Categories: ಲೇಖನ

ಪೊಲೀಸ್: ಕಾನೂನು ಸುವ್ಯವಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ನಿಯಂತ್ರಿಸದಿದ್ದರೆ……

ದೇಶ ಮತ್ತು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ನಿಯಂತ್ರಿಸದಿದ್ದರೆ ಕೆಲವೇ ವರ್ಷಗಳಲ್ಲಿ ದೇಶದ ಆಂತರಿಕ ವ್ಯವಸ್ಥೆ ಕುಸಿಯುವುದು. ನಿಶ್ಚಿತ ಈಗಾಗಲೇ ವೈರಲ್ ಆಗುತ್ತಿರುವ ಹಿಂಸಾತ್ಮಕ ವಿಡಿಯೋ ದೃಶ್ಯಗಳನ್ನು ನೋಡುತ್ತಿದ್ದರೆ ಭಯವಾಗುತ್ತದೆ.

ಕಳ್ಳರನ್ನು ಹಿಡಿಯುವುದೋ,
ಕಳ್ಳತನ ತಡೆಯುವುದೋ………..

ಪೊಲೀಸರ ಮೊದಲ ಆದ್ಯತೆ, ಮೊದಲ ಕರ್ತವ್ಯ, ಮೊದಲ ಕೆಲಸ, ಮೊದಲ ಆಶಯ ಅಪರಾಧಗಳನ್ನು ತಡೆಯುವುದೇ ಅಥವಾ ಅಪರಾಧಿಗಳನ್ನು ಪತ್ತೆ ಹಚ್ಚುವುದೇ………

ಒಂದು ವೇಳೆ ಅಪರಾಧಿಗಳನ್ನು ಪತ್ತೆ ಹಚ್ಚುವುದೇ ಮೂಲ ಉದ್ದೇಶವಾಗಿದ್ದರೆ ಇಲ್ಲಿಯವರೆಗಿನ ಅವರ ಕೆಲಸ ಮತ್ತು ಆ ವ್ಯವಸ್ಥೆ ತೃಪ್ತಿಕರ. ಒಂದು ವೇಳೆ ಅಪರಾಧಗಳನ್ನು ತಡೆಯುವುದು ಅವರ ಮೂಲ ಆಶಯವಾಗಿದ್ದರೆ ಅದರಲ್ಲಿ ಅವರು ಮತ್ತು ಪೊಲೀಸ್ ವ್ಯವಸ್ಥೆ ಬಹುತೇಕ ವಿಫಲವಾಗಿದೆ ಎಂದೇ ಹೇಳಬೇಕಾಗುತ್ತದೆ.

ಈಗಲೂ ಸರಗಳ್ಳತನ, ಪಿಕ್ ಪಾಕೆಟ್, ಮೊಬೈಲ್ ಕದಿಯುವುದು, ಮನೆಗಳ್ಳತನ, ಭ್ರಷ್ಟಾಚಾರ, ವಂಚನೆ, ಮೋಸ, ಕೊಲೆ, ಅತ್ಯಾಚಾರ, ಡ್ರಗ್ ಧಂದೆ ಎಲ್ಲವೂ ಹೆಚ್ಚು ಕಡಿಮೆ ದಿನನಿತ್ಯದ ಕಣ್ಣ ಮುಂದೆಯೇ ನಡೆಯುತ್ತಿರುವ ಅಪರಾಧಗಳು. ಪ್ರತಿ ಆರಕ್ಷಕ ಠಾಣೆಯಲ್ಲಿ ಈ ರೀತಿಯ ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಕ್ರೈಮ್ ಬೀಟ್ ಸುದ್ದಿ ಮಾಧ್ಯಮಗಳ ನೆಚ್ಚಿನ – ಜನಪ್ರಿಯ ಕಾಲಂ ಮತ್ತು ಕಾರ್ಯಕ್ರಮ……..

