Categories: ಕೋಲಾರ

ಜನಕ್ಕೆ ಭೂಮಿ ಕೊಡಲಿಕ್ಕೆ ಅವಕಾಶವೇ ಇಲ್ಲವಾಗಿದೆ: ದರ್ಖಾಸ್ತು ಸಮಿತಿ ಇದ್ದು ಪ್ರಯೋಜನವಿಲ್ಲವಾಗಿದೆ-ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ವಿಧಾನಸಭಾ ಕ್ಷೇತ್ರವು ನಗರಸಭೆ ಹಾಗೂ ವೇಮಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಮಂಜೂರಾತಿಗೆ ಅವಕಾಶವಿಲ್ಲವಾಗಿದೆ. ಉಳಿದೆಡೆ ಕೊಡಲು ಜಮೀನೂ ಇಲ್ಲ, ಮಂಜೂರು ಮಾಡಲು ಬಹಳಷ್ಟು ನಿರ್ಬಂಧಗಳಿದ್ದು, ದರ್ಖಾಸ್ತು ಸಮಿತಿ ಇದ್ದು ಏನು ಪ್ರಯೋಜನವಿಲ್ಲವಾಗಿದೆ ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್‌ ಪ್ರಶ್ನಿಸಿದರು.

ನಗರದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ದರ್ಖಾಸ್ತು ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆ (5 ಕಿ.ಮೀ ವ್ಯಾಪ್ತಿ) ಹಾಗೂ ಪಟ್ಟಣ ಪಂಚಾಯಿತಿ (3 ಕಿ.ಮೀ ವ್ಯಾಪ್ತಿ) ವ್ಯಾಪ್ತಿಯಲ್ಲಿ ಭೂಮಂಜೂರಾತಿ ಮಾಡುವಂತಿಲ್ಲ ಎಂಬ ಕಾನೂನು ಇದೆ. ಆದರೆ, ಹೆಚ್ಚಿನವರು ಪಟ್ಟಣ ಪಂಚಾಯಿತಿ ರೂಪುಗೊಳ್ಳುವ ಮುನ್ನವೇ ಅರ್ಜಿ ಹಾಕಿಕೊಂಡಿದ್ದಾರೆ. ಅರ್ಜಿಗಳನ್ನು ವಿಲೇವಾರಿ ಮಾಡಿ ಪಟ್ಟಣ ಪಂಚಾಯಿತಿ ರೂಪಿಸಬೇಕಿತ್ತು. ಈ ವಿಚಾರದ ಬಗ್ಗೆ ಕಂದಾಯ ಸಚಿವರು ಹಾಗೂ‌ ಜಿಲ್ಲಾಧಿಕಾರಿ ಗಳೊಂದಿಗೆ ಜೊತೆ ಚರ್ಚಿಸುತ್ತೇನೆ. ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಭೂಮಂಜೂರಾತಿ ಸಭೆಗೆ ದರ್ಖಾಸ್ತು ಸಮಿತಿ ಸದಸ್ಯರೆಲ್ಲರೂ ಬಂದಿದ್ದರು. ದುರದೃಷ್ಟಕರ ಎಂದರೆ ದರ್ಖಾಸ್ತು ಸಮಿತಿಗೆ ಒಟ್ಟು 17,031 ಅರ್ಜಿಗಳು ಬಂದಿವೆ. ಈ ಪೈಕಿ 16,216 ಅರ್ಜಿ ವಜಾಗೊಂಡಿವೆ. ಬಾಕಿ ಇರುವ ಅರ್ಜಿಗಳು 469. ಭೂಮಂಜೂರಾತಿಗೆ ಅರ್ಹ ಇರುವ ಪ್ರಕರಣ 43. ಭೂಮಂಜೂರಾತಿ ನಿಯಮಾನುಸಾರ ಬಂದಿಲ್ಲದ ಅರ್ಜಿಗಳು 508 ಎಂದು ಮಾಹಿತಿ ನೀಡಿದರು.

ಸುಮಾರು 30 ಗುಂಟೆ ಜಮೀನು ಮೇಲ್ಪಟ್ಟು ಇರುವ ಅಂದರೆ ಜಮೀನು ಇದ್ದೂ ಅರ್ಜಿ ಹಾಕಿರುವ 128 ಅರ್ಜಿಗಳನ್ನು ವಜಾ ಮಾಡಲಾಗಿದೆ. ನಿರ್ಬಂಧಿತ ಅಂತರದಲ್ಲಿರುವುದು ಅಂದರೆ ನಗರಸಭೆ (5 ಕಿ.ಮೀ ವ್ಯಾಪ್ತಿ), ಪಟ್ಟಣ ಪಂಚಾಯಿತಿ (3 ಕಿ.ಮೀ ವ್ಯಾಪ್ತಿ) ವ್ಯಾಪ್ತಿಯಿಂದಲೇ ಭೂಮಂಜೂರಾತಿ ಕೋರಿ 7,987 ಅರ್ಜಿಗಳು ಬಂದಿವೆ. ಗೋಮಾಳ ಜಮೀನು ಲಭ್ಯವಿಲ್ಲ. ಆದರೂ ಅಂಥ ಪ್ರದೇಶದಲ್ಲಿ ಜಮೀನು ಕೋರಿ 6,692 ಅರ್ಜಿಗಳು ಬಂದಿವೆ. ಇವೆಲ್ಲಾ ವಜಾಗೊಂಡಿವೆ. ಅರ್ಜಿದಾರರು ವಾಸವಿಲ್ಲದ ಸ್ಥಳದಲ್ಲಿ ಜಮೀನು ಕೋರಿ ಬಂದಿದ್ದ 24 ಅರ್ಜಿಗಳು ವಜಾಗೊಂಡಿವೆ. 635 ಮಂದಿ ಅನುಭವದ‌ಲ್ಲಿ ಇಲ್ಲದವರು ಅರ್ಜಿ ಹಾಕಿದ್ದು, ವಜಾಗೊಂಡಿವೆ’ ಎಂದರು.

