ಡಾಬಾ ಬಳಿ ಯುವಕ ಕೊಲೆ ಪ್ರಕರಣ: ಯುವಕನ ಹೃದಯದೊಳಗೆ‌ ಒಂದೂವರೆ ಇಂಚು ಒಳಹೊಕ್ಕ ಮೊನಚಾದ ವಸ್ತು: ಆರೋಪಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು

ನ.12ರ ಭಾನುವಾರ ಸಂಜೆ ತಾಲೂಕಿನ ರಾಮೇಶ್ವರ ಗೇಟ್ ಸಮೀಪವಿರುವ ಖಾಸಗಿ ಡಾಬಾವೊಂದರಲ್ಲಿ ಯುವಕರು ಫೋಟೋ‌ ಶೂಟ್ ಮಾಡಿಕೊಳ್ಳುತ್ತಿರವಾಗ ಕಿಡಿಗೇಡಿಗಳ ಗುಂಪೊಂದು ಸ್ಥಳಕ್ಕೆ ಬಂದು ಬೇಕಂತಲೇ ಕಿರಿಕ್ ಮಾಡಿ ಸೂರ್ಯ(ಸೂರಿ) ಎಂಬ ಯುವಕನಿಗೆ ಥಳಿಸಿ, ಕೈಯಲ್ಲಿದ್ದ ಮೊನಚಾದ ವಸ್ತುವಿನಿಂದ ಹೃದಯ ಭಾಗಕ್ಕೆ ಇರಿದು ಕೊಲೆ ಮಾಡಲಾಗಿತ್ತು. ಇರಿತದ ರಭಸಕ್ಕೆ ಸುಮಾರು ಒಂದೂವರೆ ಇಂಚು ಯುವಕ‌ನ ಹೃದಯದೊಳಗೆ ಹೊಕ್ಕಿದೆ ಎನ್ನಲಾಗಿದೆ.

ಮೃತ ಯುವಕ ಸೂರ್ಯ ಜಾಲಪ್ಪ ಕಾಲೇಜ್ ನಲ್ಲಿ ದ್ವಿತೀಯಾ ವರ್ಷದ ಐಟಿಐ ವ್ಯಾಸಂಗ ಮಾಡುತ್ತಿದ್ದು, ಹೆತ್ತವರಿಗೆ ಒಬ್ಬನೇ ಮಗನಾಗಿದ್ದನು. ಕುಟುಂಬಕ್ಕೆ ಆಸರೆಯಾಗ್ತೆನೆಂದು ನಂಬಿದ ಕುಟುಂಬದವರಿಗೆ ಆತನ ಸಾವು ಬರ ಸಿಡಿಲಿನಂತೆ ಬಡಿದಿದೆ, ‘ನಿನ್ನ ಸ್ನೇಹಿತರೇಲ್ಲಾ ಬಂದಿದ್ದಾರೆ, ಎದ್ದು ಬಂದ್ದು ಫೋಟೋ ತೆಗಿ ಬಾರೋ ಮಗನೇ ಎಂದು ಮಗನ ಮೃತದೇಹದ ಮುಂದೆ ಕಣ್ಣೀರಿಟ್ಟ ಆತನ ಹೆತ್ತಮ್ಮ. ಮೃತ ಯುವಕನ ತಾಯಿ ಅಳುತ್ತಿರುವ ದೃಶ್ಯ ಅಲ್ಲಿದ್ದವರ ಹೃದಯ ಕಲುಕುವಂತಿತ್ತು.