ಉದಾಹರಣೆಗೆ ಡ್ರಗ್ ಮಾಫಿಯಾ ಮತ್ತು ಪಾರ್ಟಿಗಳು ಆಕಾಶದಲ್ಲಿ ಅಥವಾ ಭೂಮಿಯ ಒಳಗಡೆ ನಡೆಯುವುದಿಲ್ಲ ಅಥವಾ ಅದು ಕಣ್ಣಿಗೆ ಕಾಣದ ವಿದ್ಯಮಾನವೂ ಅಲ್ಲ. ಒಂದು ದೊಡ್ಡ ಹೋಟೆಲ್ ಅಥವಾ ಐಷಾರಾಮಿ ಜಾಗದಲ್ಲಿ, ಅಡುಗೆಯವರು, ಸೆಕ್ಯುರಿಟಿ, ದೀಪಾಲಂಕಾರ ಸೇರಿ ನೂರಾರು ವಿವಿಧ ಕೆಲಸದ ಜನರ ಭಾಗವಹಿಸುವಿಕೆಯಿಂದ, ಗಣ್ಯ ವ್ಯಕ್ತಿಗಳು ಮತ್ತು ಅವರ ಸಹಾಯಕರು, ವಾಹನ ಚಾಲಕರು ಎಲ್ಲರೂ ಪ್ರತ್ಯಕ್ಷ ಅಥವಾ ಪರೋಕ್ಷ ಭಾಗವಾಗಿ, ಜೊತೆಗೆ ಸುಮಾರು 4/6 ಗಂಟೆಗಳಷ್ಟು ದೀರ್ಘಕಾಲ ಆಗಾಗ ನಡೆಯುತ್ತದೆ. ಇದನ್ನು ನಮ್ಮ ಪೊಲೀಸ್ ವ್ಯವಸ್ಥೆ ಕನಿಷ್ಟ ಪರಿಶೀಲಿಸುವುದಿಲ್ಲವೇ. ಅದರ ಬಳಿ ಮಾಹಿತಿ ಇರುವುದಿಲ್ಲವೇ, ಅದರ ಗೂಡಾಚಾರ ವ್ಯವಸ್ಥೆ ಏನು ಮಾಡುತ್ತಿರುತ್ತದೆ…………………

ಜೊತೆಗೆ ಅಲ್ಲಿನ ಸ್ಥಳೀಯ ಸರ್ಕಾರಿ ಆಡಳಿತ, ಜನ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು ಯಾರಿಗೂ ಏನೂ ತಿಳಿದಿರುವುದಿಲ್ಲವೇ, ಅದೇನು ಸೈನ್ಯದಷ್ಟು ಮಹತ್ವದ ಕಾರ್ಯಚರಣೆಯೇ……..

ಎಷ್ಟೋ ವರ್ಷಗಳ ಬಹಿರಂಗ ದಂಧೆಯನ್ನು ಎಂದೋ ಒಂದು ಬಾರಿ ದಾಳಿ ಮಾಡಿದರೆ ಪ್ರಯೋಜನವೇನು. ಹಾಗಾದರೆ ಇಷ್ಟು ದಿನಗಳು ಅವ್ಯಾಹತವಾಗಿ ನಡೆದಿರುವ ದಂಧೆಗೆ ಜವಾಬ್ದಾರರು ಯಾರು. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುತ್ತದಂತೆ ಯಾರಿಗೂ ಕಾಣಬಾರದೆಂದು. ಹಾಗೆಯೇ ವ್ಯವಸ್ಥೆಯು ಕಣ್ಣು ಮುಚ್ಚಿಕೊಂಡು ‌ಕಾರ್ಯ ನಿರ್ವಹಿಸುತ್ತಿದೆಯೇ ಅಥವಾ ಜನರು ಕಣ್ಣು ಮುಚ್ಚಿಕೊಂಡಿದ್ದಾರೆಯೇ ………

ಭ್ರಷ್ಟಾಚಾರ ವಿಷಯದಲ್ಲೂ ಅಷ್ಟೇ. ಪ್ರಾರಂಭದ ಹಂತದಲ್ಲಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ನೂರಾರು, ಸಾವಿರಾರು ಕೋಟಿ ಅವ್ಯವಹಾರದ ನಂತರ ದಾಳಿ ಮಾಡಿ ಬಂಧಿಸಿದರೆ ಇಷ್ಟು ದಿನ ಇವರು ಮಾಡುತ್ತಿದ್ದುದಾದರು ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಏಕಾಏಕಿ ಯಾರೂ ಕೋಟಿ ಕೋಟಿ ಹಣ ಮಾಡುವುದು ಸಾಧ್ಯವಿಲ್ಲ. ಕೆಲವು ವರ್ಷಗಳ ಅವ್ಯವಹಾರ ಇದರ ಹಿಂದೆ ಇರುತ್ತದೆ. ಒಬ್ಬ ದೊಡ್ಡ ರೌಡಿ ಅಥವಾ ಒಂದು ಸಮಾಜ ದ್ರೋಹಿ ಕೆಲಸ ದಿಢೀರನೆ ಬೆಳವಣಿಗೆ ಹೊಂದುವುದಿಲ್ಲ. ಅದರ ಹಿಂದೆಯೂ ಅದಕ್ಕೆ ಬೇಕಾದ ಕುಖ್ಯಾತ ತಂತ್ರಗಳು ಅಡಗಿರುತ್ತದೆ. ಪೊಲೀಸ್ ವ್ಯವಸ್ಥೆ ಮುಖ್ಯವಾಗಿ ಅದನ್ನು ಪತ್ತೆ ಹಚ್ಚುವ ದಕ್ಷತೆ ರೂಪಿಸಿಕೊಳ್ಳಬೇಕಲ್ಲವೇ….

