ನಟಿ ತ್ರಿಷಾ ಜತೆ ಅಫೇರ್ ಆರೋಪ, ಹೆಂಡ್ತಿ ಡಿವೋರ್ಸ್ ಗೆ ಅರ್ಜಿ ವಿಚಾರ, ವಿಪಕ್ಷಗಳ ಟೀಕಾ ಪ್ರಹಾರ, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್, ಜಂಟಲ್ಮನ್ ಖ್ಯಾತಿಗೆ ಕಳಂಕ, ಹೆಣ್ಮಕ್ಕಳ ಸಿಟ್ಟು.. ಇಷ್ಟೆಲ್ಲ ವಿರೋಧದ ಅಲೆಯನ್ನು ಒಂದೇ ಏಟಿಗೆ ಬಡಿದು ಹಾಕಿದ್ದಾರೆ, ತಮಿಳು ನಟ, ಟಿವಿಕೆ ಪಕ್ಷದ ಅಧ್ಯಕ್ಷ ದಳಪತಿ ವಿಜಯ್.
ತಮಿಳುನಾಡಿನ ಮಹಿಳೆಯರಿಗೆ ಬಂಪರ್ ಕೊಡುಗೆ ಘೋಷಿಸುವ ಮೂಲಕ, ಹೆಣ್ಮಕ್ಕಳ ಕಣ್ಮಣಿಯಾಗಲು ಹೊರಟ್ಟಿದ್ದಾರೆ ವಿಜಯ್.
ಆಡಳಿತಾರೂಢ ಡಿಎಂಕೆ ಪಕ್ಷ, ಉಚಿತಗಳನ್ನು ಘೋಷಿಸ್ತಿದ್ದಂತೆ ಎಚ್ಚೆತ್ತ ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ಸಹ ನಾನೇನು ಕಮ್ಮಿ ಇಲ್ಲ ಅನ್ನೋ ಹಾಗೇ ಉಚಿತಗಳ ಮಹಾಪೂರವನ್ನೇ ಹರಿಸಿದ್ದಾರೆ.
1. ಮಹಿಳೆಗೆ 60 ವರ್ಷ ತುಂಬುವವರೆಗೂ ತಿಂಗಳಿಗೆ ತಲಾ 2500 ರೂ.
2. ಪ್ರತಿ ವರ್ಷಕ್ಕೆ 6 ಉಚಿತ ಗ್ಯಾಸ್ ಸಿಲಿಂಡರ್
3. ಮದುವೆಯಾಗುವ ಹುಡುಗಿಗೆ 8 ಗ್ರಾಂ ಚಿನ್ನ, ರೇಷ್ಮೆ ಸೀರೆ
4. ಹೆಣ್ಣು ಮಗು ಹುಟ್ಟಿದರೆ ಚಿನ್ನದ ಉಂಗುರ
5. ತಮಿಳುನಾಡಿನಾದ್ಯಂತ ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಪ್ರಯಾಣ ಉಚಿತ
6. ಶಾಲಾ, ಕಾಲೇಜುಗಳಲ್ಲಿ ಹೆಣ್ಮಕ್ಕಳಿಗೆ ಉಚಿತ ನ್ಯಾಪ್ಕಿನ್
7. ಮಹಿಳಾ ದೌರ್ಜನ್ಯ ಕೇಸ್ಗಳ ತ್ವರಿತ ವಿಚಾರಣೆಗೆ ಫಾಸ್ಟ್ ಟ್ರಾಕ್ ಕೋರ್ಟ್ ಸ್ಥಾಪನೆ..
ಹೀಗೇ ಇನ್ನೂ ಹಲವು ಮಹಿಳಾ ಪರ ಯೋಜನೆಗಳನ್ನು ಘೋಷಿಸಿದ್ದಾರೆ ವಿಜಯ್.
ತಿಂಗಳಿಗೆ 2500 ರೂ. ಕೊಡೋ ಯೋಜನೆಯಿಂದ ಸರಕಾರಿ ಮಹಿಳಾ ಉದ್ಯೋಗಿಗಳನ್ನು ಹೊರಗಿಟ್ಟಿದ್ದಾರೆ. ಕರ್ನಾಟಕದಲ್ಲಿ ಶಕ್ತಿ ಯೋಜನೆ ಸಕ್ಸಸ್ ಆಗಿದ್ದೇ ಆಗಿದ್ದು, ಆಂಧ್ರ ಬಳಿಕ ವಿಜಯ್ ಸಹ, ಸರಕಾರಿ ಬಸ್ನಲ್ಲಿ ಲೇಡಿಸ್ಗೆ ಫ್ರೀ ಅಂದಿದ್ದಾರೆ.
ಸ್ಟಾಲಿನ್ ನೇತೃತ್ವದ ಡಿಎಂಕೆ, ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂ. ಘೋಷಿಸಿದ್ರೆ, ವಿಜಯ್ 2500 ರೂ. ಪ್ರಕಟಿಸಿ, ಡಿಎಂಕೆಗೆ ಸಡ್ಡು ಹೊಡೆದಿದ್ದಾರೆ.
ಡಿಎಂಕೆ, 6 ರಿಂದ 12ನೇ ಕ್ಲಾಸ್ ಓದೋ ಹೆಣ್ಮಕ್ಕಳಿಗೆ ತಿಂಗಳಿಗೆ ತಲಾ 1 ಸಾವಿರ ಕೊಡ್ತೀವಿ ಅಂದ್ರೆ, ವಿಜಯ್ ಒಂದು ಹೆಜ್ಜೆ ಮುಂದೆ ಹೋಗಿ, ಸ್ಕೂಲ್ ಹೋಗೋ ಹೆಣ್ಮಕ್ಕಳ ತಾಯಂದಿರಿಗೆ ವಾರ್ಷಿಕ 1500 ರೂ. ಘೋಷಿಸಿದ್ದಾರೆ.
