Categories: ಲೇಖನ

ದ್ವೇಷದ ಹೇಳಿಕೆ ನೀಡಿದ‌ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್

ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅತ್ಯಂತ ದ್ವೇಷದ ಹೇಳಿಕೆಯೊಂದನ್ನು ನೀಡಿದ್ದಾರೆ.

ಹಿಂದೂ ಮುಸ್ಲಿಂ, ಪಾಕಿಸ್ತಾನ ಮತ್ತು ಭಾರತದ ನಡುವೆ ತುಂಬಾ ದ್ವೇಷ ಮತ್ತು ಅಸೂಯೆ ಬರುವ ರೀತಿಯಲ್ಲಿ ಉದ್ರೇಕಿಸಿ ಮಾತನಾಡಿದ್ದಾರೆ. ಸಾಗರೋತ್ತರ ಪಾಕಿಸ್ತಾನಿ ಪ್ರಜೆಗಳ ಸಮಾವೇಶದಲ್ಲಿ ಪಾಕಿಸ್ತಾನದ ಅಧ್ಯಕ್ಷರು ಮತ್ತು ಹಿರಿಯ ಸಚಿವರ ಸಮ್ಮುಖದಲ್ಲಿ ಈ ಮಾತನ್ನು ಹೇಳಿದ್ದಾರೆ.

ಖಂಡಿತವಾಗಲೂ ಯಾವುದೇ ದೇಶದ ಸೈನಿಕ ಮುಖ್ಯಸ್ಥರು ಆ ದೇಶದ ನಿಜವಾದ ರಕ್ಷಕರು. ಸೈನ್ಯದ ಮುಖ್ಯಸ್ಥರೆಂದರೆ ಕೇವಲ ಇನ್ನೊಬ್ಬರ ಮೇಲೆ ಆಕ್ರಮಣ ಮಾಡುವವರಲ್ಲ, ಅವರು ಯಾವಾಗಲೂ ದೇಶ ರಕ್ಷಣೆಯ ಮಹತ್ವವನ್ನು ತಿಳಿದಿರಬೇಕು ಮತ್ತು ಅತ್ಯಂತ ಮಾನವೀಯವಾಗಿಯೂ ಸಹ ನಡೆದುಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ದೇಶದ ಸೈನಿಕರಿಗೆ ಮಾನವೀಯತೆ ಹೆಚ್ಚಾಗಿಯೇ ಇರಬೇಕು. ರಕ್ಷಣೆ ಹೊರತುಪಡಿಸಿದ ಅಕ್ರಮಣಕಾರಿ ಯುದ್ಧಗಳಲ್ಲಿ ನಂಬಿಕೆ ಇರಬಾರದು. ಕೊಲ್ಲುವ ಮತ್ತು ಸಾಯುವ ಆಟದಲ್ಲಿ ಅವರೇ ಮೊದಲ ಬಲಿಪಶುಗಳು. ಅದರ ವಾಸ್ತವಿಕ ಲಾಭ ಇನ್ಯಾರಿಗೋ ಆಗುತ್ತದೆ.

ಇತ್ತೀಚೆಗೆ ತೆಲುಗಿನ ತಾಂಡೇಲ್ ಎಂಬ ಸಿನಿಮಾದಲ್ಲಿ ಪಾಕಿಸ್ತಾನದ ಜೈಲಿನ ದೃಶ್ಯದಲ್ಲಿ ಕೆಲವು ಮೀನುಗಾರರು ಭಾರತದಿಂದ ಆಕಸ್ಮಿಕವಾಗಿ ಪಾಕಿಸ್ತಾನದ ಸಮುದ್ರ ಉಲ್ಲಂಘನೆಯ ಸಂದರ್ಭದಲ್ಲಿ ಬಂಧಿತರಾದ ಆ ಸಿನಿಮಾದ ದೃಶ್ಯಗಳಲ್ಲಿ ಸಹ ಪಾಕಿಸ್ತಾನದ ಬಗ್ಗೆ ಭಾರತದ ಅದರ ನಿರ್ದೇಶಕರು ಅತ್ಯಂತ ಕೆಟ್ಟದಾಗಿ, ದ್ವೇಷ ಬರುವ ರೀತಿಯಲ್ಲಿ ಅನಾವಶ್ಯಕವಾಗಿ ಚಿತ್ರಿಸಿದ್ದಾರೆ. ಮುಸ್ಲಿಮರು ಹಿಂದುಗಳ ಆಜನ್ಮ ಶತ್ರುಗಳು ಎಂಬಂತೆ ತೋರಿಸಿದ್ದಾರೆ. ಆಸಕ್ತರು ಬೇಕಾದರೆ ನಾಗ ಚೈತನ್ಯ ಅಭಿನಯದ ತೆಲುಗಿನ ತಾಂಡೇಲ್ ಎಂಬ ಸಿನಿಮಾವನ್ನು ನೋಡಬಹುದು.