ಹೌದು, ಪೊಲೀಸ್ ಅಧಿಕಾರಿಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದ ರಾಜಕೀಯ ವ್ಯವಸ್ಥೆ ನಮ್ಮಲ್ಲಿದೆ. ಕೆಳಹಂತದ ಪೊಲೀಸ್ ಅಧಿಕಾರಿಗಳಿಗೆ ಇದರಿಂದ ವಿನಾಯಿತಿ ನೀಡಬಹುದು. ಆದರೆ ಹಿರಿಯ ಐಪಿಎಸ್ ಅಧಿಕಾರಿಗಳೇ ರಾಜಕಾರಣಿಗಳ ದಾಸರಾದರೆ ಇಡೀ ವ್ಯವಸ್ಥೆ ಕುಸಿಯುತ್ತದೆ. ನ್ಯಾಯ ಕಾನೂನು ದೇವರಂತೆ ನಂಬಿಕೆ ಕಳೆದುಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ಕೂಡ ಹಿರಿಯ ಅಧಿಕಾರಿಗಳ ನೆರವಿಗೆ ಬರುತ್ತಿದೆ……

ಅನಿರೀಕ್ಷಿತವಾಗಿ ನಡೆಯುವ ಅಪರಾಧಗಳಲ್ಲಿ ಅವರನ್ನು ಪತ್ತೆ ಹಚ್ಚುವುದು ಮುಖ್ಯವಾಗುತ್ತದೆ.
ಆದರೆ ವ್ಯವಸ್ಥಿತವಾಗಿ ಮತ್ತು ನಿರಂತರವಾಗಿ ನಡೆಯುವ ದಂಧೆಗಳನ್ನು ತಡೆಯದಿದ್ದರೆ ನೇರ ಹೊಣೆ ಪೋಲೀಸರೆ ಹೊರಬೇಕು. ರಾಜಕೀಯ ಒತ್ತಡ ಎಂಬುದು ಒಂದು ನೆಪ ಅಥವಾ ಅವರ ಅಪ್ರಾಮಾಣಿಕತೆಗೆ ಒಂದು ಉದಾಹರಣೆ. ಅಷ್ಟೂ ಸಾಮಾನ್ಯ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಪೊಲೀಸ್ ವ್ಯವಸ್ಥೆ ನಗೆಪಾಟಲಿಗೆ ಈಡಾಗುತ್ತದೆ.

ಜನರ ತೆರಿಗೆ ಹಣವನ್ನು ಸಂಬಳದ ರೂಪದಲ್ಲಿ ತಿನ್ನುವವರು, ಅದರಿಂದಲೇ ತಮ್ಮ ಮತ್ತು ತಮ್ಮ ಕುಟುಂಬದ ಬದುಕು ಕಟ್ಟಿಕೊಳ್ಳುವವರು ರಾಜಕಾರಣಿಗಳಿಗಿಂತ ಕಾನೂನಿಗೆ ಗೌರವ ಕೊಟ್ಟು ಕೆಲಸ ಮಾಡದಿದ್ದರೆ ಈ ಸಮಾಜಕ್ಕೆ ಅವರು ಮಾಡುವ ದ್ರೋಹ ಎಂದು ಬಗೆಯಬೇಕು…..