ಹೆಣ್ಮಕ್ಕಳ ಗೋಲ್ಡ್ ವೀಕ್ ನೆಸ್ ಅರ್ಥ ಮಾಡ್ಕೊಂಡಿರೋ ವಿಜಯ್, ಚಿನ್ನದ ದರ ಏರುತ್ತಿದ್ರೂ ತಲೆಕೆಡಿಸಿಕೊಳ್ಳದೇ ಮದುಮಗಳಿಗೆ 8 ಗ್ರಾಂ ಚಿನ್ನ, ಹುಟ್ಟೋ ಮಗುವಿಗೆ ಉಂಗುರ ಕೊಡೋ ಆಸೆ ಹುಟ್ಟಿಸಿದ್ದಾರೆ.
ವಿಜಯ್ ಘೋಷಿಸಿದ ಉಚಿತ ಯೋಜನೆಗಳು ತಮಿಳುನಾಡಿನಲ್ಲಿ ಭಾರೀ ಸದ್ದು ಮಾಡುತ್ತಿದೆ. ಪರ- ವಿರೋಧದ ಮಾತುಗಳ ಜಟಾಪಟಿ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲೂ ಬಿಸಿಬಿಸಿ ಚರ್ಚೆ..
ತಮಿಳರ ವೋಟ್ಗಾಗಿ ಹತ್ತು ಹಲವು ಉಚಿತ ಯೋಜನೆಗಳನ್ನು ಘೋಷಿಸಿ ಡಿಎಂಕೆ- ಡಿವಿಕೆ, ನೇರಾ ನೇರ ಫೈಟ್ಗಿಳಿದಿದೆ.
ನಾನೇ ಸಿಎಂ ಅನ್ನೋ ಆಸೆಯಲ್ಲಿರೋ ನಟ ವಿಜಯ್, ಪತ್ನಿ ಜತೆಗಿನ ಡಿವೋರ್ಸ್ ವಿವಾದ ತನ್ನ ವರ್ಚಸ್ಸಿಗೆ ಘಾಸಿ ಮಾಡುವ ಭೀತಿಯಲ್ಲಿ, ಮಹಿಳೆಯರಿಗೆ ಚಿನ್ನ, ದುಡ್ಡಿನ ಕನಸು ಭಿತ್ತಿದ್ದಾರೆ.
ಆದ್ರೆ, ಚಿನ್ನದ ಮಾತು ವಿಜಯ್ ಗೆ ವೋಟ್ ಆಗಿ ಬದಲಾಗುತ್ತಾ? ನೋಡ್ಬೇಕು.
ಉಚಿತ ಯೋಜನೆಗಳ ಬಗ್ಗೆ ಇತ್ತೀಚಿಗಷ್ಟೇ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ರೂ, ರಾಜಕೀಯ ಪಕ್ಷಗಳು ಕ್ಯಾರೆ ಅನ್ನುತ್ತಿಲ್ಲ ಅನ್ನೋದು ತಮಿಳುನಾಡು ವಿಚಾರದಲ್ಲಿ ದೃಢಪಟ್ಟಿದೆ.
ಚಿಕ್ಕಬಳ್ಳಾಪುರ- ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಕ್ಷಣ ಮಾತ್ರದಲ್ಲಿ ಕಣ್ಣಿಗೆ ಕಾರದಪುಡಿ ಹಾಕಿ ಒಂದಲ್ಲ ಎರಡಲ್ಲ ಬರೋಬ್ಬರಿ ಏಳೂವರೆ…
ಸುಶಿಕ್ಷಿತ, ಪ್ರಜ್ಞಾವಂತ ಯುವಶಕ್ತಿಯಿಂದ ನಮ್ಮ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ. ಇಂಡಿಯನ್ ಅಕಾಡೆಮಿ ಆಫ್…
ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ಮೇ.12ರ ರಾತ್ರಿ…
ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು–ಆರೂಢಿ ಭಾಗದ ಜನರ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಗುಂಡಮಗೆರೆ–ಹೊಸಹಳ್ಳಿ ರಸ್ತೆಗೆ ಕೊನೆಗೂ ಡಾಂಬರೀಕರಣ ಕಾಮಗಾರಿ ಆರಂಭವಾಗಿದ್ದು, ಗ್ರಾಮಸ್ಥರಲ್ಲಿ…
ದೊಡ್ಡಬಳ್ಳಾಪುರ: ಸರ್ಕಾರ ಆಶ್ರಯ ಯೋಜನೆ ಮೂಲಕ ಗುಡಿಸಲು ಮುಕ್ತ ರಾಜ್ಯ ನಿರ್ಮಾಣದ ಘೋಷಣೆ ಮಾಡುತ್ತಿದ್ದರೂ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ…
ಅನಕ್ಷರಸ್ಥರ ಬುದ್ದಿವಂತಿಕೆ ಪ್ರಶ್ನಿಸುವವರು ಅಕ್ಷರಸ್ಥರ ಮಾನವೀಯತೆಯನ್ನು ಪ್ರಶ್ನಿಸಬೇಕಲ್ಲವೇ........ ......ಒಂದು ಟ್ವೀಟ್... ಅಕ್ಷರ ಕಲಿಕೆ ಒಂದು ನೈಪುಣ್ಯ ಅಥವಾ ಸುಲಭವಾಗಿ ಮಾಹಿತಿ…