ಈ ವಿಷಯ ಪ್ರಸ್ತಾಪಿಸಲು ಕಾರಣ ಹಿಂದೂ ಧರ್ಮವಿರಲಿ, ಇಸ್ಲಾಂ ಧರ್ಮವೇ ಇರಲಿ, ಭಾರತವೇ ಇರಲಿ, ಪಾಕಿಸ್ತಾನವೇ ಇರಲಿ ಜನರಲ್ ಅಸಿಮ್ ಮುನೀರ್ ಪ್ರಕಾರ ಎರಡು ತುಂಬಾ ಭಿನ್ನವಾಗಿದೆ ಮತ್ತು ವಿರುದ್ಧವಾಗಿದೆ. ಈ ಭಾವನೆಯನ್ನು ಮಕ್ಕಳಲ್ಲಿ ತುಂಬಿಸಿ ಎಂದು ಹೇಳಿಕೆ ಕೊಟ್ಟಿದ್ದಾರೆ.

ಮಿಸ್ಟರ್ ಜನರಲ್ ಅವರೇ, ಮನುಷ್ಯನಿಗೆ ಧರ್ಮ ಎಂಬುದು ಒಂದು ಕ್ರಮಬದ್ಧ ನಡವಳಿಕೆಯ ಸಹಜ ಆಚರಣೆಗಳ ಕ್ರಿಯೆಗಳೇ ಹೊರತು ದ್ವೇಷ ಅಸೂಯೆಯ ತತ್ವಗಳಲ್ಲ. ಸುಮ್ಮನೆ ಆಚರಣೆಗಾಗಿ ಒಬ್ಬರು ಏಕ ದೇವರನ್ನು ಪೂಜಿಸಿದರೆ, ಇನ್ನೊಬ್ಬರು ಬಹು ದೇವರಗಳನ್ನು ಪೂಜಿಸುತ್ತಾರೆ. ಒಬ್ಬರು ಸಂಪೂರ್ಣ ಮಾಂಸಹಾರಿಗಳಾದರೆ ಇನ್ನೊಬ್ಬರು ಸಸ್ಯಹಾರ ಮತ್ತು ಮಾಂಸಹಾರ ಎರಡನ್ನು ಸೇವಿಸುತ್ತಾರೆ. ಒಬ್ಬರು ಬಲಗಡೆಯಿಂದ ಬರೆದರೆ ಇನ್ನೊಬ್ಬರು ಎಡಗಡೆಯಿಂದ ಬರೆಯುತ್ತಾರೆ. ಒಬ್ಬರಿಗೆ ಶುಕ್ರವಾರ ಒಳ್ಳೆಯದಾದರೆ ಇನ್ನೊಬ್ಬರಿಗೆ ಗುರುವಾರ ಒಳ್ಳೆಯದು. ಒಬ್ಬರಿಗೆ ನಮಾಜು ಒಳ್ಳೆಯದಾದರೆ ಇನ್ನೊಬ್ಬರಿಗೆ ಪೂಜೆ ಒಳ್ಳೆಯದು. ಒಬ್ಬರಿಗೆ ಮೆಕ್ಕ ಪವಿತ್ರ ಸ್ಥಳವಾದರೆ ಇನ್ನೊಬ್ಬರಿಗೆ ಕಾಶಿ ಪವಿತ್ರ.