ವ್ಯವಸ್ಥೆ ಇರುವುದೇ ಹೀಗೆ, ನಾವು ಸಹ ವರ್ಗಾವಣೆಗೆ ಅಪಾರ ಲಂಚ ಕೊಡಬೇಕು. ‌ಇಡೀ ವ್ಯವಸ್ಥೆಯೇ ಭ್ರಷ್ಟಗೊಂಡಿರುವಾಗ ಪೊಲೀಸರನ್ನು ದೂರುವುದು ಯಾವ ನ್ಯಾಯ ಎಂಬ ಸಿನಿಕತನದ ಪ್ರಶ್ನೆ ಪೋಲೀಸ್ ವಲಯದಿಂದ ಬರಬಹುದು. ಕಾನೂನು ಸುವ್ಯವಸ್ಥೆಯ ರಕ್ಷಕರೇ ಇಷ್ಟು ಅಸಹಾಯಕ ಅಭಿಪ್ರಾಯ ವ್ಯಕ್ತಪಡಿಸಿದರೆ ಇನ್ನು ಸಾಮಾನ್ಯರ ಪಾಡೇನು. ಆಗ ಸಾಮಾನ್ಯರ ಸಾಮಾನ್ಯ ತಪ್ಪುಗಳು ಸ್ವೀಕಾರಾರ್ಹ ಎಂದೇ ವ್ಯಾಖ್ಯಾನಿಸಬೇಕಾಗುತ್ತದೆ.

ಪೊಲೀಸ್ ವ್ಯವಸ್ಥೆ ನಿದ್ರೆಯಿಂದ ಎಚ್ಚರಗೊಂಡಂತೆ ಯಾವಾಗಲೋ ಒಮ್ಮೊಮ್ಮೆ ಚಟುವಟಿಕೆಯಿಂದ ಇರುವುದಲ್ಲ. ಅಪರಾಧಗಳನ್ನು ಹಿಡಿಯುವ ಚಾಕಚಕ್ಯತೆಗಿಂತ ಅಪರಾಧಗಳನ್ನು ತಡೆಗಟ್ಟುವುದು ಮತ್ತು ಪ್ರಾರಂಭದ ಹಂತದಲ್ಲೇ ಅದನ್ನು ಬುಡ ಸಮೇತ ನಿರ್ಮೂಲನೆ ಮಾಡುವ ದಿಕ್ಕಿನಲ್ಲಿ ಹೆಚ್ಚು ಕಾರ್ಯೋನ್ಮಖವಾಗಬೇಕಿದೆ…….

ಹೌದು, ಪೊಲೀಸ್ ವ್ಯವಸ್ಥೆಗೆ ನ್ಯಾಯಾಂಗ ವ್ಯವಸ್ಥೆ ಪೂರಕವಾಗಿಲ್ಲ. ಪೋಲೀಸರ ಶ್ರಮ ಹೊಳೆಯಲ್ಲಿ ಹುಣಿಸಿ ಹಣ್ಣು ತೊಳೆದಂತೆ ಕುಖ್ಯಾತರು, ಶ್ರೀಮಂತರು, ಬಲಶಾಲಿಗಳು ಬಹುಬೇಗ ಆರೋಪಗಳಿಂದ ಬಚಾವಾಗುತ್ತಾರೆ. ವಕೀಲಿಕೆಯ ವ್ಯವಸ್ಥೆಯಲ್ಲಿಯೂ ಸಾಕಷ್ಟು ಸುಧಾರಣೆ ಮಾಡುವ ಅವಶ್ಯಕತೆ ಇದೆ……….

ಇಲ್ಲದಿದ್ದರೆ ಇಡೀ ವ್ಯವಸ್ಥೆ ಒಂದು ಕಳ್ಳ ಪೊಲೀಸ್ ಆಟದಂತೆ ನಡೆಯುತ್ತಲೇ ಇರುತ್ತದೆ. ಅದಕ್ಕೆ ಕೊನೆಯೇ ಇರುವುದಿಲ್ಲ ಮತ್ತು ದುರ್ಬಲರು ಸದಾ ಅನ್ಯಾಯಕ್ಕೆ ಒಳಗಾಗುತ್ತಲೇ ಇರುತ್ತಾರೆ…….

