ಚಿನ್ನದ ಅಂಗಡಿಯಲ್ಲಿ ಚಿನ್ನ ದೋಚಿದ್ದ ಖತರ್ನಾಕ್‌ ಬುರ್ಖಾ ಗ್ಯಾಂಗ್‌: ಚಿನ್ನದ ಓಲೆ ಇದ್ದ ಬಾಕ್ಸ್‌ ಕದ್ದು ಎಸ್ಕೇಪ್‌: ಸದ್ಯ ಪೊಲೀಸರ ಅತಿಥಿಗಳಾದ ಬುರ್ಖಾ ಗ್ಯಾಂಗ್‌

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ. ಚಿನ್ನದ ಅಂಗಡಿಯಲ್ಲಿ ಚಿನ್ನ ದೋಚಿದ್ದ ಖತರ್ನಾಕ್‌ ಬುರ್ಖಾ ಗ್ಯಾಂಗ್‌ ನ್ನು ಬಂಧನ ಮಾಡಲಾಗಿದೆ. ಬಟ್ಟೆ ಖರೀದಿಸುವ ನೆಪದಲ್ಲಿ ಚಿನ್ನದ ಅಂಗಡಿಗೆ ಎಂಟ್ರಿ ಕೊಟ್ಟಿದ್ದ ಬುರ್ಕಾ ಗ್ಯಾಂಗ್‌.  ಚಿನ್ನದ ಓಲೆ ಇದ್ದ ಬಾಕ್ಸ್‌ ಕದ್ದು ಎಸ್ಕೇಪ್‌ ಆಗಿದ್ದ ಐದು ಜನ ಮಹಿಳೆಯರ ಗ್ಯಾಂಗ್‌. ಚಿಂತಾಮಣಿ ನಗರದ ಸೌಂದರ್ಯ್ಯ ಫ್ಯಾಷನ್‌ ಅಂಡ್‌ ಜುವೆಲರ್ಸ್‌ ಅಂಗಡಿಯಲ್ಲಿ ಕಳ್ಳತನ ಮಾಡಲಾಗಿತ್ತು. ಕಳ್ಳತನ ಮಾಡಿ ಒಂದು ವರ್ಷದ ಬಳಿಕ ಮಾಲ್‌ ಸಮೇತ ಖಾಕಿ ಬಲೆಗೆ ಬಿದ್ದ ಬುರ್ಖಾ ಗ್ಯಾಂಗ್‌. ಬುರ್ಖಾ ಗ್ಯಾಂಗ್‌ ಚಿನ್ನದ ಬಾಕ್ಸ್‌ ಕದ್ದಿದ್ದ ವೀಡಿಯೋ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಪ್ಪತ್ತೆಂಟು ಗ್ರಾಂ ತೂಕದ ಏಳು ಲಕ್ಷ ಬೆಲೆ ಬಾಳುವ ಹದಿನಾರು ಜೊತೆ ಓಲೆ ಬಾಕ್ಸ್‌ ಕದ್ದಿದ್ದ ಗ್ಯಾಂಗ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸಿಸಿ ಕ್ಯಾಮೇರಾ ವೀಡಿಯೋ ಆಧರಿಸಿ ಬುರ್ಕಾ ಗ್ಯಾಂಗ್‌ ಗೆ ಬಲೆ ಬೀಸಿದ್ದ ಖಾಕಿ ಪಡೆ. ಕೊನೆಗೂ ಐದು ಜನ ಮಹಿಳೆರಿದ್ದ ಖತರ್ನಾಕ್‌ ಬುರ್ಖಾ ಗ್ಯಾಂಗ್‌ ನ್ನು ಬಂಧನ ಮಾಡಲಾಗಿದೆ.

ಕೋಲಾರ ಮೂಲದ ನಗ್ಮಾ, ಜರೀನಾ, ನಗೀನಾ, ನವೀನಾ, ಮುಬೀನಾ ಬಂಧಿತ ಬುರ್ಖಾ ಗ್ಯಾಂಗ್‌.

ಕಳುವಾಗಿದ್ದ ಚಿನ್ನಾಭರಣಗಳನ್ನು ಅಂಗಡಿ ಮಾಲೀಕನಿಗೆ ಹಿಂದುರುಗಿಸಿದ ಪೊಲೀಸರು. ಆರೋಪಿಗಳಿಂದ ಎಪ್ಪತ್ತು ಗ್ರಾಂ ತೂಕದ ಸುಮಾರು ಏಳು ಲಕ್ಷ ಬೆಲೆ ಬಾಳುವ ಓಲೆ ಬಾಕ್ಸ್‌ ವಶಕ್ಕೆ ಪಡೆಯಲಾಗಿದೆ.

Ramesh Babu

Journalist

Recent Posts

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…

8 hours ago

ಚುನಾವಣಾ ಫಲಿತಾಂಶದ ವಿಶ್ಲೇಷಣೆ…..

ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…

10 hours ago

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್: ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸಲು ಸಭೆ

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…

20 hours ago

ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ- ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ- ಶಾಸಕ ಧೀರಜ್‌ ಮುನಿರಾಜ್

ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ. ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಧೀರಜ್‌…

24 hours ago

ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ

ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದಿಂದ ಹೊಲಿಗೆ ಯಂತ್ರ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರವರ್ಗ-3-ಬಿ…

1 day ago

ದೊಡ್ಡಬಳ್ಳಾಪುರ ನೂತನ ತಹಶೀಲ್ದಾರ್ ಆಗಿ ಮಲ್ಲಪ್ಪ ನೇಮಕ: ಶ್ರೀ ಘಾಟಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ನೂತನ ತಹಶೀಲ್ದಾರ್ ಮಲ್ಲಪ್ಪ

ದೊಡ್ಡಬಳ್ಳಾಪುರದ ನೂತನ ತಹಶೀಲ್ದಾರ್ ಆಗಿ ಮಲ್ಲಪ್ಪ ನೇಮಕಗೊಂಡಿದ್ದಾರೆ. ಈ ಹಿನ್ನೆಲೆ ಇಂದು ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ…

1 day ago