ಆದರೆ ಎಲ್ಲರೂ ಆಹಾರವನ್ನೇ ಊಟ ಮಾಡುತ್ತಾರೆ, ನೀರನ್ನು ಕುಡಿಯುತ್ತಾರೆ, ಗಾಳಿಯನ್ನೇ ಉಸಿರಾಡುತ್ತಾರೆ. ಎಲ್ಲರೂ ಬಹುತೇಕ ಒಂದೇ ರೀತಿಯ ಕೌಟುಂಬಿಕ ವ್ಯವಸ್ಥೆಯನ್ನು ಹೊಂದಿದ್ದಾರೆ. ಎಲ್ಲರ ಸಂತಾನೋತ್ಪತ್ತಿಯು ಒಂದೇ ರೀತಿಯಾಗಿರುತ್ತದೆ. ಎಲ್ಲರ ನೋವು ನಲಿವು, ಕಷ್ಟ ಸುಖ, ಭಾವನೆಗಳು ಬಹುತೇಕ ಒಂದೇ ರೀತಿ ಇರುತ್ತವೆ. ಇವುಗಳಲ್ಲಿ ಯಾವ ಭಿನ್ನತೆಯೂ ಇಲ್ಲ.

ಅನಾವಶ್ಯಕವಾಗಿ ದ್ವೇಷವನ್ನು ಬಿತ್ತುವ ಕೆಲಸ ಯಾರೂ ಮಾಡಬಾರದು. ಈ ಮಾತುಗಳು ಕೇವಲ ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಮಾತ್ರವಲ್ಲ. ಭಾರತದ ಆ ರೀತಿ ವರ್ತನೆ ಮಾಡುವ, ಹೇಳಿಕೆ ನೀಡುವ ಇತರ ಎಲ್ಲರಿಗೂ ಸಹ ಸಮನಾಗಿ ಅನ್ವಯಿಸುತ್ತದೆ.

ನಿಜಕ್ಕೂ ಸೇನಾಧಿಕಾರಿ ಶಾಂತಿಯ ಸಮಯದಲ್ಲಿ ಅತ್ಯಂತ ಹೆಚ್ಚು ಸಂಯಮದಿಂದ ವರ್ತಿಸಬೇಕು. ಏಕೆಂದರೆ ಯುದ್ಧ ಅಂತಿಮ ಅಸ್ತ್ರವಾಗುವವರೆಗೂ ಅವರಿಗೆ ಸಂಧಾನವೇ ಬಹುಮುಖ್ಯವಾಗಬೇಕು. ನಿಜಕ್ಕೂ ಯುದ್ಧದಲ್ಲಿ ಅತಿ ಹೆಚ್ಚು ಸಾವು ನೋವಾಗುವುದು ಸಾಮಾನ್ಯವಾಗಿ ಸೈನಿಕರಿಗೇ. ಅಂತಹ ಯಾರೋ ಹೆತ್ತ ಮಕ್ಕಳ ಜೀವದ ಮುಖ್ಯಸ್ಥರಾಗುವ ಸೇನಾ ಜನರಲ್ ಗಳು ಈ ರೀತಿ ಹುಚ್ಚುಚ್ಚಾಗಿ ಹೇಳಿಕೆಗಳನ್ನು ನೀಡಬಾರದು. ಅದಕ್ಕಾಗಿಯೇ ಹೇಳಿದ್ದು ರಕ್ಷಣೆ ಹೊರತುಪಡಿಸಿ ಸೈನಿಕರಿಗೆ ಎಲ್ಲಕ್ಕಿಂತ ಹೆಚ್ಚು ಮಾನವೀಯತೆ ಬೇಕಾಗುತ್ತದೆ. ಆಗ ಯುದ್ಧಗಳು ತೀರಾ ಅಪರೂಪ ಆಗುತ್ತದೆ. ಇಲ್ಲದಿದ್ದರೆ ಮನುಷ್ಯ ಕುಲವೇ ನಾಶವಾಗುತ್ತದೆ.

ಯಾರೋ ರಾಜಕಾರಣಿ ತನ್ನ ತೆವಲಿಗೆ ಈ ರೀತಿ ಹೇಳಿಕೆ ಕೊಟ್ಟಿದ್ದರೆ ಸ್ವಲ್ಪ ಮಟ್ಟಿಗೆ ನಿರ್ಲಕ್ಷಿಸಬಹುದಿತ್ತು. ಆದರೆ ಎರಡು ಧರ್ಮಗಳ ಬಗ್ಗೆ ದ್ವೇಷ ಬರುವ ರೀತಿಯಲ್ಲಿ ಸೈನಿಕ ಮುಖ್ಯಸ್ಥರು ಮಾತನಾಡಿದ್ದು ಖಂಡಿತ ಅಕ್ಷ್ಯಮ್ಯ ಅಪರಾಧ.

