2026-27ನೇ ಸಾಲಿನ ರಾಜ್ಯ ಬಜೆಟ್: ಬಜೆಟ್ ಬಗ್ಗೆ ಶಾಸಕ ಧೀರಜ್ ಮುನಿರಾಜ್ ಏನಂದ್ರು ಗೊತ್ತಾ….? ಅವರ ಪ್ರತಿಕ್ರಿಯೆ ಇಲ್ಲಿದೆ ನೋಡಿ….

ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಎಲ್ಲಾ ಬಜೆಟ್ ಗಳ ಪೈಕಿ 2026-27ರ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ. ಈ ಬಜೆಟ್ ನಲ್ಲಿ ಹೊಸ ಯೋಜನೆ ಯಾವುದು ಇಲ್ಲ. ಬಡವರು, ಮಹಿಳೆಯರು, ದಲಿತರು, ಹಿಂದುಳಿದ ವರ್ಗದವರು, ಶ್ರಮಿಕರು, ನೇಕಾರರು, ರೈತರು ಹಾಗೂ ಇತರೆ ವರ್ಗದವರ ಪರವಾಗಿ ಯಾವುದೇ ಯೋಜನೆ ಇಲ್ಲ. ಗ್ಯಾರೆಂಟಿಗಳಿಗೆ ಮಾತ್ರ ಹೆಚ್ಚು ಒತ್ತನ್ನ ನೀಡಲಾಗಿದೆ ಅಷ್ಟೇ. ರಾಜ್ಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಬಜೆಟ್ ನ ಶೇ.18ರಷ್ಟು ಹಣವನ್ನು ಸಾಲವಾಗಿ ಪಡೆದುಕೊಂಡಿದ್ದಾರೆ‌ ಎಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜ್ ಹೇಳಿದ್ದಾರೆ..

100ರೂ. ಅಲ್ಲಿ 18ರೂ. ಅನ್ನು ಸಾಲವಾಗಿ ಪಡೆದು ಖರ್ಚು ಮಾಡುತ್ತಿರುವ ಕೀರ್ತಿ ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ…4 ಲಕ್ಷದ 46ಸಾವಿರ ಕೋಟಿ ಗ್ರಾತ್ರದ ಬಜೆಟ್ ನಲ್ಲಿ 100 ರುಪಾಯಿಯಲ್ಲಿ 84 ರೂ. ಗಳನ್ನು ಗ್ಯಾರೆಂಟಿಗಳು, ಪೆನ್ಷನ್, ವೇತನ, ಈಗಾಗಲೇ ಸಾಲ ಪಡೆದಿರುವ 8 ಲಕ್ಷದ 24ಸಾವಿರ ರೂ.ಗೆ ಬಡ್ಡಿಯನ್ನು ಕಟ್ಟಲು ಮೀಸಲು ಇಡಲಾಗಿದೆ…ಇನ್ನು ಉಳಿದ ಕೇವಲ 16ರೂ‌. ಅನ್ನು ಮಾತ್ರ ಬಂಡವಾಳ ವೆಚ್ಚಕ್ಕೆ ಬಳಸಲಾಗುತ್ತಿದೆ…ಎಂದರು.

ಕಳೆದ ಮೂರು ವರ್ಷಗಳಿಂದ ಆದಾಯ ಕೊರತೆ 148%ರಷ್ಟಿದೆ.. ನಮ್ಮ ಅಂದರೆ ಜನ ಕಟ್ಟುವ ತೆರಿಗೆಯನ್ನು ಅತ್ಯಂತ ಕೆಟ್ಟದಾಗಿ ಉಪಯೋಗಿಸಲಾಗುತ್ತಿದೆ…ಈ ವರ್ಷ 1 ಲಕ್ಷದ 32 ಸಾವಿರ ಕೋಟಿ ಸಾಲ ಪಡೆಯಲು ನಿರ್ಧರಿಸಿದ್ದಾರೆ… ಈ ಸಾಲ ಅಭಿವೃದ್ಧಿಗಾಗಿ ಬಳಕೆ ಮಾಡಲ್ಲ. ಕೇವಲ 71 ಸಾವಿರ ಕೋಟಿ ಮಾತ್ರ ಅಭಿವೃದ್ಧಿಗಾಗಿ ಬಳಕೆ ಮಾಡುತ್ತಾರೆ ಅಷ್ಟೇ…ಎಂದು ತಿಳಿಸಿದ್ದಾರೆ…

