Categories: ಕೋಲಾರ

ದಲಿತ ಸಂಘಟನೆಗಳಲ್ಲಿನ ಉಪ ಜಾತಿಗಳ ವಿಂಗಡಣೆಯಿಂದ ಸಂಘಟನೆಗೆ ಹಿನ್ನಡೆ- ಹೆಣ್ಣೂರು ಶ್ರೀನಿವಾಸ್

ಕೋಲಾರ: ದಲಿತ ಸಮುದಾಯಗಳ ಮಧ್ಯೆ ಉಪ ಜಾತಿಗಳ ಸೃಷ್ಟಿ ಸೇರಿದಂತೆ ನಮ್ಮೊಳಗಿಳ ಭಿನ್ನಾಭಿಪ್ರಾಯ, ಭಿನ್ನ ಚಿಂತನೆ ಹಾಗೂ ಜಾತಿ ವ್ಯವಸ್ಥೆಯನ್ನು ಛಿದ್ರಗೊಳಿಸಿ ಸಂಘಟನೆಗಳ ಬಲ ಹಿನ್ನಡೆಯಿಂದಾಗಿ ಕೇಂದ್ರ ಸಚಿವ ಅಮಿಶ್ ಷಾ ಅಂತಹವರು ಕೂಡ ಅಂಬೇಡ್ಕರ್ ಬಗ್ಗೆ ಹೀನಾಯವಾಗಿ ಅಪಮಾನ ಮಾಡುವ ಸಂದರ್ಭ ಬಂದಿದೆ ಎಂದು ದಸಂಸ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು

ನಗರದ ನಚಿಕೇತನ ನಿಲಯದ ಬುದ್ದ ವಿಹಾರದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ಸಂಘಟನೆಯ ವತಿಯಿಂದ ಜಿಲ್ಲಾ ಸಂಘಟನಾ ಸಂಚಾಲಕ ರೋಜರಪಲ್ಲಿ ವೆಂಕಟರಮಣ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜಕೀಯ ಇಚ್ಛಾಶಕ್ತಿಗಾಗಿ ಜಾತಿ ಜಾತಿಗಳ ಮಧ್ಯೆ ದ್ವೇಷವನ್ನು ಉಂಟು ಮಾಡಿದ್ದು ಅಲ್ಲದೇ ಜನಕ್ಕೆ ತಪ್ಪು ಸಂದೇಶಗಳನ್ನು ನೀಡಲು ಹೊರಟಿದ್ದಾರೆ ದಲಿತ ಸಂಘಟನೆಗಳು ಒಗ್ಗೂಡುವಿಕೆಯಿಂದ ಸಮಾಜದಲ್ಲಿ ಶೋಷಣೆ ದಬ್ಬಾಳಿಕೆ ತಡೆಗಟ್ಟಲು ಸಾಧ್ಯವಿದೆ ಎಂದರು.

ಶತಶತಮಾನಗಳಿಂದ ಸಮಾಜದ ಕೆಳವರ್ಗದವರು ಶೋಷಣೆಗೊಳಗಾಗುತ್ತಿದ್ದಾರೆ. ಅಧಿಕಾರ ಪಡೆಯುವ ಸಂದರ್ಭದಲ್ಲಿಯೇ ದಲಿತ ಸಮುದಾಯ ಒಡೆಯಿತು. ದಲಿತರಲ್ಲಿನ ಭಿನ್ನಾಭಿಪ್ರಾಯ ಹಾಗೂ ಅಸಹಾಯಕತೆಯಿಂದಾಗಿಯೇ ದಲಿತ ಸಂಘಟನೆ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ
ವಿವಿಧ ಕಾರಣಗಳಿಗೆ ದೂರವಾಗಿರುವ ಶೋಷಿತ ಸಮುದಾಯಗಳನ್ನು ಒಗ್ಗೂಡಿಸುವುದಕ್ಕೆ ಮೊದಲು ಆದ್ಯತೆ ನೀಡಬೇಕಿದೆ ಈ ಮೂಲಕ ಸಂಘಟನೆ ಬಲಪಡಿಸಿ ಶೋಷಿತರ ಪರ ಹೋರಾಟಕ್ಕೆ ಮುಂದಾಗಬೇಕಿದೆ. ಎಲ್ಲಿಯವರೆಗೆ ಶೋಷಿತರು ಜಾತಿ, ಉಪಜಾತಿ ವ್ಯವಸ್ಥೆಯಿಂದ ಹೊರಬರುವುದಿಲ್ಲವೋ ಅಲ್ಲಿವರೆಗೆ ಹೋರಾಟಗಳಿಗೆ ಬೆಲೆ ದೊರೆಯಲ್ಲ ಎಂದರು.

ಶೋಷಿತರ ನೋವಿಗೆ ಸ್ಪಂದಿಸುವ ಹಾಗೂ ಎಲ್ಲರನ್ನೂ ಗೌರವಿಸುವ ವಾತಾವರಣ ಬೆಳೆಯಬೇಕು. ಒಗ್ಗಟ್ಟಿನ ಹೋರಾಟವಿಲ್ಲದೇ ಅಧಿಕಾರಕ್ಕೇರುವುದು ಅಸಾಧ್ಯ ಹೃದಯವಂತಿಕೆಯ ನಾಯಕತ್ವ ಸಂಘಟನೆಗೆ ಅವಶ್ಯಕ. ಆಗ ಮಾತ್ರ ಯಶಸ್ಸು ದೊರೆಯಲು ಸಾಧ್ಯ ದಲಿತರ ಅಭಿವೃದ್ಧಿಗೆ ನ್ಯಾ ನಾಗಮೋಹನ್ ದಾಸ್ ಅಯೋಗದ ವರದಿಯಿಂದ ದಲಿತರ ಅಭಿವೃದ್ಧಿ ಸಾಧ್ಯ ಮನುವಾದಿ ಅಂತಹ ಮನಸ್ಥಿತಿಯನ್ನು ದೂರ ಇಡುವಂತೆ ಸಂಘಟಿತರಾಗಿ ಕೆಲಸ ಮಾಡೋಣ ಎಂದರು.