ಈಗಲಾದರೂ ಅವರು ಭಾರತ ಮತ್ತು ಪಾಕಿಸ್ತಾನ ಹಾಗೂ ಹಿಂದೂ ಮುಸ್ಲಿಂ ಇಬ್ಬರ ಕ್ಷಮೆಯನ್ನು ಕೇಳಿ ಇಬ್ಬರ ನಡುವೆ ಸೌಹಾರ್ದತೆಯ ಮಾತನಾಡಲಿ. ಅವರ ಧರ್ಮವನ್ನು ಅವರು ಗೌರವಿಸಲಿ, ಪ್ರೀತಿಸಲಿ. ಇನ್ನೊಬ್ಬರ ಧರ್ಮ ದ್ವೇಷವೂ ಅಲ್ಲ, ಕೆಟ್ಟದ್ದು ಅಲ್ಲಾ. ಎರಡು ಒಂದೇ. ಸಣ್ಣ ಆಚರಣೆಗಳ ಭಿನ್ನಾಭಿಪ್ರಾಯ ಸಹಜವಾಗಿಯೇ ಇರುತ್ತದೆ. ಅದನ್ನು ಎತ್ತಿ ಹೇಳುವ ಅವಶ್ಯಕತೆ ಇಲ್ಲ.

ಮುಖ್ಯವಾಗಿ ಎಲ್ಲಕ್ಕಿಂತ ಹೆಚ್ಚಾಗಿ ನಾಗರಿಕ ಧರ್ಮವೇ ಅತ್ಯಂತ ಶ್ರೇಷ್ಠವಾದದ್ದು, ಜೀವಪರ ನಿಲುವೇ ಅತ್ಯಂತ ಮಹತ್ವವಾದದ್ದು …..

ಸಾಮಾನ್ಯ ಜನರಾದ ನಾವು ಯಾವ ದೇಶವನ್ನು, ಯಾವ ಧರ್ಮವನ್ನು ದ್ವೇಷಿಸದೆ ನಮ್ಮ ಬದುಕನ್ನು ಪ್ರೀತಿಸುತ್ತಾ ಮುನ್ನಡೆಯೋಣ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

5 hours ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

6 hours ago

ಮನೆ ಮಾಲೀಕರ ಮುಂದೆಯೇ ಮನೆ ದೋಚಿ ಪರಾರಿಯಾಗಿದ್ದ ಕಳ್ಳ ಲಾಕ್‌!

ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…

7 hours ago

ಕೋಳಿಫಾರ್ಮ್‌ಗೆ ಚಿರತೆ ದಾಳಿ ಶಂಕೆ: 950ಕ್ಕೂ ಅಧಿಕ ಕೋಳಿಮರಿಗಳು ಬಲಿ!

  ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…

7 hours ago

ಯೋಜನಾ ಪ್ರಾಧಿಕಾರಕ್ಕೆ ಮುನಿರಾಜು ಆಯ್ಕೆ: ಯುವ ಕಾಂಗ್ರೆಸ್‌ನಿಂದ ಆತ್ಮೀಯ ಅಭಿನಂದನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…

11 hours ago

ವಿಯೆಟ್ನಾಂನಿಂದ 1.38 ಕೋಟಿ ಮೌಲ್ಯದ ಹೈಡ್ರೋಫೋನಿಕ್ ಗಾಂಜಾ ಸಾಗಾಟ: ಆರೋಪಿ ಬಂಧನ

ದೇವನಹಳ್ಳಿ: ವಿಯೆಟ್ನಾಂನ ಹಾನೊಯ್ ನಗರದಿಂದ ಬೆಂಗಳೂರಿಗೆ ವಿಮಾನದ ಮೂಲಕ ಹೈಡ್ರೋಫೋನಿಕ್ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಯನ್ನು ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ…

13 hours ago