ವೃಷಭಾವತಿ ವ್ಯಾಲಿ ನೀರಿನ ಬಗ್ಗೆ ಸ್ಪಷ್ಟನೆ

ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 308 ಎಂ.ಎಲ್.ಡಿ. ನೀರಿನಿಂದ 259 ಕೆರೆಗಳನ್ನು ತುಂಬಿಸುವ ಮೂಲ ಯೋಜನೆಯ ಪೈಕಿ ಗೋಪಾಲಪುರ ಕೆರೆಯಿಂದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ(ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಅಲ್ಲ) 119 ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಯನ್ನು 650 ಕೋಟಿ ರೂ.ಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ..ಎಂದರು.

ನೆಲಮಂಗಲ ತಾಲೂಕಿನ 20 ಕೆರೆಗಳು, ಗೌರಿಬಿದನೂರು ತಾಲೂಕಿನ 37 ಕೆರೆಗಳು, ದೇವನಹಳ್ಳಿ ತಾಲೂಕಿನ 32 ಕೆರೆಗಳು, ದೊಡ್ಡಬಳ್ಳಾಪುರ ತಾಲೂಕಿನ(ದೇವನಹಳ್ಳಿ ವಿಧಾಸಭಾ ಕ್ಷೇತ್ರ) 21 ಕೆರೆಗಳು, ಬೆಂಗಳೂರು ಉತ್ತರ ತಾಲೂಕಿನ 9 ಕೆರೆಗಳನ್ನು ಒಳಗೊಂಡಂತೆ ಒಟ್ಟಾರೆ 119ಕೆರೆಗಳನ್ನು ತುಂಬಿಸಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ

ದೊಡ್ಡಬಳ್ಳಾಪುರ ತಾಲೂಕಿನ (ದೇವನಹಳ್ಳಿ ವಿಧಾನಸಭಾ ಕ್ಷೇತ್ರ) ಕೆರೆಗಳ ಪಟ್ಟಿ

1. ಕಾರ್ನಾಳ ಕೆರೆ

2. ಲಕ್ಷ್ಮೀದೇವಿಪುರ ಕೆರೆ

3. ತಿರುಮಗೊಂಡನಹಳ್ಳಿ ಕೆರೆ

4. ಕುರುವೆಗೆರೆ ಕೆರೆ

5. ಕಾರ್ನಾಳ ಕೆರೆ(1)

6. ಕಸಬಾ ತೂಬಗೆರೆ ಕೆರೆ

7. ಗೂಳ್ಯ ನಂದಿಗುಂದಿ ಕೆರೆ

8. ಮೆಳೇಕೋಟೆ ಕೆರೆ

9. ಗಂಟಿಗಾನಹಳ್ಳಿ ಕೆರೆ

10. ಕಂಚಿಗಾನಳ ಕೆರೆ

11. ತಪಸೀಪುರ ಕೆರೆ

12. ದೊಡ್ಡರಾಯಪ್ಪನಹಳ್ಳಿ ಕೆರೆ

13. ಶ್ರೀನಿವಾಸಪುರ ಕೆರೆ

14. ನಾಗಶೆಟ್ಟಿಹಳ್ಳಿ(ಚೀಲೇನಹಳ್ಳಿ) ಕೆರೆ

15. ಅಂತರಹಳ್ಳಿ ಕೆರೆ

16. ಬಚ್ಚಹಳ್ಳಿ ಕೆರೆ

17. ಕಲ್ಲದೇವನಹಳ್ಳಿ (ಶಿರವಾರ) ಕೆರೆ

18. ಕಮಲೂರು ಕೆರೆ

19. ತಪಸೀಹಳ್ಳಿ ಕೆರೆಗಳಿಗೆ ವೃಷಭಾವತಿ ನೀರನ್ನು ಬಿಡಲಾಗುವುದು…

ಆದರೆ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಒಂದು ಕೆರೆಗೂ ವೃಷಭಾವತಿ ವ್ಯಾಲಿಯಿಂದ ಬರುವ ನೀರನ್ನು ಬಿಡಿಸುವುದಿಲ್ಲ… ಅದಕ್ಕೆ ನಾನು ಬದ್ಧನಾಗಿದ್ದೇನೆ..ಎಂದು ತಿಳಿಸಿದ್ದಾರೆ…

