ಜಿಲ್ಲಾಡಳಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಯುವಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಸಂಚಲನ(ರಿ.) ಸಹಯೋಗದೊಂದಿಗೆ ಜಾನಪದ ವಾದ್ಯ, ಜಾನಪದ ಗೀತೆ ಹಾಗೂ ಜಾನಪದ ನೃತ್ಯಗಳ ತರಬೇತಿ ಶಿಬಿರಕ್ಕೆ ನ. 4ರಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಾನಪದ ವಾಧ್ಯವನ್ನು ನುಡಿಸುವ ಮೂಲಕ ಉದ್ಘಾಟಿಸಲಾಯಿತು.
ಯುವ ಸಂಚಲನದ ಅಧ್ಯಕ್ಷರಾದ ಚಿದಾನಂದ ಮೂರ್ತಿಯವರು ಮಾತನಾಡಿ, “ಬಾಯಿಂದ ಬಾಯಿಗೆ ತಲುಪಿರುವ ಕಾರಣ ಜಾನಪದವು ಇನ್ನು ಉಳಿದಿದೆ. ಆದರೆ, ಈಗ ಜಾನಪದದ ಸ್ವರೂಪ ಬದಲಾಗಿ ಆಧುನಿಕ ಸಂಗೀತದ ಜೊತೆ ಸೇರಿ ಮೊಬೈಲ್ ಇಂದ ಮೊಬೈಲ್ ಗೆ ಫಾರ್ವರ್ಡ್ ಆಗುತ್ತಿದೆ. ಎಲ್ಲಾ ಹಾಡುಗಳಿಗೂ ಇತಿಹಾಸವಿರುತ್ತದೆ. ಹಾಡುಗಳಿಗೂ ಆರೋಗ್ಯಕ್ಕೂ ನೇರವಾಗಿ ಸಂಬಂಧವಿರುತ್ತದೆ. ಮಾನಸಿಕ ಖಿನ್ನತೆಯಿಂದ ಹೊರಬರಲು ಹಾಡುವುದು ಒಂದು ಔಷಧಿ. ಪ್ರದರ್ಶನಕ್ಕಲ್ಲದಿದ್ದರೂ ನಮ್ಮ ಖುಷಿಗಾಗಿಯಾದರು ವಾದ್ಯವನ್ನು, ಹಾಡುವುದನ್ನು ಕಲಿಯಬೇಕು. ತುಂಬಾ ನೊಂದವರು ನೋವಿನಿಂದ ಹೋರಬರಲು ವಾದ್ಯ ಬಳಸುತ್ತಿದ್ದರು” ಎಂದು ಹೇಳುತ್ತಾ ಜಾನಪದ ತರಬೇತಿಯ ಉದ್ದೇಶ ಹಾಗೂ ಸ್ಪರ್ಧೆಯು ಯಾವರೀತಿ ನಡೆಯುತ್ತದೆ ಎಂದು ತಿಳಿಸಿದರು.
ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ದಿವಾಕರ್ ನಾಗ್ ರವರು ಶಿಬಿರಾರ್ಥಿಗಳಿಗೆ ಜಾನಪದ ವಾದ್ಯಗಳಾದ ತಮಟೆ, ಚೌಡಿಕೆ, ಗೆಜ್ಜೆ, ದಮಡಿ, ಡಮರುಗ ಮುಂತಾದ ವಾದ್ಯಗಳ ಪರಿಚಯ ಮಾಡಿ ನಂತರ ಮೂಲ ಜಾನಪದ ಗೀತೆಯ ಇತಿಹಾಸವನ್ನು ತಿಳಿಸಿ ತರಬೇತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕರಾದ, ಡಾ. ಭಾರತಿ ಸಾರ್ಮಾಜ್, ಡಾ. ನಂಜಪ್ಪ, ಡಾ.ಮಂಜುಳಮ್ಮ, ಮಹದೇವಯ್ಯ ಕೆ.ಎಂ, ದಿವ್ಯಶ್ರೀ ಹಾಗೂ ಯುವ ಸಂಚಲನ ತಂಡದ ಸದಸ್ಯರಾದ ಸಂಧ್ಯಾ ಮತ್ತು ನವೀನ್ ಉಪಸ್ಥಿತರಿದ್ದರು.
ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ಕರ್ನಾಟಕ ಸೂಫಿಗಳ ಸಾಹಿತ್ಯ ಸಂಸ್ಕೃತಿ ಅನುಸಂಧಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ…
ನಟ ಪ್ರಥಮ್ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ನೋಟಿಸ್ ನ್ನು ರಕ್ಷಕ್ ಬುಲೆಟ್ ಗೆ ನೀಡಲಾಗುತ್ತು.…
ನಟ ಪ್ರಥಮ್ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಕ್ಷಕ್ ಬುಲೆಟ್ ಇಂದು ವಿಚಾರಣೆಗೆ ಹಾಜರಾಗಿದ್ದರು. ಇನ್ಸ್ ಪೆಕ್ಟರ್ ಸಾಧಿಕ್…
ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿ ಇಂದಿಗೆ ಒಂದು ವರ್ಷ ಕಳೆದಿದೆ ಆದರೆ…
ಜಿಲ್ಲೆಯಲ್ಲಿ 10.165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಇದ್ದು, ಬೇಡಿಕೆಗಿಂತ ಹೆಚ್ಚಿನ ರಸಗೊಬ್ಬರ ದಾಸ್ತಾನು ಇದೆ ಹಾಗಾಗಿ ರಸಗೊಬ್ಬರ ಕೊರತೆ…
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿದ್ದ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಆರೋಪ ಸಾಬೀತಾಗಿದೆ. ಪ್ರಜ್ವಲ್ ರೇವಣ್ಣ ಅಪರಾಧಿ…