ಚಿನ್ನದ ಅಂಗಡಿಯಲ್ಲಿ ಚಿನ್ನ ದೋಚಿದ್ದ ಖತರ್ನಾಕ್‌ ಬುರ್ಖಾ ಗ್ಯಾಂಗ್‌: ಚಿನ್ನದ ಓಲೆ ಇದ್ದ ಬಾಕ್ಸ್‌ ಕದ್ದು ಎಸ್ಕೇಪ್‌: ಸದ್ಯ ಪೊಲೀಸರ ಅತಿಥಿಗಳಾದ ಬುರ್ಖಾ ಗ್ಯಾಂಗ್‌

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ. ಚಿನ್ನದ ಅಂಗಡಿಯಲ್ಲಿ ಚಿನ್ನ ದೋಚಿದ್ದ ಖತರ್ನಾಕ್‌ ಬುರ್ಖಾ ಗ್ಯಾಂಗ್‌ ನ್ನು ಬಂಧನ ಮಾಡಲಾಗಿದೆ. ಬಟ್ಟೆ ಖರೀದಿಸುವ ನೆಪದಲ್ಲಿ ಚಿನ್ನದ ಅಂಗಡಿಗೆ ಎಂಟ್ರಿ ಕೊಟ್ಟಿದ್ದ ಬುರ್ಕಾ ಗ್ಯಾಂಗ್‌.  ಚಿನ್ನದ ಓಲೆ ಇದ್ದ ಬಾಕ್ಸ್‌ ಕದ್ದು ಎಸ್ಕೇಪ್‌ ಆಗಿದ್ದ ಐದು ಜನ ಮಹಿಳೆಯರ ಗ್ಯಾಂಗ್‌. ಚಿಂತಾಮಣಿ ನಗರದ ಸೌಂದರ್ಯ್ಯ ಫ್ಯಾಷನ್‌ ಅಂಡ್‌ ಜುವೆಲರ್ಸ್‌ ಅಂಗಡಿಯಲ್ಲಿ ಕಳ್ಳತನ ಮಾಡಲಾಗಿತ್ತು. ಕಳ್ಳತನ ಮಾಡಿ ಒಂದು ವರ್ಷದ ಬಳಿಕ ಮಾಲ್‌ ಸಮೇತ ಖಾಕಿ ಬಲೆಗೆ ಬಿದ್ದ ಬುರ್ಖಾ ಗ್ಯಾಂಗ್‌. ಬುರ್ಖಾ ಗ್ಯಾಂಗ್‌ ಚಿನ್ನದ ಬಾಕ್ಸ್‌ ಕದ್ದಿದ್ದ ವೀಡಿಯೋ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಪ್ಪತ್ತೆಂಟು ಗ್ರಾಂ ತೂಕದ ಏಳು ಲಕ್ಷ ಬೆಲೆ ಬಾಳುವ ಹದಿನಾರು ಜೊತೆ ಓಲೆ ಬಾಕ್ಸ್‌ ಕದ್ದಿದ್ದ ಗ್ಯಾಂಗ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸಿಸಿ ಕ್ಯಾಮೇರಾ ವೀಡಿಯೋ ಆಧರಿಸಿ ಬುರ್ಕಾ ಗ್ಯಾಂಗ್‌ ಗೆ ಬಲೆ ಬೀಸಿದ್ದ ಖಾಕಿ ಪಡೆ. ಕೊನೆಗೂ ಐದು ಜನ ಮಹಿಳೆರಿದ್ದ ಖತರ್ನಾಕ್‌ ಬುರ್ಖಾ ಗ್ಯಾಂಗ್‌ ನ್ನು ಬಂಧನ ಮಾಡಲಾಗಿದೆ.

ಕೋಲಾರ ಮೂಲದ ನಗ್ಮಾ, ಜರೀನಾ, ನಗೀನಾ, ನವೀನಾ, ಮುಬೀನಾ ಬಂಧಿತ ಬುರ್ಖಾ ಗ್ಯಾಂಗ್‌.