‘ಸ್ಪೀಕರ್‌ ಪೇಪರ್‌ ಎಸೆಯುವುದು ಸರಿಯೇ? ಸದನದೊಳಗೆ ಜಾತಿ, ಧರ್ಮ ಎಂಬುದಿಲ್ಲ. ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್‌ ಮುಸ್ಲಿಂ ಆಗಿದ್ದು, ತಮ್ಮ ಪಕ್ಷದವರನ್ನು ಸದನದಿಂದ ಅಮಾನತುಗೊಳಿಸಿದ್ದಾರೆ ಎಂಬ ಶಾಸಕ ಹರೀಶ್‌ ಪೂಂಜಾ ಮಾತು ಸರಿಯೇ?’ ಎಂದು ಪ್ರಶ್ನಿಸಿದರು.

‘ವಕ್ಫ್‌ ಮಂಡಳಿಯನ್ನೇ ರದ್ದು ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಲು ಮುಂದಾದರೆ ರಾಜ್ಯಗಳ ಒಪ್ಪಿಗೆಯೂ ಬೇಕಾಗುತ್ತದೆ. ಧರ್ಮಗಳಲ್ಲಿನ ಆಚರಣೆ ಪಾಲನೆ ಮಾಡಲು ಅಡ್ಡಿ ಮಾಡಬಾರದು. ಯಾವುದೇ ಧರ್ಮದ ಬಗ್ಗೆ ಟೀಕೆ ಮಾಡಬಾರದು. ತಾರತಮ್ಯ ಮಾಡಲು ಹೋಗಬಾರದು’ ಎಂದರು.

ರಾಜ್ಯದಲ್ಲಿ ಅಗತ್ಯ ವಸ್ತುಗಳ ದರ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿ, ‘ಹಾಲಿನ ದರ 4 ಹೆಚ್ಚಳವಾಗಿದೆ. ಡೀಸೆಲ್‌, ಪೆಟ್ರೋಲ್‌ ದರ ಹೆಚ್ಚಿದೆ. ಖಂಡಿತ ಬಹಳ ಹೊರೆಯಾಗುತ್ತಿದೆ. ನೋಂದಣಿ ಶುಲ್ಕ, ಮುದ್ರಾಂಕ ಶುಲ್ಕ ಹೆಚ್ಚಳವಾಗಿದೆ. ನನಗೇ ಆ ಅನುಭವವಾಗಿದೆ. ಆದರೆ, ಹೆಚ್ಚಳವಾಗಿರುತ್ತಿರುವುದು ಒಳ್ಳೆಯ ಬೆಳವಣಿಗೆ. ಸರ್ಕಾರಕ್ಕೆ ತೆರಿಗೆ ಸಂಗ್ರಹವಾಗುತ್ತದೆ. ಅಭಿವೃದ್ಧಿಗೆ ಹಣ ಬೇಡವೇ ಎಂದು ಕೇಳಿದರು.

ಈ ಸಂದರ್ಭದಲ್ಲಿ ತಹಶಿಲ್ದಾರ್ ಎಂ.ನಯನ, ಸಮಿತಿ ಸದಸ್ಯರಾದ ಸವಿತಾ ಮಂಜುನಾಥ್, ಖಾದ್ರಿಪುರ ಬಾಬು, ಕ್ಯಾಲನೂರು ಬಾಬಾಸಾಬ್ ಸೇರಿದಂತೆ ಅಧಿಕಾರಿಗಳು ಇದ್ದರು.

Ramesh Babu

Journalist

Recent Posts

ದೊಡ್ಡಬಳ್ಳಾಪುರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…

3 hours ago

ಘಾಟಿ ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ಸಂಭ್ರಮ; ಮಹಿಳೆಯರಿಗೆ ಬಳೆ, ಅರಶಿನ–ಕುಂಕುಮ ವಿತರಣೆ

ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…

4 hours ago

ವರಮಹಾಲಕ್ಷ್ಮಿ ಹಬ್ಬ…..

ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…

17 hours ago

ಸುಮಾರು 500 ಕೋಟಿ ಮೌಲ್ಯದ ಜಮೀನು ಖಾತೆ ಬದಲಾವಣೆ ಆರೋಪ: ದೊಡ್ಡಬಳ್ಳಾಪುರ ಉಪವಿಭಾಗದ ಹಿಂದಿನ ಎಸಿ ದುರ್ಗಾಶ್ರೀ ಹಾಗೂ ಕಚೇರಿ ಸಿಬ್ಬಂದಿ ವಿರುದ್ದ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು

ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…

1 day ago

ಹೂ ಕೀಳುವಾಗ ಹಾವು ಕಚ್ಚಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…

1 day ago

ದೇವರಾಜ ಅರಸು ಅವರ ಆಶಯಗಳಿಗೆ ಧ್ವನಿಯಾಗೋಣ-ಡಿಸಿ ಡಾ. ಕೆ.ಎನ್ ಅನುರಾಧ

ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ…

1 day ago