ಡ್ರಗ್ ದಂಧೆಗಳು, ಕ್ರಿಮಿನಲ್ ಚಟುವಟಿಕೆಗಳು, ಭ್ರಷ್ಟಾಚಾರ, ಮಾಧ್ಯಮಗಳು, ಪೊಲೀಸ್ ವ್ಯವಸ್ಥೆ ಎಲ್ಲವೂ ನಮ್ಮ ಸಮಾಜವನ್ನು ಒಂದು ನಾಟಕದ ಕಂಪನಿಯಂತೆ ಸಮಯಕ್ಕೆ ತಕ್ಕಂತ ಪಾತ್ರಗಳನ್ನು ನಿರ್ವಹಿಸುತ್ತಾ ಜನರನ್ನು ವಂಚಿಸುವ ದೊಡ್ಡ ಪ್ರಹಸನದ ವೇದಿಕೆ ಎಂದು ಕರೆಯಬೇಕಾಗುತ್ತದೆ. ಆದ್ದರಿಂದ ಇದನ್ನು ತಡೆಗಟ್ಟಲು, ಬದಲಾವಣೆ ಸಮಗ್ರವಾಗಿ ಮತ್ತು ಶೀಘ್ರವಾಗಿ ನಡೆಯಲು ಮನಸ್ಸುಗಳ ಅಂತರಂಗದ ಚಳವಳಿ ಮಾಡಬೇಕಾಗಿದೆ……..

ಯಾವ ತಪ್ಪು ಮಾಡಿದರು ಬಹುಬೇಗ ಅದರಿಂದ ಹೊರ ಬರಬಹುದು ಎಂಬ ಭಾವನೆಯೇ ಅಪರಾಧಗಳು ಹೆಚ್ಚಾಗಲು ಕಾರಣವಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುವ ವ್ಯವಸ್ಥೆ ರೂಪಿಸಬೇಕಿದೆ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಕಸ್ತೂರಿ ರಂಗನ್ ವರದಿ; ‘ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ’- ಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಇಂದು ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕ ಸಭೆಯಲ್ಲಿ  ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು…

13 hours ago

ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ರೈತ ಸಂಘ ಆಗ್ರಹ

ಕೋಲಾರ : ನಗರದ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯಲ್ಲಿ ಬಡ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು, ಖಾಸಗಿ…

14 hours ago

ಶಿಷ್ಟಾಚಾರ ವಿವಾದಕ್ಕೆ ಮತ್ತಷ್ಟು ಕಾವು: ಶಾಸಕರಿಗೆ ಕಾನೂನು, ಶಿಷ್ಟಾಚಾರದ ಅರಿವಿಲ್ಲ- ಶಾಸಕ ಧೀರಜ್ ಮುನಿರಾಜ್ ವಿರುದ್ಧ ಮಾಜಿ ಶಾಸಕ ವೆಂಕಟರಮಣಯ್ಯ ವಾಗ್ದಾಳಿ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕ ಧೀರಜ್ ಮುನಿರಾಜು ಹಾಗೂ ಮಾಜಿ ಶಾಸಕ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ (ಡಿಪಿಎ) ಅಧ್ಯಕ್ಷ…

15 hours ago

ಕುಡಿಯುವ ನೀರು, ಮೇವಿಗೆ ಮುಂಜಾಗ್ರತೆ ವಹಿಸಿ: ನಿಗದಿತ ಅವಧಿಯೊಳಗೆ ಬಡವರಿಗೆ ಸೂರು, ಸೈಟ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಿ- ಸಚಿವ ಕೆ.ಎಚ್ ಮುನಿಯಪ್ಪ

ಎಲ್ಲಾ ವರ್ಗದ ಬಡವರಿಗೆ ಸೂರು, ಸೈಟ್ ನೀಡುವುದು ನಮ್ಮ ಸರ್ಕಾರದ ಗುರಿಯಾಗಿದ್ದು ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ,…

17 hours ago

ಶಿಷ್ಟಾಚಾರದ ಹೆಸರಲ್ಲಿ ವಾಗ್ಯುದ್ಧ: ಹಾಲಿ ಶಾಸಕ ಧೀರಜ್ ಮುನಿರಾಜು–ಮಾಜಿ ಶಾಸಕ ವೆಂಕಟರಮಣಯ್ಯ ನಡುವೆ ಬಹಿರಂಗ ಕಿತ್ತಾಟ

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಹಾಲಿ ಶಾಸಕ ಧೀರಜ್ ಮುನಿರಾಜು ಹಾಗೂ ಮಾಜಿ ಶಾಸಕ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ…

23 hours ago

ನಿಷೇಧದ ನಡುವೆಯೂ ಡಿಜೆ ಬಳಕೆ: ವಾಹನ ವಶ, ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿ ಡಿಜೆ ಬಳಕೆಗೆ ನಿಷೇಧವಿದ್ದರೂ ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಬಳಸಿದ ಆರೋಪದ ಮೇರೆಗೆ ಡಿಜೆ ವಾಹನವನ್ನು ಜಪ್ತಿ ಮಾಡಿರುವ…

2 days ago