ಕಳುವಾಗಿದ್ದ ಚಿನ್ನಾಭರಣಗಳನ್ನು ಅಂಗಡಿ ಮಾಲೀಕನಿಗೆ ಹಿಂದುರುಗಿಸಿದ ಪೊಲೀಸರು. ಆರೋಪಿಗಳಿಂದ ಎಪ್ಪತ್ತು ಗ್ರಾಂ ತೂಕದ ಸುಮಾರು ಏಳು ಲಕ್ಷ ಬೆಲೆ ಬಾಳುವ ಓಲೆ ಬಾಕ್ಸ್‌ ವಶಕ್ಕೆ ಪಡೆಯಲಾಗಿದೆ.

Ramesh Babu

Journalist

Recent Posts

ನಾಳೆ(ಆ.14) ತೂಬಗೆರೆ ಸೊಸೈಟಿಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ (ಎಂ.ಪಿ.ಆರ್.ಎ.ಸಿ.ಎಸ್.) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ…

11 hours ago

“ನನಗೆ ನೀರು ಬೇಕು, ಮಾತಾಡಲ್ಲ” — ಬಾಯಿಗೆ ಪ್ಲಾಸ್ಟರ್ ಹಾಕಿದ ವಾಟಾಳ್ ನಾಗರಾಜ್

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು…

15 hours ago

ಶ್ರಾವಣದ ಹಬ್ಬಗಳಿಗೆ ಮುನ್ನವೇ ಹೂವಿನ ದರದ ಬಿಸಿ! ಇಳುವರಿ ಶೇ.30–40ರಷ್ಟು ಕುಸಿತ: ಹವಾಮಾನ ವೈಪರೀತ್ಯದ ಪರಿಣಾಮ: ಸಾಲುಸಾಲು ಹಬ್ಬಗಳಿಂದ ಬೇಡಿಕೆ ಹೆಚ್ಚಳ

  ಬೆಂಗಳೂರು: ಹಬ್ಬಗಳ ಸೀಸನ್‌ ಆರಂಭಕ್ಕೂ ಮುನ್ನವೇ ಹೂವಿನ ದರ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಲಾರಂಭಿಸಿದೆ. ರಾಜ್ಯದಲ್ಲಿ ಅನಿರೀಕ್ಷಿತ ಬರ,…

15 hours ago

ಕೂಗೇನಹಳ್ಳಿ ಗೇಟ್ ಬಳಿ ಟೊಮೆಟೊ ಲಾರಿ ಪಲ್ಟಿ; ಚಾಲಕ, ಕ್ಲೀನರ್‌ಗೆ ಗಾಯ

ದೊಡ್ಡಬಳ್ಳಾಪುರ: ಟೊಮೆಟೊ ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ದಾಬಸ್‌ಪೇಟೆ–ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯ ಕೂಗೇನಹಳ್ಳಿ ಗೇಟ್ ಸಮೀಪ ಗುರುವಾರ ಬೆಳಗ್ಗೆ…

17 hours ago

ಸ್ವಾತಂತ್ರ್ಯ ಎಂಬ ಅರ್ಥದ ಮೂಲ ಭಾವ ಹುಡುಕುತ್ತಾ ಹೊರಟಾಗ……

ಸ್ವಾತಂತ್ರ್ಯ........ ಸ್ವಾತಂತ್ರ್ಯ ಎಂಬ ಅರ್ಥದ ಮೂಲ ಭಾವವನ್ನು ಹುಡುಕುತ್ತಾ ಹೊರಟಾಗ...... ಸ್ವಾತಂತ್ರ್ಯ ಎಂಬುದು... ಮಾನಸಿಕ ಸ್ಥಿತಿಯೇ, ದೈಹಿಕ ವ್ಯಾಪ್ತಿಯೇ, ಇವೆರಡರ…

2 days ago

ಕುವೆಂಪು ಥೀಮ್ ಪಾರ್ಕ್‌ ಲೋಕಾರ್ಪಣೆಗೊಳಿಸಿದ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವು ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನಿರ್ಮಿಸಿರುವ 'ಕುವೆಂಪು ಥೀಮ್ ಪಾರ್ಕ್'ಅನ್ನು…

2 days ago