‘ಚೆಕ್’ ಬಳಕೆ ಮಾಡುವ ಮುನ್ನಾ ‘ಬಿ ಕೇರ್ ಫುಲ್’: ಸ್ವಲ್ಪ ಯಾಮಾರಿದ್ರೆ ಸಾಕಷ್ಟು ನಷ್ಟ: 5 ಲಕ್ಷದ ಚೆಕ್ ಕೊಟ್ಟರೆ 65 ಲಕ್ಷ ಎಂದು ತಿದ್ದಿದ ವಂಚಕ: ಭೂ ವ್ಯವಹಾರದಲ್ಲಿ ಕಮಿಷನ್ ಅತಿಯಾಸೆಗೆ ಚೆಕ್ ತಿದ್ದಿದ ಬ್ರೋಕರ್: ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡುವ ವೇಳೆ ತಗಲಾಕೊಂಡ ಭೂಪ

ಭೂ ವ್ಯವಹಾರವನ್ನು ಮಾಡಿಸಿದ್ದ ಮಧ್ಯವರ್ತಿಯೊಬ್ಬ ಜಮೀನು ಖರೀದಿ ಮಾಡಿದ್ದವರಿಂದ ಕಮಿಷನ್ ಹಣಕ್ಕಾಗಿ ಚೆಕ್ ಪಡೆದುಕೊಂಡು ಆ ಚೆಕ್ ಅನ್ನು ತಿದ್ದಿ, ಹಣವನ್ನು ಬ್ಯಾಂಕ್ ನಲ್ಲಿ ಡ್ರಾ ಮಾಡಿಕೊಳ್ಳಲು ಹೋಗಿದ್ದಾಗ ಚೆಕ್ ನ ಅಸಲಿ ಸತ್ಯ ಬಯಲಾಗಿ ಖದೀಮ ಜೈಲುಪಾಲಾಗಿದ್ದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ತಾಲ್ಲೂಕಿನ ಕಸಬಾ ಹೋಬಳಿಯ ದರ್ಗಾಪುರ ಸರ್ವೆ ನಂಬರ್ 32/6 ಮತ್ತು 32/4 ರಲ್ಲಿ ಒಟ್ಟು ಎರಡು ಎಕರೆಯನ್ನು ಜಮೀನು ಮಾಲೀಕರಿಂದ ಆಂಜಿನಪ್ಪ ಎಂಬುವರು ಜಿಪಿಎ ಮಾಡಿಸಿಕೊಂಡಿದ್ದಾರೆ. ಈ ವ್ಯವಹಾರನ್ನು ಎಂ.ಸಿ ಚಂದ್ರಶೇಖರ್ ಎಂಬಾತನ ಮುಂದಾಳತ್ವದಲ್ಲಿ ನಡೆದಿತ್ತು. ಸದರಿ ಕೆಲಸಕ್ಕೆ ಮಧ್ಯವರ್ತಿಯ ಏಜೆಂಟ್ ಕಮಿಷನ್ ಆಗಿ 10 ಲಕ್ಷ ರೂ. ಮಾತನಾಡಿದ್ದರು. ಇದಕ್ಕಾಗಿ ಜಮೀನು ಖರೀದಿ ಮಾಡಿದ್ದ ಆಂಜಿನಪ್ಪ, ಚಂದ್ರಶೇಖರ್ ಅವರಿಗೆ ತಲಾ 5 ಲಕ್ಷ ರೂ.ಗಳ ಎರಡು ಚೆಕ್ ಗಳನ್ನು ನೀಡಿದ್ದರು.

ಮೊದಲ ಚೆಕ್ ನ್ನು ಡ್ರಾ ಮಾಡಿಕೊಂಡಿದ್ದ ಚಂದ್ರಶೇಖರ್ ಎರಡನೇ ಚೆಕ್ ಡ್ರಾ ಮಾಡಿಕೊಳ್ಳುವ ಮುನ್ನಾ ಅತಿಯಾಸೆಗೆ ಬಿದ್ದು 5 ಎಂಬ ಅಂಕಿಯ ಮುಂದೆ ಯಾವುದೇ ಅನುಮಾನ ಬಾರದಂತೆ ಅಂಕಿ ಮತ್ತು ಅಕ್ಷರಗಳಲ್ಲಿ 6 ಎಂಬ ನಂಬರನ್ನು ಬರೆದು ಬ್ಯಾಂಕ್ ನಲ್ಲಿ ಹಣವನ್ನು ಡ್ರಾ ಮಾಡಿಕೊಳ್ಳಲು ಹೋಗಿದ್ದಾನೆ.

ಚೆಕ್ ನೋಡಿದ ಬ್ಯಾಂಕ್ ಸಿಬ್ಬಂದಿ ಅನುಮಾನಗೊಂಡು ಚೆಕ್ ಖಾತೆಯ ಗ್ರಾಹಕರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಬಳಿಕ ಚೆಕ್ ಮಾಲೀಕನು ನಾನು ಕೇವಲ 5 ಲಕ್ಷ ರೂಪಾಯಿಯ ಚೆಕ್ ಕೊಟ್ಟಿದ್ದೇನೆ. 65 ಲಕ್ಷ ರೂ. ಚೆಕ್ ಕೊಟ್ಟಿಲ್ಲ ಎಂದು ಹೇಳಿದಾಗ ಮಧ್ಯವರ್ತಿ ಚಂದ್ರಶೇಖರ್ ಅಸಲಿ ಸತ್ಯ ಹೊರ ಬಂದಿದೆ.

ಇದರಿಂದ ಎಚ್ಚೆತ್ತ ಆಂಜಿನಪ್ಪ ಚೆಕ್ ತಿದ್ದಿ ನಂಬಿಕೆ ದ್ರೋಹ ಎಸಗಿದ ಚಂದ್ರಶೇಖರ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ಆರೋಪಿಯ ನ್ನು ಜೈಲಿಗಟ್ಟಿದ್ದಾರೆ. ಸದ್ಯ ಜಾಮೀನು ಪಡೆದು ಹೊರ ಬಂದಿರೋ ಆರೋಪಿ.

ಜಮೀನು ವ್ಯವಹಾರ ಮಾಡಿಸಿಕೊಟ್ಟ ವಿಶ್ವಾಸಕ್ಕೆ 5 ಲಕ್ಷ ರೂ.ಗಳ ಎರಡು ಚೆಕ್ ಗಳನ್ನು ನೀಡಿದ್ದೇವು, ಅತಿಯಾಸೆಗೆ ಬಿದ್ದ ಮಧ್ಯವರ್ತಿ ಚಂದ್ರಶೇಖರ್ ಚೆಕ್ ತಿದ್ದಿ ಡ್ರಾ ಮಾಡಿಕೊಳ್ಳಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಇಂತಹ ನಂಬಿಕೆ, ವಿಶ್ವಾಸ ದ್ರೋಹಿಗಳಿಗೆ ಕಾನೂನು ರೀತಿಯಾಗಿ ಶಿಕ್ಷೆಯಾಗಬೇಕು ಎಂದು ಚೆಕ್ ಮಾಲೀಕ ಆಂಜಿನಪ್ಪ ತಿಳಿಸಿದ್ದಾರೆ.

Ramesh Babu

Journalist

Recent Posts

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

12 hours ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

20 hours ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

23 hours ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

23 hours ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

1 day ago

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆ ವಿಮೆಗೆ ನೊಂದಾಯಿಸಿ

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…

1 day ago