ದೊಡ್ಡಬಳ್ಳಾಪುರ ಸಮಗ್ರ ಅಭಿವೃದ್ಧಿಗೆ 150 ಯೋಜನೆಗಳನ್ನು ಜಾರಿ ಮಾಡುವಂತೆ ಮನವಿ ಸಲ್ಲಿಸಿದ್ದೇನೆ. ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದಾಗ ಕಾಂಗ್ರೆಸ್ ಶಾಸಕರು ಒಬ್ಬರೂ ಖುಷಿಯಿಂದ ಟೇಬಲ್ ಕುಟ್ಟಿಲ್ಲ. ಯಾರಿಗೂ ಈ ಬಜೆಟ್ ತೃಪ್ತಿ ಕೊಟ್ಟಿಲ್ಲ ಎಂದರು.

ದೊಡ್ಡಬಳ್ಳಾಪುರಕ್ಕೆ ಬಜೆಟ್ ನಲ್ಲಿ ಘೋಷಣೆ ಆದ ಪ್ರಮುಖಾಂಶಗಳು

• ದೊಡ್ಡಬಳ್ಳಾಪುರದಲ್ಲಿ ಹೊಸದಾಗಿ ಸಂಚಾರ ಪೊಲೀಸ್ ಠಾಣೆ ಸ್ಥಾಪನೆ.

• ದೊಡ್ಡಬಳ್ಳಾಪುರದಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ಪ್ರಾರಂಭಿಸಲಾಗುವುದು.

• ಆದಿನಾರಾಯಣ ಹೊಸಹಳ್ಳಿಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ʻವಿಜ್ಞಾನ ನಗರʼ ವನ್ನು (ಸೈನ್ಸ್ ಸಿಟಿ) 233 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಇದಕ್ಕೆ ಅನುಮೋದನೆ ದೊರೆತ ನಂತರ ವಾಸ್ತುವಿನ್ಯಾಸ ತಯಾರಿಸಲು ಕ್ರಮಕೈಗೊಳ್ಳಲಾಗುವುದು.

• ಕಾರ್ಮಿಕ ಇಲಾಖೆ ವತಿಯಿಂದ ಹಂತ-2ರಲ್ಲಿ ದೇವನಹಳ್ಳಿ (ಗುಂಡಂಗೆರೆ ಕ್ರಾಸ್-ತೂಬಗೆರೆ ಹೋಬಳಿ)ಯಲ್ಲಿ “ಶ್ರಮಿಕ ವಸತಿ ಶಾಲೆ”ಯನ್ನು  ಪ್ರಾರಂಭಿಸಲಾಗುವುದು.

• ದೊಡ್ಡಬಳ್ಳಾಪುರ ನಗರದಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಬಜೆಟ್ ನಲ್ಲಿ ಘೋಷಣೆ….

• ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮತ್ತು ಆಸ್ಪತ್ರೆಗಳ ನಿರ್ಮಾಣಕ್ಕೆ 620 ಕೋಟಿ ರೂ ಮತ್ತು ಉಪಕರಣಗಳ ಖರೀದಿಗೆ 220 ಕೋಟಿ ರೂ ಗಳು ಮೀಸಲಿಡಲಾಗಿದೆ. ಅದರಲ್ಲಿ ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಸ್ಪತ್ರೆಯ ಕಾಮಗಾರಿಯೂ ಸಹ ಒಂದಾಗಿದೆ ಎಂದು ನಮಗೆ ಮಾಹಿತಿ ಸಿಕ್ಕಿದೆ ಎಂದರು.