ಘಟನೆ ವಿವರ

ಕೊಲೆಗೀಡಾದ ಯುವಕ ಸೂರ್ಯನಿಗೆ ಫೋಟೋಗ್ರಾಫಿಯ ಹವ್ಯಾಸ ಇತ್ತು, ನಿನ್ನೆ ಪ್ರಿವೆಡ್ಡಿಂಗ್ ಶೂಟ್ ಮಾಡಲು ಸ್ನೇಹಿತರಿಂದ ಕ್ಯಾಮೆರಾ ತೆಗೆದುಕೊಂಡು ಬಂದಿದ್ದ, ಪ್ರಿವೆಂಡ್ಡಿಂಗ್ ಶೂಟ್ ಮುಗಿದ ನಂತರ ತನ್ನ ಸ್ನೇಹಿತರ ಜೊತೆ ಫೋಟೋ ಶೂಟ್ ಮಾಡಲು ಎ ಡಾರ್ಕ್ ಫ್ಯಾಮಿಲಿ ರೆಸ್ಟೋರೆಂಟ್ ಗೆ ಬಂದಿದ್ದ, ರೆಸ್ಟೋರೆಂಟ್ ಮುಂಭಾಗದಲ್ಲಿನ ಸೀನರಿಯ ಮುಂದೆ ಫೋಟೋ ಶೂಟ್ ಮಾಡುವಾಗ, ಮದ್ಯ ಸೇವನೆಗೆಂದು ಬಂದಿದ್ದ ದಿಲೀಪ್ ಮತ್ತು ಆತನ ಸ್ನೇಹಿತರು ಡಾಬಾದಿಂದ ಹೊರಗೆ ಬಂದಿದ್ದಾರೆ, ದಿಲೀಪ್ ಮತ್ತು ಆತನ ಗ್ಯಾಂಗ್ ತಮ್ಮ  ಫೋಟೋ ಹಿಡಿಯುವಂತೆ ಸೂರ್ಯನಿಗೆ ಹೇಳಿದ್ದಾರೆ, ಸೂರ್ಯ ಅವರ ಫೋಟೋಗಳನ್ನ ಸೆರೆ ಹಿಡಿದಿದ್ದಾನೆ,  ತೆಗೆದ ಫೋಟೋಗಳನ್ನ ಮೊಬೈಲ್ ಗೆ ಕಳಿಸೆಂದು ದಿಲೀಪ್ ಗ್ಯಾಂಗ್ ನಲ್ಲಿದ್ದ ಒಬ್ಬ ಹೇಳಿದ್ದಾನೆ. ಕ್ಯಾಮೆರಾದಿಂದ ಮೊಬೈಲ್ ಗೆ ಫೋಟೋ ಕಳಿಸಲು ಆಗೋದಿಲ್ಲ ಎಂದೇಳಿದ್ದಾನೆ , ಇಷ್ಟಕ್ಕೆ ಕೋಪಗೊಂಡ ದಿಲೀಪ ಸೂರ್ಯನ ಕೈಯಿಂದ ಕ್ಯಾಮೆರಾ ಕಿತ್ತುಕೊಂಡಿದ್ದಾನೆ. ಇದರಿಂದ ಕೆರಳಿದ ಸೂರ್ಯ ದಿಲೀಪನ ಕುತ್ತಿಗೆ ಪಟ್ಟಿಯನ್ನ ಹಿಡಿದುಕೊಂಡಿದ್ದಾನೆ, ಈ ವೇಳೆ ದಿಲೀಪ ತನ್ನ ಕೈಯಲ್ಲಿದ್ದ ಚುಪಾದ ವಸ್ತುವಿನಿಂದ ಎದೆಗೆ ಚುಚ್ಚಿದ್ದಾನೆ, ಎದೆಯನ್ನ ಹಿಡಿದುಕೊಂಡ ಸೂರ್ಯ ಅಲ್ಲಿಯೇ ಕುಸಿದು ಬಿದ್ದಿದ್ದಾನೆ, ತಕ್ಷಣವೇ ಆಸ್ಪತ್ರೆಗೆ ಸೂರ್ಯನನ್ನ ಸಾಗಿಸಲಾಯಿತು, ಆದರೆ ತೀರ್ವ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.

ಪ್ರಕರಣಕ್ಕೆ ಕುಂಟನಹಳ್ಳಿಯ ದೀಲಿಪ್ ವಿರುದ್ಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ, ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇಂದು ಮರಣೋತ್ತರ ಪರೀಕ್ಷೆ ನಡೆದ‌ ನಂತರ ಕಛೇರಿಪಾಳ್ಯದಲ್ಲಿರುವ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.  ಸ್ನೇಹಿತರು, ಸಂಬಂಧಿಕರು‌ ಸೇರಿದಂತೆ ಸಾರ್ವಕಜನಿಕರು ಮೃತ ಸೂರ್ಯನ ಅಂತಿಮ‌ ದರ್ಶನ ಪಡೆದು‌ ಕಣ್ಣೀರಿಟ್ಟರು.

