ಕೂಲ್ ಹೋಗೋ ಹೆಣ್ಮಕ್ಕಳ ತಾಯಂದಿರಿಗೆ ವಾರ್ಷಿಕ 1500 ರೂ. ಘೋಷಿಸಿದ್ದಾರೆ.

ಹೆಣ್ಮಕ್ಕಳ ಗೋಲ್ಡ್‌ ವೀಕ್ ನೆಸ್ ಅರ್ಥ ಮಾಡ್ಕೊಂಡಿರೋ ವಿಜಯ್, ಚಿನ್ನದ ದರ ಏರುತ್ತಿದ್ರೂ ತಲೆಕೆಡಿಸಿಕೊಳ್ಳದೇ ಮದುಮಗಳಿಗೆ 8 ಗ್ರಾಂ ಚಿನ್ನ, ಹುಟ್ಟೋ ಮಗುವಿಗೆ ಉಂಗುರ ಕೊಡೋ ಆಸೆ ಹುಟ್ಟಿಸಿದ್ದಾರೆ.

ವಿಜಯ್‌ ಘೋಷಿಸಿದ ಉಚಿತ ಯೋಜನೆಗಳು ತಮಿಳುನಾಡಿನಲ್ಲಿ ಭಾರೀ‌ ಸದ್ದು ಮಾಡುತ್ತಿದೆ. ಪರ- ವಿರೋಧದ ಮಾತುಗಳ ಜಟಾಪಟಿ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲೂ ಬಿಸಿಬಿಸಿ ಚರ್ಚೆ..

ತಮಿಳರ ವೋಟ್‌ಗಾಗಿ ಹತ್ತು ಹಲವು ಉಚಿತ ಯೋಜನೆಗಳನ್ನು ಘೋಷಿಸಿ ಡಿಎಂಕೆ- ಡಿವಿಕೆ, ನೇರಾ ನೇರ ಫೈಟ್‌ಗಿಳಿದಿದೆ.

ನಾನೇ ಸಿಎಂ ಅನ್ನೋ ಆಸೆಯಲ್ಲಿರೋ ನಟ ವಿಜಯ್‌, ಪತ್ನಿ ಜತೆಗಿನ ಡಿವೋರ್ಸ್‌ ವಿವಾದ ತನ್ನ ವರ್ಚಸ್ಸಿಗೆ ಘಾಸಿ ಮಾಡುವ ಭೀತಿಯಲ್ಲಿ, ಮಹಿಳೆಯರಿಗೆ ಚಿನ್ನ, ದುಡ್ಡಿನ ಕನಸು ಭಿತ್ತಿದ್ದಾರೆ.

ಆದ್ರೆ, ಚಿನ್ನದ ಮಾತು ವಿಜಯ್ ಗೆ ವೋಟ್‌ ಆಗಿ ಬದಲಾಗುತ್ತಾ? ನೋಡ್ಬೇಕು.

ಉಚಿತ ಯೋಜನೆಗಳ ಬಗ್ಗೆ ಇತ್ತೀಚಿಗಷ್ಟೇ ಸುಪ್ರೀಂಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ರೂ, ರಾಜಕೀಯ ಪಕ್ಷಗಳು ಕ್ಯಾರೆ ಅನ್ನುತ್ತಿಲ್ಲ ಅನ್ನೋದು ತಮಿಳುನಾಡು ವಿಚಾರದಲ್ಲಿ ದೃಢಪಟ್ಟಿದೆ.

Ramesh Babu

Journalist

Recent Posts

ಪ್ರಮಾಣ ವಚನ ಅಥವಾ ಪ್ರತಿಜ್ಞಾ ವಿಧಿ……. ಇವು ಆತ್ಮಸಾಕ್ಷಿಯ ನುಡಿಗಳೇ – ಸಂವಿಧಾನಾತ್ಮಕ ಕರ್ತವ್ಯವೇ – ಒಂದು ಒಣ ವಿಧಿ ವಿಧಾನವೇ…….

ನಡೆ ನುಡಿ - ಮಾತು ಕೃತಿಯ ನಡುವೆ ದೊಡ್ಡ ಕಂದರ ಸೃಷ್ಠಿಯಾಗಿರುವ ಸನ್ನಿವೇಶದಲ್ಲಿ ಪ್ರಮಾಣ ವಚನ ಒಂದು ಅಧೀಕೃತ ಮತ್ತು…

3 hours ago

ದೊಡ್ಡಬಳ್ಳಾಪುರ ತಾಲೂಕು ಯಾದವ ಯುವ ವೇದಿಕೆಗೆ ನೂತನ ಪದಾಧಿಕಾರಿಗಳ ನೇಮಕ

ದೊಡ್ಡಬಳ್ಳಾಪುರ: ದೇವನಹಳ್ಳಿಯಲ್ಲಿರುವ ಕರ್ನಾಟಕ ಯಾದವ ಯುವ ವೇದಿಕೆಯ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಯಾದವ ಯುವ ವೇದಿಕೆ ದೊಡ್ಡಬಳ್ಳಾಪುರ…

16 hours ago

‘ಕೆಐಎಡಿಬಿ ಮಧ್ಯವರ್ತಿ ಸಂಸ್ಥೆ’: ಜೂ.5ಕ್ಕೆ ಭೂಸ್ವಾಧೀನ ವಿರೋಧಿಸಿ ರೈತರ ವಿಧಾನಸೌಧ ಚಲೋ: ರೈತ ಸಂಘದ ಜಿಲ್ಲಾ ಘಟಕ ಬೆಂಬಲ

ದೊಡ್ಡಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಜಂಗಮ ಕೋಟೆಯ 1885 ಎಕರೆ ಭೂಸ್ವಾಧೀನ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು…

17 hours ago

ಇಂಧನ ಬೆಲೆ ಏರಿಕೆ ಖಂಡಿಸಿ ಕನ್ನಡ ಪಕ್ಷ ಪ್ರತಿಭಟನೆ

  ದೊಡ್ಡಬಳ್ಳಾಪುರ: ಪದೇ ಪದೇ ಏರಿಕೆಯಾಗುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿ ಕನ್ನಡ…

17 hours ago

ಘನ ತ್ಯಾಜ್ಯ ಸಮರ್ಪಕ ನಿರ್ವಹಣೆಗೆ ಸಾರ್ವಜನಿಕರ ಸಹಕಾರ ಅಗತ್ಯ- ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಕರೆ

ಘನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲು ಮನೆಗಳಲ್ಲಿ ಪ್ರತ್ಯೇಕವಾಗಿ ವಿಂಗಡಿಸಿ ನಗರಸಭೆ, ಪುರಸಭೆಯ ತ್ಯಾಜ್ಯ ಸಂಗ್ರಹ ವಾಹನಗಳಿಗೆ ಹಸ್ತಾಂತರಿಸುವ ಮೂಲಕ…

17 hours ago

ಮೀನಿನ ಬಲೆಯಲ್ಲಿ ಸಿಲುಕಿ ಒದ್ದಾಡಿದ ಬೃಹತ್ ಹೆಬ್ಬಾವು; ಗ್ರಾಮಸ್ಥರಿಂದ ರಕ್ಷಣೆ

ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಲುಕುಡಿ ಬೆಟ್ಟದ ತಪ್ಪಲಿನ ಮಾಡೇಶ್ವರ ಗ್ರಾಮದ ಸಮೀಪ ಬೃಹತ್ ಗಾತ್ರದ ಹೆಬ್ಬಾವು ಮೀನಿನ ಹಳೆಯ…

19 hours ago