Ramesh Babu

Journalist

Recent Posts

ಸೆ.7ರಂದು ದೊಡ್ಡಬಳ್ಳಾಪುರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ

ದೊಡ್ಡಬಳ್ಳಾಪುರ: ನಗರದಲ್ಲಿ ವಿದ್ಯುತ್ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 7ರಂದು ದೊಡ್ಡಬಳ್ಳಾಪುರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 66/11…

46 minutes ago

ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗ ಭದ್ರತೆ : ಪಿಡಿಒ ಮುದ್ದಲಿಂಗಯ್ಯ

ಚಿಕ್ಕನಾಯಕನಹಳ್ಳಿ : ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗ ಭದ್ರತೆ ಒದಗಿಸುವಲ್ಲಿ ಹಾಗೂ ಆರ್ಥಿಕವಾಗಿ ಸಬಲಗೊಳಿಸುವಲ್ಲಿ 'ವಿಬಿ-ಜಿ ರಾಮ್ ಜಿ' ಯೋಜನೆಯು ಗ್ರಾಮಸ್ಥರಿಗೆ…

12 hours ago

ಬೆನಕನಹಳ್ಳ ಅಭಿವೃದ್ಧಿಗೆ ಮೂಲಸೌಕರ್ಯ ಅಗತ್ಯ: ನಿಸರ್ಗ ನಾರಾಯಣಸ್ವಾಮಿ

ದೊಡ್ಡಬಳ್ಳಾಪುರ: ಪುರಾತನ ದೇವಾಲಯಗಳು, ಧಾರ್ಮಿಕ ಮಹತ್ವ ಹಾಗೂ ಪ್ರಕೃತಿ ಸೌಂದರ್ಯದ ಸಂಗಮವಾಗಿರುವ ಬೆನಕನಹಳ್ಳವನ್ನು ಸಮರ್ಪಕ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಿದರೆ ಪ್ರಮುಖ ಧಾರ್ಮಿಕ…

13 hours ago

ಮೇಕೆ ವಿಚಾರಕ್ಕೆ ಗಲಾಟೆ; ವ್ಯಕ್ತಿಯ ಕೊಲೆ: ಮೂವರಿಗೆ ಶಿಕ್ಷೆ ಮುಖ್ಯ ಆರೋಪಿಗೆ ಜೀವಾವಧಿ ಶಿಕ್ಷೆ, ಇಬ್ಬರಿಗೆ ಜೈಲು ಶಿಕ್ಷೆ ಹಾಗೂ ದಂಡ

ದೊಡ್ಡಬಳ್ಳಾಪುರ: ಮೇಕೆ ಮಗುಗೆ ಗುದ್ದಿದ ವಿಚಾರವಾಗಿ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪು ನೀಡಿರುವ…

14 hours ago

ಕಾನೂನು ತೊಡಕಿಲ್ಲದ ಅರ್ಜಿಗಳು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ- ಸಚಿವ ಕೆ.ಎಚ್ ಮುನಿಯಪ್ಪ

ಪ್ರಜಾ ಸೇವಾ ಆಂದೋಲದ ಮೂಲಕ ಜನರಿಂದ ಸ್ವೀಕರಿಸುವ ಅರ್ಜಿಗಳಿಗೆ ಕಾನೂನು ವ್ಯಾಪ್ತಿ ಹೊರತುಪಡಿಸಿ ಉಳಿದ ಅರ್ಜಿಗಳಿಗೆ ನಿಗದಿತ ಕಾಲಮಿತಿಯೊಳಗೆ ಪರಿಹಾರ…

17 hours ago

ಸಾಹಿತ್ಯ ಪರಿಷತ್ ಚುನಾವಣೆ…..

ಸಾಹಿತ್ಯ ಪರಿಷತ್ ಚುನಾವಣೆ..... ನನ್ನ ಮತ........? ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಕನ್ನಡದ ಅಸ್ಮಿತೆಗೊಂದು ಸವಾಲು. ಭ್ರಷ್ಟರ ವಿರುದ್ಧ ಪ್ರಾಮಾಣಿಕರು,…

1 day ago