ಈ ಸಂದರ್ಭದಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್, ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ, ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕ ಕಟ್ಟಿ ವೆಂಕಟರಮಣ, ರೋಜರಪಲ್ಲಿ ವೆಂಕಟರಮಣ ಅವರ ಸಹೋದರ ನಾರಾಯಣಸ್ವಾಮಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಗೌನಪಲ್ಲಿ ವೆಂಕಟರಮಣ, ಚವ್ವೇನಹಳ್ಳಿ ವಿಜಿ, ಮುನಿಚೌಡಪ್ಪ, ಮುದವತ್ತಿ ಕೇಶವ, ಗೋವಿಂದರಾಜು, ವೆಂಕಟೇಶ್, ಚಂದ್ರಪ್ಪ, ಕೂಸಂದ್ರ ರೆಡ್ಡೆಪ್ಪ, ಮುನಿರಾಜು, ಚಂದ್ರಕಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Ramesh Babu

Journalist

Recent Posts

1 ವರ್ಷ 4 ತಿಂಗಳ ಮಗುವಿನ ಕಣ್ಣು ದಾನ: ಸಾವಿನಲ್ಲೂ ಮಾನವೀಯತೆ ಮೆರೆದ ಕುಟುಂಬ

ದೊಡ್ಡಬಳ್ಳಾಪುರ: ನಗರದ ದೇವರಾಜನಗರ ನಿವಾಸಿಗಳಾದ ಭರತ್ ಅವರ 1 ವರ್ಷ 4 ತಿಂಗಳ ಮಗ ಪೋಷಕ್ ಆರೋಗ್ಯದ ವ್ಯತ್ಯಯದಿಂದ ವಿಧಿವಶರಾದ…

12 hours ago

ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಶಿಕ್ಷಣಕ್ಕೆ ‌ಪೂರಕ- ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್‌ ರಾಜ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ

ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯು ಶಿಕ್ಷಣಕ್ಕೆ ‌ಪೂರಕವಾಗಿದೆ. ಇದನ್ನು ‌ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್‌ನ…

13 hours ago

ಫ್ರಿಡ್ಜ್ ಕ್ಲೀನ್ ಮಾಡುವಾಗ ವಿದ್ಯುತ್ ಶಾಕ್: ಮಹಿಳೆ ದುರ್ಮರಣ

ದೊಡ್ಡಬಳ್ಳಾಪುರ: ಫ್ರಿಡ್ಜ್ ಸ್ವಚ್ಛಗೊಳಿಸುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ ದೊಡ್ಡಬಳ್ಳಾಪುರ ನಗರದ ಚೈತನ್ಯನಗರದಲ್ಲಿ ನಡೆದಿದೆ. ಮೃತರನ್ನು…

19 hours ago

“ಎಲ್ಲವೂ ವಿಫಲವಾದಾಗ ತಾಳ್ಮೆ ಸಫಲವಾಗುತ್ತದೆ”…….

" ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ....." ಎಂಬ ದಾರ್ಶನಿಕರ ಮಾತು ಎಷ್ಟೊಂದು ಅನುಭಾವದ ಅರ್ಥಪೂರ್ಣ ಮಾತಲ್ಲವೇ.... ಇದಕ್ಕೆ ಅತ್ಯಂತ ನೈಜ…

1 day ago

ಎಲ್ರಿ ಅಧಿಕಾರಿಗಳು, ಜನರ ಸಮಸ್ಯೆ ಕೇಳೋದ್ಯಾರು..?- ತಹಶೀಲ್ದಾರ್ ಮಲ್ಲಪ್ಪ ಕೆ ಯರಗೋಳಗೆ ಸಚಿವ ಕೆ.ಎಚ್ ಮುನಿಯಪ್ಪ ತೀವ್ರ ತರಾಟೆ

ಎಲ್ರಿ ಅಧಿಕಾರಿಗಳು, ಜನ್ರ ಸಮಸ್ಯೆ ಕೇಳೋದ್ಯಾರು..?ಜನ ನನಗೆ ವೋಟ್ ಹಾಕಿದ್ಯಾಕೆ..? ಅಧಿಕಾರಿಗಳು ಇಲ್ಲಿದ್ರೆ ಜನರ ಸಮಸ್ಯೆ ಕೂಡಲೇ ಬಗೆಹರಿಸಬಹುದಲ್ವಾ.. ವೋಟ್…

2 days ago

1 ಕೋಟಿ ರೂ. ವೆಚ್ಚದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ

ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕನಾಗಿರುವ ಜೊತೆಗೆ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿದ್ದು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತಗಳ ಸರ್ವಾಂಗೀಣ ಅಭಿವೃದ್ಧಿಗಳಿಗೆ…

2 days ago