Ramesh Babu

Journalist

Recent Posts

ಎಂಎಸ್ ಜಿಪಿ ಘಟಕಕ್ಕೆ ಬಂದ ಹೆಚ್ಚುವರಿ ಕಸದ ಲಾರಿಗಳು: ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ಲಾರಿಗಳಿಗೆ ತಡೆ

ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಮಂಕಳಾದ ಬಳಿಯ ಬೆಂಗಳೂರು ಕಸದ ವಿಲೇವಾರಿ ಘಟಕ ಎಂಎಸ್ ಜಿಪಿ ಘಟಕಕ್ಕೆ ಮಂಗಳವಾರ ಹೆಚ್ಚುವರಿ ಕಸದ ಲಾರಿಗಳು…

9 hours ago

40 ಸಾವಿರ ಲಂಚ ಪಡೆಯುವಾಗ ವಿಶೇಷ ಭೂಸ್ವಾಧೀನಾಧಿಕಾರಿ ಸೇರಿದಂತೆ ಇಬ್ಬರು ಲೋಕಾಯುಕ್ತ ಬಲೆಗೆ.!

ಶಿವಮೊಗ್ಗ : ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಶಿವಮೊಗ್ಗ ಹಿಂದಿನ ಅಪರ ಜಿಲ್ಲಾಧಿಕಾರಿಯಾಗಿದ್ದ ಸಿದ್ದಲಿಂಗ ರೆಡ್ಡಿ ಮತ್ತು…

10 hours ago

Accident Update: ಗುಂಡಮ್ಮಗೆರೆ ಕ್ರಾಸ್ ಬಳಿ ಬೈಕ್ -ಖಾಸಗಿ ಕಂಪನಿ ಬಸ್ ನಡುವೆ ಅಪಘಾತ‌ ಪ್ರಕರಣ: ಬೈಕ್ ಸವಾರ ಸಾವು

ಬೈಕ್ -ಖಾಸಗಿ ಕಂಪನಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ಸುಮಾರು…

10 hours ago

ಗುಂಡಮ್ಮಗೆರೆ ಕ್ರಾಸ್ ಬಳಿ ಬೈಕ್ -ಖಾಸಗಿ ಕಂಪನಿ ಬಸ್ ನಡುವೆ ಅಪಘಾತ: ಬೈಕ್ ಸವಾರನಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು

ಬೈಕ್ -ಖಾಸಗಿ ಕಂಪನಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಂದು ಸಂಜೆ ಸುಮಾರು…

10 hours ago

2026ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ದಿನಾಂಕ ಹಾಗೂ ಪರೀಕ್ಷೆ 2 ರ ವೇಳಾಪಟ್ಟಿ ಪ್ರಕಟ

2026ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ದಿನಾಂಕ ಹಾಗೂ ಪರೀಕ್ಷೆ 2 ರ ವೇಳಾಪಟ್ಟಿಯನ್ನು ಶಿಕ್ಷಣ…

12 hours ago

ಗೀತಂ ಯೂನಿವರ್ಸಿಟಿಯಲ್ಲಿ ಯುವತಿ ಆತ್ಮಹತ್ಯೆ ಪ್ರಕರಣ: ಸ್ಥಳಕ್ಕೆ ಎಸ್ಪಿ‌ ಚಂದ್ರಕಾಂತ್ ಭೇಟಿ, ಪರಿಶೀಲನೆ, ಪ್ರತಿಕ್ರಿಯೆ

ಆಕೆ ತಂದೆ ತಾಯಿಗೆ ಇದ್ದ ಏಕೈಕ‌ ಮಗಳು. ಹಾಗಾಗಿ ತಂದೆ ತಾಯಿಗೆ ಮಗಳು ಎಂದರೆ ಎಲ್ಲಿಲ್ಲದ ಪ್ರೀತಿ‌. ಮಗಳು ಚೆನ್ನಾಗಿ…

14 hours ago